Blog number 2276.ರಾಷ್ಟ್ರೀಯ ಹೆದ್ದಾರಿ ಅಂಕೋಲ ಸಮೀಪದ ಶಿರೂರಿನಲ್ಲಿ ಪಶ್ಚಿಮ ಘಟ್ಟದ ಪರ್ವತ ಕುಸಿದ ದುರಂತಕ್ಕೆ ನಿಜ ಕಾರಣ.
#ಪಶ್ಚಿಮ_ಘಟ್ಟದಲ್ಲಿ_ಕುಸಿಯುತ್ತಿರುವ_ಪರ್ವತ_ಶ್ರೇಣಿಗಳು #ಅಂಕೋಲಾ_ಸಮೀಪದ_ಶಿರೂರಿನಲ್ಲಿ_ರಾಷ್ಟ್ರೀಯ_ಹೆದ್ದಾರಿ_ಕುಸಿದು_ಆಗಿದ_ದುರಂತಕ್ಕೆ_ಕಾರಣವೇನು? #ಇಲ್ಲಿ_ಸಣ್ಣ_ಒಂದು_ತನಿಖೆ_ಸ್ಥಳೀಯ_ಪತ್ರಕರ್ತರು_ಸಾಮಾಜಿಕ_ಕಾಳಜಿಯ_ಕಾರ್ಯಕರ್ತರು_ಮಾಡಬಹುದು... 1 ) ಚತುಷ್ಪಾದ ರಸ್ತೆ ನಿರ್ಮಾಣದಲ್ಲಿ ಅವಶ್ಯವಿರುದಕ್ಕಿಂತ ಹೆಚ್ಚು ಅಗಲ ಅಗಲೀಕರಣ ಯಾಕೆ ಗುತ್ತಿಗೆದಾರರು ಮಾಡಿದರು? 2 ) ಇಲ್ಲಿನ ಗುತ್ತಿಗೆದಾರರಿಗೆ ಜಲ್ಲಿ ಕಲ್ಲು ತೆಗೆಯಲು ಈ ಕಲ್ಲಿನ ಗುಡ್ಡ ಬಗೆಯಲು ಜಿಲ್ಲಾಧಿಕಾರಿಗಳು ಪ್ರತ್ಯೇಕ ಅನುಮತಿ ನೀಡಿದ್ದರ ?. 3) ನೀಡಿದ್ದರೆ ಆ ಪ್ರದೇಶದ ಅಳತೆ ಮತ್ತು ನಕ್ಷೆ ಎಷ್ಟು? ನಿಜ ಕಾರಣವನ್ನು ಯಾರು ಬಹಿರಂಗಪಡಿಸದೆ ವಿಷಯಾ0ತರ ಮಾಡುತ್ತಿರುವುದು ಸರಿಯಲ್ಲ,ಕಳೆದ 15 ವರ್ಷದಿಂದ ನಾನು ಈ ಮಾರ್ಗದಲ್ಲಿ ಸತತ ಪ್ರಯಾಣವನ್ನು ಮಾಡುತ್ತಿದ್ದೇನೆ. 2018ರಲ್ಲಿ ಇರಬಹುದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಯಿತು ಚತುಷ್ಪಾದ ರಸ್ತೆಯ ಅಗಲೀಕರಣಕ್ಕಾಗಿ ಕುಮುಟಾ ಕಾರವಾರದ ರಸ್ತೆ ಕಾಮಗಾರಿ ವೇಗವಾಗಿ ನಡೆಯಲು ಪ್ರಾರಂಭವಾಯಿತು. ಆಗ ಕುಮುಟಾದಿಂದ ಅಂಕೋಲ ಮಾರ್ಗದಲ್ಲಿ ಗಂಗಾವಳಿ ನದಿ ಸೇತುವೆ ಹಳೆಯದಿತ್ತು ಆ ಸೇತುವೆ ದಾಟಿದ ನಂತರ ಎಡಕ್ಕೆ ನೇರವಾಗಿ ಹೆದ್ದಾರಿ ದ್ವಿಮುಖ ಹೆದ್ದಾರಿಯಾಗಿತ್ತು. ಎಡಭಾಗದಲ್ಲಿ ವರ್ಷಪೂರ್ತಿ ಹರಿಯುತ್ತಿರುವ ಸಮು...