ನನಗಿಷ್ಟವಾದ ಈ ಆಪ್ತ ಲೇಖನ ಪ್ರಜಾವಾಣಿಯ ಸಂಗಣ್ಣ ಪ್ರಕಾಶ್ ಪೇಸ್ ಬುಕ್ನಲ್ಲಿ ಕಳೆದ ವರ್ಷ ಪಾದರ್ಸ್ ಡೇ ಗೆ ಬರೆದದ್ದು, ಇದು ಜೀವನದ ಸನ್ಮಾರ್ಗದ ಪಾಠ ಕಲಿಸುತ್ತದೆ ಓದಿ.
#ಹರವೆ_ಸಂಗಣ್ಣ_ಪ್ರಕಾಶ್_ಈಗ_ಪ್ರಜಾವಾಣಿ_ದಾವಣಗೆರೆ_ಬ್ಯೂರೋದ_ಪ್ರಸರಣ_ವಿಭಾಗದ_ವ್ಯವಸ್ಥಾಪಕರು ಇವರು ಚಾಮರಾಜ ನಗರ ಜಿಲ್ಲೆಯವರು ತಮ್ಮ ತಂದೆಯ ಪ್ರೋತ್ಸಾಹ ಪತ್ರಿಕೆ ಹಂಚುವ ಮೂಲಕ ತೋರಿಸಿ ಕೊಟ್ಟಿದ್ದು ಅವರಿಗೆ ಇವತ್ತು ನಾಡಿನ ಪ್ರಖ್ಯಾತ ಪತ್ರಿಕೆಯಲ್ಲಿ ಪ್ರತಿಷ್ಟಿತ ಹುದ್ದೆಯಲ್ಲಿರುವ೦ತೆ ಮಾಡಿದ್ದನ್ನ ಪಾದರ್ಸ್ ಡೇನಲ್ಲಿ ನೆನಪು ಮಾಡಿ ಬರೆದಿದ್ದಾರೆ. ಮನಸ್ಸಿದ್ದರೆ ಮಾಗ೯ ಉ೦ಟು, ವೃತ್ತಿಯಲ್ಲಿ ಮೇಲು ಕೇಳು ಇಲ್ಲ ಎನ್ನುವ ಸಂದೇಶ ಇವತ್ತಿನ ಎಲ್ಲಾ ಯುವ ಜನಾ೦ಗಕ್ಕೆ ಸ್ಪೂತಿ೯ ಉಂಟು ಮಾಡುತ್ತದೆ ಓದಿ. ಅಂದು ನನ್ನ ಡಿಗ್ರಿ ಓದಿದ ನಂತರ ಹಳ್ಳಿಯಲ್ಲಿ ಏನು ಮಾಡಲಾಗದೆ ಮೈಸೂರಿಗೆ ಇಡೀ ನಮ್ಮ ಕುಟುಂಬ ಬಂದೆವು. ಅಣ್ಣ ಅಲ್ಲೆ ಇದ್ದ ಕಾರಣ ಒಂದು ಚಿಕ್ಕ ಮನೆಯಲ್ಲಿ ನಾನು,ಅವ್ವ, ಅಪ್ಪ ಅಣ್ಣನ ಸಂಸಾರ ಚಿಕ್ಕ ಜಾಗದಲ್ಲೇ ಇದ್ದೆವು. ನನ್ನ ಕೆಲಸ ಕೆಲಸ ಹುಡುಕುವುದು ಊಟ ಮಾಡುವುದು.ಕೆಲ ದಿನಗಳವರೆಗೆ ಇಷ್ಟೇ ಆಗಿತ್ತು ನನ್ನ ದಿನಚರಿ. ಸುಮಾರು ದಿನಗಳ ನಂತರ ಅಪ್ಪ ನನ್ನನ್ನು ಕರೆದು ನೋಡು ಮಗ, ನಾವೀಗ ಇರುವುದು ನಿನ್ನ ಅಣ್ಣನ ಮನೆಯಲ್ಲಿ ಇರುವುದು, ಯಾರೇ ಆಗಿರಲಿ ಎಷ್ಟು ದಿನ ಅಂತ ಸುಮ್ಮನೆ ಕುಳಿತು ಊಟ ಮಾಡುವುದು..ಬೇಡ ಇದು ಸರಿಯಲ್ಲ, ಕೆಲಸ ಸಿಕ್ಕಿಲ್ಲ ಅಂತಾ ಸುಮ್ಮನೆ ಕುಳಿತುಕೊಂಡಿರುವುದು ಸರಿಯಲ್ಲ. ...