4112. ದಿನಾಂಕ 02.08.2026ರ ಬಾನುವಾರ ಆನಂದಪುರಂನ #ಯಡೇಹಳ್ಳಿಯ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ 245ನೇ ಸಂಕಷ್ಟಹರ ಚತುರ್ಥಿ ಆಚರಣೆ ನೆರವೇರಲಿದೆ.
ನಮ್ಮೂರ_ಪುರದೈವ
ಶೀವರಸಿದ್ದಿವಿನಾಯಕ_ಸ್ವಾಮಿ_ದೇವಾಲಯದಲ್ಲಿ
ಸಂಕಷ್ಟಹರ_ಚತುರ್ಥಿ.
ದಿನಾಂಕ 02.08.2026ರ ಬಾನುವಾರ ಆನಂದಪುರಂನ #ಯಡೇಹಳ್ಳಿಯ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ 245ನೇ ಸಂಕಷ್ಟಹರ ಚತುರ್ಥಿ ಆಚರಣೆ ನೆರವೇರಲಿದೆ.
ಶ್ರೀವರಸಿದ್ಧಿವಿನಾಯಕ ಸ್ವಾಮಿಗೆ ಭಾನುವಾರ ಮಧ್ಯಾನ್ಹ 12 ಗಂಟೆ 30 ನಿಮಿಷಕ್ಕೆ ಸಾಮೂಹಿಕ ಗಣಪತಿ ಹೋಮ, ಹಣ್ಣುಕಾಯಿ ಅರ್ಪಣೆ ಮತ್ತು ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.
ರಾತ್ರಿ 9 ಗಂಟೆ25 ನಿಮಿಷಕ್ಕೆಚಂದ್ರೋದಯ ವಾಗಲಿದೆ.
ಚಂದ್ರೋದಯದಲ್ಲಿ ಸಂಕಷ್ಟಹರ ಚತುರ್ಥಿಯ ಶ್ರೀವರ ಸಿದ್ಧಿ ವಿನಾಯಕ ಸ್ವಾಮಿಗೆ ಹಣ್ಣುಕಾಯಿ ನೈವೇದ್ಯ ಅರ್ಪಣೆ ಮಾಡಲಾಗುವುದು ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.
ನಂತರ ಸರ್ವ ಭಕ್ತರಿಗೂ ಅನ್ನ ಪ್ರಸಾದ ಸೇವೆ ನೆಡೆಯಲಿದೆ, ಸರ್ವಭಕ್ತಾಧಿಗಳು ಸಕಾಲದಲ್ಲಿ ಆಗಮಿಸಿ ಸಂಕಷ್ಟಹರ ಚತುರ್ಥಿಯ ಶ್ರೀವರಸಿದ್ದಿ ವಿನಾಯಕ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಲು ದೇವಾಲಯದ ಆಡಳಿತ ಮಂಡಲಿಯವರು ಪ್ರಾರ್ಥಿಸಿಕೊಂಡಿದ್ದಾರೆ.
245 ನೇ ಸಂಕಷ್ಟಹರ ಚತುರ್ಥಿಯ ಈ ತಿಂಗಳ ದೇವರ ಬೆಣ್ಣೆ ಅಲಂಕಾರ ಮತ್ತು ರಾತ್ರಿಯ ಅನ್ನ ಪ್ರಸಾದ ಸೇವೆಯನ್ನು #ಹೂವಿನಕೋಣೆ_ಶ್ರೀಆದರ್ಶರ ಕುಟುಂಬದಿಂದ ನೆರವೇರಲಿದೆ.
ವಿಶೇಷ ಸೂಚನೆ
ಮುಂದಿನ ತಿಂಗಳ 246ನೆ ಸಂಕಷ್ಟಹರ ಚತುರ್ಥಿ ಇದೇ
ಆಗಸ್ಟ್ ತಿಂಗಳ ದಿನಾಂಕ 31.08. 2026ರ ಸೋಮವಾರ ಬಂದಿರುತ್ತದೆ.
ಈ ತಿಂಗಳಲ್ಲಿ ಎರಡು ಸಂಕಷ್ಟಹರ ಚತುರ್ಥಿ ನೆರವೇರಲಿದೆ.
#sankashtachaturthi #yadehalli #anandapuram #srivarasiddivinayakatemple
Comments
Post a Comment