Skip to main content

Blog number 880, ನನ್ನ ಜೀವನದ ಬಹುಕೃತ ವೇಷದಲ್ಲಿ ಮರೆತಿದ್ದ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ವಿಫಲ ಯೋಜನೆ.

#ನನ್ನ_ಬಹುರೂಪಿ_ಜೀವನದಲ್ಲಿ_ಮರೆತದ್ದು.

#ಪೇಲ್_ಆಗುವ_ದಡ್ಡರೆಂಬ_ವಿದ್ಯಾರ್ಥಿಗಳಿಗೆ_ಶಾಲೆ_ಪ್ರಾರಂಬಿಸಲು_ಯೋಜಿಸಿದ್ದೆ.

#ಸ್ಥಳಿಯ_ಖಾಸಾಗಿ_ಶಾಲೆಗಳು_ನನ್ನ_ಮೇಲೆ_ಮುರಿದು_ಕೊಂಡು_ಬಿದ್ದ_ಪರಿ !?

#ಮುಂದಿನ_ಯಾವುದೇ_ದಿನ_ಪುನಃ_ಪ್ರಾರಂಬಿಸುವ_ಯೋಜನೆ_ಇದೆ.

  ನಾನು ಹೆಚ್ಚು ಇಷ್ಟ ಪಡುವ ವಿಚಾರವಂತ ಗೆಳೆಯರಲ್ಲಿ ಕೈ ಬೆರಳೆಣಿಕೆಯಲ್ಲಿ ಎಣಿಸುವಷ್ಟು ಮಾತ್ರ ಇರುವ ಶೃಂಗೇಶ್, ತೀ.ನಾ. ಶ್ರೀನಿವಾಸ್, ಆರ್.ಟಿ. ವಿಠ್ಠಲಮೂರ್ತಿ ಮತ್ತು ಅರವಿಂದ ಚೊಕ್ಕಾಡಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಅವರ ಜೊತೆ ನನ್ನ ಸಂವಹನದ ವೇವ್ ಲೆಂಗ್ತ್ ಮ್ಯಾಚ್ ಆಗುತ್ತಿರುತ್ತದೆ ಆದರೆ ಈ ನಾಲ್ವರು ಅವರವರ ಸಿದ್ಧಾಂತಗಳನ್ನು ಸ್ವಲ್ಪವೂ ಹೊಂದಾಣಿಕೆ ಮಾಡದ ನೇರ -ನಿಷ್ಟುರದ - ಲೋಕವಿರೋದಿಗಳಂತೆ ಕಂಡರು ಅವರ ಹೃದಯದ ಬಾಗಿಲು ಪಟ್ಟುವಂತ ಗೆಳೆತನದ ಸಲಿಗೆ ನನಗೆ ಇದೆ ಅನ್ನಿಸುತ್ತದೆ.
  ಇವತ್ತು ಅರವಿಂದ ಚೊಕ್ಕಾಡಿಯವರು 9ನೇ ತರಗತಿವರೆಗೆ ನಮ್ಮದೇ ಯೋಜನೆ ಸಿಲಬಸ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿ 10 ನೇ ತರಗತಿಗೆ ಸೆಂಟ್ರಲ್ ಸಿಲಬಸ್ ಗೆ ಅವರನ್ನು ಜೋಡಿಸಿ ಸುಶಿಕ್ಷಣ ನೀಡುವ ಒಂದು ಸೂಚನೆ ನೀಡಿದ್ದಾರೆ, ಇದನ್ನು ಕರ್ನಾಟಕದಲ್ಲಿ ಯಾಕೆ ಜಾರಿಗೆ ತರಬಾರದೆಂದು ಯೋಚಿಸುವಾಗ ಶಿವಮೊಗ್ಗದ ಪ್ರಖ್ಯಾತ ಡಯಾಬಿಟಿಕ್ ತಜ್ಞರು - ಬೈಕ್ ಕಾರ್ ಸಾಹಸಿ ರೈಡರ್ - ಕನ್ನಡ ಸಾಹಿತ್ಯದ ಓದುಗ ಡಾಕ್ಟರ್ ಪ್ರೀತಂ ನೀವು ನಿಮ್ಮ ಜೀವನದಲ್ಲಿ ಏನೇನು ಮಾಡಿದ್ದೀರಿ ಬರೆಯಿರಿ ಅಂದಿದ್ದು ನೆನಪಾಯಿತು ನೆನಪಾಗಿದ್ದ ಅನೇಕ ವಿಚಾರ ಬರೆದಿದ್ದೆ ಆದರೆ ಈ ಘಟನೆ ಮರೆತಿದ್ದೆ ನೆನಪಾಯಿತು.
  ಡಾ.ಎನ್.ಎಸ್ ವಿಶ್ವಪತಿ ಶಾಸ್ತ್ರಿಗಳು ಮೈಸೂರಿನ ಬ್ರಾಹ್ಮಣ ಮಠ ಒಂದರಲ್ಲಿ SSLC ಪೇಲ್ ಆದವರಿಗೆ ಶಿಕ್ಷಣ ವ್ಯವಸ್ಥೆ ಮಾಡಿದ್ದಾರೆ ಅದೇ ರೀತಿ ನಮ್ಮ ಊರಿನಲ್ಲಿ ದಡ್ಡರು ಪೇಲ್ ಆದವ ಎಂಬ ಈಗಿನ ಸಮಾಜದಲ್ಲಿನ ನಿಕೃಷ್ಟರಾದವರಿಗೆ ಶಿಕ್ಷಣ ನೀಡಲು ಒಂದು ಯೋಜನೆ ಮಾಡಿದ್ದೆ.
  ನಮ್ಮದೇ ಊರ ಮಧ್ಯದಲ್ಲಿನ 5 ಎಕರೆ ಗೇರು ತೋಟದಲ್ಲಿ ಫಸಲು ನಮಗೆ ಸಿಗದೇ ಇದ್ದರಿಂದ ಅಲ್ಲಿ ಶಾಲೆ ಈಜು ಕೊಳ ನಿರ್ಮಿಸುವ ಯೋಜನೆ ಮಾಡಿ, ಅನುಮತಿಗೆ ಸಂಬಂದ ಪಟ್ಟಂತ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆ, ಹರೇ ಕೃಷ್ಣ ಎಜುಕೇಷನಲ್ ಟ್ರಸ್ಟ್ ನೊಂದಾಯಿಸಿ ಸೂಕ್ತ ಡಿ.ಡಿ.ಯೊ೦ದಿಗೆ ಅರ್ಜಿ ಸಲ್ಲಿಸಿದ್ದೆ.
  ಇದು ಸ್ಥಳಿಯ ಖಾಸಾಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಅಪಥ್ಯ ಆಯಿತು, ಅವರ ಉದ್ದೇಶ ಸಾಧನೆಗಾಗಿ ಸಂಬಂದಪಟ್ಟವರಿಗೆ ಕಪ್ಪಕಾಣಿಕೆ ನೀಡಿದ್ದರಿಂದ ಊರಿಂದ 3 ಕಿ.ಮಿ. ದೂರದ ನನ್ನ ಯೋಜನೆಗೆ ಅನುಮತಿ ನಿರಾಕರಿಸಿದರು ಆದರೆ ಊರ ಮಧ್ಯದಲ್ಲಿ ಅನದಿಕೃತವಾಗಿ ಇಂಗ್ಲೀಷ್ ಮಾಧ್ಯಮ ನಡೆಸುವ ಅದ೯ ಕಿ.ಮಿ. ಸುತ್ತಳತೆಯಲ್ಲಿನ ಇವರಿಗೆ ಎಲ್ಲಾ ರೀತಿಯ ಮಾಮೂಲಿ ನೀಡುವವರ ಹಿತ ಕಾಪಾಡಿದವರು ಯಾರು ಅಂದರೆ ನಮ್ಮ ಹಳ್ಳಿಗಾಡಿಂದ ಬಂದ ಬಡ ಕುಟುಂಬದ ಹಿನ್ನೆಲೆಯ ಶಿಕ್ಷಕರೆ ಅವರು ಬರೆದ ತಕರಾರು ಟಿಪ್ಪಣಿ ಹಾಗೆ ಇಟ್ಟುಕೊಂಡಿದ್ದೇನೆ.
  ಹಾಗಾಗಿ ಈ ಶಿಕ್ಷಣದ ವಿಚಾರದಲ್ಲಿನ ನನ್ನ ಪ್ರಯತ್ನ ಮರೆತು ಬಿಟ್ಟಿದ್ದೆ ನೆನಪಾದ್ದರಿಂದ ಬರೆಯಲೇ ಬೇಕೆನ್ನಿಸಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...