Skip to main content

Blog number 892.ಆನಂದಪುರಂ ಇತಿಹಾಸ ಭಾಗ-74. ಆನಂದಪುರಂನ ಕೊಡುಗೈ ದಾನಿ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರ್ ತಮ್ಮ ತಂದೆ ಶ್ರೀನಿವಾಸ ಅಯ್ಯಂಗಾರ್ ಸ್ಮರಣಾರ್ಥ 1 - ಜನವರಿ - 1945 ರಲ್ಲಿ ನಿರ್ಮಿಸಿ ಊರಿಗೆ ಅಪಿ೯ಸಿದ್ದ ಮಿಡ್ಲ್ ಸ್ಕೂಲ್ ಬೃಹತ್ ಕಟ್ಟಡ ಸಂಬಂದ ಪಟ್ಟ ಇಲಾಖೆ ನಿರ್ಲಕ್ಷದಿಂದ ಶಿಥಿಲಾವಸ್ಥೆಗೆ ತಲುಪುತ್ತಿದೆ

#ಆನಂದಪುರಂ_ಇತಿಹಾಸ_ಭಾಗ_74

#ಆನಂದಪುರಂನ_ಕೊಡುಗೈದಾನಿ_ರಾಮಕೃಷ್ಣ_ಆಯ್ಯ೦ಗಾರರು_ನಿರ್ಮಿಸಿದ್ದ_ಮಿಡ್ಲ್_ಸ್ಕೂಲ್

#ಅವರ_ತಂದೆ_ಶ್ರೀನಿವಾಸಯ್ಯಂಗಾರ್_ಸ್ಮಾರಕ

#ಸುಮಾರು_75_ವರ್ಷಕಾಲ_ಸ್ಥಳಿಯರಿಗೆ_5_ರಿಂದ_7ನೇ_ತರಗತಿವರೆಗೆ_ವಿದ್ಯಾಬ್ಯಾಸ_ನೀಡಿತ್ತು

#ಆನಂದಪುರಂ_ರೈಲ್ವೆಸ್ಟೇಷನ್_ಮಾರ್ಗದಲ್ಲಿದ್ದ_ಸುಸಜ್ಜಿತ_ಶಾಲೆ_ಈಗ_ಶಿಥಿಲಾವಸ್ಥೆಯಲ್ಲಿ.

   ಆನಂದಪುರಂ ಎಂಬ ಹೆಸರು ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ಮತ್ತು ರಾಣಿ ರಂಗೋಲಿ ಪ್ರವೀಣೆ ಬೆಸ್ತರ ಚಂಪಕಾಳ ದುರಂತ ಪ್ರೇಮ ದಾಂಪತ್ಯದಿಂದ #ಚಂಪಕ_ಸರಸ್ಸು ಎಂಬ ಸ್ಮಾರಕ ನಿರ್ಮಿಸಿ ಈ ಪ್ರದೇಶಕ್ಕೆ ಈ ಹೆಸರು ಇಟ್ಟರು ಎಂದು ಗೆಜೆಟಿಯರ್ ನಲ್ಲಿ ಉಲ್ಲೇಖವಿದೆ.
 ಕೆಳದಿ ಅರಸರ ನಂತರ ಆನಂದಪುರಂ ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತ್ತು ನಂತರ ದೇಶ ಸ್ವಾತಂತ್ರ ಪಡೆಯುವ ತನಕ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು.
  ಅರಸರ ಆಡಳಿತ ಕಾಲದಲ್ಲಿ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾದ ಹಾಸನ ಜಿಲ್ಲೆಯ ಗೊರೂರಿನಿಂದ ಬಂದು ಇಲ್ಲಿ ನೆಲೆಸಿದ ರಾಮಕೃಷ್ಣ ಅಯ್ಯಂಗಾರರು ಆನಂದಪುರಂಗಾಗಿ ಶಾಲೆ, ಆಸ್ಟತ್ರೆ, ಪಶು ವೈದ್ಯ ಶಾಲೆ, ಕಾಲೇಜು, ದೇವಾಲಯ ಅಭಿವೃದ್ಧಿ ಹೀಗೆ ಅನೇಕ ಜನ ಉಪಯೋಗಿ ಕಾರ್ಯ ಮಾಡುತ್ತಾರೆ.
  1952 ರಲ್ಲಿ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಸಾಗರ - ಹೊಸನಗರ- ತೀರ್ಥಹಳ್ಳಿ ಜಂಟಿ ಕ್ಷೇತ್ರದಿಂದ ಇವರ ಪುತ್ರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರಖ್ಯಾತ ವಕೀಲರಾಗಿದ್ದ ಬದರೀನಾರಾಯಣ ಅಯ್ಯಂಗಾರರು ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಆದರೆ ಇವರು ಕಾಗೋಡು ಹೋರಾಟದ ನೇತೃತ್ವ ವಹಿಸಿ ಪ್ರಖ್ಯಾತರಾಗಿದ್ದ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ ಇದರಿಂದ ದಾನಿಗಳಾದ ರಾಮಕೃಷ್ಣ ಅಯ್ಯಂಗಾರ್ ಹೃದಯಾಘಾತದಿ೦ದ ಮೃತರಾಗುತ್ತಾರೆ.
  1957 ರ ಎರಡನೆ ಚುನಾವಣೆಯಲ್ಲಿ ಬದರಿನಾರಾಯಣ ಅಯ್ಯಂಗಾರರು ಶಾಂತವೇರಿ ಗೋಪಾಲಗೌಡರನ್ನು ಸೋಲಿಸುತ್ತಾರೆ, 1972ರಲ್ಲಿ ದೇವರಾಜ ಅರಸರ ಸಂಪುಟದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳಾಗಿ ಮೈಸೂರು ರಾಜ್ಯ #ಕನಾ೯ಟಕ_ರಾಜ್ಯ ಎಂದು ಮರು ನಾಮಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಈ ಅವದಿಯಲ್ಲಿ ಆನಂದಪುರಂಗೆ ಸಕಾ೯ರಿ ಪದವಿ ಪೂರ್ವ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ರಾಂಚ್ ಮುಂತಾದ ಅನೇಕ ಅಭಿವೃಧ್ಧಿ ಕೆಲಸ ಮಾಡಿಸುತ್ತಾರೆ.
  ಇವರ ಅವದಿಯಲ್ಲಿ ಪ್ರದಾನ ಮಂತ್ರಿ ಜವಾಹರಲಾಲ್ ನೆಹರೂ ಮತ್ತವರ ಪುತ್ರಿ ಜೋಗ್ ಜಲಪಾತ ವೀಕ್ಷಣೆಗೆ ಹೋಗುವ ಮಾರ್ಗದಲ್ಲಿ ಆನಂದಪುರ೦ನ ಪ್ರೌಡ ಶಾಲೆ ಎದರು ವಿದ್ಯಾರ್ಥಿಗಳಿಂದ ಸ್ವಾಗತ ಸ್ವೀಕರಿಸಿ ನೆನಪಿಗಾಗಿ ಗಿಡ ನೆಡುತ್ತಾರೆ ಆಗ ಜಿಲ್ಲೆಯ ಮೊದಲ ಸಂಸದ ಕಾಗೋಡಿನ ಕೆ.ಜಿ. ಒಡೆಯರ್ ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವ ವಹಿಸಿರುತ್ತಾರೆ.
  ಭೂದಾನ ಚಳವಳಿಯ ನೇತಾರ ಆಚಾರ್ಯ ವಿನೋಬಾ ಭಾವೆಯವರನ್ನು ಆನಂದಪುರಂಗೆ ಕರೆಸಿ ಭೂದಾನದ ಕಾರ್ಯಕ್ರಮವನ್ನು ಎಣ್ಣೆ ಕೊಪ್ಪದ ಸರ್ದಾರ್ ಮಲ್ಲಿಕಾರ್ಜುನಗೌಡರ ನೇತೃತ್ವದಲ್ಲಿ ನಡೆಸುತ್ತಾರೆ.
  ಹಾಗಾಗಿ ಆನಂದಪುರಂ ಚರಿತ್ರೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ಅವರ ಸ್ಥಳಿಯ ಬೆಸ್ತರ ರಾಣಿ ಚಂಪಕಾ ಮತ್ತು ರಾಮಕೃಷ್ಣ ಅಯ್ಯಂಗಾರರ ಕುಟುಂಬದ ನೆನಪು ಚಿರಸ್ಥಾಯಿಯಾಗಿ ಉಳಿಯುತ್ತದೆ.
  1945ರಲ್ಲಿ ಆನಂದಪುರಂನಲ್ಲಿ ರಾಮಕೃಷ್ಣ ಅಯ್ಯ೦ಗಾರರು ತಮ್ಮ ತೀರ್ಥರೂಪ ತಂದೆಯವರಾದ ಶ್ರೀನಿವಾಸ ಆಯ್ಯ೦ಗಾರ್ ಸ್ಮರಣಾರ್ಥ ಮಿಡ್ಲಿಸ್ಕೂಲ್ (ಈಗ ಇದನ್ನು ಹಿರಿಯ ಪ್ರಾಥಮಿಕ ಶಾಲೆ ಎಂದು ಕರೆಯುತ್ತಾರೆ) ಆನಂದಪುರಂ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಿರ್ಮಿಸುತ್ತಾರೆ, ಇದರ ಹಿಂದಿನ ಬಯಲು ಆ ಕಾಲದ ಕ್ರೀಡಾಂಗಣ ಆಗಿತ್ತು.
   ಈಗಲೂ ಈ ಶಾಲೆಯ ಗೋಡೆಯ ಮೇಲೆ 1940 ರಲ್ಲಿ ಅಳವಡಿಸಿದ ಶಿಲಾಫಲಕ ಇದೆ ಅದರಲ್ಲಿ ಇಂಗ್ಲೀಷ್ ನಲ್ಲಿ ಹೀಗೆ ಕೆತ್ತಿದ್ದಾರೆ..
  #This_Building_of_Middleschool_AnandapuramDonated_by_Mr_Ramakrishnaiyangar
#In_Loving_Memory_of_His_Revered_Father_Sri_Srinivasaiyangar_Dated_1_1_1945.

  ಇಂತಹ ಚಾರಿತ್ರಿಕ ಇತಿಹಾಸ ಉಳ್ಳ ದಾನಿಗಳಿಂದ ನಿರ್ಮಿಸಿದ ಶಾಲೆ ಇತ್ತೀಚೆಗೆ ಸರ್ಕಾರದ ಹೊಸ ಯೋಜನೆ ಮಾಡೆಲ್ ಎಜುಕೇಶನ್ ಯೋಜನೆಯಲ್ಲಿ 5ನೇ ತರಗತಿಯಿಂದ  ದ್ವಿತೀಯ ಪಿಯುಸಿ ತನಕ ಒಂದೇ ಕಡೆ ನಡೆಸಲು ಈ ಕಟ್ಟಡದಿಂದ ಶಾಲೆ ತೆರವು ಮಾಡಿ ಆನಂದಪುರಂನ ಇದೇ ಅಯ್ಯಂಗಾರರ ಕುಟುಂಬ ನಿರ್ಮಿಸಿದ ಪದವಿ ಪೂರ್ವ ಕಾಲೇಜು ಮತ್ತು ಪ್ರೌಡ ಶಾಲಾ ಕಟ್ಟಡ ಸಂಕೀರ್ಣಕ್ಕೆ ವರ್ಗಾಯಿಸಿದ್ದಾರೆ ಇದರಿಂದ 77 ವರ್ಷದ ಈ ಮಿಡ್ಲ್ ಸ್ಕೂಲ್ ಕಟ್ಟಡ ಬೇರಾವುದಾದರು ಸದುದ್ದೇಶಕ್ಕೆ ವಹಿಸಿಕೊಟ್ಟಿದ್ದರೆ ಈಗ ಇದು ಈಗಿನ ಶಿಥಿಲಾವಸ್ಥೆಗೆ ಹೋಗುತ್ತಿರಲಿಲ್ಲ.
  ಈ ಶಾಲೆಯ ಆವರಣದಲ್ಲಿ ಆ ಕಾಲದ ಮುಖ್ಯೋಪಾಧ್ಯಯರಾಗಿದ್ದ #ಜೋ_ನೀಲಕಂಠಪ್ಪ ಮತ್ತು ದೈಹಿಕ ಶಿಕ್ಷಕರಾಗಿದ್ದ #ಕೊಟ್ರಪ್ಪ ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ ನಿರ್ಮಿಸಿದ #ಶಿವಪ್ಪನಾಯಕ_ರಂಗಮಂದಿರ ಕೂಡ ಹಾಳಾಗುತ್ತಿದೆ.
  ಈ ಶಾಲೆಗೆ ಆಚಾರ್ಯ ವಿನೋಬಾ ಭಾವೆ ಬಂದಾಗ ಸಮೀಪದ ಇರುವಕ್ಕಿಯ ಕು೦ಬಾರ ಬಸಪ್ಪರ ತಂದೆ ತಮ್ಮ ಫಲ ಭರಿತ 5 ಎಕರೆ ನೀರಾವರಿ ಜಮೀನು ಭೂದಾನ ಮಾಡಿದ್ದರು.
  ಇದನ್ನು ಸ್ಥಳಿಯ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ಮತ್ತು ಸ್ಥಳಿಯ ಸಾಹಿತ್ಯ ಪರಿಷತ್ ತಮಗೆ ವಹಿಸಿಕೊಡಿ ಇದನ್ನು ಉಳಿಸಿ ಬಳಿಸಿ ಸಂರಕ್ಷಣೆ ಮಾಡುತ್ತೇವೆಂದು ಮಾಡಿದ ಮನವಿ ತಾಲ್ಲೂಕು ಆಡಳಿತದಲ್ಲಿ ಕಳೆದು ಹೋಗಿದೆ.
  ಈಗ ಇದು ಗುಜರಿ ಆಯುವವರ ಗೊಡಾನ್ ಆಗಿದೆ, ಮಳೆ ಗಾಳಿಗೆ ಹೆಂಚುಗಳು ಹಾರಿ ಹೋಗಿದೆ, ಬೋರ್ಡ್ - ಹಿಂದಿನ ಪೋಟೋಗಳೆಲ್ಲ ಚೆಲ್ಲಾಪಿಲ್ಲಿ ಆಗಿದೆ.
  1945ರಲ್ಲಿ ಊರಿಗಾಗಿ ತನ್ನ ತಂದೆಯ ನೆನಪಿಗಾಗಿ ಕಟ್ಟಿಸಿ ಕೊಟ್ಟ ಶಾಲೆ ಇವತ್ತು ಅವನತಿ ಅಂಚಿಗೆ ತಲುಪಿದ್ದು ವಿಷಾದನೀಯ, ಊರವರೆಲ್ಲ ಸೇರಿ ಸಮಿತಿ ರಚಿಸಿ ತಕ್ಷಣ ಈ ಶಿಥಿಲವಾಗಿರುವ ಉಪಯೋಗಿಸದ ಈ ಶಾಲೆ ಸ್ವಚ್ಚಗೊಳಿಸಿ ಊರಿನ ಉಪಯೋಗಕ್ಕೆ ಬಳಕೆ ಮಾಡಲು ಮುಂದಾಗಬೇಕು.
   ಇದಕ್ಕೆ ಸ್ಥಳಿಯ ಗ್ರಾಮ ಪಂಚಾಯತ್ ಮತ್ತು ತಾಲುಕು ಆಡಳಿತ ಬೆಂಬಲಿಸುವಂತೆ ಶಾಸಕರು ಆದೇಶಿಸಬೇಕು ಇದು ಆನಂದಪುರಂನ ಇತಿಹಾಸ ಹೇಳುವ ಸ್ಮಾರಕ ಕೂಡ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ