Skip to main content

Blog number 900. ಇಕ್ಕೇರಿ ಶ್ರೀಪಾದರು ಇವತ್ತು ದಾವಣಗೆರೆ ಜಿಲ್ಲಾ ಅಡಿಷನಲ್ ಡಿಸ್ಟ್ರಿಕ್ಟ್ & ಸೆಷನ್ ಜಡ್ಜ್, ಇವತ್ತು ನನ್ನ ಅತಿಥಿ, ಇವರ ಈ ಜೀವನ ಪಥ ಹೂವಿನ ಹಾಸಿಗೆ ಆಗದೇ ಕಲ್ಲು ಮುಳ್ಳಿನ ಕಠಿಣ ಪಥವಾಗಿತ್ತು ಇದು ಅನೇಕರಿಗೆ ಪ್ರೇರಣೆ ನೀಡುವ ನೀತಿ ಪಾಠವೂ ಹೌದು.

#ಸತತ_ಪ್ರಯತ್ನದ_ಫಲ_ಸಿಹಿ_ಎನ್ನಲು_ಇವರ_ಜೀವನವೇ_ಮಾದರಿ.

#ವಕೀಲರ_ಗುಮಸ್ಥರಾಗಿ_ವಕೀಲರಾಗಿ_ಈಗ_ದಾವಣಗೆರೆ_ಜಿಲ್ಲಾ_ಅಡಿಷನಲ್_ಡಿಸ್ಟ್ರಿಕ್ಟ್_&_ಸೆಷನ್_ಜಡ್ಜ್.

#ನನ್ನ_ಆತ್ಮೀಯ_ಗೆಳೆಯ_ನನ್ನ_ಇವತ್ತಿನ_ಅತಿಥಿ.

  ಸಾಗರದ ಪ್ರಖ್ಯಾತ ವಕೀಲರಾದ ಈಶ್ವರಪ್ಪ ನಾಯಕರ ಹತ್ತಿರ ಗುಮಸ್ತರಾಗಿದ್ದಾಗ ನನ್ನ ಅವರ ಗೆಳೆತನ ಅವರು ವಕೀಲರಾದಾಗಲೂ ಮುಂದುವರಿಯಿತು ಸಾಗರದಿಂದ (ಕೆಳದಿ ಅರಸ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ನಿರ್ಮಿಸಿದ ಪಟ್ಟಣ ಸದಾಶಿವ ಸಾಗರ) ಇಕ್ಕೇರಿಯ ರಾಜ ಮಾರ್ಗದಲ್ಲಿನ ಪುರಾತನ ದೇವಸ್ಥಾನ ಚೌಡೇಶ್ವರಿ ದೇವಸ್ಥಾನದ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದ ಕುಟುಂಬ ಇವರದ್ದು.
  ಅಲ್ಲಿ 1996 ರಲ್ಲಿ ನಡೆದ ಕರಸೇವೆಯಲ್ಲಿ ನಾನು ಭಾಗವಹಿಸಿದ್ದೆ.
  ಇವರ ತಾಯಿ ಸರಸ್ವತಮ್ಮ 1993 - 98 ರ ಅವದಿಯಲ್ಲಿ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾ.ಪಂ.ಅಧ್ಯಕ್ಷಿಣಿ, ಎಂ.ಜಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ವಸುದಾ ಶಮಾ೯ (ಇಕ್ಕೇರಿ ನಾರಾಯಣ ಶರ್ಮಾರ ಸೊಸೆ) ತಾಲ್ಲುಕ್ ಪಂಚಾಯತ್ ಸದಸ್ಯೆ.
   ಈ ಅವದಿಯಲ್ಲಿ ಒಂದು ದಿನ ನನಗೆ ಪೋನ್ ಬಂತು, ನಾನು ಮ್ಯಾಜಿಸ್ಟ್ರೇಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ ನಿಮ್ಮ ಬೇಟಿಗೆ ಬರುತ್ತಿದ್ದೇನೆ ಅಂತ.
  ಸಂತೋಷದ ವಿಚಾರ ತಿಳಿದ ನಾನು ಶಾಲು, ಹಾರ ತರಿಸಿಟ್ಟು ಬಂದ ಜಡ್ಜ್ ರಿಗೆ ನಮ್ಮ ತಂದೆಯಿಂದ ಸನ್ಮಾನಿಸಿ ಸಂತೋಷ ಪಟ್ಟೆ ನಂತರ ಗೊತ್ತಾಗಿದ್ದು ಇವರಿಗೆ ಜಡ್ಜ್ ವೃತ್ತಿಗೆ ಹೋಗಬೇಕೋ ಬೇಡವೋ ಗೊಂದಲವಿದೆ ಅಂತ.
  ಆಗೆಲ್ಲ ಜಡ್ಜ್ ಆದರೆ ಸಮಾಜದಲ್ಲಿ ಬೆರೆಯುವ೦ತೆ ಇಲ್ಲ, ಕೆಲಸದ ಒತ್ತಡ ಇತ್ಯಾದಿ, ಆ ಕಾಲದಲ್ಲಿ ಜಡ್ಜ್ ಆದವರು ರಾಜೀನಾಮೆ ನೀಡಿ ವಕೀಲ ವೃತ್ತಿಗೆ ವಾಪಾಸು ಬರುತ್ತಿದ್ದರು.
  ನಮ್ಮ ತಂದೆ ಹಣಕ್ಕಿಂತ ವೃತ್ತಿ ಗೌರವ, ಅಪಾರ ಅವಕಾಶ ಇರುವ ಜಡ್ಜ್ ವೃತ್ತಿ ಬಗ್ಗೆ ವಿವರಿಸಿದ ನೆನಪು.
  ಕಳೆದ 26 ವರ್ಷದ ವೃತ್ತಿ ಜೀವನದಲ್ಲಿ ಇವತ್ತು ದಾವಣಗೆರೆಯ ಜಿಲ್ಲಾ ನ್ಯಾಯಾಲಯದಲ್ಲಿ ಅಡಿಷನಲ್ ಡಿಸ್ಟ್ರಿಕ್ಟ್ & ಸೆಷನ್ ಜಡ್ಜ್ ಆಗಿದ್ದಾರೆ.
  ನನ್ನ ತಂದೆ ತಾಯಿ ಹೆಸರಲ್ಲಿ #ಶ್ರೀಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, 2019 ರಲ್ಲಿ ನನ್ನ ಮಗಳ ಮದುವೆಯಲ್ಲಿ ದಂಪತಿ ಸಮೇತ ಬಂದು ಆಶ್ರೀವದಿಸಿದ್ದರು ಅವತ್ತು ಹೈಕೋರ್ಟ್ ನ್ಯಾಯದೀಶರಾದ #ಕೃಷ್ಣ_ದೀಕ್ಷಿತರೂ ಬಂದಿದ್ದರು.
  ನಿನ್ನೆ ಭಾನುವಾರ (26- ಜೂನ್ -2022) ದಾವಣಗೆರೆಯಿಂದ ಕುಟುಂಬ ಸಮೇತ ಸಾಗರದ ಇಕ್ಕೇರಿಯಲ್ಲಿನ ಅವರ ತಾಯಿ ಸರಸ್ವತಮ್ಮರ ಆರೋಗ್ಯ ವಿಚಾರಿಸಲು ಬರುವ ಮಾರ್ಗದಲ್ಲಿ ನನ್ನ ಲಾಡ್ಜ್ ಆಪೀಸಿಗೆ ಬಂದಾಗ ನನ್ನ ಮೊದಲ ಕಾದಂಬರಿ #ಬೆಸ್ತರರಾಣಿ_ಚಂಪಕ ಮತ್ತು ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಆಭ್ಯಂಜನ ನೆನಪಿಗಾಗಿ ನೀಡಿದೆ ಹಾಗೆಯೆ ನಮ್ಮ ಊರಿನ ಉದಯೋನ್ಮಿತ ಉದ್ಯಮಿಯಾದ #ಮು೦ಬಾಳಿನ_ಪ್ರಸಾದರ ಸಾವಯುವ ಕಷಾಯ ಮತ್ತು ಅರಿಶಿಣ ಪುಡಿ ರುಚಿ ನೋಡಲು ವಿನಂತಿಸಿದೆ.
  ಸಾಗರ ತಾಲ್ಲೂಕಿನ ಇಕ್ಕೇರಿಯ ಶ್ರೀಪಾದರ ಜೀವನದ ಮಾರ್ಗ ಹೂವಿನ ಹಾಸಿಗೆ ಆಗಿರಲಿಲ್ಲ ಕಲ್ಲು ಮುಳ್ಳಿನ ದುರ್ಗಮ ಹಾದಿ ಕ್ರಮಿಸಿದ ಅವರ ಜೀವನ ಚರಿತ್ರೆ ಎಲ್ಲರಿಗೂ  ಒಂದು ನೀತಿ ಪಾಠವಾಗಿದೆ.
 ಅವರು ಒಪ್ಪಿದರೆ ಅವರ ಆತ್ಮಚರಿತ್ರೆ ಬರೆಯಬೇಕೆಂಬ ಹಂಬಲವಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...