4092. ಸ್ವಾತಂತ್ರ್ಯ ನಂತರ ನಡೆದ #ಮೈಸೂರು_ಚಲೋ_ಚಳವಳಿ ಕಾಲದಲ್ಲಿ ಸಾಗರದಲ್ಲಿ ಪ್ಲೇಗ್ ಹರಡಿದ್ದ ಆತಂಕದ ಮದ್ಯೆ ರಾಷ್ಟ್ರಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರು ಸಾಗರದ ತಾಲ್ಲೂಕ್ ಕಛೇರಿ ಮೇಲೆ ತ್ರಿವರ್ಣ ರಾಷ್ಟ್ರಧ್ವಜ ಹಾರಿಸಿದ್ದರಿಂದ ಇವರನ್ನೆಲ್ಲ ಬಂದನ ಮಾಡಲಾಗಿತ್ತು.
ಆಗಸ್ಟ್_15_ಸ್ವಾತಂತ್ರ್ಯ_ದಿನಾಚರಣೆಯ_ಸಂದರ್ಭದಲ್ಲಿ
#ನಮ್ಮ_ಸಾಗರ_ತಾಲ್ಲೂಕಿನ_ಈ_ಮಹಾನಿಯರ
#ಸ್ಮರಣೆ_ಮಾಡೋಣ.
ಸ್ವಾತಂತ್ರ್ಯ ನಂತರ ನಡೆದ #ಮೈಸೂರು_ಚಲೋ_ಚಳವಳಿ ಕಾಲದಲ್ಲಿ ಸಾಗರದಲ್ಲಿ ಪ್ಲೇಗ್ ಹರಡಿದ್ದ ಆತಂಕದ ಮದ್ಯೆ ರಾಷ್ಟ್ರಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರು ಸಾಗರದ ತಾಲ್ಲೂಕ್ ಕಛೇರಿ ಮೇಲೆ ತ್ರಿವರ್ಣ ರಾಷ್ಟ್ರಧ್ವಜ ಹಾರಿಸಿದ್ದರಿಂದ ಇವರನ್ನೆಲ್ಲ ಬಂದನ ಮಾಡಲಾಗಿತ್ತು.
ಈ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದವರಲ್ಲಿ ನಮ್ಮೂರು ಆನಂದಪುರಂನಿಂದ ಇಬ್ಬರು ಮಹಾನಿಯರು ಭಾಗವಹಿಸಿದ್ದರು ಅವರು ಬದರಿನಾರಾಯಣ ಅಯ್ಯಂಗಾರ್ ಮತ್ತು ರಾಮರಾವ್.
1947 ಆಗಸ್ಟ್ 15ಕ್ಕೆ ಸ್ಟಾತಂತ್ರ್ಯ ಲಭಿಸಿ ಈಗ 80ನೇ ವರ್ಷಾಚಾರಣೆಯಲ್ಲಿದ್ದೇವೆ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಿ ಮಾಡೋಣ ಮತ್ತು ಆ ಕುಟುಂಬಗಳನ್ನು ಪ್ರೀತಿಯಿಂದ ಆಧರಿಸೋಣ.
ಈ ಸಂದರ್ಭದಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಮೈಸೂರು ಚಲೋ ಚಳವಳಿ ನೆನಪಿಸಿ ಕೊಳ್ಳಬೇಕಾಗಿದೆ.
ಇದು ಬ್ರಿಟಿಷರ ವಿರುದ್ದ ನಡೆದ ಸ್ವಾತಂತ್ರ್ಯ ಚಳವಳಿ ಅಲ್ಲ, ಮೈಸೂರು ಸರಕಾರವು ಸ್ವತಂತ್ರ ಭಾರತದಲ್ಲಿ ಐಕ್ಯವಾಗಿ ಅರಸೊತ್ತಿಗೆ ಅಳಸಿಹಾಕಲು ಮೀನಾ - ಮೇಷ ಎಣಿಸಿತ್ತು.
ಆದ್ದರಿಂದ ಕಾಂಗ್ರೇಸ್ #ಮೈಸೂರು_ಚಲೋ ಚಳವಳಿಗೆ ಕರೆ ಕೊಟ್ಟಿತ್ತು.
ಈ ಚಳವಳಿ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಹಬ್ಬಿ ಉಗ್ರ ರೂಪ ತಾಳಿತು ಇದಕ್ಕೆ ಎಲ್ಲೆಲ್ಲೂ ರೈಲು ಚಳವಳಿ, ವಿದ್ಯಾರ್ಥಿ ಚಳವಳಿ, ಪೋಲಿಸರ ಮುಷ್ಕರಗಳಿಂದಲೂ ಚಳವಳಿಯ ಪರಿಣಾಮ ಪ್ರಚಂಡವಾಯಿತು.
ಈ ಚಳವಳಿಯಿಂದ ಮೈಸೂರು ಅರಮನೆ, ಆಳರಸರು ಅವರ ಸಕಾ೯ರ ಮತ್ತು ಅದರ ದಿವಾನ್ ಅರ್ಕಾಟ್ ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಸಾಹೇಬರು ಮಣಿದರು.
13- ಅಕ್ಟೋಬರ್ -1947ರಲ್ಲಿ ಮಹಾರಾಜರು "ಪ್ರಜಾಪ್ರತಿನಿದಿಗಳ ಮಂತ್ರಿ ಮಂಡಲ ಸ್ಥಾಪನೆ ಆಗಿದೆ" ಎಂದು ಘೋಷಿಸಿದರು.
24- ಅಕ್ಟೋಬರ್ - 1947 ರಂದು ಮೈಸೂರಿನಲ್ಲಿ ಜನತಾ ಸರಕಾರ ಸ್ಥಾಪನೆಯಾಗಿ ಕೆ.ಸಿ.ರೆಡ್ಡಿಯವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ತಕ್ಷಣ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಅರಮನೆಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದವರನ್ನು ಬಿಡುಗಡೆ ಮಾಡಿ ಆದೇಶಿಸುತ್ತಾರೆ.
ಈ ಆರಮನೆ ಸತ್ಯಾಗ್ರಹದ ದಿನ ಚಳವಳಿಗಾರರು ಸಾಗರದ ತಾಲ್ಲೂಕ್ ಕಛೇರಿ (ಆಗ ಸಾಗರದ ಗಣಪತಿ ದೇವಸ್ಥಾನದ ಎದರು ಇತ್ತು) ನೌಕರರು ಕಛೇರಿ ಒಳ ಹೋಗದಂತೆ ತಡೆದು, ಕಛೇರಿ ಮೇಲೆ ರಾಷ್ಟ್ರ ದ್ವಜ ಹಾರಿಸಿದಾಗ ಪೋಲಿಸರು ಲಾಠಿ ಪ್ರಹಾರ ಮಾಡಿ ಎಲ್ಲರನ್ನು ಬಂಧಿಸುತ್ತಾರೆ.
ಆಗ ಪ್ಲೇಗ್ ಅಂಟು ರೋಗ ಹರಡಿದ್ದ ಕಾಲವಾದ್ದರಿಂದ ಸಾಗರದ ಜೈಲಿನ ಒಳಗೆ ಹೋಗಲು ಚಳವಳಿಗಾರರು ವಿರೋದಿಸಿದರೂ ಪೋಲಿಸರು ಬಲ ಪ್ರಯೋಗಿಸಿ ಅವರನ್ನೆಲ್ಲ ಜೈಲಿನಲ್ಲಿ ಹಾಕುತ್ತಾರೆ.
ಬದರಿನಾರಾಯಣ ಅಯ್ಯಂಗಾರರು ಶಿವಮೊಗ್ಗದಲ್ಲಿ ವಕೀಲರಾಗಿ ಮತ್ತು ಕಾಂಗ್ರೇಸ್ ಮುಖಂಡರಾಗಿರುತ್ತಾರೆ, ಅಯ್ಯಂಗಾರರ ಕುಟುಂಬ ದೇಶಭಕ್ತಿಯಲ್ಲಿ ಯಾವತ್ತೂ ಹಿಂದೆ ಹೆಜ್ಜೆ ಇಟ್ಟಿರುವುದಿಲ್ಲ.
ಆದರೆ ಮೈಸೂರು ಅರಸರ ಸಂಬಂದಗಳು ಇವರಿಗೆ ಮೈಸೂರು ಮಹಾರಾಜರ ಮೇಲೆ ವಿಶೇಷ ಗೌರವ ಇರುವ ಸಂದರ್ಭದಲ್ಲಿ ಬದರಿನಾರಾಯಣ ಅಯ್ಯಂಗಾರ್ ರ ತಂದೆ ರಾಮಕೃಷ್ಣ ಅಯ್ಯಂಗಾರರ ವಿರೋದದ ನಡುವೆ ಬದರಿನಾರಾಯಣ ಅಯ್ಯಂಗಾರ್ ಕಾಂಗ್ರೇಸ್ ನೀಡಿದ ಕರೆ "ಮೈಸೂರು ಚಲೋ" ಗೆ ಆನಂದಪುರಂ ನ ಇನ್ನೋರ್ವ ಸ್ವಾತಂತ್ರ ಹೋರಾಟಗಾರ ರಾಮರಾವ್ ಅವರನ್ನು ಕರೆದುಕೊಂಡು ಹೋಗಿ ಭಾಗ ವಹಿಸಿ ಬಂದನಕ್ಕೆ ಒಳಗಾಗುತ್ತಾರೆ.
ಅವತ್ತು ಈ ಚಳವಳಿಯಲ್ಲಿ ಭಾಗವಹಿಸಿದ ಸಾಗರ ತಾಲೂಕಿನ ಪ್ರಮುಖರು ಕಾಗೋಡಿನ #ಕೆ_ಜಿ_ಒಡೆಯರ್, ಶಿರವಂತೆ #ಹೆಚ್_ಎಲ್_ವೀರಭದ್ರಪ್ಪಗೌಡರು, #ಹೆಚ್_ಗಣಪತಿಯಪ್ಪನವರು, ಸಾಗರದ ಪ್ರಖ್ಯಾತ ವಕೀಲರಾದ #ಮೃತ್ಯುಂಜಯ_ಭಾಪಟ್, #ಬರಸಿನ_ದ್ಯಾವಪ್ಪ, ಸಾಗರದ #ತುಳುಜಪ್ಪ,#ವೆಂಕಟರಾವ್, #ಸೀತಾರಾಮರಾವ್, #ಭದ್ರಪ್ಪ, #ಮಂಚಾಲೆ_ಗಣಪತಿ, #ಉಳ್ಳೂರು_ಸುಬ್ಬರಾವ್, #ಬಸವಣ್ಯಪ್ಪ ಮುಂತಾದವರು.
ಮುಂದಿನ ದಿನದಲ್ಲಿ ಕಾಗೋಡಿನ ಕೆ.ಜಿ.ಒಡೆಯರ್ ಲೋಕಸಭಾ ಸದಸ್ಯರಾದರು, ಬದರಿನಾರಾಯಣ ಅಯ್ಯಂಗಾರ್ ಶಾಸಕರಾಗಿ ವಿದ್ಯಾ ಮಂತ್ರಿಗಳಾಗಿದ್ದು ಇತಿಹಾಸ.
#indipendeceday #freedomfighter #sagartaluk #kgvodeyar #badarinarayanayangar #anandapuram #mysorechalo
Comments
Post a Comment