Skip to main content

ಮರದ ಎಣ್ಣೆ ಗಾಣದಲ್ಲಿ ಶುದ್ಧ ಖಾದ್ಯದ ಎಣ್ಣೆ ತಯಾರಿಸಿ ಜನರಿಗೆ ತಲುಪಿಸುವ ಬೆಂಗಳೂರಿನ ಶ್ರೀ ಧಾತ್ರಿ ಆಯಿಲ್ & ನ್ಯಾಚುರಲ್ಸ್ ನ ಉತ್ಸಾಹಿ ತರಣ ಸಹೋದರರು

#ಗಾಣದಿಂದ_ಶುದ್ಧ_ಖಾದ್ಯ_ಎಣ್ಣೆ_ಮಾಡಿ_ಮಾರಾಟಮಾಡುವ_ಸಹೋದರರು.
 
  ಅರುಣ್ ಕುಮಾರ್ ಮತ್ತು ಶಶಿಕುಮಾರ್ ಸಹೋದರರು ಬೆಂಗಳೂರಿನ ರಾಮಸಂದ್ರದ ಸೂಲಿಕೆರೆ ಮುಖ್ಯ ರಸ್ತೆಯಲ್ಲಿ ಮರದ ಎಣ್ಣೆಗಾಣದಲ್ಲಿ ಶುದ್ಧ ಶೆಂಗಾ ಎಣ್ಣೆ, ಸೂಯ೯ಕಾಂತಿ ಎಣ್ಣೆ, ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ ತೆಗೆದು ರಾಜ್ಯದಾದ್ಯಂತ ಆಸಕ್ತ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.
  ನಿನ್ನೆ ಇವರು ಕಳಿಸಿದ ಶೆಂಗಾ ಎಣ್ಣೆ ಮತ್ತು ಎಳ್ಳೆಣ್ಣೆ ಕೋರಿಯರ್ ನಲ್ಲಿ ಬಂತು ಬಹುಶಃ ನನ್ನ ಬುದ್ದಿ ಬಂದ ಮೇಲೆ ಇಂತಹ ರುಚಿಯ ಮತ್ತು ಇಂತಹ ನೈಸಗಿ೯ಕ ಸುವಾಸನೆಯ ಶೇಂಗಾ ಎಣ್ಣೆ ನಾನು ನೋಡಿಲ್ಲ ಮತ್ತು ತಿಂದಿಲ್ಲ ಇದರ ಬೆಲೆ ಲೀಟರ್ ಗೆ 350.
  ಮಾರುಕಟ್ಟೆಯಲ್ಲಿ ರಿಪೈನ್ಡ್ ಶೇಂಗಾ ಎಣ್ಣೆಗೆ ಗರಿಷ್ಟ ರೂ 125 ಕ್ಕೆ ಸಿಗುವಾಗ ಇವರದ್ದೇನ್ರಿ? ಅಂತ ಪ್ರಶ್ನಿಸಬಹುದು, ಇದಕ್ಕೆ ಕಾರಣವೇನು ಅಂತ ನೋಡುತ್ತಾ ಹೋದರೆ ಅಸಲಿ ಚಿತ್ರಣ ಗೊತ್ತಾಗುತ್ತದೆ ಏನೆಂದರೆ 3kg ಶೇಂಗಾ ಬೀಜದಿಂದ ಒ0ದು ಲೀಟರ್ ಶೇಂಗಾ ಎಣ್ಣೆ ಬರುತ್ತದೆ, ಒಂದು ಕೇಜಿ ಶೇಂಗಾ ಬೀಜಕ್ಕೆ ರೂ 120 ಇದೆ, 3kg ಗೆ 360 ಆಗುತ್ತದೆ. ಪ್ರೊಡಕ್ಷನ್ ವೆಚ್ಚ ಪ್ಯಾಕಿಂಗ್ ಗೆ ಪ್ರತ್ಯೇಕ ವೆಚ್ಚ ಆಗುತ್ತದೆ ಆದರೆ ಮಾರುಕಟ್ಟೆಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ರೂ 250 ಕಡಿಮೆ ದರದಲ್ಲಿ ಹೇಗೆ ಮಾರಾಟ ಸಾಧ್ಯ?
  ಪೆಟ್ರೋಲ್ ಉತ್ಪದನೆಯಲ್ಲಿ ಬರುವ ವೈಟ್ ಆಯಿಲ್ ಎಂಬ ಅಖಾದ್ಯ ಎಣ್ಣೆ ಸಮುದ್ರಕ್ಕೆ ಮೊದಲು ಚೆಲ್ಲುತ್ತಿದ್ದರು ಪರಿಸರವಾದದ ಕಾರಣದಿಂದ ಅದು ಈಗ ಸಾಧ್ಯವಿಲ್ಲ ಆದರೆ ಲೀಟರ್ ಗೆ 10 ರೂಪಾಯಿಗೆ ಸಿಗುವ ವೈಟ್ ಆಯಿಲ್ ಖರೀದಿಸಿ ಕಲಬೆರಕೆ ಮಾಡಿ ಮಾರುವುದರಿಂದ ಖಾದ್ಯ ಎಣ್ಣೆ ದಂದೆ ಲಾಭದಲ್ಲಿದೆ, ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ ಇದರಿಂದ ಮಾರಕ ರೋಗಗಳು ಬರುತ್ತಿದೆ ಎಂಬ ಅನೇಕ ವರದಿ ಇದೆ ಇದರ ಸತ್ಯಾಸತ್ಯತೆ ಏನೇ ಇರಬಹುದು ಆದರೆ ಇಷ್ಟು ಕಡಿಮೆ ದರದಲ್ಲಿ ಎಣ್ಣೆ ಮಾರಾಟ ಮಾತ್ರ ಅಸಾಧ್ಯವೇ ಸರಿ.
  ಹಾಗಾಗಿ 15 ವರ್ಷ ಸ್ವಂತ ಸಾವಯವ ಮಳಿಗೆ ನಡೆಸಿದ ಲಾಭ ನಷ್ಟದ ಅನುಭವ ಇರುವ ಈ ಸಹೋದರರು ಈಗ ಸ್ವಂತ ಜಾಗ/ಮಳಿಗೆಯಲ್ಲಿ ಜನರ ಆರೋಗ್ಯಕ್ಕಾಗಿ ಮರದ ಎಣ್ಣೆ ಗಾಣದಲ್ಲಿ ಶುದ್ಧ ಎಣ್ಣೆ ಕಾಳು, ಕೊಬ್ಬರಿ ತಂದು ಎಣ್ಣೆ ತೆಗೆದು ಆಸಕ್ತರಿಗೆ ತಲುಪಿಸುತ್ತಿದ್ದಾರೆ.
   ಇವರ ಸಂಪಕ೯ ಸಂಖ್ಯೆ 9743107454 ಕ್ಕೆ ನಿಮ್ಮ ವಿಳಾಸ ವಾಟ್ಸ್ ಪ್ ಮಾಡಿ ಹಣ ಪಾವತಿಸಿದರೆ ನಿಮ್ಮ ಮನೆ ಬಾಗಿಲಿಗೆ ಶುದ್ದ ಖಾದ್ಯ ತೈಲ ತಲುಪುತ್ತದೆ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...