4097.ಭಾಗ_15_ಘಟ್ಟಕ್ಕೆ_ಕರಾವಳಿಗರ_ವಲಸೆ ಕರಾವಳಿ ವಲಸಿಗರಿಗೆ ಮಳೆ ಮತ್ತು ಚಳಿಗೆ ಕುರುಬರ ಕುರಿ ಕಂಬಳಿಗಳು ಬೇಕೇ ಬೇಕಿತ್ತು.
ಭಾಗ_15_ಘಟ್ಟಕ್ಕೆ_ಕರಾವಳಿಗರ_ವಲಸೆ
ಕರಾವಳಿ ವಲಸಿಗರಿಗೆ ಮಳೆ ಮತ್ತು ಚಳಿಗೆ ಕುರುಬರ ಕುರಿ ಕಂಬಳಿಗಳು ಬೇಕೇ ಬೇಕಿತ್ತು.
ನಿಮ್ಮ ಪೂರ್ವಜರು ಈ ರೀತಿ ಘಟ್ಟಕ್ಕೆ ವಲಸೆ ಬಂದವರಾಗಿದ್ದರೆ ನೀವು ಈ ಲೇಖನ ಪೂರ್ಣ ಓದಿ ಮತ್ತು ನಿಮ್ಮ ಕುಟುಂಬದವರಿಗೆ ಶೇರ್ ಮಾಡಿ.
ಆ ಕಾಲದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕುರಿಗಳನ್ನು ಸಾಕುವುದು ತೀರಾ ಅಪರೂಪವಾಗಿದ್ದರಿಂದ ವಲಸಿಗರಿಗೆ ಅತ್ಯಂತ ಅನಿವಾರ್ಯವಾಗಿದ್ದ ಈ ಕಪ್ಪು ಕಂಬಳಿಗಳ ಖರೀದಿ ಮತ್ತು ವ್ಯಾಪಾರದ ಹಿಂದೆ ಒಂದು ವಿಶಿಷ್ಟವಾದ ವ್ಯವಸ್ಥೆಯಿತ್ತು.
ವಲಸಿಗರು ಈ ಕಂಬಳಿಯನ್ನು ಎಲ್ಲಿ, ಯಾರಿಂದ ಮತ್ತು ಹೇಗೆ ಖರೀದಿಸುತ್ತಿದ್ದರು ಎಂಬ ಆಸಕ್ತಿದಾಯಕ ವಿವರಗಳು ಇಲ್ಲಿವೆ.
ಬಯಲುಸೀಮೆಯ ವಲಸೆ ವ್ಯಾಪಾರಿಗಳಲ್ಲಿ ಕುರುಬ ಸಮುದಾಯದವರು ಈ ಕಂಬಳಿಗಳನ್ನ ತಂದು ಮಾರಾಟ ಮಾಡುವ ವ್ಯಾಪಾರಿಗಳಾಗಿದ್ದರು.
ಅವರು ಈ ಕಂಬಳಿಗಳನ್ನು ಬಯಲುಸೀಮೆ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಹಾವೇರಿ ಭಾಗಗಳಿಂದ ಘಟ್ಟದ ಮೇಲೆ ಬರುತ್ತಿದ್ದ ಕುರುಬ ಸಮುದಾಯದ ನೇಯ್ಗೆಕಾರರ ಮತ್ತು ವ್ಯಾಪಾರಿಗಳ
ಸಂತೆ ಮತ್ತು ಜಾತ್ರೆಗಳಲ್ಲಿ ಈ ಕಂಬಳಿ ಖರೀದಿಸುತ್ತಿದ್ದರು.
ಖರೀದಿಸಿದ ಈ ಕಂಬಳಿಗಳನ್ನ ಮಲೆನಾಡಿನ ಪ್ರಮುಖ ಟೌನ್ಗಳಾದ ಸಾಗರ, ಹೊಸನಗರ, ತೀರ್ಥಹಳ್ಳಿ, ಮೂಡಿಗೆರೆ ಅಥವಾ ಶೃಂಗೇರಿಯ ದೇವಸ್ಥಾನಗಳ ವಾರ್ಷಿಕ ಜಾತ್ರೆ ಹಾಗೂ ವಾರದ ಸಂತೆಗಳಿಗೆ ಈ ಬಯಲುಸೀಮೆಯ ವ್ಯಾಪಾರಿಗಳು ನೂರಾರು ಕಂಬಳಿಗಳನ್ನು ಎತ್ತು ಅಥವಾ ಕತ್ತೆಗಳ ಮೇಲೆ ಹೇರಿಕೊಂಡು ಮಾರಾಟಕ್ಕೆ ಬರುತ್ತಿದ್ದರು.
ಕೆಲವು ವ್ಯಾಪಾರಿಗಳು ಕಂಬಳಿಗಳನ್ನು ತಾವೇ ಹೆಗಲ ಮೇಲೆ ಹೊತ್ತುಕೊಂಡು ತೋಟದ ಲೈನ್ಮನೆಗಳಿಗೂ, ಒಂಟಿ ಮನೆಗಳಿಗೂ ನೇರವಾಗಿ ಮಾರಾಟ ಮಾಡಲು ಬರುತ್ತಿದ್ದರು.
ಕರಾವಳಿ ವಲಸಿಗರು ಈ ಕಂಬಳಿ ಖರೀದಿಸುತ್ತಿದ್ದರು,
ಘಟ್ಟಕ್ಕೆ ಹೊಸದಾಗಿ ವಲಸೆ ಬರುವವರು ಅಥವಾ ಈಗಾಗಲೇ ಅಲ್ಲಿ ನೆಲೆಸಿದ್ದ ಕಾರ್ಮಿಕರು ಕಂಬಳಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು.
ಅವರು ಘಟ್ಟ ಹತ್ತುವ ಮುನ್ನ ಅಥವ ಕರಾವಳಿಯಿಂದ ಹೊರಡುವಾಗಲೇ ಕಂಬಳಿ ಜೊತೆಯಾಗಿ ಹೊರಡುತ್ತಿದ್ದರು.
"#ಘಟ್ಟದ_ಚಳಿಗೆ_ಕಂಬಳಿ_ಬೇಕೇ_ಬೇಕು" ಎಂದು ಗೊತ್ತಿರುತ್ತಿದ್ದರಿಂದ, ಘಟ್ಟದ ಬುಡದ ಪ್ರಮುಖ ಪೇಟೆಗಳಾದ ಪುತ್ತೂರು, ಬೆಳ್ತಂಗಡಿ ಅಥವಾ ಕುಂದಾಪುರದ ಹಳೆಯ ಬಜಾರ್ಗಳಲ್ಲಿ ಮುಂಚಿತವಾಗಿಯೇ ಕಂಬಳಿ ಖರೀದಿಸುತ್ತಿದ್ದರು.
ಅಂದಿನ ದಿನಗಳಲ್ಲಿ ಕಾರ್ಮಿಕರಲ್ಲಿ ಸದಾ ನಗದು ಹಣ ಇರುತ್ತಿರಲಿಲ್ಲ ಅಂತಹ ಸಂದರ್ಭಗಳಲ್ಲಿ ಕರಾವಳಿಯ ವಲಸಿಗರು ತೋಟದ ಮಾಲೀಕರಿಂದ ಮುಂಗಡವಾಗಿ (ಅಡ್ವಾನ್ಸ್) ಹಣ ಪಡೆದು ಕಂಬಳಿ ಖರೀದಿಸುತ್ತಿದ್ದರು.
ತಾವು ತಂದಿದ್ದ ಒಣಮೀನು, ತೆಂಗಿನಕಾಯಿ ಅಥವ ತೋಟದ ಕೆಲಸದ ಸಂಪಾದನೆಯ ಅಕ್ಕಿಯನ್ನು ಕೊಟ್ಟು ಬಯಲುಸೀಮೆಯ ವ್ಯಾಪಾರಿಗಳಿಂದ ಕಂಬಳಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.
ಖರೀದಿಸುವಾಗ ಹಿರಿಯರು ಕಂಬಳಿಯ ಗುಣಮಟ್ಟವನ್ನು ಅತ್ಯಂತ ಕಟ್ಟುನಿಟ್ಟಾಗಿ ಪರೀಕ್ಷಿಸುತ್ತಿದ್ದರು ಏಕೆಂದರೆ ಅದು ಮಳೆಯನ್ನು ತಡೆಯಬೇಕಾಗಿತ್ತು.
ಕಂಬಳಿ ಎಷ್ಟು ಭಾರವಿದೆಯೋ ಅಷ್ಟು ಒಳ್ಳೆಯದು ಎಂದು ಪರಿಣಾಮ ಕಲ್ಪಿಸಲಾಗುತ್ತಿತ್ತು.
ಅಪ್ಪಟ ಕುರಿ ಉಣ್ಣೆಯಿಂದ ಮಾಡಿದ ಕಂಬಳಿಗಳಿಗೆ ಸ್ವಾಭಾವಿಕವಾಗಿಯೇ ಒಂಥರಾ ಕುರಿಯ ಚರ್ಮದ ತೇವಭರಿತ ವಾಸನೆ ಇರುತ್ತಿತ್ತು ಆ ವಾಸನೆ ಬಂದರೆ ಮಾತ್ರ ಅದು ನಕಲಿ ಅಲ್ಲ ಅಸಲಿ ಕಂಬಳಿ ಎಂದು ಒಪ್ಪಿಕೊಳ್ಳುತ್ತಿದ್ದರು.
ಕಂಬಳಿಯನ್ನು ಗಟ್ಟಿಯಾಗಿ ಹಿಡಿದು ಅದರ ಮೇಲೆ ಸ್ವಲ್ಪ ನೀರು ಸುರಿದು ನೋಡುತ್ತಿದ್ದರು. ನೀರು ತಕ್ಷಣವೇ ಒಳಗಿಳಿಯದೆ ಜಾರಿ ಹೋದರೆ ಅದು ಮಳೆಗೆ ಉತ್ತಮ ಕವಚ ಎಂದು ತೀರ್ಮಾನಿಸುತ್ತಿದ್ದರು.
ಖರೀದಿಸಿದ ತಕ್ಷಣ ಹೊಸ ಕಂಬಳಿಯನ್ನು ಬಳಸುತ್ತಿರಲಿಲ್ಲ. ಹೊಸದರಲ್ಲಿ ಅದು ತುಂಬಾ ಒರಟಾಗಿ ಮತ್ತು ಚುಚ್ಚುವಂತೆ ಇರುತ್ತಿತ್ತು.
ಅದನ್ನು ಮೊದಲು ಹಳ್ಳದ ನೀರಿನಲ್ಲಿ ಚೆನ್ನಾಗಿ ನೆನೆಸಿ, ಬಂಡೆ ಕಲ್ಲಿಗೆ ಅಪ್ಪಳಿಸಿ ತೊಳೆದು, ಬಿಸಿಲಿನಲ್ಲಿ ಒಣಗಿಸುತ್ತಿದ್ದರು.
ಹೀಗೆ ಎರಡೂ ಮೂರು ಬಾರಿ ಮಾಡಿದಾಗ ಉಣ್ಣೆಯ ನಾರುಗಳು ಹದವಾಗಿ, ಮೃದುವಾಗಿ ದೇಹಕ್ಕೆ ಒಗ್ಗಿಕೊಳ್ಳುತ್ತಿದ್ದವು.
ಒಂದು ಬಾರಿ ಕಷ್ಟಪಟ್ಟು ಖರೀದಿಸಿದ ಕಂಬಳಿ ಕನಿಷ್ಠ 10 ರಿಂದ 15 ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು.
ತಂದೆ ಬಳಸಿದ ಕಂಬಳಿಯನ್ನು ಮಗನಿಗೆ ಆಸ್ತಿಯಂತೆ ಹಸ್ತಾಂತರಿಸಿದ ಉದಾಹರಣೆಗಳೂ ಅಂದಿನ ವಲಸಿಗರ ಬದುಕಿನಲ್ಲಿದ್ದವು.
ನಿಮ್ಮ ಹಿರಿಯರು ತಂದಿದ್ದ ಅಂತಹ ಯಾವುದಾದರೂ ಹಳೆಯ ಕಾಲದ ಕಪ್ಪು ಕಂಬಳಿ ಕಥೆ ನಿಮಗೆ ಹೇಳಿದ್ದರಾ? ..
ಅದು ನೆನಪಾಗಿ ಉಳಿದಿದೆಯೇ?..
#Woolen #sheep #westernghats #coastalliving
#seasonalmigration #history #raincoat #KAMBAL
Comments
Post a Comment