Skip to main content

Blog number 889. ಮುಂಗಾರು ಬಂತೆಂದರೆ ಕಳಲೆ ಎಂಬ ಬಿದಿರು ಬೊಂಬಿನ ಮೊಳಕೆಯ ರುಚಿಕರ ಖಾದ್ಯಗಳ ಕಾಲ, ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಜನ ತಾವು ಬೆಳೆಯುವ ಅಕ್ಕಿಯಿಂದ ರೊಟ್ಟಿ ತಯಾರಿಸಿ ಕಳಲೆ ಪಲ್ಯದೊಂದಿಗೆ ಸವಿಯುತ್ತಾರೆ, ಇದರಲ್ಲಿನ ನೈಸರ್ಗಿಕ ವಿಷ ನಿವಾರಿಸಿ ತಿನ್ನುವ ಬಗೆಯ ಮಾಹಿತಿ ತಲತಲಾಂತರದಿಂದ ಜನರಿಗೆ ತಿಳಿದಿದೆ.

#ಇದು_ಕಳಲೆ_ಖಾದ್ಯ_ತಿನ್ನುವ_ಕಾಲ_

#ಕಳಲೆ_ಪಲ್ಯ_ಅಕ್ಕಿರೊಟ್ಟಿ_ಪಶ್ಚಿಮಘಟ್ಟ_ಪ್ರದೇಶದ_ಮಲೆನಾಡ_ವಿಶೇಷ.

#ಕಳಲೆ_ಕ್ಯಾನ್ಸರ್_ಹೃದಯ_ಸಂಬಂದಿ_ಕಾಯಿಲೆ_ದೂರ_ಮಾಡುತ್ತದೆ.

#ಈಶಾನ್ಯ_ಭಾರತದಲ್ಲಿ_ಕಳಲೆ_ಮಾಂಸಹಾರ_ಅಡುಗೆಯಲ್ಲಿ_ಹೆಚ್ಚು_ಬಳಕೆ.

    ಪ್ರತಿ ವರ್ಷ ಮುಂಗಾರು ಪ್ರಾರಂಭದ ಜೂನ್ - ಜುಲೈ ಮತ್ತು ಆಗಸ್ಟ್ ನಲ್ಲಿ ಬಿದಿರು ಬೊಂಬಿನ ಚಿಗುರು ಅರಳುವ ಕಾಲ, ಬಿದಿರ ಮೆಳೆಯ ಬುಡದಲ್ಲಿ ನಾವು ಸ್ಥಳಿಯವಾಗಿ ಕರೆಯುವ ಕಳಲೆ ಮಣ್ಣಿನಿಂದ ಚುಪಾದ ಬಾಣದಂದೆ ಎದ್ದು ಬಂದು ನೋಡ ನೋಡುತ್ತಲೆ ಮುಗಿಲೆತ್ತರಕ್ಕೆ ಬೆಳೆದು ಬಿದಿರ ಬೊಂಬಾಗಿ ಬಿಡುತ್ತದೆ.
  ಭೂಮಿ ಬಿಟ್ಟು ಒಂದೆರೆಡು ಅಡಿ ಬೆಳೆಯುವ ಮುನ್ನ ಕತ್ತರಿಸಿ ಅದರ ಸಿಪ್ಪೆ ತೆಗೆದು ಅದರ ಒಳಗಿನ ಬೊಂಬಿನ ತಿರಳು ಸ್ಲೈಸ್ ಮಾಡಿ ನೀರಲ್ಲಿ ಎರಡರಿಂದ ಮೂರು ದಿನ ನೆನಸಿ ಪ್ರತಿ ದಿನ ನೀರು ಬದಲಿಸಿದರೆ ಮಾತ್ರ ಇದರಲ್ಲಿನ ನೈಸರ್ಗಿಕ ವಿಷ ನಿವಾರಿಸಲು ಸಾಧ್ಯ ನಂತರ ಇದನ್ನು ತರಕಾರಿಯಂತೆ ವಿವಿಧ ರೀತಿಯ ಖಾದ್ಯ ತಯಾರಿಸಬಹುದು.
  ಈಶಾನ್ಯ ಭಾರತದಲ್ಲಿನ ವಿಬಿನ್ನ ಬಿದಿರಿನ ಕಳಲೆ ಅರಿಷಿಣ ಪುಡಿಯೊಂದಿಗೆ 10 ರಿಂದ 15 ನಿಮಿಷ ಬೇಯಿಸಿ ನೀರು ತೆಗೆದರೆ ಸಾಕು ಆದರೆ ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಬಿದಿರಿಗೆ 3 ದಿನ ಬೇಕೇ ಬೇಕು.
  ನಾಗಲ್ಯಾಂಡ್, ಮಣಿಪುರ, ಅಸ್ಸಾಂ, ಜಾರ್ಕಂಡ್, ಸಿಕ್ಕಿಂ, ಹಿಮಾಚಲ ಪ್ರದೇಶದಲ್ಲಿ ಇದನ್ನು ಮೀನು ಮಾಂಸಗಳ ಜೊತೆ ಹೆಚ್ಚು ಬಳಸುತ್ತಾರೆ, ವಿನೆಗರ್ ನಲ್ಲಿ ನೆನೆಸಿಟ್ಟು ವರ್ಷ ಪೂರ್ತಿ ಉಪಯೋಗಿಸುತ್ತಾರೆ ಮತ್ತು ಇದನ್ನು ಒಣಗಿಸಿ ಕೂಡ ಇಡುತ್ತಾರೆ ಈಗ ಒಣಗಿದ ಮತ್ತು ಪರ್ಮೆಂಟೆಡ್ ಕಳಲೆ ಅಮೇಜಾನ್, ಪ್ಲಿಪ್ ಕಾರ್ಟ್ನಲ್ಲಿ ಲಭ್ಯವಿದೆ.
   ಈಶಾನ್ಯ ಬಾರತದ ಚಗ್ಮಾ ಬುಡಕಟ್ಟು ಜನರ ಹಂದಿಮಾಂಸದ ವಿಶೇಷ ಅಡುಗೆಗೆ ಕಳಲೆ ಬೇಕೇ ಬೇಕು.
  ಕಳಲೆಯಲ್ಲಿ ವಿಟಮಿನ್ / ಪೈಬರ್/ಮಿನರಲ್/ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ ಯಥೇಚ್ಚವಾಗಿದೆ.
   ಕಳೆದ ಎರೆಡು ವರ್ಷದ ಹಿಂದೆ ಬಿದಿರು ಸಂಪೂರ್ಣವಾಗಿ (40 ಅಥವ 60 ವರ್ಷಕ್ಕೊಮ್ಮೆ) ಹೂವಾಗಿ ಬಿದಿರಕ್ಕಿ ಆಗಿ ನಾಶವಾಗಿದ್ದರಿಂದ ಕಳಲೆ ಪ್ರಿಯರಿಗೆ ಇದು ದುಬಾರಿ ಆಗಿತ್ತು ಮತ್ತು ಸಿಗುತ್ತಿರಲಿಲ್ಲ.
  ಮೊನ್ನೆ ನನ್ನ ಆಪದ್ಬಾಂದವ ಗೇರುಬೀಸಿನ ಚನ್ನಪ್ಪ ಎಳೆಯ ಮತ್ತು ಮಜಬೂತಾದ ಗಾತ್ರದ ಕಳಲೆ ತಂದು ಕೊಟ್ಟಿದ್ದ ಅದು ಇವತ್ತು ಹೆಸರು ಕಾಳಿನೊಂದಿಗೆ ಪಲ್ಯವಾಗಿ ಅಕ್ಕಿ ರೊಟ್ಟಿ ಮತ್ತು ಬೆಣ್ಣೆಯ ಜೊತೆಯ ಬೆಳಗಿನ ಉಪಹಾರ ಆಯಿತು.
  #ಬಿದಿರಮ್ಮ_ತಾಯಿ_ನೀನ್ಯಾರಿಗಾದೆಯೋ ಎಂಬ ಹಾಡು ನೆನಪಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...