Skip to main content

Posts

Showing posts with the label Mylarappa Holalur Ex Zilla Panchayat President of Shimoga

Blog number 1380. ಶಿವಮೊಗ್ಗದ ಹೊಳಲೂರಿನ ಸಜ್ಜನ ರಾಜಕಾರಣಿ ಮೈಲಾರಪ್ಪನವರು ಅವದೂತರಾದ ಹನುಮಂತಪ್ಪರ ಪುತ್ರ, ಚಲನಚಿತ್ರ ನಟ ದೊಡ್ಡಣ್ಣ ಅವದೂತರಾದ ಹನುಮಂತಪ್ಪರ ಖಾಸಾ ಶಿಷ್ಯ

#ಹೊಳಲೂರು_ಮೈಲಾರಪ್ಪನವರು_ಅಂದರೆ_ಸಜ್ಜನ_ರಾಜಕಾರಣಿ #ಅಷ್ಟೇ_ಅಲ್ಲ_ಅವರ_ತಂದೆ_ಅವದೂತ_ಹನುಮಂತಪ್ಪರೆಂದು_ಬಹುಜನರಿಗೆ_ಗೊತ್ತಿಲ್ಲ. #ಚಲನ_ಚಿತ್ರ_ನಟ_ದೊಡ್ಡಣ್ಣರ_ಪರಮಗುರು .   ಮೈಲಾರಪ್ಪನವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು ಆಗ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್.ಪಟೇಲರ ಅತ್ಮೀಯ ಬಳಗದವರು, ಜಮೀನ್ದಾರರು, ಯಾರನ್ನೂ ನೋವಿಸದ ಮಾನವೀಯ ಗುಣ ಹೊಂದಿದವರು ಅವರ ಆಡಳಿತದಲ್ಲಿ ನಾನು ಸಾಗರ ತಾಲ್ಲೂಕಿನ ಅನ೦ದಪುರದಿಂದ ಜಿಲ್ಲಾ ಪಂಚಾಯತ್ ಸದಸ್ಯ.   ಬಹಳ ಜನಕ್ಕೆ ಗೊತ್ತಿಲ್ಲ ಹೊಳಲೂರಿನ ಅವದೂತರಾದ ಪವಾಡ ಪುರುಷರಾದ ಹನುಮಂತಪ್ಪ ಇವರ ತಂದೆ ಅಂತ.   ಸಂಸಾರದಿಂದ ವಿಮುಕ್ತರಾಗಿ ಸನ್ಯಾಸ ಸ್ವೀಕರಿಸಿ ಊರಿನ ಗುಡ್ಡದಲ್ಲಿ ನೆಲೆಸಿದ ಅವದೂತ ಹನುಮಂತಪ್ಪರಿಗೆ ಇಡೀ ರಾಜ್ಯದಲ್ಲಿ ಶಿಷ್ಯರಿದ್ದಾರೆ.   ಚಲನ ಚಿತ್ರ ನಟ ದೊಡ್ಡಣ್ಣ ಕೂಡ ಇವರ ಪಟ್ಟದ ಶಿಷ್ಯ, ದೊಡ್ಡಣ್ಣ ನಮ್ಮಲ್ಲಿ ಬಂದಾಗೆಲ್ಲ  ಅವರ ಬಾಯಲ್ಲಿ ಅವದೂತ ಹನುಮಂತಪ್ಪರ ಬಗ್ಗೆ ಒಂದಲ್ಲ ಒ೦ದು ನೆನಪು ಮಾತಾಡುತ್ತಾರೆ, ದೊಡ್ಡಣ್ಣ ಪ್ರತಿ ಹುಣ್ಣಿಮೆಗೆ ತಪ್ಪದೆ ಅವದೂತರ ಗದ್ದುಗೆ (ಶಿವಮೊಗ್ಗದಿಂದ 15 ಕಿ.ಮಿ.ದೂರದ ಹೊಳಲೂರಿಗೆ) ಗೆ ಹೋಗುತ್ತಾರೆ ಅವತ್ತು ಅಲ್ಲಿ ನಡೆಯುವ ಪೂಜೆ, ಭಜನ ಮತ್ತು ಸಾಮೂಹಿಕ ಬೋಜನದಲ್ಲಿ ಭಾಗವಹಿಸುತ್ತಾರೆ.      ಆಗ ದೊಡ್ಡಣ್ಣರಿಗೆ ಭದ್ರಾವತಿಯಲ್ಲಿ ಸಣ್ಣ ಕೆಲಸ,   ಹವ್ಯಾಸಿ...