Skip to main content

Posts

Showing posts with the label 515 years back HOSAGUNDA Nayakas donated two villages for Harivana pooja

ಆನಂದಪುರಂ ಇತಿಹಾಸ ಭಾಗ-69, ಆನಂದಪುರಂ ರಂಗನಾಥ ಸ್ವಾಮಿ ದೇವಾಲಯದ ಗುರುಡಗಂಭಕ್ಕೆ 515 ವರ್ಷ, ಇದು ಹೊಸಗುಂದ ಸೀಮೆಯಾಳುತ್ತಿದ್ದ ನಾಯಕರು ದೇವರ ಹರಿವಾಣ ಸೇವೆಗಾಗಿ ಎರೆಡು ಊರು ದಾನ ನೀಡಿದ ಶಿಲಾ ಶಾಸನ.

#ಆನಂದಪುರಂ_ಇತಿಹಾಸ_69. #ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ #ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು. #ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು. #ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು 1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.   ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ.       ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕೆಳಬಾಗದಲ್ಲಿದ್ದ  ಗರುಡಗಂಭದಲ್ಲಿ ಗರುಡನ ಶಿಲ್ಪವು ಆಕರ್ಷವಾಗಿದ್ದು ಒಂದು ಕೈಯಲ್ಲಿ ಸರ್ಪವಿದೆ.    ಕಾಲ ಕಾಲಕ್ಕೆ ದೇವಾಲಯದ ನವೀಕರಣ ಕಾಲದಲ್ಲಿ ಸ್ಥಳ ಬದಲಾಗಿ ಈಗ ದೇವಸ್ಥಾನದ ಮು೦ಬಾಗದ ಗೋಡೆಯ ಎಡಭಾಗದಲ್ಲಿ ಸುರಕ್ಷಿತವಾಗಿ ರಕ್ಷಿಸಿಡಲಾಗಿದೆ.    ಕ್ರಿ.ಶ.1507 AD ಕಾಲ ಮಾನದ ಈ ಗರುಡ ಸ್ಥಂಭಕ್ಕೆ ಈಗ 515 ವರ್ಷಗಳಾಗಿದೆ.   515 ವರ್ಷಗಳ ಹಿಂದಿನ ಅಂದರೆ 5 ಶತಮಾನದ ಈ ಶಿಲಾ ಶಾಸನ ತುಂಬಾ ಮಹತ್ವದ್ದಾಗಿದೆ ಮತ್ತು ಮುಂದಿನ ದಿನದಲ್ಲಿ ಈ ಶಿಲಾ ಶಾಸನ ಅತ್ಯಂತ ಜಾಗೃತಿಯಿಂದ ಮುಂದಿನ ತಲೆಮಾರಿಗಾಗಿ ಸಂರಕ್ಷಿಸ...