Skip to main content

Blog number 886.ನಿನ್ನೆಯ ನನ್ನ ಅತಿಥಿಗಳು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಹದಿನಾಲ್ಕನೆ ಅಧ್ಯಕ್ಷರಾದ ಖ್ಯಾತ ಸಾಹಿತಿ, ಅಂಕಣಕಾರ ಸುಂದರ್ ನಮ್ಮ ಊರಿನಲ್ಲಿರುವ ಕೆಳದಿ ಅರಸ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸು ನೋಡಲು ಬಂದಿದ್ದರು.

ನಿನ್ನೆ_ನನ್ನ_ಅತಿಥಿಗಳು_ಶಿವಮೊಗ್ಗದ_ಪ್ರತಿಷ್ಟಿತ_ಕನಾ೯ಟಕ_ಸಂಘದ_ಅಧ್ಯಕ್ಷರಾದ_ಸುಂದರ್.

#ಕುವೆಂಪುರವರು_1930ರಲ್ಲಿ_ಉದ್ಘಾಟಿಸಿದ_ಕರ್ನಾಟಕ_ಸಂಘಕ್ಕೆ_ದಾರಾ_ಬೇಂದ್ರೆ_ಮಾಸ್ತಿವೆಂಕಟೇಶ್ಅಯ್ಯಂಗಾರರ_ಪ್ರೇರಣೆ

#ಹಸೋಡಿವೆ0ಕಟಶಾಸ್ತ್ರಿಗಳು_ಆಗ_ನೀಡಿದ_ದೇಣಿಗೆ_30_ಸಾವಿರ_ಈಗಿನ_ಲೆಖ್ಖದಲ್ಲಿ_30_ಕೋಟಿಗೂ_ಮಿಕ್ಕಿದ_ಮೌಲ್ಯ.

#ಸುಂದರ್_ಅವರ_ಸಂದರ್ಶನದಲ್ಲಿ_ಕರ್ನಾಟಕಸಂಘದ_ಹೆಚ್ಚಿನ_ಮಾಹಿತಿ_ಇದೆ.

  ಸುಂದರ್ ಅವರು ಪ್ರತಿಷ್ಠಿತ ಶಿವಮೊಗ್ಗ ಕನ್ನಡ ಸಂಘದ 14ನೇ ಅದ್ಯಕ್ಷರಾಗಿ ಚುನಾವಣೆ ಮೂಲಕ ಆಯ್ಕೆ ಆದವರು, ಶಿವಮೊಗ್ಗ ಜಿಲ್ಲೆಯ ಖ್ಯಾತ ಸಾಹಿತಿ ಮತ್ತು ಅಂಕಣಗಾರರಾದ ಸುಂದರ್ ವೃತ್ತಿಯಲ್ಲಿ ಕಾಲೇಜ್ ಪ್ರಿನ್ಸಿಪಾಲರಾಗಿ ನಿವೃತ್ತರಾದವರು.
  ನಿನ್ನೆ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ ಮತ್ತು ಇನ್ನೊಬ್ಬ ಖ್ಯಾತ ಸಾಹಿತಿ, ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಜಿಲ್ಲೆಗೆ ಕುವೆಂಪು ವಿಶ್ವವಿದ್ಯಾಲಯ ತರಲು ಕಾರಣರಾಗಿದ್ದ ಶ್ರೀಕಂಠ ಕೂಡಿಗೆ ಒಟ್ಟಾಗಿ ಬಂದಿದ್ದರು.
  ಅವರು ಬಂದ ಉದ್ದೇಶ ನಾನು ಕಳೆದ ವರ್ಷ ಬರೆದು ಪ್ರಕಟಿಸಿದ್ದ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕಾ ಇವರೆಲ್ಲರೂ ಓದಿದ್ದರಿಂದ ಆನಂದಪುರಂನಲ್ಲಿರುವ ಸುಮಾರು ನಾಲ್ಕುನೂರು ವರ್ಷದ ಸ್ಮಾರಕ #ಚಂಪಕ_ಸರಸ್ಸು ನೋಡುವುದು, ಹಾಗೆಯ ನಮ್ಮ ಊರಿನಲ್ಲಿ ಪ್ರಾರಂಭ ಆಗಿರುವ #ಶಿವಪ್ಪನಾಯಕ_ಕೃಷಿ_ವಿಶ್ವವಿದ್ಯಾಲಯ ಬೇಟಿ ಮತ್ತು ಕಾದಂಬರಿ ಕರ್ತು ಆದ ನನ್ನ ಜೊತೆ ಸಣ್ಣ ಬೇಟೆ ಮತ್ತು ಚರ್ಚೆ.
    ಇವರನ್ನು ನಾನು ದೂರದಿಂದ ಬಲ್ಲೆ ಇವರೂ ಕೂಡ ನನ್ನ ಬಗ್ಗೆ ಮಾಹಿತಿ ಇದ್ದವರೇ ಆದರೂ ಪರಸ್ಪರ ನೇರ ಬೇಟಿ ಇದೇ ಮೊದಲು (ಪುಟ್ಟಯ್ಯರನ್ನು ಬಿಟ್ಟು) ನನಗೆ ತುಂಬಾ ಸಂತೋಷ ಆಯಿತು, ನಮ್ಮ ಮಲ್ಲಿಕಾ ವೆಜ್ ನ ಹಲಸಿನ ಎಲೆ ಕೊಟ್ಟೆ ಕಡಬು ಕಾಫಿ ಸ್ವೀಕರಿಸಿ ನಮ್ಮ ಸಂಸ್ಥೆಯ ಪದ್ಧತಿಯಂತೆ ಶಾಲು ಹೊದೆಸಿ ಹೂವು ನೀಡಿ ತೃಪ್ತಿಪಟ್ಟುಕೊಂಡೆ.
  ನಮ್ಮ ರೆಸ್ಟೋರಾಂಟ್, ಲಾಡ್ಜ್, ಕಲ್ಯಾಣ ಮಂಟಪ ಮತ್ತು ಕೆಲವೇ ದಿನದಲ್ಲಿ ಪ್ರಾರಂಭ ಆಗಲಿರುವ ಪ್ರಕೃತಿ ಚಿಕಿತ್ಸಾ ಕೆಂದ್ರ, ಕಾಟೇಜ್ ಗಳನ್ನು ನೋಡಿ ಸಲಹೆ ಕೂಡ ನೀಡಿದ್ದಾರೆ.
  ಸಾಹಿತ್ಯ ಪರಿಷತ್, ದಾರವಾಡದ ವಿದ್ಯಾವರ್ದಕ ಸಂಘ ಬಿಟ್ಟರೆ ಮೂರನೆಯದೇ ಶಿವಮೊಗ್ಗದ ಕರ್ನಾಟಕ ಸಂಘ       ಇಷ್ಟು ಪುರಾತನ ಕನ್ನಡದ ಸಂಸ್ಥೆಗಳು ಬೇರೆ ಇಲ್ಲ.
  ಸರ್ಕಾರದಿಂದ ಹಣ ಪಡೆಯುವುದಿಲ್ಲ, ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ ಪ್ರತಿ ವರ್ಷ ಅರ್ಹರಿಗೆ ಪ್ರಶಸ್ತಿ ನೀಡುತ್ತಾರೆ ಇದಕ್ಕೆಲ್ಲ ಆದಾಯ ಕರ್ನಾಟಕ ಸಂಘದ ಎದುರಿನ ರಾಷ್ಟ್ರೀಯ ಹೆದ್ದಾರಿಗೆ ಅಭಿಮುಖವಾಗಿ ಇರುವ ಈ ಸಂಸ್ಥೆಯ ಅಂಗಡಿ ಮಳಿಗೆಗಳಿಂದ ಬರುವ ಬಾಡಿಗೆ ಮಾತ್ರ.
   ರಾಷ್ಟ್ರಕವಿ ಕುವೆಂಪುರವರೇ ಉದ್ಘಾಟಿಸಿದ ವಿಶೇಷ ನೆನಪು ಇರುವ ಶಿವಮೊಗ್ಗದ ಕರ್ನಾಟಕ ಸಂಘ ಮುಂದಿನ ದಿನಗಳಲ್ಲಿ ಈ ಸ್ಮಾರಕ ಸಂರಕ್ಷಣೆಗೆ ಜೊತೆಯಾಗುವ, ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ಪುರಾತತ್ವ ಇಲಾಖೆಗೆ ಸೇರದೇ ಅರಣ್ಯ ಇಲಾಖೆಯ ಭೂಮಿಯಲ್ಲಿ ಇರುವುದನ್ನು ಶಿವಮೊಗ್ಗದ ಕರ್ನಾಟಕ ಸಂಘ ಪುರಾತತ್ವ ಇಲಾಖೆಗೆ ಸೇರಿಸುವುದರಲ್ಲಿ ಯಶಸ್ವಿ ಆಗಲಿದೆ ಎಂಬ ಸಂತೋಷದ ವಿಚಾರ ಕೂಡ.
  ಸುಂದರ್ ಅವರಿಗೆ ನಾನು ವಿನಂತಿಸಿದ್ದು ನಾನು ಬರೆದ ಈ ಕಾದಂಬರಿ ಇಂಗ್ಲೀಷ್ ಗೆ ಅನುವಾದಿಸಬಹುದಾ? ಅಂತ ಅದಕ್ಕೆ ಅವರು ಹೇಳಿದ್ದು ಅವರ ಮನಸ್ಸಿನಲ್ಲಿ ಅಂತಹ ಯೋಚನೆ ಇದೆ ಅಂದಿದ್ದಾರೆ.
  ನಂತರ ನಮ್ಮ ಜಿಲ್ಲೆಯ ಖ್ಯಾತ ಸಾಹಿತಿಗಳೂ, ಇತಿಹಾಸ ಆಸಕ್ತರು ಮತ್ತು ಜನಪರ ಹೋರಾಟಗಾರರೂ ಆದ ಇವರುಗಳು ಅಭಿಪ್ರಾಯಪಟ್ಟಿದ್ದು ಕೆಳದಿ ರಾಜ ವೆಂಕಟಪ್ಪ ನಾಯಕ ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಿಸಿರುವುದು, ದೀರ್ಘ ಕಾಲ 46 ವರ್ಷ ಅವಧಿ ಆಡಳಿತ, ರಾಜ್ಯ ವಿಸ್ತಾರ ಮಾಡಿದರೂ ವೆಂಕಟಪ್ಪ ನಾಯಕರ ಚರಿತ್ರೆ ಉದ್ದೇಶ ಪೂರ್ವಕವಾಗಿ ಮಸಕು ಮಾಡಲು ರಾಜವೆಂಕಟಪ್ಪ ನಾಯಕ ಮತ್ತು ಬೆಸ್ತರ ಜಾತಿಯ ರಂಗೋಲಿ  ಪ್ರವೀಣೆ ಚಂಪಕಾಳ ಅಂತರ್ಜಾತಿ ವಿವಾಹ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ