Skip to main content

ಜಲ ತಜ್ಞ, ಅದುನಿಕ ಭಗಿರಥ, ಪರಿಸರ ಪ್ರೇಮಿ ಎಂದೆಲ್ಲ ಜನರಿಂದ ಕರೆಯುವ ಲೇಖಕ ಶಿವಾನಂದ ಕಳವೆ ಅವರ ಮಧ್ಯ ಘಟ್ಟ ಕಾದಂಬರಿ ವಿಶೇಷ ಮತ್ತು ವಿಸ್ಮಯವಾದ ಪರಿಸರದ ಜೊತೆಯ ನಿಜ ಕಥೆ

#ಶಿವಾನಂದ_ಕಳವೆ_ಅವರ_ಮದ್ಯಘಟ್ಟ_ಓದುಗರನ್ನ_ಯೋಚಿಸುವಂತೆ_ಮಾಡುವ_ಕಾದಂಬರಿ  #ಪರಿಸರದ_ಮೇಲೆ_ನಾಗರೀಕತೆಯ_ಪ್ರಬಾವ_ಮತ್ತು_ಪರಿಣಾಮಗಳನ್ನ
#ಕಳವೆಯವರ_ಸೂಕ್ಷ್ಮ_ದೃಷ್ಟಿಕೋನದಲ್ಲಿ_ಸೆರೆಹಿಡಿದು_ಹೆಣೆದ_ನಿಜಕಥೆ_ಕಾದಂಬರಿ

   ಈ ಕಾದಂಬರಿ ಮೊದಲ ಮುದ್ರಣ ಆಗಸ್ಟ್ 2020ಕ್ಕೆ ಆಗಿದ್ದು ನಾಲ್ಕು ತಿಂಗಳಲ್ಲಿ ಮೂರು ಮುದ್ರಣ ಆಗಿದೆ ಅಂದರೆ ಈ ಕಾದಂಬರಿಯ ಜನಪ್ರಿಯತೆ ಅಥ೯ವಾದೀತು.
  ಕಾದಂಬರಿ ಕಥಾ ನಾಯಕಿ ಭೂದೇವಿದೂರದ ಕೇರಳದಿಂದ ತನ್ನ ಮಗ ವಾಸುದೇವ ಮತ್ತು ಕಂಕಳ ಕೂಸು ದೇವಕಿ ಜೊತೆ ತನ್ನ ಮಗಳ ಮನೆ ಮಧ್ಯ ಘಟ್ಟದ ಗೋಪಯ್ಯ ಹೆಗ್ಗಡೆ (ಅಳಿಯ) ಮನೆಗೆ ಮಂಗಳೂರು ರೈಲು ನಿಲ್ದಾಣದಲ್ಲಿ ತಲುಪಿದಾಗ ತನ್ನ ಹಣ ಮತ್ತು ಬಟ್ಟೆಯ ಬ್ಯಾಗ್ ಕಳೆದುಕೊಂಡು ಮಂಗಳೂರಿಂದ ಕುಮಟಾ ಮಾಗ೯ವಾಗಿ ಸಾರಿಗೆ ಸಂಪರ್ಕ ಇಲ್ಲದ ಕಾಲದಲ್ಲಿ ಮಲೆಯಾಳಂ ಬಿಟ್ಟು ಬೇರೆ ಭಾಷೆ ಬರದ ಹೆಣ್ಣು ಹತ್ತು ದಿನ ನಡೆದು 9 ನದಿ ದಾಟಿ ಸಿಸಿ೯ ತಲುಪಿ ಅಲ್ಲಿಂದ ಮಧ್ಯ ಘಟ್ಟ ಸೇರಿ ಇಲ್ಲೇ ನೆಲೆ ನಿಲ್ಲುವ ನಿಜ ಜೀವನ ಕಥೆಯನ್ನ ಸ್ವಾರಸ್ಯವಾಗಿ ಕಾಲ ಮಾನದ ಅನೇಕ ಬದಲಾವಣೆ, ಅಭಿವೃದ್ಧಿ ಜೊತೆಗೆ ಪರಿಸರದ ಜ್ಞಾನದೊಂದಿಗೆ ಬರೆದಿದ್ದಾರೆ.
  ಈ ಕಾದಂಬರಿ ಮೂರನೇ ಮುದ್ರಣದ ಸಂದಭ೯ದಲ್ಲಿ ಈ ಕಾದಂಬರಿ ಓದಿದವರು ಸಾಂಕೇತಿಕವಾಗಿ ಯಾಣ ಸಮೀಪದ ಮಧ್ಯ ಘಟ್ಟಕ್ಕೆ ಕೆಲವು ಕಿ.ಮಿ ಭೂದೇವಿ ನಡೆದ ಮಾರ್ಗದಲ್ಲಿ ನಡೆದು ಮಧ್ಯ ಘಟ್ಟ ತಲುಪಿ ಈ ಕಾದಂಬರಿ ಬಗ್ಗೆ ಚಚೆ೯ ಮಾಡುವ ಸುದ್ದಿ ತಿಳಿದ ಮೇಲೆ ಓದಲು ತಂದಿಟ್ಟ ಮಧ್ಯ ಘಟ್ಟ ಓದಿದೆ.
   ಮಧ್ಯ ಘಟ್ಟ ಮತ್ತಿಘಟ್ಟ ಅಂತ ಬದಲಾಗುವ ಕಾಲ ಮಾನದಲ್ಲಿ ಅಲ್ಲಿ ರಸ್ತೆ ಸಂಪಕ೯ ಇಲ್ಲದ ಹವ್ಯಕರ ಜೀವನ ಶೈಲಿ, ಅವತ್ತಿನ ಅವರ ಆಹಾರ (ಅನ್ನಕ್ಕಿಂತ ಬಾಳೆ ನಿತ್ಯ ಊಟ), ಮದುವೆಗೆ ಹೆಣ್ಣುಗಳ ಕೊರತೆ, ದೂರದ ಕೇರಳದಿಂದ ದಲ್ಲಾಳರ ಮೂಲಕ ಬೆಳೆಸುವ ಸಂಬಂದ ಮತ್ತು ಕಾಡಿನಲ್ಲಿ ಮಳೆ, ಚಳಿಗಳಲ್ಲಿ, ವನ್ಯ ಪ್ರಾಣಿಗಳ ಉಪಟಳದಲ್ಲಿ ಬೇಸಾಯ, ಅಲ್ಲಿ ಸಿಗುವ ಕಾಡಿನ ಸಸ್ಯ ಬೇರುಗಳ ಚಿಕಿತ್ಸೆ, ಕಾಫಿ ಟೀ ತಲುಬಾಗದ ಆ ದಿನಗಳನ್ನ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ, ಗಂಜಿ ಕುಳಿ, ಮನೆಗೆ ಸೋಗೆ ಹೊಚ್ಚುವ ದಿನ ಪ್ರತಿ ವರ್ಷ ಹಬ್ಬದಂತೆ ಆಚರಣೆ ಅದಕ್ಕೆ ಆವತ್ತಿನ ಕೆಲಸಗಾರರ ಶ್ರಮ ನಿಯತ್ತುಗಳೆಲ್ಲ ರಸವತ್ತಾಗಿ ವಿವರಿಸಿದ್ದಾರೆ.
  ವಿದವೆಯರ ಭವಣೆ, ಶೋಷಣೆ ಮಾಡುವ ಶ್ರೀಮ೦ತ ಹೆಗ್ಗಡೆ ಮತ್ತು ಅಚ೯ಕರು, ಪಂಚಾಯಿತಿ ಹೆಸರಲ್ಲಿ ಅಪರಾದಿ ರಕ್ಷಿಸುವ ವ್ಯವಸ್ಥೆ ಈ ಕಾಲಕ್ಕೂ ಬದಲಾಗದೇ ಮುಂದುವರಿದಿದೆ.
  ಕಥಾ ನಾಯಕಿ ಭೂದೇವಿ ಈಗಿಲ್ಲ, ಅವಳ ಮಗಳು ಶ್ರೀದೇವಿ ಮತ್ತು ಅಳಿಯ ಗೋಪಯ್ಯ ಹೆಗ್ಗಡೆ ಈಗಿಲ್ಲ ಮಗ ವಾಸುದೇವ ಮತ್ತು ಮಗಳು ದೇವಕಿ ಇದ್ದಾರೆ ಅವರ ಪೋಟೋ ಇಲ್ಲಿದೆ.
  ಪಶ್ಚಿಮ ಘಟ್ಟದ ನಡೆದಾಡುವ ವಿಶ್ವಕೋಶ, ಅದುನಿಕ ಭಗೀರಥ , ಜಲ ತಜ್ಞ ಅಂತೆಲ್ಲ ಅನ್ವಥ೯ದ ಬಿರುದುಗಳಿಂದ ಜನ ಕರೆಯುವ ಸರಳ ವ್ಯಕ್ತಿತ್ವದ ಶಿವಾನಂದ ಕಳವೆ ಅವರು ಮಿತ ಭಾಷಿ, ಯಾವುದನ್ನೂ ಪ್ರತ್ಯಕ್ಷವಾಗಿ ನೋಡದೆ ಪರಾಮರಿಸುವುದಿಲ್ಲ ಎಂಬ ಸ್ವಬಾವಿ ಇವರ ಕಣ್ಣುಗಳು ಬಲು ಸೂಕ್ಷ್ಮ ಕಣ್ಣೋಟದಿಂದಲೇ ಎಲ್ಲವನ್ನೂ ಗ್ರಹಿಸುವ ಇವರು ಈ ಕಾದಂಬರಿಯಲ್ಲಿ ಪರಿಸರದ ಬದಲಾವಣೆ ತುಂಬಾ ಚೆನ್ನಾಗಿ ದಾಖಲಿಸಿದ್ದಾರೆ.
  ಹವ್ಯಕ ಕುಟುಂಬದ ಕಥೆ ಹವಿಗನ್ನಡದಲ್ಲಿ ಮತ್ತು ನಮ್ಮ ಕನ್ನಡದಲ್ಲಿ ಮಿಳಿತ ಮಾಡಿ ಎಲ್ಲರಿಗೂ ಅಥ೯ ಆಗುವಂತೆ ಬರೆದಿದ್ದಾರೆ.
   ಇದಕ್ಕಿಂತ ಹೆಚ್ಚು ವಿಮಶೆ೯ ನನಗೆ ಸಾಧ್ಯವಿಲ್ಲ, ವಿಶಿಷ್ಟ ವಿಬಿನ್ನವಾದ ಈ ಪರಿಸರವನ್ನು ಕೇಂದ್ರವಾಗಿಸಿ ಬರೆದಿರುವ #ಮಧ್ಯ_ಘಟ್ಟ ಓದಿಯೇ ಅನುಭವಿಸಬೇಕು.
  ಶಿವಾನಂದ ಕಳವೆ ಅವರಿಗೆ ಅಭಿನಂದನೆಗಳು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ