Skip to main content

ಶಿವಮೊಗ್ಗ ಕ್ರಷರ್ ಜೋನ್ ನಲ್ಲಿ ಜಿಲೆಟಿನ್ ಬಾಕ್ಸ್ ಗಳು ಬ್ಲಾಸ್ಟ್ ಆಗಲು ಕಾರಣ ಏನು? ವಾಸ್ತವಕ್ಕೆ ಸಮೀಪದ ಅನಿಸಿಕೆ

#ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು

 #ಅದಿಕೃತ_ಅನದಿಕೃತ_ಕಲ್ಲುಗಣಿ_ಸಕಾ೯ರ_ರಾಜಕೀಯ_ಪ್ರಭಾವ_ಅವಘಡ_ಪ್ರದಾನಿ_ಮೋದಿ_ಹೇಳಿಕೆ
#ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ

    ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ.
   ಆಗಿರುವ ಅನಾಹುತ, ನಷ್ಟ,  ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ.
   ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು.
  ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ  ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನಂತರ ಬೆಳಕು, ಆಕಾಶದೆತ್ತರ ಹೊಗೆ ಏಳುವುದು ನೋಡಿ ಏನೋ ಅನಾಹುತ ಅಂತ ಹೊರ ಬಂದು ನೋಡುತ್ತಿರುವಾಗಲೇ ಕಣ೯ ಕಠೋರವಾದ ಸ್ಪೋಟ ಆಯಿತು, ಪೆಟ್ರೋಲ್ ಪಂಪ್ ಗಾಜುಗಳೆಲ್ಲ ಅದುರಿತು " ಅಂದರು.
   ಇದೆಲ್ಲ ಕಲ್ಲು ಕೊರೆ ಸಿಡಿಸಲು ತಂದು ಜಿಲೆಟಿನ್ ಬಾಕ್ಸ್ ಸ್ಪೋಟಗೊಂಡ ಪರಿಣಾಮ, ಒಂದು ಜಿಲೆಟಿನ್ ಬಾಕ್ಸ್ 20 ಕೆಜಿ ತೂಕ ಇರುತ್ತದೆ ಅದರಲ್ಲಿ ಗರಿಷ್ಠ 200 ಜಿಲೇಟಿನ್ ಕಡ್ಡಿ ಇರುತ್ತದೆ ಒಂದು ಕಡ್ಡಿಗೆ 20 ರಿಂದ 50 ರೂ ತನಕ ಬೆಲೆ ಅಂದರೂ ಒಂದು ಬಾಕ್ಸ್ ಗೆ ನಾಲ್ಕು ಸಾವಿರದಿಂದ ಹತ್ತು ಸಾವಿರ ಬೆಲೆ ಇದೆ.
   ಶಿವಮೊಗ್ಗ ಪಟ್ಟಣದ ಹಾಲಿ ಅಭಿವೃದ್ಧಿ ಕಾಮಗಾರಿ, ದಿನದಿಂದ ದಿನಕ್ಕೆ ಬೆಳೆದು ಪಟ್ಟಣ ಆಗುತ್ತಿರುವ ಪರಿಗೆ ಪ್ರತಿನಿತ್ಯ ಬೇರೆ ಕಡೆಯಿಂದ ಬರುವ ಮರಳು, ಎಂ ಸ್ಯಾಂಡ್, ಜಲ್ಲಿ ಕಲ್ಲುಗಳು ಹೊರತು ಪಡಿಸಿ ಹುಣಸೋಡು ಕ್ರಷರ್ ಜೋನ್ ನಿಂದ ದೊಡ್ಡ ಪ್ರಮಾಣದಲ್ಲಿ ಶಿವಮೊಗ್ಗ ಪಟ್ಟಣಕ್ಕೆ ಪೂರೈಕೆ ಆಗುತ್ತದೆ.
  ಹಾಲಿ 60 ಲೈಸೆನ್ಸ್ ಇರುವ ಕ್ರಷರ್ ಇದೆ ಎಂದು ಮಾಹಿತಿ ಇದೆ, ಈ ಕ್ರಷರ್ ಗಳು 6mm ನಿಂದ 20mm ಮತ್ತು 40 mm ಜಲ್ಲಿ ನಿತ್ಯ ತಯಾರಿಸುತ್ತದೆ, ಎಂ ಸ್ಯಾಂಡ್ ಯುನಿಟ್ಗಳು ಬೇರೆ,ಇದರಿಂದ ಪ್ರತಿ ನಿತ್ಯ ಒಂದು ಸಾವಿರ ಲಾರಿ ಲೋಡ್ ಮಾರಾಟ ಆಗುತ್ತದೆ, ಇದನ್ನು ಸರಬರಾಜು ಮಾಡಲಿಕ್ಕೆ 300 ರಿಂದ 400 ಟ್ರಕ್ ಕನಿಷ್ಠ ಒಂದು ಟ್ರಿಪ್ ಗರಿಷ್ಟ 3 ಟ್ರಿಪ್ ಬಾಡಿಗೆ ಮಾಡುತ್ತದೆ.
   ಈ ಬೃಹತ್ ಪ್ರಮಾಣದ ತಯಾರಿಗೆ ಬೇಕಾದ ಸೋಲಿಂಗ್ ಮತ್ತು ಬಂಡೆಗಳನ್ನು ಕಲ್ಲು ಕೊರೆಗಳಿಂದ ರಾತ್ರಿ ಡೈನಾಮೆಂಟ್ ಇಡಲು ಕುಣಿ ಕೊರೆದು ಅದಕ್ಕೆ ಡೈನಾಮೆಂಟ್ ಗೆ ಕೇಪ್ ಇರಿಸಿ ಬ್ಲಾಸ್ಟಿಂಗ್ ಗೆ ವೈರ್ ಅಳವಡಿಸಿಡುತ್ತಾರೆ (ಎಲೆಕ್ಟ್ರಿಕ್ ಬ್ಲಾಸ್ಟ್ ) ಇದನ್ನು ಬೆಳಿಗ್ಗೆ 6ರ ಒಳಗೆ ಸಿಡಿಸಬೇಕು (ರಾತ್ರಿ ತೆಗೆದ ಕುಣಿಯಲ್ಲಿ ಬೆಳಗಿನವರೆಗೆ ಗ್ಯಾಸ್ ಪಾಮೆ೯ಶನ್ ದೊಡ್ಡ ಪ್ರಮಾಣದಲ್ಲಿ ಕಲ್ಲು ಪುಡಿ ಆಗುವುದರಿಂದ) ನಂತರ ಒಡೆದ ಬಂಡೆ ಕ್ರಷರ್ ಗೆ ಕಳಿಸುವ ಲಾರಿ, ಜೆಸಿಬಿ ಮತ್ತು ಲೋಡರ್ ಗಳು ಅಷ್ಟೆ ಸಂಖ್ಯೆಯಲ್ಲಿ ನಿತ್ಯ ಕೆಲಸ ನಿವ೯ಹಿಸುತ್ತದೆ.
   ಒಂದು ದಿನ ಉತ್ಪಾದನೆ ನಿಂತರೂ ಕಟ್ಟಡ ವಿಮಾ೯ಣಕ್ಕೆ ದೊಡ್ಡ ನಷ್ಟ. ಇದರಿಂದ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊಡ್ಡ ಪ್ರಮಾಣದ ಉದ್ಯೋಗ ವ್ಯವಹಾರ ನಡೆಯುತ್ತದೆ.
  ಕಲ್ಲು ಗಣಿ ಲೈಸೆನ್ಸ್ ಮಾತ್ರ ನೀಡುವ ಅಧಿಕಾರ ಮೈನ್ಸ್ & ಜುಯಾಲಿಜಿಸ್ಟ್ ಇಲಾಖೆದಾದರೆ ಅಲ್ಲಿನ ಬಂಡೆ ಸಿಡಿಸಲು ಡೈನಾಮೆಂಟ್ ಬಳಸಲು ಜಿಲ್ಲಾಧಿಕಾರಿಗಳು ಎಕ್ಸ್ ಪ್ಲೋಸಿವ್ ಲೈಸೆನ್ಸ್ ನೀಡುತ್ತಾರೆ ಹಾಗಾಗಿ ಗಣಿ ಮತ್ತು ವಿಜ್ಞಾನ ಕೇಂದ್ರಕ್ಕೆ ಇಲ್ಲಿ ನಡೆದ  ಸ್ಪೋಟ ಮತ್ತು ದುರಂತಕ್ಕೆ ಸಂಬಂದ ಇರುವುದಿಲ್ಲ.
   ಪ್ರತಿ ನಿತ್ಯ ಇಷ್ಟೇ ಉತ್ಪಾದಿಸಬೇಕು, ನಿಗದಿತ ವೇಳೆಯಲ್ಲಿ ಸೀಮಿತ ಸಂಖ್ಯೆಯ ಬ್ಲಾಸ್ಟ್ ಆಗಬೇಕೆಂಬ ನಿಯಮ, ವಾಹನಗಳಲ್ಲಿ ಪಮಿ೯ಟ್ ಜೊತೆಗೆ ಟಾಪ೯ಲ್ ಮುಚ್ಚಿ ಸಾಗಾಣಿಕೆ ಮಾಡಬೇಕೆಂಬ ನಿಯಮಗಳು ಎಷ್ಟರ ಮಟ್ಟಿಗೆ ಜಾರಿ ಇದೆ ಗೊತ್ತಿಲ್ಲ.
  ಮೊನ್ನೆ ಆಗಿರುವ ಘಟನೆಯ ಬಗ್ಗೆ ಅನೇಕರಲ್ಲಿ ಸಂಗ್ರಹಿಸಿದ ಮಾಹಿತಿಗೆ ನೈಜತೆಗೆ ಹತ್ತಿರ ಇರಬಹುದಾದ್ದು ಇಲ್ಲಿ  ಪ್ರತಿನಿತ್ಯ ನಡೆಸುವ ನೂರಾರು ಬ್ಲಾಸ್ಟಿಗೆ ಅವಶ್ಯ ಇರುವ ದೊಡ್ಡ ಪ್ರಮಾಣದ ಜಿಲೇಟಿನ್ ಮತ್ತು ಕೇಪುಗಳು ಖರೀದಿಸಿ ತರುತ್ತಲೇ ಇರುತ್ತಾರೆ ಆದರೆ ಯಾವತ್ತೂ ಆಗದ ದುರಂತಕ್ಕೆ ಕಾರಣ ಸೆಲ್ ಫೋನ್ ಆಗಿರಲೂ ಬಹುದು ಎ೦ದು ಒ೦ದು ಕಾಲದ ಕ್ರಷರ್ ಮಾಲಿಕರಾದ ಹೊಸನಗರ ತಾಲ್ಲೂಕಿನ ಬಟ್ಟೆ ಮಲ್ಲಪ್ಪದ ರಾಜಶೇಖರ್ ಅನುಮಾನ ಪಡುತ್ತಾರೆ.
   ಬ್ಲಾಸ್ಟ್ ಮಾಡುವ ಸ್ಥಳದಲ್ಲಿ ಸೆಲ್ ಫೋನ್ ಬಳಸಬಾರದೆಂಬ ನಿಯಮ ಇದೆ ಆದರೆ ಈಗಿನ ಕೆಲಸಗಾರರಲ್ಲಿ ಈ ಬಗ್ಗೆ ಭಯ ಎಚ್ಚರ ಇಲ್ಲವಾಗಿದೆ.
  ಅವರ ಪ್ರಕಾರ ದೊಡ್ಡ ಕ್ಯಾಂಟರ್ ವಾಹನದಿಂದ ಸಣ್ಣ Ace ವ್ಯಾನ್ ಗೆ ಅನ್ ಲೋಡು ಮಾಡುವಾಗ ಜಿಲೆಟಿನ್ ಬಾಕ್ಸ್ ಮತ್ತು ಕೇಪ್ ನ ಬಾಕ್ಸ್ ಒಟ್ಟಿಗೆ ಇಡುವಾಗ ಸೆಲ್ ಫೋನ್ ಕನೆಕ್ಟಿವಿಟಿಯಿಂದ ಬ್ಲಾಸ್ಟ್ ಆಗಿದೆ ಇದರ ಪರಿಣಾಮ ನಂತರ ದೊಡ್ಡ ವ್ಯಾನ್ ಬ್ಲಾಸ್ಟ್ ಆಗಿದೆ ಇದೇ ಕಂಪನದಿಂದ ಆ ಪ್ರದೇಶದಲ್ಲಿ ಬೆಳಿಗ್ಗೆ ಬ್ಲಾಸ್ಟ್ ಮಾಡಲು ಅಳವಡಿಸಿದ ಎಲ್ಲಾ ಕುಣಿಗಳಲ್ಲೂ ಬ್ಲಾಸ್ಟ್ ಒಂದೇ ಸಮಯದಲ್ಲಿ ಆಗಿದ್ದರಿಂದ (ಈ ಬಗ್ಗೆ ಎಲ್ಲಾ ಗಣಿಗಳಲ್ಲೂ ಬ್ಲಾಸ್ಟ ಆದ ಕುರುಹು ಇರುತ್ತೆ ) ಸುಮಾರು 50 ರಿಂದ 100 ಕಿ ಮಿ ಸುತ್ತಳತೆ ಪ್ರದೇಶದ ಗ್ರಾನೈಟ್ ಕಲ್ಲಿನ ಸೆಲೆ ಇರುವ ಪ್ರದೇಶದಲ್ಲಿ ಕಂಪನ ಆಗಿದೆ, ಜಂಬಿಟ್ಟಿಗೆ ಕಲ್ಲಿನ ಪ್ರದೇಶ ಮತ್ತು ನೂರು ಅಡಿ ಮಟ್ಟದ ಮಣ್ಣು ಪ್ರದೇಶದಲ್ಲಿ ಕಂಪನ ಶೇಕ್ ಅಬ್ಸರ್ವರ್ ರೀತಿ ವತಿ೯ಸುವುದರಿಂದ ಕಂಪನ ಅನುಭವಕ್ಕೆ ಬರುವುದಿಲ್ಲ ಅಂತೆ.
  ಮುಂದೆ ಈ ರೀತಿ ಆಗದಂತೆ ಏನು ಮಾಡ ಬೇಕು ಎನ್ನುವ ಬಗ್ಗೆ ಯೋಚಿಸ ಬೇಕು ಕ್ರಷರ್ ಜೋನ್ ಜನವಸತಿಯಿಂದ ದೂರ ಇರಬೇಕು, ಕಲ್ಲು ಗಣಿ ಮತ್ತು ಕ್ರಷರ್ ಗೆ ಅಂತರ ಇರಬೇಕು, ಇಡೀ ಗಣಿ, ಬ್ಲಾಸ್ಟಿಂಗ್, ಕ್ರಷರ್ ಮತ್ತು ಸಾಗಾಣಿಕೆ ಒಂದೇ ಇಲಾಖೆ ಸೂರಿನಲ್ಲಿ ಅನುಮತಿ ಮತ್ತು ನಿಯಂತ್ರಣದಲ್ಲಿರುವಂತೆ ರಾಜ್ಯ ಸಕಾ೯ರ ತೀಮಾ೯ನಿಸಬೇಕು ಈ ಮೂಲಕ ನಿಗದಿತ ಪ್ರಮಾಣ ಮೀರದಂತೆ ಉತ್ಪಾದನೆಗೆ ನಿಯಂತ್ರಣ ಮಾಡಬೇಕು, ಕ್ರಷರ್ ಜೋನ್ ನಲ್ಲಿ ಕೆಲಸ ಮಾಡುವವರ ಮಾಹಿತಿ ಮತ್ತು ಅವರ ವಿಳಾಸ ಖಾತ್ರಿ ದಾಖಲೆ ಪ್ರತಿ ವಾರ ಸಂಬಂದಪಟ್ಟ ವ್ಯಾಪ್ತಿಯ ಪೋಲಿಸ್ ಠಾಣೆಗೆ ಕಡ್ಡಾಯ ನೀಡುವ ಸಂಪ್ರದಾಯ ಕೂಡ ಪ್ರಾರಂಭ ಆಗಬೇಕು.
  
   ಸುರಕ್ಷತೆಯ ಎಲ್ಲಾ ಮಾನದಂಡಗಳನ್ನು ಗಣಿ ಮತ್ತು ಕ್ರಷರ್ ಮಾಲಿಕರು ತಪ್ಪದೇ ಅನುಸರಿಸುವ ನೈತಿಕತೆ ಕೂಡ ಕಾನೂನಿಗಿಂತ ಅವಶ್ಯ ಎಂಬ ಸ್ವಯಂ ಜಾಗೃತಿ ಕೂಡ ಅನಿವಾಯ೯.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ