Skip to main content

4145.ಬ್ರಾಹ್ಮೀ_ಮುಹೂರ್ತ_ಎಂದರೇನು


ಬ್ರಾಹ್ಮೀ_ಮುಹೂರ್ತ_ಎಂದರೇನು?...

"Early to bed and early to rise, makes a man healthy, wealthy, and wise."

  ನೀವು ಈ ನುಡಿ ಮುತ್ತು ಕೇಳಿರುತ್ತೀರಿ ಈ ರೀತಿ ನಿಮ್ಮ ಜೀವನ ಶೈಲಿ ಇದ್ದರೆ ನಿಮ್ಮ ಅನುಭವ ಶೇರ್ ಮಾಡಲು ವಿನಂತಿ.

 ಬ್ರಾಹ್ಮೀ ಮುಹೂರ್ತ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ ಅತ್ಯಂತ ಪವಿತ್ರ ಮತ್ತು ಪ್ರಶಾಂತವಾದ ಸಮಯ.

 ಪ್ರಾಚೀನ ವೈದಿಕ ಹಾಗೂ ಆಯುರ್ವೇದ ಪರಂಪರೆಯಲ್ಲಿ ಈ ಸಮಯಕ್ಕೆ ವಿಶೇಷ ಮಹತ್ವವಿದೆ.

 ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷಗಳ ಮೊದಲು ಈ ಮುಹೂರ್ತ ಆರಂಭವಾಗಿ, ಸೂರ್ಯೋದಯಕ್ಕೆ 48 ನಿಮಿಷಗಳ ಮುಂಚೆ ಕೊನೆಗೊಳ್ಳುತ್ತದೆ.

 ಅಂದರೆ ಇದರ ಒಟ್ಟು ಅವಧಿ 48 ನಿಮಿಷಗಳು / 2 ಘಳಿಗೆಗಳು. ಸಾಮಾನ್ಯವಾಗಿ ಇದು ಮುಂಜಾನೆ 4:00 ರಿಂದ 5:30 ರ ನಡುವೆ ಬರುತ್ತದೆ.

 ಬ್ರಹ್ಮಜ್ಞಾನದ ಸಮಯ: 'ಬ್ರಹ್ಮ' ಎಂದರೆ ಪರಮ ಸತ್ಯ ಅಥವಾ ಜ್ಞಾನ. 'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಜ್ಞಾನಾರ್ಜನೆಗೆ ಸಂಬಂಧಿಸಿದ್ದು. ಈ ಸಮಯದಲ್ಲಿ ಪ್ರಕೃತಿಯು ಅತ್ಯಂತ ಪ್ರಶಾಂತವಾಗಿದ್ದು, ಪರಮಾತ್ಮನ ಚಿಂತನೆ, ಆತ್ಮಜ್ಞಾನ (ಬ್ರಹ್ಮಜ್ಞಾನ) ಮತ್ತು ವೇದಾಧ್ಯಯನಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಇದಕ್ಕೆ 'ಬ್ರಾಹ್ಮೀ ಮುಹೂರ್ತ' ಎಂಬ ಹೆಸರು ಬಂತು.

  ರಾತ್ರಿಯ ಕೊನೆಯ ಮುಹೂರ್ತವಾದ 14ನೇ ಮುಹೂರ್ತಕ್ಕೆ ಸೃಷ್ಟಿಕರ್ತನಾದ ಬ್ರಹ್ಮದೇವನೇ ಅಧಿಪತಿ. ಆದ್ದರಿಂದ ಆ ಕಾಲಾವಧಿಗೆ 'ಬ್ರಾಹ್ಮೀ ಮುಹೂರ್ತ' ಎಂದು ಹೆಸರಿಸಲಾಯಿತು.

 ವಿದ್ಯೆಯ ಅಧಿದೇವತೆಯಾದ ಸರಸ್ವತಿಗೆ 'ಬ್ರಾಹ್ಮೀ' ಎಂಬ ಹೆಸರೂ ಇದೆ,ಮುಂಜಾನೆಯ ಈ ಪವಿತ್ರ ವೇಳೆಯಲ್ಲಿ ಮನಸ್ಸಿನ ಏಕಾಗ್ರತೆ ಹಾಗೂ ಗ್ರಹಣ ಶಕ್ತಿ ಗರಿಷ್ಠ ಮಟ್ಟದಲ್ಲಿರುವುದರಿಂದ, ವಿದ್ಯಾಭ್ಯಾಸ ಮತ್ತು ಸಾಧನೆಗೆ ಇದು ದೇವಿಯ ಆಶೀರ್ವಾದದ ಸಮಯವೆಂದು ಕರೆಯಲಾಗುತ್ತದೆ.

 ಉದಾಹರಣೆ ನಿನ್ನೆ ಆಗಸ್ಟ್ 25 ರಂದು ಸೂರ್ಯೋದಯ ಸಮಯ 06:15 AM ಅವತ್ತು ಬ್ರಾಹ್ಮೀ ಮುಹೂರ್ತ ಮುಂಜಾನೆ 04:39 ರಿಂದ 05:27 ರವರೆಗೆ
​ ಸುಮಾರು 48 ನಿಮಿಷಗಳು.

    ಅವತ್ತು ಮುಸ್ಲಿಂ ಧರ್ಮದ ಪ್ರಾರ್ಥನೆ ಸಮಯ ಬೆಳಿಗ್ಗೆ 5 ರಿಂದ ಫಜ್ರ್ ಮಾಡುತ್ತಾರೆ.

​  'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಶುದ್ಧ ಜ್ಞಾನಕ್ಕೆ ಸಂಬಂಧಿಸಿದ್ದು 'ಮುಹೂರ್ತ' ಎಂದರೆ ಶುಭ ಕಾಲ ಇದು ಜ್ಞಾನ, ಧ್ಯಾನ ಮತ್ತು ಸೃಜನಶೀಲತೆಯ ಸಮಯ.

​  ರಾತ್ರಿಯ ನಂತರ ವಾತಾವರಣವು ಸಂಪೂರ್ಣ ಪ್ರಶಾಂತವಾಗಿರುತ್ತದೆ. ಯಾವುದೇ ಶಬ್ದ ಮಾಲಿನ್ಯ ಅಥವಾ ಗೊಂದಲಗಳಿಲ್ಲದ ಕಾರಣ ಧ್ಯಾನ, ಪ್ರಾರ್ಥನೆ ಮತ್ತು ಅಧ್ಯಯನಕ್ಕೆ ಅತ್ಯಂತ ಸೂಕ್ತ.

​ ಈ ಸಮಯದಲ್ಲಿ ವಾತಾವರಣದಲ್ಲಿ ಶುದ್ಧ ಆಮ್ಲಜನಕ ಮತ್ತು ನೈಸರ್ಗಿಕ ಶಕ್ತಿ ಹೆಚ್ಚಾಗಿರುತ್ತದೆ.

 ಮುಂಜಾನೆ ಬೇಗ ಏಳುವುದರಿಂದ ದೇಹದ ರೋಗನಿರೋಧಕ ಶಕ್ತಿ ಮತ್ತು ಚೈತನ್ಯ ಹೆಚ್ಚುತ್ತದೆ.

​ ವಿದ್ಯಾರ್ಥಿಗಳು ಈ ಸಮಯದಲ್ಲಿ ಓದಿದರೆ ವಿಷಯಗಳು ಸುಲಭವಾಗಿ ಮತ್ತು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತವೆ.

 ​ಈ ಸಮಯದಲ್ಲಿ
​ಧ್ಯಾನ ಮತ್ತು ಯೋಗಾಸನ
​ದೇವರ ಪೂಜೆ, ಜಪ ಅಥವಾ ಪ್ರಾರ್ಥನೆ
​ಓದು ಮತ್ತು ಜ್ಞಾನಾರ್ಜನೆ
​ದಿನದ ಯೋಜನೆಗಳನ್ನು ರೂಪಿಸುವುದು ಸೂಕ್ತ.

​   ಅನೇಕ ಸಾಧಕರು ಯಾವುದೇ ಬಾಹ್ಯ ಗೊಂದಲಗಳು, ಪ್ರಾಪಂಚಿಕ ಗದ್ದಲಗಳಿಲ್ಲದ ಮುಂಜಾನೆಯ ಪ್ರಶಾಂತ ಸಮಯವನ್ನು ತಮ್ಮ ಅತ್ಯಂತ ಮಹತ್ವದ ಚಿಂತನೆ, ಆತ್ಮಾವಲೋಕನ ಮತ್ತು ಯೋಜನೆಗಳಿಗೆ ಬಳಸಿಕೊಂಡಿದ್ದೇ ಅವರ ಯಶಸ್ಸಿನ ಮೂಲ ರಹಸ್ಯ.

 ವಿಶ್ವದ ಯಶಸ್ವಿ ಸಾದಕರಾದ
ಟಿಮ್ ಕುಕ್ ಆಪಲ್ ಸಂಸ್ಥೆ ಸಿಇಓ ಮುಂಜಾನೆ 3.45– 4 ಇಮೇಲ್‌ಗಳ ಪರಿಶೀಲನೆ, ಜಿಮ್/ವ್ಯಾಯಾಮ, ದಿನದ ಮಹತ್ವದ ನಿರ್ಧಾರಗಳು ತೆಗೆದುಕೊಳ್ಳುವ ಸಮಯ ಆಗಿದೆ.

  ಇಂದ್ರ ನೂಯಿ ಪೆಪ್ಪಿ ಮಾಜಿ ಸಿ ಇ ಓ ಮುಂಜಾನೆ 4ಕ್ಕೆ ದಿನದ ಯೋಜನೆ, ಓದುವುದು ಮತ್ತು ಜಾಗತಿಕ ಮಾರುಕಟ್ಟೆ ವರದಿಗಳ ವೀಕ್ಷಣೆ ಮಾಡುತ್ತಾರೆ.

  ರಿಚರ್ಡ್ ಬ್ರಾನ್ಸನ್ ವರ್ಜಿನ್ ಗ್ರೂಪ್ ಸಂಸ್ಥಾಪಕಮುಂಜಾನೆ 5ಕ್ಕೆ ಟೆನ್ನಿಸ್, ಈಜು ಮತ್ತು ಕುಟುಂಬದೊಂದಿಗೆ ಪ್ರಶಾಂತ ಸಮಯ ಕಳೆಯುತ್ತಾರೆ.

 ಜ್ಯಾಕ್ ಡಾರ್ಸಿ Twitter/Block ಸಹ-ಸಂಸ್ಥಾಪಕ ಮುಂಜಾನೆ 4.30ಕ್ಕೆ ಧ್ಯಾನ, ನಡಿಗೆ ಮತ್ತು ಐಸ್ ಬಾತ್ ಮಾಡುತ್ತಾರೆ.

 ಇತಿಹಾಸ, ರಾಜಕೀಯ, ಸಾಹಿತ್ಯ, ವಿಜ್ಞಾನ ಮತ್ತು ಆಧುನಿಕ ಉದ್ಯಮ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಅನೇಕ ಪ್ರಸಿದ್ಧ ವ್ಯಕ್ತಿಗಳು ತಮ್ಮ ದಿನವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮುಂಜಾನೆ 4 ರಿಂದ 5 ರ ನಡುವೆ ಪ್ರಾರಂಭಿಸುವ ಕಟ್ಟುನಿಟ್ಟಾದ ಶಿಸ್ತನ್ನು ಹೊಂದಿದ್ದರು.

 ​ಅವರಲ್ಲಿ ಪ್ರಮುಖರಾದ ಕೆಲವರ ವಿವರ ಇಲ್ಲಿದೆ...
​ಶ್ರೀ ಆದಿ ಶಂಕರಾಚಾರ್ಯರು ಮತ್ತು ಪ್ರಾಚೀನ ಋಷಿ-ಮುನಿಗಳು:
​ತಮ್ಮ ಸಂಪೂರ್ಣ ದಿನಚರಿಯನ್ನು ಬ್ರಾಹ್ಮೀ ಮುಹೂರ್ತದ ಜಪ-ತಪ, ಯೋಗ ಮತ್ತು ವೇದಾಧ್ಯಯನದ ಮೂಲಕವೇ ಆರಂಭಿಸುತ್ತಿದ್ದರು.

​ಮಹಾತ್ಮ​ಗಾಂಧೀಜಿಯವರು ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುತ್ತಿದ್ದರು, ಆಶ್ರಮದ ಪ್ರಾರ್ಥನೆ, ಭಗವದ್ಗೀತಾ ಪಠಣ, ದಿನಚರಿ ಬರೆಯುವುದು ಮತ್ತು ಪತ್ರಗಳಿಗೆ ಉತ್ತರಿಸುವ ಕೆಲಸಗಳನ್ನು ಸೂರ್ಯೋದಯಕ್ಕೆ ಮುನ್ನವೇ ಮುಗಿಸುತ್ತಿದ್ದರು.

​ಸ್ವಾಮಿ ವಿವೇಕಾನಂದರು
​ಮುಂಜಾನೆ 4ಗಂಟೆಯ ಧ್ಯಾನ ಅವರ ದಿನಚರಿಯ ಅವಿಭಾಜ್ಯ ಅಂಗವಾಗಿತ್ತು,"ಬೆಳಗಿನ ಮುಂಜಾವಿನ ಶಾಂತತೆಯಲ್ಲಿ ಮಾಡುವ ಧ್ಯಾನವು ಮೆದುಳಿಗೆ ಅಪಾರ ಶಕ್ತಿ ನೀಡುತ್ತದೆ" ಎಂದು ಅವರು ಪ್ರತಿಪಾದಿಸುತ್ತಿದ್ದರು.

 ​ಛತ್ರಪತಿ ಶಿವಾಜಿ ಮಹಾರಾಜ್:
​ಮುಂಜಾನೆಯ ನಸುಕಿನಲ್ಲೇ ಎದ್ದು ಭವಾನಿ ದೇವಿಯ ಪೂಜೆ, ಯೋಗಾಭ್ಯಾಸ ಮತ್ತು ಯುದ್ಧತಂತ್ರಗಳ ಯೋಜನೆಯನ್ನು ರೂಪಿಸುತ್ತಿದ್ದರು.

 ​ಡಾ. ಎ.ಪಿ.ಜೆ. ಅಬ್ದುಲ್ ಕಲಾಂ:
​ಭಾರತದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಕಲಾಂ ಅವರು ಮುಂಜಾನೆ 4  ಅಥವಾ 4.30ಕ್ಕೆ ಎದ್ದು ಸ್ನಾನ ಮುಗಿಸಿ, ಗಣಿತ ಅಭ್ಯಾಸ ಮತ್ತು ದಿನದ ಸಂಶೋಧನಾ ಯೋಜನೆಗಳನ್ನು ಆರಂಭಿಸುತ್ತಿದ್ದರು.

 ​ಅಮೆರಿಕದ ಪ್ರಸಿದ್ಧ ವಿಜ್ಞಾನಿ ಮತ್ತು ತತ್ವಜ್ಞಾನಿ ಫ್ರಾಂಕ್ಲಿನ್ ಮುಂಜಾನೆ 4.30 ರಿಂದ 5 ರೊಳಗೆ ಎದ್ದು "ಇಂದು ನಾನು ಜಗತ್ತಿಗೆ ಯಾವ ಒಳ್ಳೆಯದನ್ನು ಮಾಡಬಹುದು?" ಎಂದು ಯೋಚಿಸಿ ದಿನ ಆರಂಭಿಸುತ್ತಿದ್ದರು,ಅವರ ಪ್ರಸಿದ್ಧ ನಾಣ್ನುಡಿ "Early to bed and early to rise, makes a man healthy, wealthy, and wise."

 ​ಸರ್ ಎಂ. ವಿಶ್ವೇಶ್ವರಯ್ಯ:
​ತಮ್ಮ ಕಟ್ಟುನಿಟ್ಟಾದ ಸಮಯಪಾಲನೆಗೆ ಹೆಸರಾಗಿದ್ದ ಇವರು ಮುಂಜಾನೆ ಬೇಗ ಎದ್ದು ಅಧ್ಯಯನ, ವಾಕಿಂಗ್ ಮತ್ತು ಎಂಜಿನಿಯರಿಂಗ್ ವಿನ್ಯಾಸಗಳ ಪರಿಶೀಲನೆ ನಡೆಸುತ್ತಿದ್ದರು.

​ ಆಧುನಿಕ ಜಾಗತಿಕ ಉದ್ಯಮಿಗಳು (CEOs)
​ಆಧುನಿಕ ಜಗತ್ತಿನಲ್ಲಿ ಇದನ್ನು "5 AM Club" ಅಥವಾ "Morning Routine" ಎಂದು ಕರೆಯಲಾಗುತ್ತದೆ.

 ಪ್ರಾಚೀನ ಕಾಲದಲ್ಲಿ ಆಧ್ಯಾತ್ಮಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದ್ದ ಬ್ರಾಹ್ಮೀ ಮುಹೂರ್ತವನ್ನು ಆಧುನಿಕ ವಿಜ್ಞಾನ, ವೈದ್ಯಕೀಯ ಶಾಸ್ತ್ರ ಮತ್ತು ಮನಶ್ಶಾಸ್ತ್ರಗಳು ಸಂಪೂರ್ಣವಾಗಿ ಸಮರ್ಥಿಸುತ್ತವೆ.
 
 ​ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ ಈ ಸಮಯದಲ್ಲಿ ಸಿರ್ಕಾಡಿಯನ್ ರಿದಮ್ ಮತ್ತು ಹಾರ್ಮೋನ್‌ಗಳ ಸಮತೋಲನ ​ಮಾನವನ ದೇಹದಲ್ಲಿ ನೈಸರ್ಗಿಕ ಜೈವಿಕ ಗಡಿಯಾರವಿದೆ  ಸೂರ್ಯೋದಯಕ್ಕೆ ಮುಂಚಿನ ಸಮಯದಲ್ಲಿ ದೇಹದ ಹಾರ್ಮೋನ್‌ಗಳಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆ.

 ​ ಮುಂಜಾನೆ  ಅವಧಿಯಲ್ಲಿ ಮೆದುಳು ಕಾರ್ಟಿಸೋಲ್ ಹಾರ್ಮೋನ್ ಅನ್ನು ನೈಸರ್ಗಿಕವಾಗಿ ಬಿಡುಗಡೆ ಮಾಡುತ್ತದೆ ಇದು ದೇಹಕ್ಕೆ ನೈಸರ್ಗಿಕ ಶಕ್ತಿ, ಚುರುಕುತನ ಮತ್ತು ದಿನವನ್ನು ಎದುರಿಸುವ ಉತ್ಸಾಹವನ್ನು ನೀಡುತ್ತದೆ.

  ಬೆಳಕು ಹರಿಯುವ ಮುನ್ನ ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಮಟ್ಟ ಕಡಿಮೆಯಾಗಿ, ಜಾಗೃತಾವಸ್ಥೆಯ ಹಾರ್ಮೋನ್‌ಗಳು ಸಕ್ರಿಯಗೊಳ್ಳುತ್ತವೆ.

  ನಿದ್ರೆಯಿಂದ ಎದ್ದ ತಕ್ಷಣದ ಮುಂಜಾನೆಯ ಶಾಂತತೆಯಲ್ಲಿ ಮಾನವನ ಮೆದುಳು Alpha (೮–೧೨ Hz) ಸ್ಥಿತಿಯಲ್ಲಿರುತ್ತದೆ,ಈ ಸ್ಥಿತಿಯು ಆಳವಾದ ಏಕಾಗ್ರತೆ, ಹೊಸ ವಿಷಯಗಳನ್ನು ಕಲಿಯುವ ಗ್ರಹಣ ಶಕ್ತಿ  ಕಲ್ಪನಾಶಕ್ತಿ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿಡುತ್ತದೆ.

​ ಸೂರ್ಯೋದಯಕ್ಕಿಂತ ಮುಂಚಿನ ತಂಪಾದ ವಾತಾವರಣದಲ್ಲಿ ಭೂಮಿಯ ಮೇಲ್ಮೈ ಸಮೀಪ ನ್ಯಾಸೆಂಟ್ ಆಕ್ಸಿಜನ್  ಹಾಗೂ ಸೂಕ್ಷ್ಮ ಪ್ರಮಾಣದ ಓಝೋನ್ ಅಂಶವಿರುತ್ತದೆ,ಇದು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು, ರಕ್ತ ಶುದ್ಧೀಕರಣಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ.

​ಶಬ್ದ ಮಾಲಿನ್ಯ ರಹಿತ ಪರಿಸರದಲ್ಲಿ ಮಾನವ ಚಟುವಟಿಕೆಗಳ ಶಬ್ದವಿಲ್ಲದಿರುವುದರಿಂದ ಮೆದುಳಿಗೆ ಕನಿಷ್ಠ 'ಕಾರ್ಯಭಾರ' Sensory Overload ಇಲ್ಲದಿರುವುದು ಇರುತ್ತದೆ.

  ಮನಶ್ಶಾಸ್ತ್ರದ ಪ್ರಕಾರ ಮಾನವನ 'ಇಚ್ಛಾಶಕ್ತಿ' (Willpower / Decision Making capacity) ಮುಂಜಾನೆ ಗರಿಷ್ಠವಾಗಿರುತ್ತದೆ.

   ನಿಯಮಿತವಾಗಿ ಬೇಗ ಎದ್ದು ಬೆಳಕಿಗೆ ಮುಖಮಾಡುವವರಲ್ಲಿ ಸಿರೊಟೋನಿನ್  ಸಂತೋಷದ ಹಾರ್ಮೋನ್ ಸಮತೋಲನದಲ್ಲಿರುತ್ತದೆ ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.

​  ಪ್ರಾಚೀನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾಷೆಯಲ್ಲಿ ಹೇಳಿದ್ದನ್ನು ಆಧುನಿಕ ವಿಜ್ಞಾನವು "ಪೀಕ್ ಹಾರ್ಮೋನ್ ಸಮತೋಲನ ಮತ್ತು ಗರಿಷ್ಠ ಮೆದುಳಿನ ಕಾರ್ಯಕ್ಷಮತೆಯ ಸಮಯ" ಎಂದು ಜೈವಿಕ ನಿಯಮಗಳ ಮೂಲಕ ದೃಢಪಡಿಸಿದೆ.

  ಹಿಂದೂ - ಜೈನ - ಬೌದ್ಧ- ಇಸ್ಲಾಂ ಮತ್ತು ಕ್ರಿಸ್ತದಮದಲ್ಲಿ ಬ್ರಾಹ್ಮಿ ಮಹೂರ್ತ ಬಳಕೆಯಲಿದೆ,
ಹೆಸರು ಮತ್ತು ವಿಧಿವಿಧಾನಗಳು ಬೇರೆಯಾಗಿದ್ದರೂ ಸೂರ್ಯೋದಯಕ್ಕೆ ಮುನ್ನ ವಾತಾವರಣದಲ್ಲಿರುವ ಪ್ರಶಾಂತತೆ, ಪರಿಶುದ್ಧತೆ ಮತ್ತು ಸಾತ್ವಿಕ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗಾಗಿ ಬಳಸಿಕೊಳ್ಳಬೇಕೆಂಬುದು ವಿಶ್ವದ ಬಹುತೇಕ ಎಲ್ಲಾ ಧರ್ಮಗಳ ಸಮಾನ ಸಿದ್ಧಾಂತವಾಗಿದೆ. 

#brahmimuhurtha #earlymorningblessing  #willpower #mahatmagandhi #vivekananda 
#abdulkalam

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...