ವ್ಯಾಟಿಕನ್_ಟು_ಸಾಗರ
ಜೋಸ್_ಪಾದರ್_ಕನ್ನಡಾಭಿಮಾನ
ಕನ್ನಡ_ಕಲಿತ_ಪಾದ್ರಿಗಳು
ಡಾಕ್ಟರ್ ಪಿ.ವಿ. ಜೋಸೆಪ್ ಅವರನ್ನ ಇಲ್ಲಿಯವರು ಕರೆಯುವುದು ಜೋಸ್ ಪಾದರ್ ಅಂತ ಈಗ ಕೇರಳದಲ್ಲಿ ನಿವೃತ್ತ ಜೀವನ ಸವೆಸುತ್ತಿದ್ದಾರೆ, ಇವರು ವಿಶೇಷ ವ್ಯಕ್ತಿ ಇವರ ಸಾಧನೆ ಅಮೋಘ,ಯಾವುದೇ ಪ್ರಸಿದ್ಧಿಗಾಗಿ, ಪ್ರಶಸ್ತಿ ಸನ್ಮಾನಗಳಿಗಾಗಿ ಸೇವೆ ಮಾಡಿದವರಲ್ಲ ಅದರಿಂದ ಇವರು ಬಲು ದೂರ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದ ಮುಂಬಾಳಿಗೆ ಬಂದು ಗೋಕುಲ್ ಪಾರಂ ಸ್ಥಾಪಿಸಿ ಸಾಗರ ತಾಲೂಕಿನಲ್ಲಿ ಇವರು ಮಾಡಿದ ದೂರದೃಷ್ಟಿಯ social economical development program ಬಗ್ಗೆ ಎಷ್ಟು ಹೇಳಿದರೂ ಕಡಿಮೆ.
ಇವರು ಜನಿಸಿದ್ದು ಕೇರಳದಲ್ಲಿ ಮಾತೃ ಭಾಷೆ ಮಲೆಯಾಳಂ, ಇವರ ವಿದ್ಯಾಭ್ಯಾಸ ಕ್ರೈಸ್ತರ ಪರಮೊಚ್ಚ ಧರ್ಮಗುರು ಪೋಪ್ ಇರುವ ವ್ಯಾಟಿಕನ್ ನಲ್ಲಿ.
ಕೃಷಿ ಮತ್ತು ಮಹಾತ್ಮಾ ಗಾಂಧಿ ಇವರ ಉನ್ನತ ಶಿಕ್ಷಣದ ವಿಷಯಗಳು, ಇವರು ಕರ್ನಾಟಕಕ್ಕೆ ಬಂದು ನಂಜನಗೂಡಿನಲ್ಲಿ ಆರಾಧ್ಯ ಎಂಬುವವರಿಂದ ಕನ್ನಡ ಬಾಷೆಯ ಅಕ್ಷರಾಭ್ಯಾಸ ಮಾಡಿ ನಂತರ ಒಂದನೆ ತರಗತಿ, ಎರಡನೆ ತರಗತಿ ಮಕ್ಕಳ ಜೊತೆ ಕುಳಿತು ಪಾಠ ಕಲಿತು ನಂತರ ಕನ್ನಡ ಬರೆಯಲು ಮತ್ತು ಓದಲು ಕಲಿತ ದಿನಗಳ ನೆನಪು ಮಾಡಿಕೊಂಡಿದ್ದಾರೆ ಈ ಸಂದರ್ಶನದಲ್ಲಿ.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರೂ ನನ್ನ ಮಕ್ಕಳನ್ನ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿಸಿದ್ದೆ ಆಗಲೇ ನಮ್ಮ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರೂ ಕಾನ್ವೆಂಟ್ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಭರಾಟೆ ಕಾಲ.
ನಾನು ನನ್ನ ಮಕ್ಕಳನ್ನ ಸರ್ಕಾರಿ ಅಂಗನವಾಡಿಯಿಂದ ಪಿಯುಸಿ ತನಕ ಕನ್ನಡ ಮಾಧ್ಯಮದಲ್ಲೇ ಓದಿಸಿ ಅವರಿಗೆ ಇಂಗ್ಲೀಷ್ ಸ್ಪೀಕಿಂಗ್ ತರಬೇತಿ ಕೊಡಿಸಿ ಉನ್ನತ ವಾಸಂಗಕ್ಕೆ ಕಳಿಸಿದ್ದೆ.
ಆದರೆ ನನ್ನ ಮುಂದಿನ ಮೊಮ್ಮಕ್ಕಳ ಕಾಲದಲ್ಲಿ ಈ ರೀತಿ ಕನ್ನಡ ಕಲಿಯುತ್ತಾರೆಂಬ ನಂಬಿಕೆ ನನಗಿಲ್ಲ ಯಾಕೆಂದರೆ ಕನ್ನಡ ನಾಡಲ್ಲಿ ಕನ್ನಡದಲ್ಲಿ ಮಕ್ಕಳು ಓದಿ ಬರೆಯುವುದು ಹೊಸ ತಲೆಮಾರಿಗೆ ಇಷ್ಟ ಆಗುತ್ತಿಲ್ಲ.
ಮಕ್ಕಳ ಭವಿಷ್ಯಕ್ಕೆ ಇಂಗ್ಲೀಷ್ ಬೇಕು ಸರಿ ಆದರೆ ಮಾತೃ ಭಾಷೆ ಓದಿ ಬರೆಯಲು ಅವರಿಗೆ ಕಲಿಸಲು ಏಕೆ ವಿರೋಧ ಗೊತ್ತಿಲ್ಲ.
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡ ವೀರರಲ್ಲೂ ಇದಕ್ಕೆ ಉತ್ತರ ಇಲ್ಲ, ಸದ್ಯದಲ್ಲೇ ಕನ್ನಡ ರಾಜ್ಯೋತ್ಸದ ಆಚರಣೆ ಇದೆ.
ಇದೆಲ್ಲದರ ಮಧ್ಯ ಪಾದರ್ ಜೋಸೆಪ್ ನಮಗೆ ಆದರ್ಶರಾಗಿ ಕಾಣುತ್ತಾರೆ ಸ್ವತಃ ತಮ್ಮ ಮನೆಯಲ್ಲಿ ಆಚರಣೆ -ಪಾಲನೆ ಮಾಡದೆ ಕನ್ನಡ ಭಾಷೆ ಬೆಳೆದೀತೆ -ಉಳಿದೀತೆ? ..
ಈ ಸಂದರ್ಶನ ನೋಡಿ ಇಷ್ಟ ಆದರೆ ಶೇರ್ ಮಾಡಿ.
#pvjosep #josfather #kannada #rajyotsava #christianreligion #kerala #maleyalam #vyatican
#itali #mumbalu #anandapuram #gokulfarm
Comments
Post a Comment