ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!...
ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.
ಅನೇಕ ಗೆಳೆಯರು ಈ ವರ್ಷದ ಶ್ರಾವಣ ಮಾಸದ ನಿಮ್ಮ ಹೊಸ ಪ್ರಯೋಗ ಏನು? ಅಂತ ಕೇಳುತ್ತಿದ್ದಾರೆ.
ಈ ವರ್ಷ ಶ್ರಾವಣ ಮಾಸ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭ ಆಯಿತು ಈ ವರ್ಷ ನನ್ನ ಹೊಸ ಪ್ರಯೋಗ #ಬ್ರಾಹ್ಮಿ_ಮಹೂರ್ತದ_ಸಮಯದ ಸದುಪಯೋಗದ ದ ಕೆಲಸ ಪ್ರಾರಂಬಿಸಿ ಇವತ್ತಿಗೆ 25 ಆಗಸ್ಟ್ ಗೆ 13 ದಿನ ಆಯಿತು.
ಬೆಳಿಗ್ಗೆ 3.30 ಕ್ಕೆ ಏಳುವುದು, ಸ್ನಾನ ಮುಗಿಸಿ ಪೂಜೆ - ಮಂಗಲಾರತಿ ನಂತರ ಸಿದ್ದ ಸಮಾದಿಯೋಗದ ವಿಭಾಗಿಯಾ ಪ್ರಾಣಯಾಮ,ಮುದ್ರಾ ಪ್ರಾಣ ಯಾಮ_ನಾಡಿಶೋಧನಾ / ಸುಖ ಪ್ರಾಣಯಾಮ - ಕಪಾಲಭಾತಿ - 15 ನಿಮಿಷದ ಧ್ಯಾನ ನಂತರ ಓದು ಬರಹ, ಶಂಭೂ ರಾಮನ ಜೊತೆ ಒಂದು ಗಂಟೆ ವಾಕಿಂಗ್.
ಒಂದು ಮುಷ್ಟಿ ಮೆಂತೆ -ಹೆಸರುಕಾಳಿನ ಮೊಳಕೆ, 8-10 ಒಣ ಖರ್ಜೂರ ಮತ್ತು ಒಂದು ಕಪ್ ಹಾರ್ಲಿಕ್ಸ್ ಕುಡಿಯುತ್ತೇನೆ ಯಾಕೆಂದರೆ ಕಾಫಿ ಟೀ ಈ ತಿಂಗಳು ಕುಡಿಯುವುದಿಲ್ಲ.
ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ, ರಾತ್ರಿ ಊಟ ತ್ಯಜಿಸಿ ಅನೇಕ ವರ್ಷ ಆಯಿತು ಅದು ಮುಂದುವರಿದಿದೆ.
ಬೆಳಿಗ್ಗೆ ಒಂದು ಇಡ್ಲಿ + ಒಂದು ಸಣ್ಣ ಕಪ್ ಪಲಾವ್, ಮಧ್ಯಾಹ್ನ 3 ರಿಂದ 4 ರ ಒಳಗೆ ಅನ್ನ ತರಕಾರಿ ಸಾಂಬಾರ್ ಪಲ್ಯ ಸೇವಿಸುತ್ತೇನೆ ಇದು ಅನೇಕ ವರ್ಷದ ಅಭ್ಯಾಸ ಆಗಿದೆ.
ಬೆಳಿಗ್ಗಿನ ಬ್ರಾಹ್ಮಿ ಮಹೂರ್ತದಲ್ಲಿ ಏಳ ಬೇಕೆಂದು ಅನೇಕ ಬಾರಿ ತೀರ್ಮಾನಿಸಿದ್ದರು ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ, ಇತ್ತೀಚಿಗೆ ಇಸ್ಕಾನ್ ಕೃಷ್ಣ ದೇವಾಲಯದವರು ಸಂಕೀರ್ತನೆಗೆ ನಮ್ಮ ಊರಿಗೆ ಬಂದವರಿಗೆ ನಮ್ಮ ಶ್ರೀಕೃಷ್ಣಸರಸ ಕನ್ವೆನ್ಷನ್ ಹಾಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದೆ ಅವರ ಆಹ್ವಾನದ ಮೇಲೆ ಬೆಳಗಿನ ಅವರ ಬ್ರಾಹ್ಮಿ ಮುಹೂರ್ತದ ಮಂಗಲಾರತಿಯಲ್ಲಿ ಭಾಗವಹಿಸಿದ್ದು ಪ್ರೇರಣೆ ಆಗಿ ಪ್ರಾರಂಭ ಮಾಡಿದ್ದೇನೆ ಅದರಿಂದ ನನಗೆ ಏನು ಲಾಭ ಎಂದು ಮುಂದಿನ ಲೇಖನದಲ್ಲಿ ತಿಳು ಸುತ್ತೇನೆ.
ಈ ವರ್ಷದ 2026ರ ಶ್ರಾವಣ ಮಾಸ ಹೊಸ ಪ್ರಯೋಗಕ್ಕೆ ಬಳಸುತ್ತಿದ್ದೇನೆ, ಬ್ರಾಹ್ಮಿ ಮಹೂರ್ತದಲ್ಲಿ ಏಳುವುದು ಗುರುಕುಲ ಪದ್ಧತಿ ಆಗಿತ್ತು ಇದನ್ನು ವಿಶ್ವದ ಎಲ್ಲಾ ಧರ್ಮಗಳು ಪಾಲಿಸುತ್ತಿದೆ ಇದಕ್ಕೆ ಆಧ್ಯಾತ್ಮಿಕ ಕಾರಣ ಆದರೂ ಅದಕ್ಕೆ ವೈಜ್ಞಾನಿಕ ಸಂಶೋದನೆಗಳೂ ಒಪ್ಪಿ ಕೊಂಡಿದೆ ಅಂದರೆ ಸೂರ್ಯೋದಯದ ಮುಂಚಿನ ಪರಿಸರದಲ್ಲಿ ವಿಶೇಷವಿದೆ.
ನನ್ನ ಸಮಸ್ಯೆ ಬಗೆ ಹರಿಯಲಿ ಅವಾಗ ನೀವು ಹೇಳಿದ್ದೆಲ್ಲ ಶುರು ಮಾಡುತ್ತೇನೆ ಅಂತ ಕೆಲವರು, ಇನ್ನು ಕೆಲವರು ಇನ್ನೊಂದು ನಾಲ್ಕು ವರ್ಷ ಕಾಯಿರಿ ನಾನು ಹಿಮಾಲಯಕ್ಕೆ ಹೋಗಿ ಇದನ್ನೆಲ್ಲ ಶುರು ಮಾಡುತ್ತೇನೆ ಅನ್ನುವ ಗೆಳೆಯರಿಗೆ ಹೇಗೆ ಹೇಳಲಿ "ಕಳೆದ ಸಮಯ ಮತ್ತೆ ಬರುವುದಿಲ್ಲ" ಅಂತ.
ಮನೆಯಲ್ಲಿ ಪರಸ್ಪರ ನಂಬಿಕೆ, ಕ್ಷಮೆ ಮತ್ತು ಪ್ರೀತಿ ನೆಲೆಸಿದಾಗ, ಆ ನಾಲ್ಕು ಗೋಡೆಗಳ ನಡುವೆಯೇ ಕೈಲಾಸ ಸೃಷ್ಟಿಯಾಗುತ್ತದೆ.
ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಲು ಸಾಧ್ಯ ಅಂತ ನಾನು ಅನೇಕ ಬಾರಿ ಬರೆದಿದ್ದೇನೆ ಅದರಂತೆ ನಡೆದಿದ್ದೇನೆ.
ಆಧ್ಯಾತ್ಮಿಕ ಸಾಧನೆ, ಮನಃಶಾಂತಿ ಅಂದ ತಕ್ಷಣ ಹಲವರಿಗೆ ನೆನಪಾಗುವುದು ಹಿಮಾಲಯ ಆದ್ದರಿಂದ ಅನೇಕರು ಇನ್ನೊಂದು ನಾಲ್ಕು ವರ್ಷ ಅಷ್ಟೇ ಆ ಮೇಲೆ ನಾನು ಹಿಮಾಲಯಕ್ಕೆ ಹೋಗುತ್ತೇನೆ ಅಂತ ಅನ್ನುತ್ತಿದ್ದವರು ನಾಕಾರು ದಶಕ ಆದರೂ ಇಲ್ಲೇ ಇದ್ದಾರೆ.
ಜವಾಬ್ದಾರಿಗಳಿಂದ ಓಡಿಹೋಗುವುದು ಆಧ್ಯಾತ್ಮಿಕತೆಯಲ್ಲ,ಇರುವ ಜಾಗದಲ್ಲೇ ಪ್ರಶಾಂತತೆಯನ್ನು ಕಂಡುಕೊಳ್ಳುವುದು ನಿಜವಾದ ಸಾಧನೆ.
ಹಿಮಾಲಯ ಕೇವಲ ಒಂದು ಸ್ಥಳವಲ್ಲ ಅದು ನಿಶ್ಚಲತೆಯ ಸಂಕೇತ ಆ ನಿಶ್ಚಲತೆಯನ್ನು ನಮ್ಮ ಮನೆಯಲ್ಲೇ ತರಲು ಸಾಧ್ಯವಿಲ್ಲವೇ?...
ಹಿಮಾಲಯದ ಗುಹೆಯಲ್ಲಿ ಯಾರೂ ನಮ್ಮನ್ನು ಪರೀಕ್ಷಿಸಲು ಇರುವುದಿಲ್ಲ ಆದರೆ ಮನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ಕೋಪ ಬಿಟ್ಟು ತಾಳ್ಮೆಯಿಂದ ಇರುವುದು ನಿಜವಾದ ತಪಸ್ಸು.
ಕುಟುಂಬದವರೊಂದಿಗೆ ಕರುಣೆ, ಕೃತಜ್ಞತೆ ಮತ್ತು ನಗುವಿನಿಂದ ಬದುಕುವುದು ಯಾವುದೇ ಕಠಿಣ ಜಪ-ತಪಕ್ಕಿಂತ ದೊಡ್ಡ ಸಾಧನೆ.
ಕರ್ತವ್ಯವೇ ಯೋಗ.
ದೈನಂದಿನ ಕೆಲಸಗಳನ್ನು, ಜವಾಬ್ದಾರಿಗಳನ್ನು ಯಾವುದೇ ಅಪೇಕ್ಷೆಯಿಲ್ಲದೆ ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ಕರ್ಮಯೋಗ.
ಹೊರಗಿನ ಪ್ರಪಂಚ ಅಥವಾ ಮನೆಯ ಗದ್ದಲದ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದನ್ನು ಕಲಿತರೆ ನಾವು ಕಾಲಿಡುವ ಜಾಗವೆಲ್ಲವೂ ತೀರ್ಥಕ್ಷೇತ್ರವೇ.
ಮನೆಯಲ್ಲಿ ಪರಸ್ಪರ ನಂಬಿಕೆ, ಕ್ಷಮೆ ಮತ್ತು ಪ್ರೀತಿ ನೆಲೆಸಿದಾಗ, ಆ ನಾಲ್ಕು ಗೋಡೆಗಳ ನಡುವೆಯೇ ಕೈಲಾಸ ಸೃಷ್ಟಿಯಾಗುತ್ತದೆ.
ಮೊದಲು ನಮ್ಮ ಮನಸ್ಸನ್ನು ಮತ್ತು ಮನೆಯನ್ನು ಪರಿವರ್ತಿಸೋಣ,ಶಾಂತಿ ತಾನಾಗಿಯೇ ಒಲಿಯುತ್ತದೆ.
#siddasamadiyoga #meditation #brahmimahurtha #shravanamasa
#ಆಧ್ಯಾತ್ಮ #ಜೀವನಪಾಠ #ಮನಃಶಾಂತಿ #ಮನೆ #ಸಕಾರಾತ್ಮಕಚಿಂತನೆ #KannadaQuotes #LifeLessons
Comments
Post a Comment