ಜಲ ತಜ್ಞ, ಅದುನಿಕ ಭಗಿರಥ, ಪರಿಸರ ಪ್ರೇಮಿ ಎಂದೆಲ್ಲ ಜನರಿಂದ ಕರೆಯುವ ಲೇಖಕ ಶಿವಾನಂದ ಕಳವೆ ಅವರ ಮಧ್ಯ ಘಟ್ಟ ಕಾದಂಬರಿ ವಿಶೇಷ ಮತ್ತು ವಿಸ್ಮಯವಾದ ಪರಿಸರದ ಜೊತೆಯ ನಿಜ ಕಥೆ
#ಶಿವಾನಂದ_ಕಳವೆ_ಅವರ_ಮದ್ಯಘಟ್ಟ_ಓದುಗರನ್ನ_ಯೋಚಿಸುವಂತೆ_ಮಾಡುವ_ಕಾದಂಬರಿ #ಪರಿಸರದ_ಮೇಲೆ_ನಾಗರೀಕತೆಯ_ಪ್ರಬಾವ_ಮತ್ತು_ಪರಿಣಾಮಗಳನ್ನ #ಕಳವೆಯವರ_ಸೂಕ್ಷ್ಮ_ದೃಷ್ಟಿಕೋನದಲ್ಲಿ_ಸೆರೆಹಿಡಿದು_ಹೆಣೆದ_ನಿಜಕಥೆ_ಕಾದಂಬರಿ ಈ ಕಾದಂಬರಿ ಮೊದಲ ಮುದ್ರಣ ಆಗಸ್ಟ್ 2020ಕ್ಕೆ ಆಗಿದ್ದು ನಾಲ್ಕು ತಿಂಗಳಲ್ಲಿ ಮೂರು ಮುದ್ರಣ ಆಗಿದೆ ಅಂದರೆ ಈ ಕಾದಂಬರಿಯ ಜನಪ್ರಿಯತೆ ಅಥ೯ವಾದೀತು. ಕಾದಂಬರಿ ಕಥಾ ನಾಯಕಿ ಭೂದೇವಿದೂರದ ಕೇರಳದಿಂದ ತನ್ನ ಮಗ ವಾಸುದೇವ ಮತ್ತು ಕಂಕಳ ಕೂಸು ದೇವಕಿ ಜೊತೆ ತನ್ನ ಮಗಳ ಮನೆ ಮಧ್ಯ ಘಟ್ಟದ ಗೋಪಯ್ಯ ಹೆಗ್ಗಡೆ (ಅಳಿಯ) ಮನೆಗೆ ಮಂಗಳೂರು ರೈಲು ನಿಲ್ದಾಣದಲ್ಲಿ ತಲುಪಿದಾಗ ತನ್ನ ಹಣ ಮತ್ತು ಬಟ್ಟೆಯ ಬ್ಯಾಗ್ ಕಳೆದುಕೊಂಡು ಮಂಗಳೂರಿಂದ ಕುಮಟಾ ಮಾಗ೯ವಾಗಿ ಸಾರಿಗೆ ಸಂಪರ್ಕ ಇಲ್ಲದ ಕಾಲದಲ್ಲಿ ಮಲೆಯಾಳಂ ಬಿಟ್ಟು ಬೇರೆ ಭಾಷೆ ಬರದ ಹೆಣ್ಣು ಹತ್ತು ದಿನ ನಡೆದು 9 ನದಿ ದಾಟಿ ಸಿಸಿ೯ ತಲುಪಿ ಅಲ್ಲಿಂದ ಮಧ್ಯ ಘಟ್ಟ ಸೇರಿ ಇಲ್ಲೇ ನೆಲೆ ನಿಲ್ಲುವ ನಿಜ ಜೀವನ ಕಥೆಯನ್ನ ಸ್ವಾರಸ್ಯವಾಗಿ ಕಾಲ ಮಾನದ ಅನೇಕ ಬದಲಾವಣೆ, ಅಭಿವೃದ್ಧಿ ಜೊತೆಗೆ ಪರಿಸರದ ಜ್ಞಾನದೊಂದಿಗೆ ಬರೆದಿದ್ದಾರೆ. ಈ ಕಾದಂಬರಿ ಮೂರನೇ ಮುದ್ರಣದ ಸಂದಭ೯ದಲ್ಲಿ ಈ ಕಾದಂಬರಿ ಓದಿದವರು ಸಾಂಕೇತಿಕವಾಗಿ ಯಾಣ ಸಮೀಪದ ಮಧ್ಯ ಘಟ್ಟಕ್ಕೆ ಕೆಲವು ಕಿ.ಮಿ ಭೂದೇವಿ ನಡೆದ ಮಾರ್ಗದಲ್ಲಿ ನಡೆದು ಮಧ್ಯ ಘಟ್ಟ ತಲುಪಿ ಈ ಕಾದಂಬರಿ ಬಗ್ಗೆ ಚಚೆ೯ ಮಾಡ...