Skip to main content

Posts

Showing posts from January, 2021

ಹೊಸ ಬಾಳೆ ಮಂಜುನಾಥ ಹೆಗಡೆ ಪಶ್ಚಿಮ ಘಟ್ಟದ ವಿಜ್ಞಾನಿಗಳು, ಇವರನ್ನ ಮಲೆನಾಡಿನ ಆಕಿ೯ಮಿಡಿಸ್ ಅಂತಾನೆ ಕರೆಯಬಹುದು.

ನಿನ್ನೆಯ ಪತ್ರಕತ೯ ತಲವಾಟ ರಾಘವೇಂದ್ರಶಮಾ೯ರ ಪೇಸ್ ಬುಕ್ ಚಚೆ೯ ಹೊಸಬಾಳೆ ಮಂಜುನಾಥಹೆಗಡೆಯವರ ಈ ಪ್ರಾತ್ಯಕ್ಷತೆಗೆ ಕಾರಣ ಆಯಿತು.      ಗೋಕಣ೯ದಿಂದ ಓಂಕಾರ ನಿರಂತರವಾಗಿ ಮರದ ದಂಡ ಸುತ್ತುಸುವುದರಿಂದ ಬರುವ ಕಂಚಿನ ಪಾತ್ರೆ ಖರೀದಿಸಿದ ಬಗ್ಗೆ ಪತ್ರಕರ್ತರಾದ ತಲವಾಟ ರಾಘವೇಂದ್ರ ಶಮಾ೯ರು ಬರೆದಿದ್ದರು, ಇದನ್ನು ಓದಿದಾಗ ನನಗೆ,ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಗೆ  ಬಿಕ್ಷಾಟನೆಗೆ ಬರುತ್ತಿದ್ದ ಜಂಗಮರು ಇಂತಹದೇ ಓಂಕಾರ ಗಂಟೆ ತರುತ್ತಿದ್ದ ಬಗ್ಗೆ ಅದರಿಂದ ಓಂಕಾರ ಬರುಸುತ್ತಿದ್ದ  ಮತ್ತು ಘಂಟೆ ಒಳಗೆ ಮಣಿಗಳು ಕಂಪನದಿಂದ ಕಿಣಿ ಕಿಣಿ ಅಂತ ಕುಣಿಯುವ ವಿಸ್ಮಯ ನೆನಪಾಯಿತು.       ಇದನ್ನುನೋಡಲು ಊರಿನ ಒ೦ದು ವಯಸ್ಸಿನ ಬಾಲಕರಾದ ನಾವೆಲ್ಲ ಇವರು ಊರು ದಾಟುವ ತನಕ ಇವರನ್ನ ಹಿಂಬಾಲಿಸುತ್ತಿದ್ದದ್ದು ನೆನಪಾಗಿ ಪ್ರತಿಕ್ರಿಯೆ ಬರೆದಿದ್ದೆ.   ಇದಕ್ಕೆ ಹೊಸ ಬಾಳೆ ಮಂಜುನಾಥರೂ ಪ್ರತಿಕ್ರಿಯಿಸಿ ಅವರ ಬಾಲ್ಯದಲ್ಲೂ ಈ ಓಂಕಾರದ ಘ೦ಟೆ ಜಂಗಮರನ್ನ ಹಿಂಬಾಲಿಸುತ್ತಿದ್ದನ್ನ ನೆನಪಿಸಿದರು ಮತ್ತು ನಾನು ಮರೆತಿದ್ದ ಈ ಜಂಗಮರ ಇನ್ನೊಂದು ವಿದ್ಯೆ ನೆನಪಿಸಿದರು,ಅದೇನೆಂದರೆ ಒಬ್ಬ ಗಂಟೆ ಜಂಗಮರು ಗೇಟಲ್ಲಿ ನಿಂತು ಹೀಗೆ ಬಾರಿಸುತ್ತಿದ್ದರೆ, ಇನ್ನೊಬ್ಬರು ಮನೆ ಬಾಗಿಲಿಗೆ ಬಂದು ಮನೆಯವರ ಹೆಸರು ಕೇಳಿ (ತಮ್ಮ ದೈಹಿಕ ಸಂಜ್ಞೆ ಮೂಲಕ ಗಂಟೆ ಜಂಗಮರಿಗೆ ಸಂದೇಶ ಕಳಿಸುತ್ತಿದ್ದರೆ ಅದನ್ನು ಅಥ೯ ಮಾಡಿಕೊಂಡ) ಗಂಟೆ ಜಂಗಮರು ಮನೆಯವರ ಹೆಸರು ಸರಿಯಾಗಿ ಹೇ

ದೇಶಿ ವಂಶಪಾರಂಪಯ೯ ಕುಂಬಾರಿಕೆಗೆ ಹೊಸ ತನ ನೀಡಿ ಯಶಸ್ವಿ ಆದ ಗುಜರಾತಿನ ಮಿಟ್ಟಿ ಕೂಲ್ ಸಂಸ್ಥೆ ಸ್ಥಾಪಕ ಮನ್ ಸುಕ್ ಬಾಯ್ ಪ್ರಜಾಪತಿ ಸಂಸ್ಥೆಯ ಮಣ್ಣಿನ ನೀರಿನ ಬಾಟಲ್ ನ ನಿಜ ಕಥೆ

#ಬೇಸಿಗೆಯಲ್ಲಿ_ತಣ್ಣನೆ_ನೀರು_ಕುಡಿಯಲು_ಗುಜರಾತಿನ_ಮಿಟ್ಟೀ_ಕೂಲ್_ಮಣ್ಣಿನ_ಬಾಟಲ್.       ಬೆಂಗಳೂರಿನ ಆರುಣ್ ಕುಮಾರ್ ಮತ್ತು ಶಶಿಕುಮಾರ್ ಸಹೋದರರು "ಶ್ರೀ ದಾತ್ರಿ" ಎಂಬ ಬ್ರಾಂಡ್ ನಲ್ಲಿ ಮರದ ಗಾಣದಲ್ಲಿ ಎಣ್ಣೆ ತೆಗೆದು ಮಾರುತ್ತಾರೆ, ಈಗ ಕೆಲ ತಿಂಗಳಿಂದ ಅವರಿಂದ ಖರೀದಿಸುತ್ತೇನೆ, ಇವತ್ತು ನಾಲ್ಕು ಲೀಟರ್ ಎಣ್ಣೆ ಪಾಸ೯ಲ್ ಜೊತೆ ಅತ್ಯುತ್ತಮವಾಗಿ ಪ್ಯಾಕ್ ಮಾಡಿದ ಮಣ್ಣಿನ ಸುಂದರ ಬಾಟಲ್ ಕೂಡ ಕಳಿಸಿದ್ದಾರೆ.   ಇದು ನನಗಾಗಿ ಸಣ್ಣ ಗಿಫ್ಟ್ ಅಂದಿದ್ದಾರೆ, ಇದು ಅಮೇಜಾನ್ ನಲ್ಲಿ ರೂ 550 ಇದೆ, ಇದನ್ನು ಇವರು ಕನಾ೯ಟಕದಲ್ಲಿ 300 ರೂಪಾಯಿಗೆ (ಕೋರಿಯರ್ ಪ್ರತ್ಯೇಕ) ಕಳಿಸುತ್ತಾರಂತೆ.   ಈ ಬಾಟಲ್ ನ ಹಿಂದಿನ ಕಥೆ ಈಗ ಜಗತ್ ಪ್ರಸಿದ್ಧ, ಮಿಟ್ಟೀ ಕೂಲ್ ಅಂದರೆ ಪ್ರಪಂಚದಾದ್ಯಂತ ಪ್ರಖ್ಯಾತಿಗಳಿಸಿದೆ, ವಿದ್ಯುತ್ ಇಲ್ಲದ ಮಣ್ಣಿನ ರೆಪ್ರಿಜರೇಟರ್ ವಿಶ್ವ ಮಾನ್ಯತೆ ಪಡೆದಿದೆ, ಇಲ್ಲಿ ಅಡುಗೆ ಮನೆಯ ಎಲ್ಲಾ ರೀತಿಯ ಅವಶ್ಯಕ ಪಾತ್ರೆ ನವೀನ ರೀತಿಯಲ್ಲಿ ಆಕಷ೯ಕವಾಗಿ ತಯಾರಿಸಿ ಮಾರಾಟ ಮಾಡುತ್ತಾರೆ.   ಇದನ್ನೆಲ್ಲ ಕಂಡು ಹಿಡಿದು ತಯಾರಿಸಿ ಮಾರಾಟ ಮಾಡುವವರು ಕುಂಬಾರಿಕೆ ವೃತ್ತಿ ಜೀವನದ ಕುಟುಂಬದಿಂದ ಬಂದ ಶ್ರೀ ಮನಸುಖ್ ಬಾಯಿ ರಾಘವಜೀ ಬಾಯಿ ಪ್ರಜಾಪತಿ.   ಬಡ ಕುಂಬಾರ ಕುಟುಂಬ ಡ್ಯಾಂ ನಿಮಾ೯ಣದಿಂದ ಮನೆ ಮಠ ಕಳೆದುಕೊಂಡು ಹೊಟ್ಟೆ ಪಾಡಿಗೆ ಗುಜರಾತಿನ ಮೊಬಿ೯ಗೆ ಬರುತ್ತದೆ ಅ

ಪ್ರಸಿದ್ದ ಲೇಖಕ, ಸಂಶೋದಕ ಮತ್ತು ಕಾದಂಬರಿಕಾರ ಅಂಬ್ರಯ್ಯ ಮಠ ಬಿದನೂರು ನಗರದಲ್ಲಿ ವಿಶ್ರಾಂತ ಜೀವನ ಮಾಡುತ್ತಿದ್ದಾರೆ ಅವರು ಬರೆದ ಕೆಳದಿ ಕುಲ ತಿಲಕ ಹಿರಿಯ ವೆಂಕಟಪ್ಪ ನಾಯಕ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ.

#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ.    ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ.    ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ, ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ.    ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವವರು ಓದಲೇ ಬೇಕು.     ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ ಪ್ರೇಮ ವಿವಾಹ ಇದಕ್ಕೆ ಕಾರಣವೇ? ದುರಂತ ನಾಯಕಿ

ಕಲ್ಲುಹೂವೆಂಬ ರುಚಿ ಹೆಚ್ಚಿಸುವ ನೈಸಗಿ೯ಕ ಶಿಲಾ ಪುಷ್ಪಾ

#ಕಲ್ಲಲ್ಲಿ_ಹೂವು_ಅರಳಿ_ಕಲ್ಲು_ಹೂವಾಗಿ.     ಕಲ್ಲು ಹೂವು ಕನ್ನಡದಲ್ಲಿ, ಪತ್ತರ್ ಕಾ ಪೂಲ್ ಹಿಂದಿಯಲ್ಲಿ ಮತ್ತು ಇಂಗ್ಲೀಷ್ ನಲ್ಲಿ Block stone flower ಎನ್ನುವ ಈ ಶಿಲೀಂದ್ರ ಅಥವ ಪಂಗಸ್ ಅಥವ ಹಸಿರು ಪಾಚಿ ಮಾಲಿನ್ಯ ರಹಿತ ಪ್ರದೇಶದಲ್ಲಿ ಬಂಡೆ ಕಲ್ಲಿನಲ್ಲಿ ಅರಳುತ್ತದೆ.   ಇದನ್ನು ಹೂವಾದಾಗ ಸಂಗ್ರಹಿಸಿ ಒಣಗಿಸಿ ಮಾರಾಟ ಮಾಡುವ ಶ್ರಮದ ಕೆಲಸ ಇದೆ ಯಾಕೆಂದರೆ ಗುಡ್ಡಗಾಡಿನಲ್ಲಿ ಮಾತ್ರ ಸಿಗುವ ಇದನ್ನು ಸುಲಭವಾಗಿ ಸಂಗ್ರಹಿಸಲು ಸಾಧ್ಯವಿಲ್ಲ.   ಪಶ್ಚಿಮ ಘಟ್ಟದ ಕಳಸ ಭಾಗದಲ್ಲಿ ಇದನ್ನು ಸಂಗ್ರಹಿಸಿ ಮಾರುವವರನ್ನ 20 ವರ್ಷದ ಹಿಂದೆ ನೋಡಿದ್ದೆ, ನಮ್ಮ ದೇಶದ ಮೊದಲ ಕಲ್ಲು ಹೂವಿನ ಗಾಡ೯ನ್ ಉತ್ತರ ಕಾಂಡದ ಕಮೌನ್ ಪ್ರಾಂತ್ಯದ ಮೂನ್ಷಿಯಾರ್ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಂರಕ್ಷಿಸಿದೆ.   ಇದು ಯುರೋಪು, ಉತ್ತರ ಅಮೇರಿಕಾ ಮತ್ತು ಸೈಬೀರಿಯದಲ್ಲಿ ಮುಖ್ಯ ಆಹಾರ ಆಗಿ ಬಳಸುತ್ತಿದ್ದ ದಾಖಖೆ ಇದೆ.    ಔಷದ, ಆಹಾರ, ಸುಗಂದ ದ್ರವ್ಯ ಮತ್ತು ನೈಸಗಿ೯ಕ ಬಣ್ಣ ತಯಾರಿಯಲ್ಲು ಇದರ ಬಳಕೆ ಇದೆ.    ಆಯುವೇ೯ದದಲ್ಲಿ ನೋವು ನಿವಾರಕ, ಚಮ೯ ರೋಗ ಮತ್ತು ಗಾಯ ಗುಣಪಡಿಸಲೂ ಇದನ್ನ ಬಳಸುತ್ತಾರೆ .    ಇದನ್ನು ಬಹು ಮುಖ್ಯವಾಗಿ ಹೈದ್ರಾಬಾದ್ ಬಿರಿಯಾನಿ ಮತ್ತು ತಮಿಳುನಾಡಿನ ಚೆಟ್ಟಿ ನಾಡು ಮಾಂಸಹಾರಿ ಅಡುಗೆಯಲ್ಲಿ ಬಳಸುತ್ತಾರೆ.    ಮರದ ತೊಗಟೆ ವಾಸನೆ ಇರುವ ಇದು ಬಿರಿಯಾನಿಗೆ ಬಳಸಿದರೆ ಬಿರಿಯಾನಿ ರುಚಿಯೇ ಬೇರೆ

ಜಲ ತಜ್ಞ, ಅದುನಿಕ ಭಗಿರಥ, ಪರಿಸರ ಪ್ರೇಮಿ ಎಂದೆಲ್ಲ ಜನರಿಂದ ಕರೆಯುವ ಲೇಖಕ ಶಿವಾನಂದ ಕಳವೆ ಅವರ ಮಧ್ಯ ಘಟ್ಟ ಕಾದಂಬರಿ ವಿಶೇಷ ಮತ್ತು ವಿಸ್ಮಯವಾದ ಪರಿಸರದ ಜೊತೆಯ ನಿಜ ಕಥೆ

#ಶಿವಾನಂದ_ಕಳವೆ_ಅವರ_ಮದ್ಯಘಟ್ಟ_ಓದುಗರನ್ನ_ಯೋಚಿಸುವಂತೆ_ಮಾಡುವ_ಕಾದಂಬರಿ  #ಪರಿಸರದ_ಮೇಲೆ_ನಾಗರೀಕತೆಯ_ಪ್ರಬಾವ_ಮತ್ತು_ಪರಿಣಾಮಗಳನ್ನ #ಕಳವೆಯವರ_ಸೂಕ್ಷ್ಮ_ದೃಷ್ಟಿಕೋನದಲ್ಲಿ_ಸೆರೆಹಿಡಿದು_ಹೆಣೆದ_ನಿಜಕಥೆ_ಕಾದಂಬರಿ    ಈ ಕಾದಂಬರಿ ಮೊದಲ ಮುದ್ರಣ ಆಗಸ್ಟ್ 2020ಕ್ಕೆ ಆಗಿದ್ದು ನಾಲ್ಕು ತಿಂಗಳಲ್ಲಿ ಮೂರು ಮುದ್ರಣ ಆಗಿದೆ ಅಂದರೆ ಈ ಕಾದಂಬರಿಯ ಜನಪ್ರಿಯತೆ ಅಥ೯ವಾದೀತು.   ಕಾದಂಬರಿ ಕಥಾ ನಾಯಕಿ ಭೂದೇವಿದೂರದ ಕೇರಳದಿಂದ ತನ್ನ ಮಗ ವಾಸುದೇವ ಮತ್ತು ಕಂಕಳ ಕೂಸು ದೇವಕಿ ಜೊತೆ ತನ್ನ ಮಗಳ ಮನೆ ಮಧ್ಯ ಘಟ್ಟದ ಗೋಪಯ್ಯ ಹೆಗ್ಗಡೆ (ಅಳಿಯ) ಮನೆಗೆ ಮಂಗಳೂರು ರೈಲು ನಿಲ್ದಾಣದಲ್ಲಿ ತಲುಪಿದಾಗ ತನ್ನ ಹಣ ಮತ್ತು ಬಟ್ಟೆಯ ಬ್ಯಾಗ್ ಕಳೆದುಕೊಂಡು ಮಂಗಳೂರಿಂದ ಕುಮಟಾ ಮಾಗ೯ವಾಗಿ ಸಾರಿಗೆ ಸಂಪರ್ಕ ಇಲ್ಲದ ಕಾಲದಲ್ಲಿ ಮಲೆಯಾಳಂ ಬಿಟ್ಟು ಬೇರೆ ಭಾಷೆ ಬರದ ಹೆಣ್ಣು ಹತ್ತು ದಿನ ನಡೆದು 9 ನದಿ ದಾಟಿ ಸಿಸಿ೯ ತಲುಪಿ ಅಲ್ಲಿಂದ ಮಧ್ಯ ಘಟ್ಟ ಸೇರಿ ಇಲ್ಲೇ ನೆಲೆ ನಿಲ್ಲುವ ನಿಜ ಜೀವನ ಕಥೆಯನ್ನ ಸ್ವಾರಸ್ಯವಾಗಿ ಕಾಲ ಮಾನದ ಅನೇಕ ಬದಲಾವಣೆ, ಅಭಿವೃದ್ಧಿ ಜೊತೆಗೆ ಪರಿಸರದ ಜ್ಞಾನದೊಂದಿಗೆ ಬರೆದಿದ್ದಾರೆ.   ಈ ಕಾದಂಬರಿ ಮೂರನೇ ಮುದ್ರಣದ ಸಂದಭ೯ದಲ್ಲಿ ಈ ಕಾದಂಬರಿ ಓದಿದವರು ಸಾಂಕೇತಿಕವಾಗಿ ಯಾಣ ಸಮೀಪದ ಮಧ್ಯ ಘಟ್ಟಕ್ಕೆ ಕೆಲವು ಕಿ.ಮಿ ಭೂದೇವಿ ನಡೆದ ಮಾರ್ಗದಲ್ಲಿ ನಡೆದು ಮಧ್ಯ ಘಟ್ಟ ತಲುಪಿ ಈ ಕಾದಂಬರಿ ಬಗ್ಗೆ ಚಚೆ೯ ಮಾಡುವ ಸುದ್ದಿ ತಿಳಿದ ಮೇಲೆ ಓದಲ

ಶಿವಮೊಗ್ಗ ಕ್ರಷರ್ ಜೋನ್ ನಲ್ಲಿ ಜಿಲೆಟಿನ್ ಬಾಕ್ಸ್ ಗಳು ಬ್ಲಾಸ್ಟ್ ಆಗಲು ಕಾರಣ ಏನು? ವಾಸ್ತವಕ್ಕೆ ಸಮೀಪದ ಅನಿಸಿಕೆ

#ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು  #ಅದಿಕೃತ_ಅನದಿಕೃತ_ಕಲ್ಲುಗಣಿ_ಸಕಾ೯ರ_ರಾಜಕೀಯ_ಪ್ರಭಾವ_ಅವಘಡ_ಪ್ರದಾನಿ_ಮೋದಿ_ಹೇಳಿಕೆ #ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ     ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ.    ಆಗಿರುವ ಅನಾಹುತ, ನಷ್ಟ,  ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ.    ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು.   ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ  ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನಂತರ ಬೆಳಕು, ಆಕಾಶದೆತ್ತರ ಹೊಗೆ ಏಳುವುದು ನೋಡಿ ಏನೋ ಅನಾಹುತ ಅಂತ ಹೊರ ಬಂದು ನೋಡುತ್ತಿರುವಾಗಲೇ ಕಣ೯ ಕಠೋರವಾದ ಸ್ಪೋಟ ಆಯಿತು, ಪೆಟ್ರೋಲ್ ಪಂಪ್ ಗಾಜುಗಳೆಲ್ಲ ಅದುರಿತು " ಅಂದರು.    ಇದೆಲ್ಲ ಕಲ್ಲು ಕೊರೆ ಸಿಡಿಸಲು ತಂದು

ಸ್ಯೆದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ರಾಮಚಂದ್ರಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಶಿಕ್ಷಕರಾದ ಕಥೆ ಇವತ್ತಿಗೂ ಪಂಚಾಯಿತಿ ಮಟ್ಟದಲ್ಲಿ ರಾಜಕಾರಣ ಮಾಡುವವರಿಗೆ ನೀತಿ ಪಾಠ

#ಅವತ್ತು_ಸಾಗರ_ತಾಲ್ಲೂಕಿನಲ್ಲಿ_ಇದು_ಸೆನ್ಸೇಷನಲ್_ಸುದ್ದಿ    1993ರಲ್ಲಿ ಸಾಗರ ತಾಲ್ಲೂಕಿನ ಉತ್ತರ ಕನ್ನಡ ಜಿಲ್ಲೆಯ ಗಡಿ ಬಾಗದ ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದವರು ಪೈರ್ ಬ್ರಾಂಡ್ ರಾಮಚಂದ್ರಪ್ಪ ಯುವಕರು ಮತ್ತು ಪದವೀದರರು ಅಷ್ಟೇ ಅಲ್ಲ ಲಂಚ ವಿರೋದಿ ಆಗಿ ನ್ಯಾಯದ ಪರವಾಗಿ ಅತ್ಯುತ್ತಮ ವಾಗ್ಮಿ ಆಗಿದ್ದರು.   ಆಗ ನಾನು ನಮ್ಮ ಊರಿನ ಗ್ರಾಮ ಪಂಚಾಯತ್ ಉಪಾದ್ಯಕ್ಷನಾಗಿದ್ದೆ ನಾವೆಲ್ಲ ಸೇರಿ ಸಾಗರ ತಾಲ್ಲೂಕ್ ಗ್ರಾಮ ಪಂಚಾಯತನ ಅಧ್ಯಕ್ಷ ಉಪಾಧ್ಯಕ್ಷರ ವೇದಿಕೆ ಕೂಡ ಮಾಡಿದ್ದೆವು.   ಈಡಿಗ ಸಮಾಜದ ವಿದ್ಯಾವಂತ, ಕೆಲಸಗಾರ,ವಾಗ್ಮಿ ಆಗಿದ್ದ ರಾಮಚಂದ್ರರನ್ನ ರಾಜಕೀಯವಾಗಿ ಬೆಳೆಸಬಹುದಾದ ಸಂದಭ೯ದಲ್ಲಿ ಅವರನ್ನ ಎಲ್ಲಾ ರೀತಿಯಲ್ಲೂ ಹಣಿಯಲು ಅವರ ಪಕ್ಷದವರೇ ಮುಂದಾಗಿದ್ದು ವಿಪಯಾ೯ಸ.   ಇದೇ ಸಂದರ್ಭದಲ್ಲಿ ಇವರು ಶಿಕ್ಷಕರಾಗಿ ಆಯ್ಕೆ ಆದರು, ಎಲ್ಲರೂ ಬಾವಿಸಿದ್ದು ಶಿಕ್ಷಕರ ವೃತ್ತಿ ತಿರಸ್ಕರಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಆದರೆ ರಾಮಚಂದ್ರಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಶಿಕ್ಷಕರಾಗಿ ನಮ್ಮ ಊರಿನ ಸಮೀಪದ ಹೊಸನಗರ ತಾಲ್ಲೂಕಿನ ಹರತಾಳು ಶಾಲೆಗೆ ಕರ್ತವ್ಯಕ್ಕೆ ಬಂದರು.    ಈ ಸುದ್ದಿ ಆ ಕಾಲದಲ್ಲಿ ತುಂಬಾ ಸೋಜಿಗದ ಸುದ್ದಿ, ಈ ಕಾಲದಲ್ಲೂ ಕೂಡ ಏಕೆಂದರೆ ಸಕಾ೯ರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬರುವವರೇ ಹೆಚ್ಚು ಇಂತವರ ಮಧ್ಯೆ ರಾಮಚಂದ್ರಪ್ಪರ ನಡೆ ವಿಭಿನ

ಮಂಜಮ್ಮ ಜೋಗತಿ ಕನಾ೯ಟಕ ಜನಪದ ಅಕಾಡೆಮಿ ಅಧ್ಯಕ್ಷರು ಇವತ್ತು ನಮ್ಮ ಅತಿಥಿ

#ಕನಾ೯ಟಕ_ಜನಪದ_ಅಕಾಡೆಮಿ_ಅಧ್ಯಕ್ಷೆ #ಮಂಜಮ್ಮ_ಜೋಗತಿ_ಇವತ್ತು_ನಮ್ಮ_ಅತಿಥಿ  ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿಯ ಮಂಜಮ್ಮ ಜೋಗತಿ ಆತ್ಮಕಥೆ #ನಡುವೆ_ಸುಳಿವ_ಹೆಣ್ಣು (ಆರುಣ್ ಜೋಳದ ಕೂಡ್ಲಿಗೆ ನಿರೂಪಣೆ ) ಓದಿದರೆ ಗೊತ್ತಾಗುತ್ತದೆ ಇವರು ಸಾಗಿ ಬಂದ ಜೀವನದ ಹಾದಿ ಎಷ್ಟು ಕಲ್ಲು ಮುಳ್ಳಿನ ದೆಂದು.   ಕುಮಾರ ಬಿ. ಮಂಜುನಾಥ ಶೆಟ್ಟಿ ಮಂಜಮ್ಮ ಜೋಗತಿ ಆಗುವುದು ಇದಕ್ಕಾಗಿ ಹೊಸಪೇಟೆಯ ಹುಲಗಿಯ ಹುಲಿಗಮ್ಮ ದೇವಾಲಯದಲ್ಲಿ ಮುತ್ತು ಕಟ್ಟಿಸಿಕೊಂಡು ದೀಕ್ಷೆ ಪಡೆಯುವುದು, ಇದರಿಂದ ಕುಟುಂಬದಿಂದ ದೂರವಾಗುವುದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುವುದು, ನಂತರ ಜೀವನಕ್ಕಾಗಿ ಬಿಕ್ಷಾಟನೆ, ಅತ್ಯಾಚಾರಕ್ಕೆ ಒಳಗಾಗುವುದು, ಅವಮಾನ ನೋವುಗಳ ಸರಮಾಲೆ ಮದ್ಯದಲ್ಲಿ ಜೋಗತಿ ನೃತ್ಯ ಕಲಿತು ಅದರ ಪ್ರದಶ೯ನ ಪ್ರಾರಂಬಿಸಿ ನಂತರ ಇವರ ಕಲಾಸೇವೆಗಾಗಿ ಕನಾ೯ಟಕ ಜನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ತಾಯಮ್ಮ ಮಲ್ಲಯ್ಯ ದತ್ತಿನಿದಿ ಪ್ರಶಸ್ತಿ ಮತ್ತು ಸಮಾಜ ಸಖಿ ಪ್ರಶಸ್ತಿಗಳು ಇವರನ್ನ ಅರಸಿಕೊಂಡು ಬಂದಿತು.    ಯಡ್ಯೂರಪ್ಪರ ರಾಜ್ಯ ಸಕಾ೯ರ ಇವರನ್ನ ಕನಾ೯ಟಕ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದೆ, ಇವತ್ತು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವರ ಉತ್ತರ "ನನ್ನನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂತ ಟೀವಿಲಿ ಬರುತ್ತಿದೆ ಅಂದಾಗ ನಾನು ನಂಬಲೇ ಇಲ್ಲ, ನಾನ

ಬೆಸ್ತರ ರಾಣಿ ಚಂಪಕಾ ಎಂಬ ನನ್ನ ಕಾದಂಬರಿ ರಂಗೋಲಿ ಪ್ರವೀಣೆ ಚಂಪಕ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರ ದುರಂತ ಪ್ರೇಮ ಕಥೆ ಈ ಕಾದಂಬರಿಯಲ್ಲಿನ ಒಂದು ಅದ್ಯಾಯ ರಂಗೋಲಿ ಬಗ್ಗೆ

#ರOಗೋಲಿ ಏನಿದರ ಮಹತ್ವ?#  ನಾನು ಬರೆದಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕದಲ್ಲಿ ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ.   ಈ ಕಾದಂಬರಿಯಲ್ಲಿ ರಂಗೋಲಿಯ ಬಗ್ಗೆ ಒಂದು ಅಧ್ಯಾಯದಲ್ಲಿ .....   "ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ"  ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ. ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ. ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.   ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗೋಲಿಯನ್ನ ರಂಗು ರOಗಾಗಿಸುವ ಕಲೆ ಹೆಣ್ಣು ಮಕ್ಕಳು ಕಲಿ

ಏಕಲವ್ಯನಂತೆ ಯಾರ ಸಹಾಯವೂ ಇಲ್ಲದೆ ಅಕ್ಷರದ ಮೊಳೆ ಜೋಡಿಸಿ ಮುದ್ರಣ ಮಾಡುವುದು ಕಲಿತು ಎರೆಡು ದಶಕ ಸಾಗರದಲ್ಲಿ ಕಾಮಾಕ್ಷಿ ಪ್ರಿಂಟರ್ ಎಂಬ ಪ್ರಸಿದ್ಧ ಸಂಸ್ಥೆ ನಡೆಸಿದ್ದ ಉಲ್ಲಾಸ್ ಶೇಟ್

  ಸಾಗರದ ಕಾಮಾಕ್ಷಿ ಪ್ರಿಂಟರ್ ಉಲ್ಲಾಸ್ ಶೇಟ್ ರದ್ದು ಎರೆಡು ದಶಕದ ಮುದ್ರಣ ಕ್ಷೇತ್ರದ ಸಾದನೆ ಸ್ಮರಣೀಯ. 1980 ರಿಂದ 2000 ಇಸವಿವರೆಗಿನ ಎರೆಡು ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರದಲ್ಲಿ ಸ್ಥಳಿಯ ದಿನ ಪತ್ರಿಕೆಗಳದ್ದೆ ಕಾರುಬಾರು.    ಆಗೆಲ್ಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸ್ಥಳಿಯ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲದ್ದರಿಂದ ಸ್ಥಳಿಯರಿಗೆ ಸ್ಥಳಿಯ ಪತ್ರಿಕೆಗಳು ಬೇಕೇ ಬೇಕು ಆಗಿತ್ತು.   ಸ್ಥಳಿಯ ಪತ್ರಿಕೆಗೆ ಅಂತಹ ಜಾಹಿರಾತು ಆದಾಯ ಇಲ್ಲದ ಕಾಲದಲ್ಲಿ ಪತ್ರಿಕೆಯ ಮಾಸಿಕ ಬಿಲ್ ಒಂದೇ ಸಂಪಾದಕರಿಗೆ ಪತ್ರಿಕೆ ಮುದ್ರಣಕ್ಕೆ, ಪತ್ರಿಕೆ ವಿತರಿಸುವವರಿಗೆ ಸಂಬಳ, ಪೋನ್ ಬಿಲ್, ಅಂಚೆ ವೆಚ್ಚ, ಪತ್ರಿಕಾ ಕಛೇರಿ ಬಾಡಿಗೆ ಮತ್ತು ತಿಂಗಳ ಉಟೋಪಚಾರಕ್ಕೆ ಮೂಲ ಆದಾಯ ಆಗಿತ್ತು.   ಸ್ಥಳಿಯವಾಗಿ ಸಾವ೯ಜನಿಕವಾಗಿ ಪತ್ರಿಕೆ ಸಂಪಾದಕರಿಗೆ ವಿಶೇಷ ಗೌರವ ಇರುತ್ತಿತ್ತು.   ಹೆಚ್ಚಿನ ಪತ್ರಿಕೆಗೆ ವರದಿಗಾರ ಸಂಪಾದಕ ಎರೆಡೂ ಹುದ್ದೆ ಒಬ್ಬರೇ ಆಗಿರುತ್ತಿದ್ದರು.   ಆಗ ದಿನ ಪತ್ರಿಕೆಯ ಸುದ್ದಿ ಬರೆದು ಮಧ್ಯಾಹ್ನ 3 ರ ಒಳಗೆ ಪ್ರಿಂಟಿಂಗ್ ಪ್ರೆಸ್ ಗೆ ತಲುಪಿಸಿದರೆ ಅಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲಿಕರು ಅಕ್ಷರ ಜೋಡಿಸಿ ಪ್ರಿಂಟಿಂಗ್ ಗೆ ತಯಾರಿ ಮಾಡಿಕೊಳ್ಳಬೇಕು ನಂತರ ಸಂಪಾದಕರು ಪ್ರಿ೦ಟಿಂಗ್ ಪೇಪರ್ ತಂದುಕೊಟ್ಟರೆ? ರಾತ್ರಿ 10 ರ ಒಳಗೆ ನಾಳಿನ ಪೇಪರ್ ತಯಾರ್, ಬೆಳಿಗ್ಗೆ ಪತ್ರಿಕೆ ವಾಚಕರ ಮನೆ ತಲುಪುವುದು.   ಇದರಲ್ಲಿ

ಎಂಟು ನೂರು ವರ್ಷ ರಾಜ ಅರಸೊತ್ತಿಗೆಯಲ್ಲಿ ಮೈಸೂರು ಪೇಟಾಗಿದ್ದ ಮಾನ್ಯತೆ ಸ್ವಾತಂತ್ರ ನಂತರ ಪ್ರಜಾಪ್ರಭುತ್ವದಲ್ಲಿ ವಿಮಾನ ಸಂಸ್ಥೆಯ ಲಾಂಚನವಾಗಿದ್ದು ಈಗ ಮದುವೆಯಲ್ಲಿ ವರನ ಬಾಸಿಂಗದಂತೆ ಮತ್ತು ಸನ್ಮಾನಗಳಿಗೆ ಸೀಮಿತವಾಗಿ ಅದರ ಘನತೆ ಕಳೆದು ಕೊಂಡಿದೆ

#ಮೈಸೂರು_ಪೇಟಾ_ಅದರ_ಇತಿಹಾಸ  ಇವತ್ತು ಬೆಂಗಳೂರಲ್ಲಿ ಸಂಸದ ತೇಜಸ್ವಿ ಸೂಯ೯ ಕಾಂಗ್ರೇಸ್ ಮಾಜಿ ಮಂತ್ರಿ ಮತ್ತು ಹಾಲಿ ಶಾಸಕರಾದ ಜಮೀರ್ ಆಹಮದ್ ರಿಗೆ ಮೈಸೂರು ಪೇಟಾ ತೊಡೆಸಿ ಶಾಲು ಹಾರದೊಂದಿಗೆ ಸನ್ಮಾನ ಮಾಡಿದ್ದಾರೆ.   ಮೈಸೂರು ಪೇಟಾದ ಇತಿಹಾಸ ಹುಡುಕಿದರೆ ಮೈಸೂರು ರಾಜರು 1399 ರಿಂದ 1947 ರ ವರೆಗೆ ಬಂಗಾರದ ಲೇಸಿನ ಶುದ್ದ ರೇಷ್ಮೆಯಲ್ಲಿ ಮಾಡಿದ್ದ ಮೈಸೂರು ಪೇಟ ಧರಿಸುತ್ತಿದ್ದರು.   ಇವರ ಆಸ್ಥಾನದಲ್ಲಿ ಮಂತ್ರಿಗಳು, ದಿವಾನರು ಅವರ ಅಂತಸ್ಥು ಅಧಿಕಾರ ಸ್ಥಾನಮಾನಕ್ಕೆ ತಕ್ಕಂತ ಮೈಸೂರು ಪೇಟಾ ಧರಿಸುತ್ತಿದ್ದರು.   ಮೈಸೂರು ಪೇಟಾ ರಾಜರ ದಬಾ೯ರಿನ ಡ್ರೆಸ್ ಕೊಡ್ ಆಗಿತ್ತು.   ಇವರನ್ನು ಬಿಟ್ಟರೆ ಮೈಸೂರು ಪೇಟಾ ಕೊಡಗಿನವರ ಸಂಪ್ರದಾಯಿಕ ವೇಷ ಭೂಷಣದಲ್ಲಿ ಖಾಯಂ ಸ್ಥಾನ ಪಡೆದಿದೆ.   ಸ್ವಾತಂತ್ರ ನಂತರ ಮೈಸೂರು ಅರಸೊತ್ತಿಗೆ ರದ್ದಾದ ನಂತರ ಮೈಸೂರು ಪೇಟಾಕ್ಕೂ ಸ್ವಾತಂತ್ರ ಬಂತು, ಅರಸೊತ್ತಿಗೆ ಇದ್ದಾಗ ಜನ ಸಾಮಾನ್ಯರು ಮೈಸೂರು ಪೇಟಾ ದರಿಸುವುದು ಕನಸಾಗಿತ್ತು, ದರಿಸಿದರೆ ಅರಸೊತ್ತಿಗೆ ದಂಡ ಶಿಕ್ಷೆ ವಿದಿಸುವ ಪದ್ದತಿಯೂ ಇತ್ತು.   ಸ್ವಾತಂತ್ರ ನಂತರ ಭಾರತೀಯ ವಿಮಾನಯಾನದ ಪರಿಚಾರಿಕ ಮೈಸೂರು ಪೇಟಾ ಧರಿಸಿ ವಿಮಾನಕ್ಕೆ ಸ್ವಾಗತಿಸುವ ಚಿತ್ರ ಭಾರತೀಯ ವಿಮಾನ ಯಾನ ಸಂಸ್ಥೆಯ ಲಾಂಛನ ಆಗಿತ್ತು ಅಂದರೆ ಅರಸೊತ್ತಿಗೆಯ ಪ್ರತಿಷ್ಠಿತ ಮೈಸೂರು ಪೇಟಾಗೆ ಪ್ರಜಾಪ್ರಭುತ್ವದಲ್ಲಿ ಯಾವ ಸ್ಥಾನಮಾನ ದೊರೆಯಿತ

ಗ್ರಾಮ ಪಂಚಾಯತ್ ಚುನಾವಣೆ ಅಷ್ಟು ಸುಲಭವಲ್ಲ ಲೋಕಸಭೆ, ವಿದಾನ ಸಭೆ ಚುನಾವಣೆಯಷ್ಟು ಸುಲಭವೂ ಅಲ್ಲ

#ಗ್ರಾಮ_ಪಂಚಾಯಿತಿ_ಚುನಾವಣೆ_ಗೆಲ್ಲುವುದು_ಸುಲಭವೇನಲ್ಲ   ನನ್ನ ಊರು ಮನೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ, ರಾ.ಹೆ. 206 ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿದೆ ಒಂದು ಕಾಲದಲ್ಲಿ ಆನಂದಪುರಂ, ಯಡೇಹಳ್ಳಿ ಮತ್ತು ಆಚಾಪುರ ಸೇರಿ ವಿಲೇಜ್ ಪಂಚಾಯತ್ ಆಗಿತ್ತು ಈ ಮೂರು ಪ್ರತ್ಯೇಕ ಗ್ರಾ.ಪಂ.ಮಾಡಿದ್ದಾರೆ, ಈ ಮೂರು ಗ್ರಾ.ಪಂ. ಸೇರಿಸಿ ಪಟ್ಟಣ ಪಂಚಾಯತ್ ಮಾಡುವ ಅಹ೯ತೆ ಇದ್ದರೂ ಆಳುವವರು ಯಾಕೋ ಮನಸ್ಸು ಮಾಡಿಲ್ಲ.    ಮೊನ್ನೆ ನನ್ನ ಶಿಷ್ಯ ನಾರೀ ಲೋಕಪ್ಪ ಬಂದಿದ್ದರು ಈ ಬಾರಿ ನಾಲ್ಕನೇ ಬಾರಿ ಗ್ರಾ.ಪಂ. ಆಯ್ಕೆ ಆಗಿದ್ದಾರೆ, ಸಿಹಿ ಕೊಟ್ಟು ಅಭಿನಂದಿಸಿದೆ.    1995ರಲ್ಲಿ ನಾನು ಜಿ.ಪ.ಸದಸ್ಯನಾಗುವಾಗ ನಾರೀ ಲೋಕಪ್ಪ ಚಿಕ್ಕ ಬಾಲಕ, ಇವರ ತಂದೆ ನಾರಿ ನಾರಾಯಣಪ್ಪ ನನ್ನ ಗೆಳೆಯರು, ಅವರು ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದಾಗ ಇವರ ಈಡಿಗ ಸಮಾಜದ ಆ ಕಾಲದ ವಿದ್ಯಾವಂತ ಕೋವಿ ನಾರಾಯಣಪ್ಪರನ್ನ ಅಧ್ಯಕ್ಷರನ್ನಾಗಿಸದೆ ಬೇರೆಯವರನ್ನ ಆಯ್ಕೆ ಮಾಡುವ ಸಂದಭ೯ದಲ್ಲಿ ಇವರು ನನ್ನ ಸಹಾಯ ಬಯಸಿ ಬಂದಿದ್ದರು, ಬಹುಮತಕ್ಕೆ ಬೇಕಾಗಿದ್ದ 3 ಸದಸ್ಯರು ನನ್ನ ಹತ್ತಿರ ಇದ್ದರು ಆಗ ನಾನು, ಒಂದು ಕಾಲದ ದೀಘ೯ಕಾಲದ ಅಧ್ಯಕ್ಷರಾಗಿದ್ದ ಅಡೂರು ವಿಲೇಜ್ ಪಂಚಾಯತ್ ನ #ಜಮ್ಮಿನ_ಕೇವಿ_ಈರನಾಯ್ಕರು ಮತ್ತು ಒಂದು ಕಾಲದ ಸಾಗರ ತಾಲ್ಲೂಕ್ ಬೋಡ್೯ ಸದಸ್ಯರಾಗಿದ್ದ #ತಾರಸಿಕ್ಕೆ_ಹಿರಿಯಣ್ಣ_ನಾಯಕರು ನಾರೀ ನಾರಾಯಣಪ್ಪರೇ ಅಧ್ಯಕ್ಷರಾಗಬೇಕೆಂದರೂ ನಾರ