Blog number 2006. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಒಡನಾಟದ ಆನಂದಪುರಂನ ಮಧ್ಯ ಕಣ್ಣೂರಿನ ಅಡುಗೆ ಮನೆ ಮನೆತನದ ಕುಪ್ಪ ನಾಯಕರ ಮರಿ ಮೊಮ್ಮಗ ಯುವ ವಕೀಲ ಮಾಜಿ ಸಾಗರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ನನ್ನ ಅತಿಥಿ
#ನನ್ನ_ಇವತ್ತಿನ_ಅತಿಥಿ_ವಕೀಲರಾದ_ಕಣ್ಣೂರು_ಚೇತನರಾಜ್ #ಸಣ್ಣ_ವಯಸ್ಸಲ್ಲೇ_ಸಾಗರ_ತಾಲ್ಲೂಕ್_ಬಿಜೆಪಿ_ಅಧ್ಯಕ್ಷರಾಗಿದವರು #ಕೃಷಿ_ಉತ್ಪನ್ನ_ಮಾರುಕಟ್ಟೆ_ಅಧ್ಯಕ್ಷರಾಗಿದ್ದವರು #ಇವರ_ಮುತ್ತಜ್ಜ_ಕುಪ್ಪನಾಯಕರು_ಬಂಗಾರಪ್ಪರಿಗೆ_ಈ_ಭಾಗದಲ್ಲಿ_ಅತಿಥ್ಯ_ನೀಡಿದವರು #ಇವರ_ಕಿರಿಯಜ್ಜ_ಡಾಕ್ಟರ್_ಬೋರಪ್ಪನವರು_ಧೀವರ_ಸಮಾಜ_ಮೊದಲ_ವೈದ್ಯರು. https://youtu.be/xxIQou5hOPk?feature=shared ಇವತ್ತು ವಕೀಲರು ಮತ್ತು ಮಾಜಿ ಸಾಗರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಚೇತನ್ ರಾಜ್ ಕಣ್ಣೂರು ಬಂದಿದ್ದರು. ಇವರು ಸಾಗರ ತಾಲೂಕಿನ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದವರು ವಿಷೇಷ ಎಂದರೆ ಅತಿ ಸಣ್ಣ ವಯಸ್ಸಿನಲ್ಲೇ ಇವರು ದೊಡ್ಡ ದೊಡ್ಡ ಹುದ್ದೆ ಪಡೆದದ್ದು. ಇವರ ತಂದೆಯ ಸಹೋದರಿ ಶ್ರೀಮತಿ ಭೂದೇವಿ ಪರುಶರಾಮ್ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗಿದ್ದಾಗ ನನ್ನ ಜೊತೆ ಬರೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿದ್ದರು. ಇವರ ಕಿರಿಯಜ್ಜ ಡಾಕ್ಟರ್ ಬೋರಪ್ಪ ದೀವರ ಸಮಾಜದ ಪ್ರಥಮ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ವೈದ್ಯರಾದ ದಾಖಲೆ ಮಾಡಿದವರು, ನಾನು ಅವರನ್ನು ಸಾಗರ ತಾಲೂಕಿನ ಈಡಿಗರ ಸಮಾಜದ ಅಧ್ಯಕ್ಷರಾದ ಟಿ.ವಿ. ಪಾಂಡುರಂಗರ ಮನೆಯಲ್ಲಿ ಬೇಟಿ ಮಾಡಿದ್ದೆ, ನನ್ನ ತಂದೆಯ ನೆನಪು ಅವರು ಆ ದಿನ ಮಾಡಿದ್ದರು. ಈ ಬಗ್ಗೆ ಹೊಸನಗರ ತಾಲೂಕಿನ ಮಾಜಿ ಶಾಸಕರಾ...