Skip to main content

4106.ವ್ಯಾಸ_ಪೂರ್ಣಿಮೆ. ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ.​"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"​ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ.


ವ್ಯಾಸ_ಪೂರ್ಣಿಮೆ.

  ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ.

​"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"
​ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ.

ಜನ್ಮ ನೀಡಿದ ತಾಯಿ ಮತ್ತು ತಂದೆಯನ್ನು ಮೊದಲ ಗುರುಗಳೆಂದು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

  ನಾಲ್ಕು ವೇದಗಳನ್ನು ವಿಭಾಗಿಸಿ, ಮಹಾಭಾರತ, ಅಷ್ಟಾದಶ ಪುರಾಣಗಳನ್ನು ರಚಿಸಿದ ಮಹರ್ಷಿ ವೇದವ್ಯಾಸರನ್ನು ಜಗತ್ತಿನ ಪ್ರಥಮ ಗುರು ಎಂದು ಪರಿಗಣಿಸಿ ಈ ದಿನ ಅವರಿಗೆ ನಮನ ಸಲ್ಲಿಸಲಾಗುತ್ತದೆ.

 ​ಗುರು ಪೂರ್ಣಿಮೆ ಎಂದರೆ ನಮಗೆ ತಕ್ಷಣ ನೆನಪಾಗುವುದು ಮಹರ್ಷಿ ವೇದವ್ಯಾಸರು ಅವರು ಸನಾತನ ಧರ್ಮದ ಜ್ಞಾನ ಪರಂಪರೆಗೆ ವೇದವ್ಯಾಸರು ನೀಡಿದ ಕೊಡುಗೆ ಅಪಾರ ಮತ್ತು ಅಪ್ರತಿಮ.

  ​ಅಷ್ಟಕ್ಕೂ ವೇದವ್ಯಾಸರು ಯಾರು? ಅವರ ಮಹತ್ವವೇನು? ಇಲ್ಲಿದೆ ಒಂದು ಕಿರು ನೋಟ...
​ 
 ​ವೇದವ್ಯಾಸರ ಮೂಲ ಹೆಸರು 'ಕೃಷ್ಣ ದ್ವೈಪಾಯನ'
​ಇವರು ಮಹರ್ಷಿ ಪರಾಶರ ಮತ್ತು ಸತ್ಯವತಿಯ ಪುತ್ರ.
 
  ​ಒಮ್ಮೆ ಪರಾಶರರು ಯಮುನಾ ನದಿಯನ್ನು ದಾಟಬೇಕಾದಾಗ, ದೋಣಿ ನಡೆಸುತ್ತಿದ್ದ ಸತ್ಯವತಿಯನ್ನು (ಮತ್ಸ್ಯಗಂಧಿ) ಭೇಟಿಯಾಗುತ್ತಾರೆ. 

 ತಮ್ಮ ದಿವ್ಯಜ್ಞಾನದಿಂದ ಸತ್ಯವತಿಯ ಗರ್ಭದಲ್ಲಿ ಜಗತ್ತಿಗೆ ಬೆಳಕು ನೀಡುವ ಮಹಾಪುರುಷನು ಜನ್ಮತಾಳಲಿದ್ದಾನೆ ಎಂಬುದನ್ನು ಅರಿತ ಪರಾಶರರು, ಆಕೆಯ ಸಮ್ಮತಿಯಂತೆ ಮಗುವನ್ನು ಅನುಗ್ರಹಿಸುತ್ತಾರೆ.

  ಆ ಮಗುವೇ ಮುಂದೆ ವೇದಗಳನ್ನು ವಿಂಗಡಿಸಿದ ಮಹರ್ಷಿ ವೇದವ್ಯಾಸರು.

  ​ಇವರು ಕಪ್ಪು ವರ್ಣದವರಾಗಿದ್ದು, ದ್ವೀಪವೊಂದರಲ್ಲಿ ಜನ್ಮತಾಳಿದ್ದರಿಂದ ಇವರಿಗೆ 'ಕೃಷ್ಣ ದ್ವೈಪಾಯನ' ಎಂಬ ಹೆಸರು ಬಂದಿತು.

   'ವೇದವ್ಯಾಸ' ಎಂಬ ಹೆಸರು ಹೇಗೆ ಬಂತು?...
​ಪ್ರಾಚೀನ ಕಾಲದಲ್ಲಿದ್ದ ಅಪಾರವಾದ ಜ್ಞಾನರಾಶಿಯಾದ ವೇದಗಳನ್ನು ನಾಲ್ಕು ಭಾಗಗಳಾಗಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ವಿಂಗಡಿಸಿ, ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳೀಕರಿಸಿದ ಕಾರಣಕ್ಕೆ ಇವರಿಗೆ 'ವೇದವ್ಯಾಸ' ವೇದಗಳನ್ನು ವಿಂಗಡಿಸಿದವರು ಎಂಬ ಅಭಿದಾನ ಒಲಿಯಿತು.

​   ವೇದವ್ಯಾಸರ ಮುಖ್ಯ ಕೊಡುಗೆಗಳು
​ಮಹಾಭಾರತ ರಚನೆ,
ಜಗತ್ತಿನ ಅತಿ ದೊಡ್ಡ ಕಾವ್ಯವಾದ 'ಮಹಾಭಾರತ'ವನ್ನು ರಚಿಸಿದವರು ಇವರೇ.

  ಭಗವಾನ್ ಶ್ರೀ ಗಣೇಶನ ಸಹಾಯದಿಂದ ಈ ಮಹಾಕಾವ್ಯ ಲಿಖಿತ ರೂಪ ಪಡೆಯಿತು.

#ಶ್ರೀಮದ್ಭಗವದ್ಗೀತೆ ಜಗತ್ತಿಗೆ ಜೀವನ ಧರ್ಮವನ್ನು ಬೋಧಿಸುವ ಭಗವದ್ಗೀತೆಯು ಮಹಾಭಾರತದ ಭೀಷ್ಮ ಪರ್ವದ ಭಾಗವಾಗಿದ್ದು, ವ್ಯಾಸರ ಕೊಡುಗೆಯಾಗಿದೆ.

​ 18 ಮಹಾಪುರಾಣಗಳು ಮತ್ತು ಉಪನಿಷತ್ತುಗಳ ಸಾರವಾದ 'ಬ್ರಹ್ಮಸೂತ್ರ'ಗಳನ್ನು ರಚಿಸಿ ಆಧ್ಯಾತ್ಮಿಕ ಚಿಂತನೆಗೆ ಭದ್ರ ಬಾದಾದಿ ಹಾಕಿಕೊಟ್ಟರು.

​ ಈ ಜಗತ್ತಿನಲ್ಲಿರುವ ಎಲ್ಲ ಜ್ಞಾನವೂ ಈಗಾಗಲೇ ವ್ಯಾಸರಿಂದ ಸ್ಪರ್ಶಿಸಲ್ಪಟ್ಟಿದೆ ಅಥವಾ ಹೇಳಲ್ಪಟ್ಟಿದೆ. ಜಗತ್ತಿನ ಯಾವುದೇ ತತ್ತ್ವಶಾಸ್ತ್ರವಾಗಲಿ, ಆಧ್ಯಾತ್ಮಿಕ ಚಿಂತನೆಯಾಗಲಿ ವ್ಯಾಸರ ಬರವಣಿಗೆಯ ಹೊರತಾಗಿಲ್ಲ!

  ಆಷಾಢ ಮಾಸದ ಪೂರ್ಣಿಮೆಯ ದಿನದಂದು ವೇದವ್ಯಾಸರು ಜನ್ಮತಾಳಿದರೆಂಬ ನಂಬಿಕೆಯಿದೆ ಆದ್ದರಿಂದ ಈ ದಿನವನ್ನು 'ವ್ಯಾಸ ಪೂರ್ಣಿಮೆ' ಅಥವಾ 'ಗುರು ಪೂರ್ಣಿಮೆ'ಯಾಗಿ ಜಗತ್ತಿನಾದ್ಯಂತ ಪೂಜಿಸಲಾಗುತ್ತದೆ.

  ​ಸನಾತನ ಧರ್ಮದ ಜ್ಞಾನದೀಪವನ್ನು ಬೆಳಗಿಸಿದ ಮಹರ್ಷಿ ವೇದವ್ಯಾಸರಿಗೆ ನಮ್ಮ ಶತಕೋಟಿ ಪ್ರಣಾಮಗಳು, ಗುರು ಪೂರ್ಣಿಮೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ದಿನ.

 ಇದು ನಮಗೆ ಅಜ್ಞಾನದ ಕತ್ತಲೆಯನ್ನು ದೂರಗೊಳಿಸಿ, ಜ್ಞಾನದ ಬೆಳಕನ್ನು ತೋರುವ ಪ್ರತಿಯೊಬ್ಬ ಗುರುವಿಗೆ ಕೃತಜ್ಞತೆ ಮತ್ತು ಗೌರವವನ್ನು ಸಲ್ಲಿಸುವ ವಿಶೇಷ ಪರ್ವಕಾಲ.

 ​ಗುರು ಪೂರ್ಣಿಮೆಯ ಮಹತ್ವ
​ಗುರು ಎಂದರೆ ಯಾರು?...
 'ಗು' ಎಂದರೆ ಅಂಧಕಾರ (ಅಜ್ಞಾನ), 'ರು' ಎಂದರೆ ಅದನ್ನು ಹೋಗಲಾಡಿಸುವವನು. ಜೀವನದ ಸರಿಯಾದ ಹಾದಿಯನ್ನು ತೋರಿಸುವ ಪ್ರತಿಯೊಬ್ಬ ಮಾರ್ಗದರ್ಶಕನೂ ಗುರುವೇ.

  ಬೌದ್ಧ ಧರ್ಮೀಯರ ನಂಬಿಕೆಯಂತೆ ಗೌತಮ ಬುದ್ಧನು ಜ್ಞಾನೋದಯದ ನಂತರ ತನ್ನ ಮೊದಲ ಐದು ಜನ ಶಿಷ್ಯರಿಗೆ ಸಾರನಾಥದಲ್ಲಿ ಮೊದಲ ಉಪದೇಶ (ಧರ್ಮಚಕ್ರ ಪ್ರವರ್ತನ) ನೀಡಿದ್ದು ಇದೇ ದಿನ.

   ​ಜೈನ ಪರಂಪರೆಯಲ್ಲಿ, ಮಹಾವೀರರು ತಮ್ಮ ಮೊದಲ ಶಿಷ್ಯರಾದ ಗೌತಮ ಗಂಧರರಿಗೆ ಜ್ಞಾನ ಬೋಧನೆ ಮಾಡಿದ ದಿನವಿದು.

 ಶಿಷ್ಯರು ತಮ್ಮ ಗುರುಗಳನ್ನು ಭೇಟಿ ಮಾಡಿ, ಪಾದಪೂಜೆ ನೆರವೇರಿಸಿ, ಅವರ ಆಶೀರ್ವಾದ ಪಡೆಯುತ್ತಾರೆ.

​  ಮಠ ಮತ್ತು ಆಶ್ರಮಗಳಲ್ಲಿ ವಿಶೇಷ ಪೂಜೆ, ಹೋಮ, ವೇದ ಪಾರಾಯಣ ಹಾಗೂ ಭಜನೆಗಳು ಜರುಗುತ್ತವೆ.

​#Vedavyasa #GuruPurnima #SanatanaDharma #IndianHistory #Mahabharata #SpiritualWisdom #KannadaPost

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...