ಸಾಗರನ_ವಿಧಾನಸಭಾ_ಕ್ಷೇತ್ರಕ್ಕೆ_ಮಂತ್ರಿ_ಸ್ಥಾನ_ಸಿಗಲಿ. ಶಾಸಕರಾದ #ಗೋಪಾಲಕೃಷ್ಣಬೇಳೂರು ನೂತನ ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಲಿ ಎಂದು ಹಾರೈಸುತ್ತೇನೆ. ನಮ್ಮ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ದೊರೆತರೆ ಈ ಮೂಲಕ ನಮ್ಮ ಸಾಗರ ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ ಆದ್ದರಿಂದ ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರ ಪಕ್ಷದ ಸರ್ಕಾರದಲ್ಲಿ ಮಂತ್ರಿ ಆಗಲಿ ಎಂದು ಬಯಸುತ್ತೇನೆ. ನಮ್ಮ ಸಾಗರ ವಿದಾನ ಸಭಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಮಂತ್ರಿ - ಸ್ಪೀಕರ್ ಆಗಿದ್ದರು, ನಮ್ಮ ಆನಂದಪುರಂನವರೇ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ಮತ್ತು ನಮ್ಮ ತಾಲ್ಲೂಕಿನವ ರೇ ಆಗಿದ್ದ ಕೆ.ಹೆಚ್. ಶ್ರೀನಿವಾಸರು ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರೂ ಮಂತ್ರಿ ಆಗಿರಲಿಲ್ಲ ಇವರುಗಳು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆದಾಗ ಮಂತ್ರಿ ಆಗಿದ್ದು ಇತಿಹಾಸ. ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಬಂಗಾರಪ್ಪ, ಜೆ. ಹೆಚ್. ಪಟೇಲರು ಮತ್ತು ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು, ಶಿಕಾರಿಪುರದ ಯಂಕಟಪ್ಪ, ಬಸವಣ್ಯಪ್ಪ , ಕಿಮ್ಮನೆರತ್ನಾಕರ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಮತ್ತು ಮಧು ಬಂಗಾರಪ್ಪ ಮಂತ್ರಿಗಳಾಗಿದ್ದವರು. ನಮ್ಮ ಸಾಗರದ ಮೂವರು ಅಳಿಯಂದಿರು ತಮಕೂರಿನ ನಾಗೇಶ್, ಕಾರ್ಕಳದ ಸುನಿಲ್ ಕುಮಾರ್, ಸಾಗರ ತಾಲೂಕಿನ ಸೊಸೆ ಚಿತ...