ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ_ಪಿರಮಿಡ್_ನಟರಾಜ್
ನನ್ನ ರೆಸ್ಟೋರೆಂಟ್ ಉದ್ಯಮಕ್ಕೆ ಪ್ರೇರಕರು ಅವರು, ನನಗೆ ಅವರಿಂದ ಅನೇಕ ಪ್ರೋತ್ಸಾಹ ದೊರೆತಿತ್ತು, ಅವರು ಒಬ್ಬ ವಿಶೇಷ ಕ್ರಿಯಾಶೀಲ ವ್ಯಕ್ತಿ
ಖ್ಯಾತ ನಿಧೇ೯ಶಕ ಕೆ. ಬಾಲಚಂದರ್ ಮತ್ತು ಇವರ ಜೋಡಿ ನೀಡಿದ ಸೂಪರ್ ಹಿಟ್ ಸಿನಿಮಾಗಳು,ಇವರ ತಮಿಳು ಚಿತ್ರ ಅವಲ್ ಒರು ಥೋಡರ್ ಕತೈ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾ.
ಪಿರಮಿಡ್ ನಟರಾಜ್ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಇವರು 1997 ರಲ್ಲಿ ಸ್ಥಾಪಿಸಿದ ಪಿರಮಿಡ್ ಎಂಟರ್ ಟೈನ್ ಮೆಂಟ್ ಲಿ. ಸಂಸ್ಥೆಯ ಪ್ರಖ್ಯಾತಿ ನಟರಾಜ್ ಹೆಸರಿಗೆ ಪಿರಮಿಡ್ ಸೇರಲು ಕಾರಣ.
ಪ್ರಖ್ಯಾತ ನಿಧೇ೯ಶಕ ಕೆ.ಬಾಲಚಂದರ್ ಜೊತೆ ಕವಿತಾಲಯ ಸಂಸ್ಥೆ ಪೋಷಕರಾಗಿ ಅನೇಕ ಯಶಸ್ಸಿಗೆ ಕಾರಣರಾದರು.
ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಮತ್ತು ಕೆಲವು ತೆಲುಗು ಸಿನಿಮಾಗಳಲ್ಲಿ ಇವರು ನಾಯಕನ ತಂದೆಯಾಗಿ, ಖಳನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
ನಟನಾಗಿ
ಅಲೈಪಾಯುದೆ ಮಣಿರತ್ನಂ ನಿರ್ದೇಶನದ ಈ ಸೂಪರ್ಹಿಟ್ ಸಿನಿಮಾದಲ್ಲಿ ನಾಯಕ ಮಾಧವನ್ ಅವರ ತಂದೆಯ (ವರದರಾಜನ್) ಪಾತ್ರದ ಮೂಲಕ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು.
ಫ್ರೆಂಡ್ಸ್ ನಲ್ಲಿ ವಿಜಯ್ ಮತ್ತು ಸೂರ್ಯ ನಟನೆಯ ಈ ಸಿನಿಮಾದಲ್ಲಿ ಗೌತಮ್ (ವಿಜಯ್) ತಂದೆಯ ಪಾತ್ರ.
ವಿರುಮಾಂಡಿ ಕಮಲ್ ಹಾಸನ್ ಅವರ ಈ ಪ್ರಸಿದ್ಧ ಸಿನಿಮಾದಲ್ಲಿ 'ವೈದ್ಯನಾಥನ್' ಎಂಬ ಪ್ರಮುಖ ಪಾತ್ರ.
ಶಿವಾಜಿ ದಿ ಬಾಸ್ರಜನಿಕಾಂತ್ ಅಭಿನಯದ ಈ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ವಕೀಲರ ಪಾತ್ರ.
ತುಳ್ಳುವದೊ ಇಳಮೈ ಧನುಷ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರ.
ವಿಲನ್ ಅಜಿತ್ ಕುಮಾರ್ ನಟನೆಯ ಈ ಸಿನಿಮಾದಲ್ಲಿ ಸಚಿವರ ಪಾತ್ರ.
ಇತರ ಗಮನಾರ್ಹ ಚಿತ್ರಗಳು ಉದಯ (ವಿಜಯ್ ನಟನೆ), ಚಾರ್ಲಿ ಚಾಪ್ಲಿನ್, ಸಮುದ್ರಂ, ಅಳಗಿ, ಅಳಗಿಯ ತೀಯೇ, ಕರುಮೇಗಂಗಳ್ ಕಲೈಗಿಂದ್ರನ (2023).
ನಿರ್ಮಾಪಕರಾಗಿ ಪಿರಮಿಡ್ ಎಂಟರ್ಟೇನ್ಮೆಂಟ್' ಬ್ಯಾನರ್ ಅಡಿಯಲ್ಲಿ ಇವರು ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿದ್ದಾರೆ ಹಾಗೂ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ:
ರಿಧಮ್ ಅರ್ಜುನ್ ಸರ್ಜಾ ಮತ್ತು ಮೀನಾ ಅಭಿನಯದ ಪ್ರಸಿದ್ಧ ಸಿನಿಮಾ.
ಸಂಗಮಮ್ ಎ.ಆರ್. ರಹಮಾನ್ ಸಂಗೀತ ಸಂಯೋಜನೆಯ ಹಿಟ್ ಸಿನಿಮಾ.
ಪಿಸ್ತಾ ಕಾರ್ತಿಕ್ ಅಭಿನಯದ ಹಾಸ್ಯ ಪ್ರಧಾನ ಚಿತ್ರ.
ಲವ್ ಬರ್ಡ್ಸ್ ಪ್ರಭುದೇವ ನಟನೆಯ ಸಿನಿಮಾ.
ಉದಯ ಮತ್ತು ಎಟ್ಟುಪಟ್ಟಿ ರಾಸ (1997).
ಪಿರಮಿಡ್ ನಟರಾಜರು 60 ಕ್ಕೂ ಹೆಚ್ಚು ಚಲನ ಚಿತ್ರ ನಿರ್ಮಾಣ ಮಾಡಿದ್ದಾರೆ ಇವರ ನಿರ್ಮಾಣದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿದ್ದ ಅವಲ್ ಒರು ಥೋಡರ್ ಕತೈ ಸಿನಿಮಾ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಆಗಿ ಪ್ರಖ್ಯಾತಿ ಆಗಿದ್ದು ಇತಿಹಾಸ.
2015ರಲ್ಲಿ ಪಿರಮಿಡ್ ನಟರಾಜ್ ಇನ್ನೊಬ್ಬ ನಿರ್ಧೇಶಕ ವೆಂಕಟ್ ಜೊತೆ ಅನೇಕ ಭಾರಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನ ವಿಕ್ಟೋರಿಯಾ ಕಾಟೇಜಿನಲ್ಲಿ ತಂಗುತ್ತಿದ್ದರು ಅವಾಗ ಅವರು ತಮ್ಮ ಉಪಹಾರ ಊಟಕ್ಕೆ ನಮ್ಮ ಮಲ್ಲಿಕಾ ವೆಜ್ ಬಳಸುತ್ತಿದ್ದರು.
ಯಶಸ್ವೀ ಉದ್ಧಿಮೆದಾರರಾದ ಇವರು ಇವರದ್ದೇ ಸ್ವಂತ #ಮಾವುಡು_ಇನ್ ಎಂಬ ಪ್ರಸಿದ್ದ ಹೋಟೆಲ್ ಹೊಂದಿದ್ದಾರೆ, ಇಂತವರ ಮಾತು ಹೊಸದಾಗಿ ಹೋಟೆಲ್ ಉದ್ಯಮ ವೃತ್ತಿ ಪ್ರಾರಂಬಿಸಿದ ನನ್ನಂತವರು ಪಾಲಿಸದೇ ಇರುವುದೆಂತು ... ಆದ್ದರಿಂದಲೇ ನಾನು ಅವರು ತಿಳಿಸಿದ ಅನೇಕ ಸಲಹೆ ನನ್ನ ಹೋಟೆಲ್ ಉದ್ಯಮದಲ್ಲಿ ಅಳವಡಿಸಿದ್ದೇನೆ.
ಇವತ್ತು ಫೇಸ್ ಬುಕ್ 2015ರ ಜುಲೈ 29ರಂದು ಪಿರಮಿಡ್ ನಟರಾಜ್ ಮತ್ತು ವೆಂಕಟ್ ಜೊತೆ ನಮ್ಮ ಕಾಟೇಜ್ ಎದರು ನಾನು ತೆಗೆಸಿಕೊಂಡ ಪೋಟೋ ಆ ದಿನದ ನೆನಪು ಮಾಡಿಸಿತು.
#pyramidnataraj #TamilFilmIndustry #tamilcinema #filmdirector #tamilfilmdirectorvenkat #venkattamil
Comments
Post a Comment