Skip to main content

4146.ಕೇವಲ_ನಡಿಗೆಯಲ್ಲಇದು_ದೇಹದ_ಸಮತೋಲನದ_ಕಲೆ.ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.


ಕೇವಲ_ನಡಿಗೆಯಲ್ಲ
ಇದು_ದೇಹದ_ಸಮತೋಲನದ_ಕಲೆ.
ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.

  2020ರ ಕೊರಾನಾ ಲಾಕ್ ಡೌನ್ ಮೊದಲ ದಿನದಿಂದ ಪ್ರಾರಂಭಿಸಿದ ನನ್ನ ವಾಕಿಂಗ್ ಗೆ ಇವತ್ತಿಗೆ ಆರು ವರ್ಷ ದಾಟಿದೆ.  

   ಪ್ರಾರಂಭಿಸುವಾಗ ನನ್ನ ವಯಸ್ಸು 55 ಈಗ 61 ಇದರ ಮಧ್ಯೆ ನನ್ನ ನಡಿಗೆ ಶೈಲಿ ಬದಲಾಗಿ ಬಿಟ್ಟಿತ್ತು, ನನ್ನ ಬೆನ್ನು ಬಾಗಿದೆ ಅಂತ ಮಕ್ಕಳು ಗುರುತಿಸಿದ್ದರು ಆದರೆ ಇದು ವಯೋ ಸಹಜ ಅಂತ ಸುಮ್ಮನಾಗಿದ್ದೆ.

   ಮೊನ್ನೆ ಭಾರತಿ ಬಿ.ವಿ ಎಂಬುವರು ಬರೆದ ಪೇಸ್ ಬುಕ್ ಪೋಸ್ಟ್ ನೋಡಿದೆ ಅವರದ್ದು ನನ್ನದೇ ರೀತಿ ಸಮಸ್ಯೆ ಅವರು ಅದನ್ನು ಕೋರ್ ವಾಕಿಂಗ್ ಮೂಲಕ ಸರಿ ಪಡಿಸಿಕೊಂಡಿದ್ದು ವಿಡಿಯೋ ಸಹಿತ ಪೋಸ್ಟ್ ಮಾಡಿದ್ದರು ಅವರ ಪೋಸ್ಟ್ ಗೆ ನ #ಬಾ_ನಲ್ಲೆ_ಮದು_ಚಂದ್ರಕೆ ಕಥೆ ಬರೆದ ಸಾಹಿತಿ ಮತ್ತು ಪೋಲಿಸ್ ಅಧಿಕಾರಿ ಜೇಬರ್ ಅವರು ಪ್ರತಿ ನಿತ್ಯ ವಾಕಿಂಗ್ ನಲ್ಲಿ ಮಾರ್ಚ್ ಪಾಸ್ಟ್ ಶೈಲಿ ಅಳವಡಿಸಿಕೊಳ್ಳವಂತೆ ಪ್ರತಿಕ್ರಿಯೆ ನೀಡಿದ್ದರು ಅದರ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.

  ನಾನು ಇವರಿಬ್ಬರ ಸಲಹೆಯಿಂದ ಪ್ರೇರಿತನಾಗಿ ಪ್ರತಿ ದಿನದ ನನ್ನ ಒಂದು ಗಂಟೆ ವಾಕಿಂಗ್ ನಲ್ಲಿ ಕೆಲವು ನಿಮಿಷ ಕೋರ್ ವಾಕಿಂಗ್ ಮತ್ತು ಮಾರ್ಚ್ ಫಾಸ್ಟ್ ಎರೆಡೂ ಪ್ರಾರಂಬಿಸಿದ್ದೇನೆ.

  ಕೋರ್ ಮಸಲ್ಸ್ ಅಂದರೆ ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳು.

  ನಡೆಯುವಾಗ ಕೋರ್ ಮಸಲ್ಸ್‌ಗಳನ್ನು (ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳು) ಟೈಟ್ ಮಾಡಿ  ಮಾಡಿ ನಡೆಯುವುದು ಅತ್ಯುತ್ತಮ ಅಭ್ಯಾಸವಾಗಿದೆ.

 ಇದರಿಂದ ದೇಹದ ಭಂಗಿ ಸುಧಾರಿಸುವುದರ ಜೊತೆಗೆ ಬೆನ್ನುನೋವು ಕಡಿಮೆಯಾಗುತ್ತದೆ ಮತ್ತು ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ.

 ​ಇದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡುವುದು ಮತ್ತು ಇದರ ಪ್ರಯೋಜನಗಳೇನು ಎಂಬ ವಿವರ ಇಲ್ಲಿದೆ.

  ​ಸರಿಯಾಗಿ ಕೋರ್ ಎಂಗೇಜ್ ಮಾಡುವುದು ಹೇಗೆ?...

 ​ಹೊಟ್ಟೆಯನ್ನು ನಿಧಾನವಾಗಿ ಒಳಗೆ ಎಳೆಯಿರಿ,ಹೊಟ್ಟೆಯನ್ನು ಒಳಗೆ ಎಳೆಯುವಾಗ ಉಸಿರುಕಟ್ಟಿಕೊಳ್ಳಬಾರದು.

 ಹೊಟ್ಟೆಯ ಬಟನ್ ಅನ್ನು ಬೆನ್ನೆಲುಬಿನ ಕಡೆಗೆ ಸುಮಾರು 20% ರಿಂದ 30% ರಷ್ಟು ಮಾತ್ರ ನಿಧಾನವಾಗಿ ಎಳೆದುಕೊಳ್ಳಿ (ಬಿಗಿಯಾಗಿ ಹಿಡಿಯಬೇಡಿ).

  ​ಸಾಮಾನ್ಯವಾಗಿ ಉಸಿರಾಡಿ, ಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿದರೂ ಉಸಿರಾಟ ಸರಾಗವಾಗಿ, ಸ್ವಾಭಾವಿಕವಾಗಿ ನಡೆಯುತ್ತಿರಬೇಕು.

  ​ಭಂಗಿ ನೆಟ್ಟಗಿರಲಿ, ಬೆನ್ನು ನೇರವಾಗಿರಲಿ,​ಭುಜಗಳನ್ನು ಹಿಂದಕ್ಕೆ ಮತ್ತು ಕೆಳಕ್ಕೆ ಸಡಿಲವಾಗಿ ಬಿಡಿ (ಭುಜಗಳನ್ನು ಕಿವಿಗಳವರೆಗೆ ಏರಿಸಬೇಡಿ).

  ​ದೃಷ್ಟಿ ಮುಂದಿರಲಿ (ನೆಲವನ್ನು ನೋಡಬೇಡಿ),​ ನಡೆಯುವಾಗ ಮೊದಲು ಹಿಮ್ಮಡಿ  ನೆಲಕ್ಕೆ ತಾಗಿ, ನಂತರ ಕಾಲಿನ ಬೆರಳುಗಳ ಮೂಲಕ ಮುಂದಕ್ಕೆ ಹೆಜ್ಜೆ ಇಡಬೇಕು.

  ​ಇದರ ಮುಖ್ಯ ಪ್ರಯೋಜನ
ಬೆನ್ನು ನೋವಿಗೆ ಮುಕ್ತಿ,ಕೋರ್ ಗಟ್ಟಿಯಾಗಿದ್ದರೆ ಸೊಂಟ ಮತ್ತು ಬೆನ್ನುಮೂಳೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

 ದೇಹದ ಸಮತೋಲನಬ್ಯಾಲೆನ್ಸ್ ಉತ್ತಮಗೊಳ್ಳುತ್ತದೆ ಮತ್ತು ಜಾರಿ ಬೀಳುವ ಅಪಾಯ ತಪ್ಪುತ್ತದೆ.

 ಉತ್ತಮ ಬಾಡಿ ಶೇಪ್, ಹೊಟ್ಟೆಯ ಸ್ನಾಯುಗಳು ಟೋನ್ ಆಗಿ, ಸೊಂಟ ಸಪೂರವಾಗಿ ಕಾಣಲು ನೆರವಾಗುತ್ತದೆ.

 ಹೆಚ್ಚು ಕ್ಯಾಲೋರಿ ಬರ್ನ್ ಕೇವಲ ಕಾಲುಗಳು ಮಾತ್ರವಲ್ಲದೆ ಹೊಟ್ಟೆ-ಬೆನ್ನಿನ ಸ್ನಾಯುಗಳೂ ಕೆಲಸ ಮಾಡುವುದರಿಂದ ಶಕ್ತಿ ಹೆಚ್ಚು ಬಳಕೆಯಾಗುತ್ತದೆ.

​ನೆನಪಿಡಿ ಪ್ರಾರಂಭದಲ್ಲಿ 5 ರಿಂದ 10 ನಿಮಿಷಗಳ ಕಾಲ ಈ ರೀತಿ ಪ್ರಯತ್ನಿಸಿ ನಂತರ ಸ್ನಾಯುಗಳಿಗೆ ವಿಶ್ರಾಂತಿ ಕೊಡಿ. 

 ಕ್ರಮೇಣ ಅಭ್ಯಾಸವಾದಂತೆ ಇದು ನಿಮ್ಮ ಸಹಜ ನಡಿಗೆಯ ಶೈಲಿಯಾಗುತ್ತದೆ.

#walking #corewalk #marchpost #healthtips 
#Fitness #mypet #morningwalk

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...