Skip to main content

4116. ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆಸದ್ಗತಿಗಾಗಿ_ಪ್ರಾರ್ಥನೆ. ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.


ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆ
ಸದ್ಗತಿಗಾಗಿ_ಪ್ರಾರ್ಥನೆ.

  ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.

 ​ಸಾಮಾನ್ಯವಾಗಿ ವ್ಯಕ್ತಿ ತೀರಿಕೊಂಡ 11, 12  ಅಥವಾ ೧೩ನೇ ದಿನದಂದು ವೈಕುಂಠ ಸಮಾರಾಧನೆಯನ್ನು ನೆರವೇರಿಸಲಾಗುತ್ತದೆ. (ಕೆಲವು ಸಮುದಾಯಗಳಲ್ಲಿ ಅವರವರ ಕುಲಾಚಾರಕ್ಕೆ ತಕ್ಕಂತೆ ದಿನಗಳು ಬದಲಾಗಬಹುದು).

​  ಪ್ರಮುಖ ಧಾರ್ಮಿಕ ವಿಧಿಗಳು
​ಧಾರ್ಮಿಕ ಪೂಜೆ ಹಾಗೂ ಪಿಂಡದಾನ ಪುರೋಹಿತರ ಮಾರ್ಗದರ್ಶನದಲ್ಲಿ ಮೃತರ ಹೆಸರಿನಲ್ಲಿ ತರ್ಪಣ, ಶ್ರಾದ್ಧ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

  ​ಅನ್ನದಾನ (ಬ್ರಹ್ಮಸಂತರ್ಪಣೆ), ಆಗಮಿಸಿದ ಬಂಧು-ಮಿತ್ರರಿಗೆ ಹಾಗೂ ಅಭ್ಯಾಗತರಿಗೆ ಭೋಜನವನ್ನು ಏರ್ಪಡಿಸುವುದು ಈ ದಿನದ ಪ್ರಮುಖ ಭಾಗ.

  ​ದಾನ ಧರ್ಮಗಳು,ಮೃತರ ಆತ್ಮದ ಶ್ರೇಯಸ್ಸಿಗಾಗಿ ಗೋದಾನ, ಭೂದಾನ, ವಸ್ತ್ರದಾನ, ಹಾಗೂ ದೀಪದಾನಗಳಂತಹ ಕಾರ್ಯಗಳನ್ನು ಮಾಡಲಾಗುತ್ತದೆ.

  ಇವತ್ತು ನನ್ನ ಜೀವನದ ಮಾರ್ಗದರ್ಶಕ ಗುರುಗಳಾಗಿದ್ದ ಬೆಂಗಳೂರಿನ ವಿಜಯನಗರದ ಖ್ಯಾತ ಜೋತಿಷಿ ಆಗಿದ್ದ ಡಾಕ್ಟರ್ ಎನ್. ಎಸ್. ವಿಶ್ವಪತಿಗಳ 13 ನೇ ದಿನದ ವೈಕುಂಠ ಸಮಾರಾಧನೆ ( 3 - ಆಗಸ್ಟ್-2026 ಸೋಮವಾರ).

  ನಮ್ಮೂರ ಪುರ ದೈವ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಅವರ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ 21 ವರ್ಷದ ಹಿಂದೆ ಪ್ರತಿಷ್ಟಾಪನೆಗೊಂಡು ನಿನ್ನೆ 245 ನೇ ಸಂಕಷ್ಟ ಹರ ಚತುರ್ಥಿ ದಿನ ಅವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಯಿತು ಮತ್ತು ಅವರ ಸ್ಮರಣಾರ್ಥ ದೇವಾಲಯದಲ್ಲಿ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು.

  ಅವರಿಗಾಗಿ ಇವತ್ತು ಬೆಳಿಗ್ಗೆ ಕೆಂಜೆಗಾಪುರದ ಶ್ರೀವೀರಭದ್ರ ದೇವಸ್ಥಾನದಲ್ಲಿ #ರುದ್ರಾಭಿಶೇಕ ಪೂಜೆ ನೆರವೇರಿಸಲಾಗಿದೆ.

  ಮೂಡ ನಂಬಿಕೆಗಳನ್ನ ಮತ್ತು ಜಾತಿಯತೆಯನ್ನ ಸದಾ ವಿರೋದಿಸುತ್ತಿದ್ದವರು ವಿಶ್ವಪತಿ ಶಾಸ್ತ್ರೀಯವರು.

   ನಮ್ಮೂರ ಈ ಶ್ರೀವರಸಿದ್ದಿ ವಿನಾಯಕ ದೇವಸ್ಥಾನ ಲೋಕಾರ್ಪಣೆ ದಿನ ಅವರು ಮಾಡಿದ ಆಶ್ರೀವಚನದಲ್ಲಿ ನನಗೆ ಸದಾ ನೆನಪಿನಲ್ಲಿರುವವುದು ...

  ನಿಮ್ಮ ಊರು ಆನಂದಪುರಂ ದೊಡ್ಡ ಇತಿಹಾಸ ಇರುವ ಊರು ರಾಜರು ಆಳಿದ ಊರು ಇಲ್ಲಿ ಗಣಪತಿ ದೇವಸ್ಥಾನ ಇರಲೇ ಬೇಕು ಆದರೆ ಇಡೀ ಹೋಬಳಿಯಲ್ಲಿ ಎಲ್ಲೂ ಇಲ್ಲ ಅಂದರೆ ಪುರಾತನ ಗಣಪತಿ ದೇವಸ್ಥಾನ ಯಾವುದೋ ಕಾರಣದಿಂದ ನಶಿಸಿ ಹೋಗಿರಬೇಕು ಬಹುಶಃ ಈಗ ಪ್ರತಿಷ್ಟಾಪನೆಗೊಂಡ ಶ್ರೀವರಸಿದ್ದಿ ವಿನಾಯಕ ಸ್ವಾಮಿy ದೇವಾಲಯದಲ್ಲೇ ಪ್ರರಾತನ ಗಣಪತಿ ದೇವಸ್ಥಾನ ಇದ್ದಿರ ಬೇಕು ಎಂದಿದ್ದರು.

   ಈ ದೇವಾಲಯ ಪ್ರಾರಂಭದಿಂದ ಆನಂದಪುರಂ ಸುತ್ತ ಮುತ್ತಲಿನ ಎಲ್ಲಾ ಹಳೆಯ ದೇವಾಲಯ ಅಭಿವೃದ್ದಿ ಆಗಲಿದೆ ಈ ಇಡೀ ಊರಿನ ಪ್ರತಿ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಹೊಂದಲಿದೆ ಎಂದು ಆ ದಿನ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ.

  ಪ್ರತಿ ಸಂಕಪ್ಟಹರ ಚತುರ್ಥಿಯಲ್ಲಿ ರಾತ್ರಿ ಚಂದ್ರ ದರ್ಶನ ನಂತರ ದೇವಾಲಯದಲ್ಲಿ ಅವರು ಪ್ರಾರಂಭಿಸಿದ ಅನ್ನ ಸಂತರ್ಪಣೆ ನಿನ್ನೆಗೆ 245 ನೇ ಸಂಕಷ್ಟಹರ ಚತುರ್ಥಿ ಅಂತಹ ದಿನಗಳಲ್ಲಿ ವಿಶ್ವಪತಿ ಶಾಸ್ತ್ರಿಗಳು ಸ್ವತಃ ಸಾಮೂಹಿಕ ಭೋಜನದಲ್ಲಿ ಭಾಗವಹಿಸಿ ಆಹಾರ ಸ್ವೀಕರಿಸುತ್ತಿದ್ದರು.

   ಅಲ್ಲಿ ಜಾತಿ ಇರಲಿಲ್ಲ ಅದಕ್ಕೆ ಶಾಸ್ತ್ರೀಗಳು ಹೇಳುತ್ತಿದ್ದದ್ದು "ಇಲ್ಲಿ ಜಾತಿ ಇಲ್ಲ, ಭಕ್ತಿಯಿಂದ ಭಕ್ತರು ಶುಚಿಯಾಗಿ ದೇವರ ಪ್ರಸಾದ ತಯಾರಿಸಿ ಬಡಿಸುತ್ತಾರೆ, ಇಲ್ಲಿ ತೋರುಗಾಣಿಕೆಗೆ ಜಾತಿ ಕಾರಣದಿಂದ ಊಟ ಮಾಡದೆ ಹೋಟೆಲ್ ಗೆ ಹೋದರೆ ಅಲ್ಲಿ ಅಡುಗೆ ಮಾಡುವವರು ಅಡುಗೆ ಮಾಡಿಟ್ಟು ಸ್ನಾನಕ್ಕೆ ಹೋಗುತ್ತಾರೆ ಯಾವುದು ಶ್ರೇಷ್ಟ ಎಂದು ಪ್ರಶ್ನಿಸುತ್ತಿದ್ದರು.

  ನಮ್ಮ ದೇವಾಲಯಕ್ಕೆ ಐದು ಲಕ್ಷ ವೆಚ್ಚದಲ್ಲಿ ಪ್ರಸಾದದ ಮನೆ ನಿರ್ಮಿಸಿಕೊಟ್ಟಿದ್ದಾರೆ, ದೇವರ ಉತ್ಸವ ಮೂರ್ತಿ ಇವರೇ ನೀಡಿದ್ದು, ಇವರ ಅತ್ತೆ ಪತ್ನಿ ಸುದಾಮಣಿ ಅವರ ತಾಯಿ ತ್ಯಾಗರ್ತಿ ಗುರುಮೂರ್ತಿ ರಾಯರ ಪತ್ನಿ ಗೋಪುರದ ಕಳಶ ನೀಡಿದ್ದಾರೆ ಈ ರೀತಿ ಶಾಸ್ತ್ರೀಯವರ ಕುಟುಂಬ ನಮ್ಮ ಊರ ದೇವಾಲಯಕ್ಕೆ ದೊಡ್ಡ ಕೊಡುಗೆ ನೀಡಿದ ಕುಟುಂಬ ಆಗಿದೆ.

  ಅವರ ಸಂಪರ್ಕಕ್ಕೆ ಬಂದವರಿಗೆ ಸರಿದಾರಿಯ ಸನ್ಮಾರ್ಗ ತೋರುವುದು ಅವರ ಕಾಯಕ ಆಗಿತ್ತು.

   ವಿಶ್ವಪತಿ ಶಾಸ್ತ್ರೀಗಳ ಆತ್ಮಕ್ಕೆ ಸದ್ಗತಿ - ಮೊಕ್ಷ ಮತ್ತು ಸ್ವರ್ಗ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ.

 #vishwapathishastri #srivatsa #sudhamani #vijayanagara #bangalore #shivamogga #yadehalli #siddivinayakatemple

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...