Skip to main content

4156.ಕಲಬೆರಕೆ_ಪ್ರಪಂಚಹಳ್ಳಿಗಳಲ್ಲಿ_ಯುವಕರು_ಹಾರ್ಟ್_ಅಟ್ಯಾಕ್_ಕಿಡ್ನಿ_ಪೈಲೂರ್_ಗೆ_ಕಾರಣವಾಗಿರುವಡ್ರಗ್_ಮಿಶ್ರಿತ_ಗಾಂಜ_ಕಳಪೆ_ಮಧ್ಯ_ಕಳಪೆ_ಚಹಾಪುಡಿ.


ಕಲಬೆರಕೆ_ಪ್ರಪಂಚ
ಹಳ್ಳಿಗಳಲ್ಲಿ_ಯುವಕರು_ಹಾರ್ಟ್_ಅಟ್ಯಾಕ್_ಕಿಡ್ನಿ_ಪೈಲೂರ್_ಗೆ_ಕಾರಣವಾಗಿರುವ
ಡ್ರಗ್_ಮಿಶ್ರಿತ_ಗಾಂಜ_ಕಳಪೆ_ಮಧ್ಯ_ಕಳಪೆ_ಚಹಾಪುಡಿ.

  ನಿಮ್ಮ ಸುತ್ತ ಮುತ್ತಲಿನಲ್ಲಿ ಇಂತಹ ದುರಂತಗಳು ನಡೆದಿರಬಹುದು ಇದಕ್ಕೆಲ್ಲ ಕಾರಣ ಏನು ಎಂದು ಯೋಚಿಸಿದ್ದೀರಾ? ....

  ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯೇ ಇರದ ಯುವಕರು ದಿಡೀರ್ ಹಾರ್ಟ್ ಅಟ್ಯಾಕ್ ನಿಂದ ಮರಣ ಹೊಂದುವುದು, ಮಧ್ಯಪಾನ ಮಾಡದವರಿಗೂ ಕಿಡ್ನಿ ಪೈಲ್ಯೂರ್ ಆಗಿ ಡಯಾಲಿಸಿಸ್ ಮಾಡುವುದು ಹೆಚ್ಚಾಗುತ್ತಿದೆ.

  ಇದಕ್ಕೆಲ್ಲ ಕಾರಣ ಮಾದಕ ದ್ರವ್ಯ ಮಿಶ್ರ ಮಾಡಿದ ಗಾಂಜಾ, ಕಳಪೆ ಚಹಾ ಪುಡಿಯಿಂದ ತಯಾರಿಸುವ ಟೀಯಿಂದ ಮತ್ತು ನಕಲಿ ಕಳಪೆ ಮಧ್ಯಗಳು ಕಾರಣ ಆಗುತ್ತಿದೆ.

  ಇಂತಹ ವ್ಯಸನಗಳಿoದ ತಕ್ಷಣ ಹೊರ ಬರದಿದ್ದರೆ ಅಪಾಯ ಕೂಡ ಹೆಚ್ಚು, ಮೊದಲೆಲ್ಲ ಹಳ್ಳಿಗಳಲ್ಲಿ ನೈಜಗಾಂಜಾ ಸೇವಿಸಿದವರು ಭಯಪಡುವ ಕಲ್ಪನಾ ಲೋಕಕ್ಕೆ ಹೋಗುತ್ತಿದ್ದರು ಆದರೆ ಈಗ ಅದೇ ಗಾಂಜಾಕ್ಕೆ ಏನೇನೆಲ್ಲಾ ಕಲಬೆರಕೆ ಮಾಡುತ್ತಾರೆ ನೋಡಿ...ಅದರಿಂದ ಹೃದಯವೇ ಅಲ್ಲೋಲ ಕಲ್ಲೋಲವಾಗಿ ಜೀವವೇ ಕಳೆದು ಕೊಳ್ಳುತ್ತಾರೆ.

   ಕಲಬೆರಕೆ ಗಾಂಜಾ ಸೇವನೆಯಿಂದ ಹೃದಯ ಸ್ತಂಭನ (Cardiac Arrest) ಮತ್ತು ಹೃದಯಾಘಾತ (Heart Attack) ಸಂಭವಿಸುವ ಸಾಧ್ಯತೆ ಅತ್ಯಂತ ಹೆಚ್ಚು.

  ​ಸಾಮಾನ್ಯ ಗಾಂಜಾವೇ ಹೃದಯದ ಬಡಿತವನ್ನು (Heart Rate) ತೀವ್ರವಾಗಿ ಹೆಚ್ಚಿಸುತ್ತದೆ ಇನ್ನು ಅದರಲ್ಲಿ ಅಪಾಯಕಾರಿ ರಾಸಾಯನಿಕಗಳು ಬೆರೆತಾಗ ಹೃದಯದ ಮೇಲಾಗುವ ಹಾನಿ ದುಪ್ಪಟ್ಟಾಗುತ್ತದೆ.

  ​ಅನಿಯಮಿತ ಹೃದಯ ಬಡಿತ (Arrhythmia): ಗಾಂಜಾದಲ್ಲಿ ಬೆರೆಸಲಾಗುವ ಸಿಂಥೆಟಿಕ್ ಕೆಮಿಕಲ್ಸ್ (Synthetic Cannabinoids) ಹೃದಯದ ವಿದ್ಯುತ್ ತರಂಗಗಳ ಸಮತೋಲನವನ್ನು ತಪ್ಪಿಸುತ್ತವೆ.

 ಇದರಿಂದ ಹೃದಯ ಅತಿಯಾದ ವೇಗವಾಗಿ ಅಥವಾ ಅಸಹಜವಾಗಿ ಬಡಿಯಲು ಶುರುವಾಗಿ ಏಕಾಏಕಿ ನಿಂತುಹೋಗಬಹುದು (Cardiac Arrest).

 ​ರಕ್ತನಾಳಗಳ ಸಂಕೋಚನ ಉಂಟಾಗಲು ಅದಕ್ಕೆ ಬೆರೆಸುವ
 ಇಲಿ ಪಾಷಾಣ, ಕೀಟನಾಶಕಗಳು ಮತ್ತು ಇತರ ಸಿಂಥೆಟಿಕ್ ರಾಸಾಯನಿಕಗಳು ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕೊರೊನರಿ ರಕ್ತನಾಳಗಳನ್ನು ದಿಢೀರನೆ ಕಿರಿದಾಗಿಸುತ್ತವೆ, ಇದರಿಂದ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಸಿಗದೆ ಸ್ತಂಭನ ಉಂಟಾಗುತ್ತದೆ.

  ​ರಕ್ತದೊತ್ತಡದಲ್ಲಿ ತೀವ್ರ ಏರಿಳಿತಕ್ಕೆ ಕಾರಣ ಆಗುವ ರಾಸಾಯನಿಕಯುಕ್ತ ಗಾಂಜಾ ಇದನ್ನು ಸೇದಿದ ತಕ್ಷಣ ರಕ್ತದೊತ್ತಡ (BP) ಗಗನಕ್ಕೇರಬಹುದು ಅಥವಾ ದಿಢೀರನೆ ಕುಸಿದು ಹೋಗಬಹುದು ಇದು ಹೃದಯ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಹೇರುತ್ತದೆ.

​ ಧೂಮಪಾನದ ಜೊತೆಗೆ ಬೆರೆತಿರುವ ವಿಷಕಾರಿ ಅನಿಲಗಳು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡಿ, ಹೃದಯದ ಕಾರ್ಯಕ್ಷಮತೆಯನ್ನು ಕ್ಷಣಾರ್ಧದಲ್ಲಿ ಕುಗ್ಗಿಸುತ್ತವೆ.

 ​ಯಾವುದೇ ಹಿಂದಿನ ಹೃದ್ರೋಗದ ಇತಿಹಾಸವಿಲ್ಲದ ಆರೋಗ್ಯವಂತ ಯುವಕರಲ್ಲೂ ಸಹ ಈ ರೀತಿಯ ಕಲಬೆರಕೆ ಮಾದಕ ದ್ರವ್ಯ ಸೇವನೆಯ ನಂತರ ಮೊದಲ ಬಾರಿಯಲ್ಲೇ ಹೃದಯ ಸ್ತಂಭನ ಉಂಟಾಗಿ ಪ್ರಾಣ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ.

  ಕಾನೂನುಬಾಹಿರವಾಗಿ ಮಾರಾಟವಾಗುವ ಗಾಂಜಾದಲ್ಲಿ (Ganja/Marijuana) ಹೆಚ್ಚು ಲಾಭ ಗಳಿಸಲು, ತೂಕ ಹೆಚ್ಚಿಸಲು ಮತ್ತು ಸೇವಿಸುವವರಲ್ಲಿ ತೀವ್ರ ವ್ಯಸನ (addiction) ಉಂಟುಮಾಡಲು ಹಲವು ಅಪಾಯಕಾರಿ ರಾಸಾಯನಿಕಗಳು ಹಾಗೂ ಇತರ ಮಾದಕ ದ್ರವ್ಯಗಳನ್ನು ಬೆರೆಸಲಾಗುತ್ತದೆ.

 ​ಸಾಮಾನ್ಯವಾಗಿ ಗಾಂಜಾದ ಜೊತೆ ಮಿಶ್ರಣ ಮಾಡುವ ಮುಖ್ಯ ಪದಾರ್ಥಗಳು ​ಸಿಂಥೆಟಿಕ್ ಕ್ಯಾನಬಿನಾಯ್ಡ್ಸ (Synthetic Cannabinoids / K2 / Spice),ನೈಸರ್ಗಿಕ ಗಾಂಜಾದ ಪರಿಣಾಮವನ್ನು ಕೃತಕವಾಗಿ ತೀವ್ರಗೊಳಿಸಲು ಸಿಂಪಡಿಸುವ ಲ್ಯಾಬ್-ನಿರ್ಮಿತ ಅಪಾಯಕಾರಿ ರಾಸಾಯನಿಕಗಳು.

 ​ಅಫೀಮು / ಹೆರಾಯಿನ್ ಮತ್ತು ಬ್ರೌನ್ ಶುಗರ್ (Opioids / Brown Sugar) ಗಳನ್ನೂ ಮಿಶ್ರ ಮಾಡುತ್ತಾರೆ,ತೀವ್ರವಾದ ಅಮಲು ಮತ್ತು ವ್ಯಸನವನ್ನು ಉಂಟುಮಾಡಲು ಕಡಿಮೆ ಗುಣಮಟ್ಟದ ಅಫೀಮಿನ ಅಂಶ ಅಥವಾ ಬ್ರೌನ್ ಶುಗರ್ ದ್ರಾವಣವನ್ನು ಸಿಂಪಡಿಸುತ್ತಾರೆ.

 ​ತಂಬಾಕು ಮತ್ತು ನಿಕೋಟಿನ್ ಸಾರವನ್ನು ಗಾಂಜಾದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಧೂಮಪಾನದ ತೀವ್ರತೆ ಹೆಚ್ಚಿಸಲು ಬೆರೆಸಲಾಗುತ್ತದೆ.

  ​ಇಲಿ ಪಾಷಾಣ (Rat Poison / Strychnine) ಗಳನ್ನು ಗಾಂಜಾ ಹೆಚ್ಚು ಹೊತ್ತು ಹಸಿಯಾಗಿ ಕಾಣಲು ಮತ್ತು ಅದರ ಬಣ್ಣ-ವಾಸನೆ ಬದಲಾಯಿಸಲು ಬಳಸುತ್ತಾರೆ ಇದರ ಜೊತೆ ಕೆಲವೊಮ್ಮೆ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಾರೆ.

  ಶೂ ಪಾಲಿಶ್, ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರಗಳು ಗಾಂಜಾದಲ್ಲಿ ಸೇರಿಸುತ್ತಾರೆ, ಹಳೆಯ ಅಥವಾ ಹಾಳಾದ ಗಾಂಜಾಕ್ಕೆ ಬಲವಾದ ವಾಸನೆ, ಕಪ್ಪು ಬಣ್ಣ ಮತ್ತು ತೀಕ್ಷ್ಣತೆ ತರಲು ಇವುಗಳನ್ನು ಲೇಪಿಸುತ್ತಾರೆ.

 ​ಫಾರ್ಮಾಸ್ಯುಟಿಕಲ್ ಮಾತ್ರೆಗಳ ಪುಡಿ (Sedatives / Sleeping pills) ಗಳೂ ಮಿಶ್ರ ಮಾಡುತ್ತಾರೆ,ಅಲ್ಪ್ರಾಜೋಲಮ್ (Alprazolam), ಡಯಾಜೆಪಾಮ್ ನಂತಹ ನಿದ್ರೆ ಮಾತ್ರೆಗಳ ಪುಡಿಯನ್ನು ಬೆರೆಸಿ ತೂಕ ಮತ್ತು ಮಂಪರು ಹೆಚ್ಚಿಸುತ್ತಾರೆ.

  ​ಈ ರೀತಿಯ ಕಲಬೆರಕೆ ಗಾಂಜಾ ಸೇವನೆಯು ಶ್ವಾಸಕೋಶದ ಹಾನಿ, ತೀವ್ರ ಮಾನಸಿಕ ಅಸ್ವಸ್ಥತೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಜೀವಕ್ಕೆ ತಕ್ಷಣದ ಅಪಾಯವನ್ನುಂಟುಮಾಡುತ್ತದೆ.

    ನಿಮ್ಮ ಸುತ್ತ ಮುತ್ತದಲ್ಲಿ ಗಾಂಜಾ ವ್ಯಸನಿಗಳಿದ್ದರೆ ಅವರಿಗೆ ತಿಳಿ ಹೇಳಿ ಇದು ನೈಸರ್ಗಿಕ ಗಾಂಜಾ ಆಗಿಲ್ಲ ಇದು ಸಂಪೂರ್ಣ ಮಾದಕ ವಸ್ತುವಾದ ಡ್ರಗ್ಸ್ ಆಗಿದೆ ಇದರಿಂದ ಜೀವಹಾನಿ ಸಾಧ್ಯತೆ ಹೆಚ್ಚು ಎಂದು ಅವರಿಗೆ #ಆಪ್ತ_ಸಮಾಲೋಚನೆ ನಡೆಸಿ ಅವರ ಪೋಷಕರಿಗೂ ಮನನ ಮಾಡಿ.

   ಈ ಪೋಸ್ಟ್ ಹೆಚ್ಚು ಜನರಿಗೆ ಶೇರ್ ಮಾಡಿ #ಜನಜಾಗೃತಿ ಮಾಡಲು ವಿನಂತಿ.

#HeartAttack #cardiacarrest #DrugSmuggling 
#sedative #adultration #adiction #YouthVoice

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...