Skip to main content

Blog number 879, ಜೋಗ್‌ ಪಾಲ್ಸ್ - ಶಿವಮೊಗ್ಗ ಮಧ್ಯದಲ್ಲಿ ರಾ.ಹೆ. 206 ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಚಂಪಕಾ ಪ್ಯಾರಾಡೈಸ್ ಪುನಾರಾರಂಭಗೊಂಡಿದೆ.

Hombuja Residency
094492 53788
https://maps.app.goo.gl/wMEgU94u45pN6uHi8

#ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ಪುನಾರಂಭ_ಆಗಿದೆ

#ಸುಮಾರು_ಹದಿನಾಲ್ಕು_ತಿಂಗಳ_ನಂತರ_ಪುನರಾರಂಭ

#ಕೊರಾನ_ಕಾಲದ_ಗಂಡಾಂತರಗಳಿಂದ_ನಿಲ್ಲಿಸಲಾಗಿತ್ತು.

#ಮಲೆನಾಡ_ವಿಶೇಷ_ಕೋಳಿಕಜ್ಜಾಯ_ನಾಟಿಚಿಕನ್_ಸಾರು

#ಮಡಕಾ_ದಮ್_ಬಿರಿಯಾನಿ

#ಅಕ್ಕಿ_ರಾಗಿ_ರೊಟ್ಟಿ_ದೋಸೆ_ಇಡ್ಲಿ_ಕೂಡ_ಗ್ರಾಹಕರ_ಆಯ್ಕೆಯ_ಚಿಕನ್_ಮಸಾಲ_ಜೊತೆ_ಸಿಗಲಿದೆ.

  ಸುಮಾರು ಹತ್ತು ವರ್ಷದ ನನ್ನ ಹೋಟೆಲ್ ಉದ್ಯಮದಲ್ಲಿ ಕಲಿತಷ್ಟು ಮುಗಿಯದ ಪಾಠಗಳಾಗಿದೆ.
      2020 ರ ಕೊರಾನಾ ಲಾಕ್ ಡೌನ್ ನಂತರ 2021ರ ಲಾಕ್ ಡೌನ್ ಮತ್ತು 2022 ರಲ್ಲಿ ಮತ್ತೆ ಕರೋನ ಅಪ್ಪಳಿಸುವ ಸುದ್ದಿಗಳು ಇದರಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ.
   ಪ್ರವಾಸಿ ಟ್ಯಾಕ್ಸಿಗಳು, ರೆಸ್ಟೋರೆಂಟ್, ಲಾಡ್ಜ್ ಗಳು ನಡೆಸುವ ಉದ್ಯಮದವರಿಗೆ ಇದರ ಬಿಸಿ ಚೆನ್ನಾಗಿ ತಾಗಿದೆ.
  ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅನೇಕ ಹೋಟೆಲ್ ಗಳು ಬಾಗಿಲು ಮುಚ್ಚಿದೆ.
   ನನ್ನ ಸ್ವಂತ ಕಟ್ಟಡದ ಮಲ್ಲಿಕಾ ವೆಜ್ ರೆಸ್ಟೋರಾಂಟ್ ಈಗಾಗಲೇ ಪ್ರಾರಂಬಿಸಿದರೂ ನಿರೀಕ್ಷಿತ ವ್ಯಾಪಾರ ಇಲ್ಲದಿರುವುದರಿಂದ ಅದರಲ್ಲಿ ಉತ್ತರ ಭಾರತೀಯ ಆಹಾರ, ಚಾಟ್ ಕೌಂಟರ್ ಗಳನ್ನು ಇನ್ನೂ ಪ್ರಾರಂಬಿಸಿಲ್ಲ.
  ನಮ್ಮದೇ ಲಾಡ್ಜ್ ಅತಿಥಿಗಳು ನಾನ್ ವೆಜ್ ರೆಸ್ಟೋರಾಂಟ್ ಪ್ರಾರಂಬಿಸಲು ಒತ್ತಾಯಿಸುತ್ತಿದ್ದರೂ ಸುಮಾರು 14 ತಿಂಗಳಿಂದ (2021 ರ ಕೋರಾನಾ ಲಾಕ್ ಡೌನ್ ಗೆ ಬಂದ್ ಮಾಡಿದ್ದು) ಪ್ರಾರಂಬಿಸಿರಲಿಲ್ಲ.
   ಇವತ್ತು ನಮ್ಮ #ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ರೆಸ್ಟೋರಾಂಟ್ ಪೂಜಾದೊಂದಿಗೆ ಪ್ರಾರಂಬಿಸಲಾಗಿದೆ.

 #ಸ್ಪೆಷಲ್_ಪಿಶ್_ಥಾಲಿ
ಬಾಳೆ ಎಲೆಯಲ್ಲಿ ಉಪ್ಪಿನಕಾಯಿ, ಒಣ ಸೀಗಡಿಯ ತೆಂಗಿನ ಕಾಯಿ ಚಟ್ನಿ, ತರಕಾರಿ ಪಲ್ಯ, ಕೋಕಮ್ ಕಡಿ,ನೀರುಳ್ಳಿ / ನಿಂಬೇ ಕಾಯಿ ಜೊತೆ ಪುಲ್ ರೈಸ್, ಮೀನಿನ ಸಾರು ಮತ್ತು ತವಾದಲ್ಲಿ ಹುರಿದ ತವಾ ಪಿಶ್ ಪ್ರೈ.

#ಸ್ಪೆಷಲ್_ಚಿಕನ್_ಥಾಲಿ 
  ಬಾಳೆ ಎಲೆಯಲ್ಲಿ ಪುಲ್ ರೈಸ್, ಚಿಕನ್ ಮಸಾಲ ಜೊತೆಯಲ್ಲಿ ಉಪ್ಪಿನಕಾಯಿ, ಸೀಗಡಿ ಚಟ್ನಿ, ಪಲ್ಯ, ಕೋಕಮ್ ಕಡಿ, ನಿಂಬೂ ಮತ್ತು ನೀರುಳ್ಳಿ .

#ಚಿಕನ್_ಕಬಾಬ್
#ಹೈದ್ರಾಬಾದಿ_ಬಿರಿಯಾನಿ
#ರೆಗ್ಯುಲರ್_ಬಿರಿಯಾನಿ
#ಎಗ್_ರೈಸ್.
ಈ ಎಲ್ಲಾ ಆಹಾರಗಳು ನಾಳೆಯಿಂದ ಗ್ರಾಹಕರಿಗೆ ಶುದ್ಧವಾದ ಪಿಲ್ಪರ್ ನೀರಿನೊಂದಿಗೆ ಸಿಗಲಿದೆ, ಗ್ರಾಹಕರು ಅವರ ಕುಟುಂಬದೊಂದಿಗೆ ಊಟ ಸವಿಯಲು ಪ್ರತ್ಯೇಕವಾದ ಪ್ಯಾಮಿಲಿ ರೂಂಗಳೂ ಇದೆ.
  ಚಂಪಕಾ ಪ್ಯಾರಾಡೈಸ್ ಗ್ರಾಹಕರಿಗೆ ಹೈಜನಿಕ್ ಆಗಿರುವ ಪ್ರತ್ಯೇಕ ಟಾಯಿಲೆಟ್ ಸೌಲಭ್ಯ ಇದೆ, ಪಾರ್ಕಿಂಗ್ ವ್ಯವಸ್ಥೆ ಇದೆ.
  ಈ ಶನಿವಾರದಿಂದ (ದಿನಾಂಕ 4- ಜೂನ್ -2022)
ನಮ್ಮ ಚಂಪಕಾ ಪ್ಯಾರಾಡೈಸ್ ನ ಸಿಗ್ನೇಚರ್ ಪ್ರಾಡಕ್ಟ್ ಎಂದೇ ಹೆಸರಾಗಿರುವ #ಮಡಕಾ_ದಂ_ಬಿರಿಯಾನಿ, ಮಲೆನಾಡಿನ ವಿಶೇಷವಾದ #ಕೋಳಿಕಜ್ಜಾಯ_ಮತ್ತು_ನಾಟಿಕೋಳಿ_ಸಾರು ಗ್ರಾಹಕರಿಗೆ ನಿರಂತರವಾಗಿ ಸಿಗಲಿದೆ.
  #ಚೆಟ್ಟಿನಾಡು_ಚಿಕನ್_ರೋಸ್ಟ್ ಕೂಡ ದೊರೆಯಲಿದೆ.
  ಜೊತೆಗೆ ಅಕ್ಕಿ/ರಾಗಿ ರೊಟ್ಟಿ / ದೋಸೆ /ಇಡ್ಲಿ ಜೊತೆ ಚಿಕನ್ / ನಾಟಿ ಚಿಕನ್ ಮಸಾಲ ಕೂಡ ಗ್ರಾಹಕರಿಗೆ ಸಿಗಲಿದೆ.
  ಶುಚಿ-ರುಚಿಯ ಆಹಾರ ಮತ್ತು ಯಾವುದೇ ಕಾರಣಕ್ಕೂ ಟೇಸ್ಟಿಂಗ್ ಪೌಡರ್ (ಅಜಿನೋ ಮೋಟೋ), ಕೃತಕ ಬಣ್ಣ ಬಳಸದೆ ಆಹಾರ ತಯಾರಿ ನಮ್ಮ ವಿಶೇಷತೆ.
   ರಾಷ್ಟ್ರೀಯ ಹೆದ್ದಾರಿ NH 206 ರ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ (ಶಿವಮೊಗ್ಗದಿಂದ 50 km -ಸಾಗರದಿಂದ 25km, ಜೋಗ್ ಪಾಲ್ಸ್ ಶಿವಮೊಗ್ಗ ಮಧ್ಯದಲ್ಲಿ) ಇದೆ, ಇಲ್ಲಿಯೇ ನಮ್ಮ #ಮಲ್ಲಿಕಾ_ವೆಜ್_ರೆಸ್ಟೋರಾಂಟ್,#ಹೊಂಬುಜ_ರೆಸಿಡೆನ್ಸಿ_ಮತ್ತು_ಗಾರ್ಡನೀಯ_ಲಾಡ್ಜ್ ಮತ್ತು #ವಿಕ್ಟೋರಿಯಾ_ಕಾಟೇಜ್ ಗಳು ಕೂಡ ಗ್ರಾಹಕರ ಸೇವೆಗಾಗಿ ತಯಾರಾಗಿದೆ ಕೆಲವೇ ದಿನದಲ್ಲಿ ಹೆಲ್ತ್ ಟೂರಿಸಂ ಅಂಗವಾಗಿ #ಶಿರೋಧಾರಾ_ಮಡ್_ಬಾತ್ ಗಳ ಸೇವೆಯ #ವೈದ್ಯೋ_ನಾರಾಯಣ_ಹರಿ_ಆಯುರ್ವೇದ_ಕ್ಲೀನಿಕ್ ಕೂಡ ಕಾರ್ಯಾರಂಭ ಮಾಡಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ