Skip to main content

Posts

Showing posts from 2018

#ಮುಂದಿನ ದಿನದಲ್ಲಿ ವ್ಯಂಗ್ಯ ಚಿತ್ರದಲ್ಲಿ ಹೆಸರು ಮಾಡಲಿರುವ ಉದಯೋನ್ಮುಖ ಕಲಾವಿದ ನಿರಂಜನ ಕುಗ್ವೆ#

# ಪ್ರಖ್ಯಾತ ವ್ಯಂಗ್ಯ ಚಿತ್ರಕಾರ ಮತ್ತು ಹೋರಾಟಗಾರ ನಿರ೦ಜನ ಕುಗ್ವೆ.#   ನಾನು ಇವರ ಚಿತ್ರ ಮತ್ತು ಹೋರಾಟಗಳನ್ನ ನೋಡಿ ಇವರ ಅಭಿಮಾನಿ ಆಗಿದ್ದೆ ಆದರೆ ಇವರ ನನ್ನ ಬೇಟಿ ಇವತ್ತಿನವರೆಗೆ ಆಗಿರಲಿಲ್ಲ, ಇವತ್ತು ಸಂಜೆ ಒಂದು ಕೈಯಲ್ಲಿ ಕೆಂಪು ಹೆಲ್ಮೆಟ್ ಹಿಡಿದು ಕೊಂಡು, ಬಗಲಲ್ಲಿ ಚೀಲ ಏರಿಸಿಕೊಂಡು ದಿಡೀರ್ ಆಗಿ ನನ್ನ ಆಪೀಸಿಗೆ ಬಂದು ನನ್ನ ಗುರುತು ಸಿಕ್ಕಿತಾ? ಎಂಬ ಪ್ರಶ್ನೆ ಮಾಡಿದಾಗ ತಕ್ಷಣ ನಿರಂಜನ ಕುಗ್ವೆ ಅಂದೆ.    ಇವರು ಸಾಗರ ತಾಲ್ಲೂಕಿನ ಕುಗ್ವೆಯವರು, ಚಿತ್ರಕಲಾ ಶಿಕ್ಷಕರಾಗಿ ಭದ್ರಾವತಿ ತಾಲ್ಲೂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇತ್ತೀಚಿಗೆ ಇವರ ವ್ಯಂಗ್ಯಚಿತ್ರ ಹವ್ಯಕ ಸಮಾಜದಲ್ಲಿ ಭಾರೀ ಹವಾ ಸೃಷ್ಟಿ ಮಾಡಿತ್ತು, ಇವರ ಸಮಾಜದ ಮಠದಲ್ಲಿನ ಕನ್ಯಾ ಸಂಸ್ಕಾರ ಎಂಬ ಅಪ್ರಾಪ್ತ ಹೆಣ್ಣು ಮಕ್ಕಳ ಲೈಂಗಿಕ ಶೋಷಣೆಯನ್ನ ವಿರೋದಿಸಿ ಇವರು ಬರೆದ ವ್ಯಂಗ್ಯಚಿತ್ರಗಳು ಮಠದವರನ್ನ ಕೆರಳಿಸಿತ್ತು ಹಾಗಾಗಿ ಇವರನ್ನ ಸುಳ್ಳು ದೂರಿನಿಂದ ಪೋಲಿಸ್ ಕೇಸ್, ಜೈಲಿಗೆ ಕಳಿಸಿ ಇವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆಸಿದ್ದರು.   ಈ ಸಂದಭ೯ದಲ್ಲಿ ಈ ಹೋರಾಟಗಾರರನ್ನ ಸುಳ್ಳು ದೂರಿನಿಂದ ಜೈಲಿಗೆ ಕಳಿಸುವುದನ್ನ ವಿರೋದಿಸಿದ್ದೆ, ನಂತರ ಇವರು ಇನ್ನೂ ಹೆಚ್ಚು ಚಿತ್ರ ಬರೆದು ಜನಜಾಗೃತಿ ಮಾಡಲು ಪ್ರಾರಂಬಿಸಿದ್ದರಿಂದ ವಿರೋದಿಗಳಿಗೆ ಸಿಂಹ ಸ್ವಪ್ನ ಆಗಿದ್ದಾರೆ.   ಇವರ ಹೋರಾಟಕ್ಕೆ ಈಗ ಹವ್ಯಕ ಸಮಾಜದಲ್ಲೇ ಹೆಚ್ಚು ಬೆಂಬಲ ವ್ಯಕ್ತವಾಗಿದೆ, ಹವ್ಯಕರ ಸ್ವಣ೯ವಲ್ಲಿ ಸ್ವಾ

# ದೇವಗಂಗೆ, ಬಿದನೂರು ನಗರದಲ್ಲಿರುವ ಕೆಳದಿ ಅರಸರ ರಾಜ ಪರಿವಾರದ ಈಜುಕೊಳಗಳ ಸಂಕೀಣ೯ #

# ಬಿದನೂರು ನಗರದ ಈ ಸು೦ದರ ಈಜು ಕೊಳಗಳ ಸಂಕೀಣ೯ಕ್ಕೆ ಒಮ್ಮೆಯಾದರೂ  ಬೇಟಿ ನೀಡಿ.# ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ.   ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.   ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿಪ್ರಾರಂಭ ಆಗಿದೆ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ಸಂಶೋದನೆಗೆ ಆಹ೯ವಾಗಿದೆ.   ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ.   ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದಾರೆ, ಇದರ ಮದ್ಯೆ ರಾಣಿ ಪರಿವಾರದವರಿಗಾಗಿ ಕಲ್ಲಿನ ಸುಂದರ ತೊಟ್ಟಿಲು ಅಲ್ಲಿಗೆ ತಲುಪಲು ಕಲ್ಲಿನ ಸಂಕ ಇದೆ.   ಈಜು ಕೊಳದ ಸುತ್ತಲೂ ಸುಂದರವಾದ ಕಟಾಂಜನ, ಕೊಳಕ್ಕೆ ಇಳಿಯಲು ವಿಶಾಲವಾದ ಪಾವಟಿಗೆಗಳಿದೆ. ದೊಡ್ಡ ಕೊಳದ ನೀರು ಹರಿಯುವ ದಿಕ್ಕಿನಲ್ಲಿ ವಿವಿಧ ಆಕೃತಿಯ, ಅಳತೆಯ ಮತ್ತು ಆಳದ 7 ಕೊಳಗಳಿದೆ.   ವಷ೯ ಪೂತಿ೯ ಈ ಕೊಳಗಳಲ್ಲಿ ನೀರು ಹರಿಯುವುದರಿಂದ ಇದರ ನೀರು ಮಲೀನವಾಗುವುದಿಲ್ಲ, ಈ ಕೊಳಕ್ಕೆ ಬೆಟ್ಟದ ಮೇಲಿನ ದೊಡ್ಡಕೆರೆಯಿOದ ನೀರು ಹರಿದು ಬರಲು ಭೂಮಿ ಆಳದಲ್ಲಿ ಹಿತ್ತಾ

# ಸಾಗರದ ವಿಶೇಷ ವ್ಯಕ್ತಿ, ಒಂದು ಕಾಲದ ಕಾಂಗ್ರೇಸ್ ಶಕ್ತಿ ಕುರುಬರ ಲಿಂಗಪ್ಪನವರು #

# ಸಾಗರದ ವಿಶೇಷ ವ್ಯಕ್ತಿ, ಒಂದು ಕಾಲದ ಕಾ೦ಗ್ರೇಸ್ ಶಕ್ತಿ ಕುರುಬರ ಲಿಂಗಣ್ಣ#    ಜನ ಪ್ರೀತಿಯಿ೦ದ ಇವರನ್ನ ಕುರುಬರ ಲಿಂಗಣ್ಣ, ಕುರಿ ಲಿಂಗಣ್ಣ ಅಂತ ಕರಿತಾರೆ.   ಇವರು 7 ಸಾರಿ ಸಾಗರದ ಮುನ್ಸಿಪಲ್, ಪುರಸಭೆ ಮತ್ತು ನಗರ ಸಭೆಗಳಿಗೆ ನಿರಂತರವಾಗಿ ಆಯ್ಕೆ ಆದವರು, 3 ರಿಂದ 4 ಸಾರಿ ಅಧ್ಯಕ್ಷರಾಗಿದ್ದವರು, ವಿಶೇಷ ಅಂದರೆ ಈ ಸೋಲಿಲ್ಲದ ಸರದಾರರ ಒಂದೇ ಒಂದು ಸ್ವಜಾತಿ ಮನೆ, ಓಟು ಇಲ್ಲ!!   ಈಗ ವಯಸ್ಸಿನ ಕಾರಣದಿಂದ ರಾಜಕೀಯವಾಗಿ ನಿವೃತ್ತರಾಗಿದ್ದಾರೆ, ಇವರ ಮಗ ಮಂಜುನಾಥ್ ಕೂಡ ಸಾಗರದಲ್ಲಿ ಎರೆಡು ಬಾರಿ ನಗರ ಸಭೆಗೆ ಆಯ್ಕೆ ಆಗಿದ್ದಾರೆ, ಕಳೆದ ವಷ೯ ಇವರ ವಾಡ್೯ನಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯನ್ನ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ದೇವರ ಎದುರು ಯಾರಿಂದಲೂ ಒಂದೇ ರೂಪಾಯಿ ಹಣ ಪಡೆದಿಲ್ಲ ಅಂತ ಪ್ರಮಾಣ ಮಾಡಿ ವಿತರಿಸಿದ್ದರು, ಫಲಾನುಭವಿಗಳು ತಾವು ಕೂಡ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಸ್ವೀಕರಿಸಿದ್ದು ರಾಜ್ಯದಲ್ಲೇ ಸುದ್ದಿ ಆಗಿತ್ತು.   ಕಾಗೋಡು ತಿಮ್ಮಪ್ಪರ ಸಮಕಾಲಿನವರಾದ ಇವರು ಮತ್ತು ಆಹಮದ್ ಆಲೀ ಖಾನ್ ಸಾಹೇಬರು ಜಿಗಣಿ ದೊಸ್ತರು, ಇವರಿಬ್ಬರ ಶ್ರಮವೇ ಕಾಗೋಡು ಕಾಂಗ್ರೇಸ್ಗೆ ಸೇರಲು ಕಾರಣ.    ಕುರುಬ ಸಮಾಜದ, ಇವತ್ತೂ ಕುರಿ ವ್ಯಾಪಾರ ಮುಂದುವರಿಸಿರುವುದರಿಂದ ಇವರ ಹೆಸರ ಮುಂದೆ, ಕುರುಬರ ಲಿಂಗಣ್ಣ ಅಂತ ಕೆಲವರು, ಇನ್ನು ಕೆಲವರು ಕುರಿ ಲಿಂಗಣ್ಣ ಅಂತ ಕರೀತಾರೆ.    ಸಾಗರದ ಕೆಳದಿ ರಸ್ತೆ ತಿರುವಿನಲ್ಲಿ ವಾಸ ಇರುವ ಲ

# ಗೋದಿ ಮಂಡಕ್ಕಿ ಬೇಕಾ#

# ಗೋದಿಯಿ೦ದ ಮಂಡಕ್ಕಿ# ಭತ್ತದಿಂದ ಮಂಡಕ್ಕಿ, ಅರಳು ಮಾಡುತ್ತಾರೆ, ಮೆಕ್ಕೆ ಜೋಳದಲ್ಲಿ ಪಾಪ್ ಕಾನ್೯ ಮಾಡುತ್ತಾರೆ.   ಈಗ ಹೊಸ ಸೇಪ೯ಡೆ ಗೋದಿ ಮಂಡಕ್ಕಿ, ಮಲೆನಾಡು ಜಿಲ್ಲೆಗಳಲ್ಲಿ ಇದು ಇನ್ನು ಪರಿಚಯ ಆಗಿಲ್ಲ, ರಾಣಿಬೆನ್ನೂರು ಬ್ಯಾಡಗಿಗಳ ಮಂಡಕ್ಕಿ ಭಟ್ಟಿಗಳಲ್ಲಿ ಗೋದಿ ಮಂಡಕ್ಕಿ ತಯಾರಾಗಿ ಮಾರಾಟ ಆಗುತ್ತಿದೆ. ಇವತ್ತು ನಮ್ಮ ಊರಲ್ಲೂ ಗೋದಿ ಮಂಡಕ್ಕಿ ಅಂತ ಕೂಗುತ್ತಾ ಹೋಗುತ್ತಿದ್ದವನಿಗೆ ಬಾರೀ ಡಿಮ್ಯಾ೦ಡು.

#ಶಾಂತವೇರಿ ಗೋಪಾಲಗೌಡರು ಸಾಗರ ವಿಧಾನ ಸಭಾ ಕ್ಷೇತ್ರದ ಪ್ರಥಮ ಶಾಸಕರು. #

ಸಾ ಗರದ ಮೊದಲ ಶಾಸ ಕರು ಸಮಾಜ ವಾದಿ ಪಕ್ಷದ ಶಾಂತ ವೇರಿ ಗೋಪಾಲಗೌಡ ರು.    ಸ್ವಾತಂತ್ರ್ಯ ನಂತರ ಸಾಗರ, ಸೊರಬ, ಹೊಸನಗರ ಮತ್ತು ತೀಥ೯ಳ್ಳಿ ತಾಲ್ಲೂಕ್ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಗೇಣಿ ರೈತರ ಶೋಷಣೆ ವಿರೋದಿಸಿ, ಗೇಣಿ ರೈತರ ಹಿತರಕ್ಷಣೆಗಾಗಿ ಪ್ರಾಂತ್ಯ ರೈತ ಸಂಘದ ಹೆಸರಲ್ಲಿ ಸಂಘಟನೆ ಪ್ರಾರ೦ಬಿಸಿದ್ದರು.   ಈ ಸಂಘಟನೆಗಳಲ್ಲಿ ಕಡಿದಾಳು ಮಂಜಪ್ಪನವರು, ಗಣಪತಿಯಪ್ಪನವರು ಪ್ರಮುಖ ಪಾತ್ರ ವಹಿಸಿದರು, ಈ ಹೋರಾಟ ಸಂಘಷ೯ಕ್ಕೆ ಕಾರಣವಾಯಿತು, ಗೇಣಿ ರೈತರ ಸಂಘಟನೆ ಭೂಮಾಲಿಕರ ಅಸಹನೆಗೆ ಕಾರಣವಾಗಿ ಗೇಣಿ ರೈತರಿಗೆ ಭೂಮಿ ನಿರಾಕರಿಸಿದ್ದು ಮುಂದೆ ಉಳುವವನೆ ಹೊಲದ ಒಡೆಯ ಎ೦ಬ ಘೋಷಣಾ ವಾಕ್ಯದಲ್ಲಿ ಇಡೀ ದೇಶದ ಗಮನ ಸೆಳೆದ ಕಾಗೋಡು ರೈತ ಹೋರಾಟ ಆಯಿತು.   ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಪಕ್ಷದ ರಾಮ ಮನೋಹರ ಲೋಹಿಯಾರನ್ನ ಕರೆ ತಂದದ್ದು, ಅವರು ಕಾಗೋಡಿನಲ್ಲಿನ ಅರಳಿ ಮರದ ಕೆಳಗೆ ಗೇಣಿ ರೈತ ಹೋರಾಟಗಾರರನ್ನ ಪ್ರೇರೇಪಿಸಿ ಬಾಷಣ ಮಾಡಿ ಸಾಗರ ರೈಲು ನಿಲ್ದಾಣದ ತಂಗುದಾಣದಲ್ಲಿ ತಂಗಿದಾಗ ಅವರನ್ನ ಬಂದಿಸಿದ್ದು ಇಡೀ ದೇಶದಲ್ಲಿ ದೊಡ್ಡ ಸುದ್ದಿ ಆಗಿತ್ತು.    ಕಾಗೋಡು ರೈತ ಹೋರಾಟದ ಪ್ರಭಾವದಿಂದ 1952 ರಲ್ಲಿ ನಡೆದ ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೊದಲ ಶಾಸಕರಾಗಿ ಆಯ್ಕೆ ಆಗಿ ರಾಜ್ಯ ವಿಧಾನಸಭೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದರು.   ಸಾಗರದ ಕ್ರೀಡಾ೦ಗಣಕ್ಕೆ ಗೋಪ

#ಕಾಗೋಡು ತಿಮ್ಮಪ್ಪ ಕಡು ರಾಜಕೀಯ ವಿರೋದಿಯಾಗಿ ಅವರ ಬಗ್ಗೆ ನನ್ನ ಸಧಭಿಪ್ರಾಯ ಏಕೆ?#

      ಕಾಗೋಡು ಲೋಹಿಯ ಚಿಂತನೆ, ಶಾಂತವೇರಿ ಮೂಸೆಯಲ್ಲಿ, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪಾರನ್ನ ವಿರೋದಿಸುತ್ತಾ ಸಮಾಜವಾದಿ, ಜನತಾ ಪಕ್ಷದಿಂದ ಮುಂದೆ ಗುಂಡೂರಾಯರ ಪ್ರೇರಣೆಯಿಂದ ಸಾರೆಕೊಪ್ಪದ ಬಂಗಾರಪ್ಪನವರ ವಿರೋಧ ರಾಜಕಾರಣ ಮಾಡಿದವರು, ಅವರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೆತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ 22 ಕೇಸು, ಗೂಂಡಾ ಕಾಯ್ದೆಯಲ್ಲಿ ಅವರು ನನ್ನನ್ನ ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಕೇಳಿ. ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಬೇರೆ ರಾಜಕಾರಣಿಗಿಂತ ಬೇರೆ, ನಿತ್ಯ ಎಲ್ಲಾ ಪತ್ರಿಕೆ ಸ್ವತಃ ಓದುತ್ತಾರೆ, ಹೊಗಳಿದರೆ ಉಬ್ಬುವುದಿಲ್ಲ, ಮಲೆನಾಡಿನ ರೈತರ ಸಮಸ್ಯೆ ಬೇರೆಯವರಿಗೆ ಅಥ೯ವಾಗುವುದಿಲ್ಲ, ಪರಿಸರ ವಿರೋದಿ ಅಲ್ಲ, ಲಂಚಕ್ಕೆ ಬೆಂಬಲ ಇಲ್ಲ ಆದರೆ ರೈತನನ್ನ ಒಕ್ಕಲೆಬ್ಬಿಸುವುದಕ್ಕೆ ಅವರ ವಿರೋದ ಯಾವತ್ತೂ ಇದೆ. ಬಂಗಾರಪ್ಪ ಬಗರ್ ಹುಕುಂ ಜಾರಿಗೊಳಿಸಿದಾಗ ರಾಜ್ಯದ ಮೊದಲ ಹಕ್ಕು ಪತ್ರ ನನ್ನ ಊರಲ್ಲಿ ನೀಡಲು ಅವರು ನೀಡಿದ ಪ್ರೊತ್ಸಾಹ ಮರೆಯಲಾರೆ, ಪರಿಶಿಷ್ಟ ಜಾತಿ ಅಲೆಮಾರಿ ಕೊರಮರು, ಕುಂಬಾರರು ಸೇರಿ ಎಲ್ಲಾ ಜಾತಿಯವರಿಗೆ ಹಕ್ಕು ಪತ್ರ ನೀಡಿದೆವು ಇದರಿಂದ ಕಾಗೋಡು ನನಗೆ ಹೊಗಳಿದ್ದರಿಂದ ಬಗಲಿಗಳು ಪಿಟ್ಟಿ೦ಗ್ ಇಟ್ಟು ನನ್ನ ದೂರ ಮಾಡಿದರು ಇವರ ಅಣ್ಣನ ಮಗ ಅಣ್ಣಾಜಿ ಕೂಡ ಕೈ ಜೋಡಿಸಿದರು ಹಾಗಾಗಿ ನನ್ನ ಅವರ ಬದ್ಧ ದ್ವೇಷದ ರಾಜಕಾರಣ ಆಯಿತು.        ಆ

ವಷ೯ಕ್ಕೆ ಒಂದೆರೆಡು ಬಾರಿ ಕಾಡು ಗೆಡ್ಡೆ ಗೆಣಸು ತಂದು ತಿನ್ನಿಸುವ ಹಾವು ಗೊಲ್ಲ ಮಿತ್ರ ವೆಂಕಟೇಶ್

ಹಾವು ಗೊಲ್ಲರು ಈಗ ಅರೆ ಅಲೆಮಾರಿಗಳು , ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶಿರವ೦ತೆ, ಹೆಗ್ಗೋಡು, ಹೊಸನಗರ ತಾಲ್ಲೂಕಿನ ಹಾಲು ಗುಡ್ಡೆಗಳಲ್ಲಿ ಸಕಾ೯ರದ ಜಾಗ ಮನೆ ಪಡೆದಿದ್ದಾರೆ, ಹಾವು ಹಿಡಿದು ಜೀವನ ಮಾಾಡುವುದಕ್ಕಿಂತ ಬೇರೆ ಉದ್ಯೋಗದಲ್ಲಿ ಹೆಚ್ಚು ತೊಡಗಿದ್ದಾರೆ, ಇವರ ಕೇರಿಯಲ್ಲಿ ನಾಗ ಪ್ರತಿಷ್ಟೆ ಮಾಡಿ ಹಾವು ಹಿಡಿಯದ೦ತೆ ಕೆಲವರು ತಾಕೀತು ಮಾಡಿದ್ದಾರೆ ಗುುಟ್ಟಾಗಿ ಹಾವು ಹಿಡಿಯುವ ಇವರ ಪುರಾತನ ವಂಶಪಾರಂಪಯ೯ ವಿದ್ಯ ಉಳಿಸಿ ಕೊಂಡಿದ್ದಾರೆ, 1985 ರಲ್ಲಿ ಕ್ಯಾಮೆರ ಕಡಿಮೆ ಇರುವ ಕಾಲದಲ್ಲಿ ಇವರೆಲ್ಲರ ಕುಟುಂಬದ photo ಸೆಷನ್ ಮಾಡಿದ್ದೆ ನಮ್ಮ ರೈಸ್ ಮಿಲ್ನಲ್ಲಿ,ಒಂದು ಕೋಟು, ಕಪ್ಪು ಕನ್ನಡಕ ಮಾತ್ರ ಎಲ್ಲಾ ಕುಟು೦ಬದ ಹಿರಿಯ ನು ಧರಿಸಲು ಬದಲಾಗುತ್ತಿತ್ತು, ಅವತ್ತು ಚಿತ್ರದಲ್ಲಿದ್ದ ಮಕ್ಕಳೆಲ್ಲ ಈಗ ಅಜ್ಜO ದಿರಾಗಿದ್ದಾರೆ. ಇವರೆಲ್ಲ ಆಗಾಗ್ಗೆ ಬಂದು ಬೇಟಿ ಮಾಡಿ ಅದಕಾಗಿ ಭಕ್ಷೀಸು ಪಡೆಯುತ್ತಾರೆ. ಇವರು ದಶ೯ನ ನೀಡಿದಕ್ಕಾಗಿ ನಾನು ಭಕ್ಷಿಸು ನೀಡಬೇಕು ವಷ೯ಕ್ಕೆ ಒಮ್ಮೆ ಆದರೂ ತಿನ್ನ ಬೇಕು ಈ ಕಾಡು ಗೆಣಸು ಇದರಲ್ಲಿ ಔಷಧ ಇದೆ.

# ನನಗೇಕೆ ರವಿ ಬೆಳೆಗೆರೆ ಎಂದರೆ ಅಭಿಮಾನ ಕೇಳಿ#

#ರವಿ ಬೆಳೆಗೆರೆಗೆ ಆತಿಥ್ಯ ನೀಡಿದ ಸಂಭ್ರಮ# # ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕರಾದ ರವಿ ಬೆಳೆಗೆರೆ ನನ್ನ ಅತಿಥಿ ಆಗಿದ್ದು ಈ ಸಂದಭ೯ದ ಮಾತುಕತೆ ಸಂದಶ೯ನ ಅಥವ ಸಂವಾದ ಇಲ್ಲಿದೆ#         ದಿನಾ೦ಕ 16-ಪೆಬ್ರವರಿ -2018ರ ಶುಕ್ರವಾರ ಬೆಳಿಗ್ಗೆ 9ಕ್ಕೆ ಧ್ಯಾನ ಮುಗಿಸಿ ಸೈಲೆಂಟ್ ಮಾಡಿದ್ದ ಸೆಲ್ ಫೋನ್ ತೆಗೆದು ನೋಡಿದಾಗ ಅನೇಕರ ಮಿಸ್ ಕಾಲ್ ಮಧ್ಯ ಹಾಯ್ ಬೆಂಗಳೂರು ವರದಿಗಾರರು ಹಾಗೂ ಶಿವಮೊಗ್ಗದ ಜನ ಹೋರಾಟದ ದೈನಿಕದ ಶೃ೦ಗೇಶರ ಮಿಸ್ ಕಾಲ್ಯಾಕೆ ಅಂತ ಅವರಿಗೆ ಪೋನಾಯಿಸಿದಾಗ ಅವರು ರವಿ ಬೆಳೆಗೆರೆ ನಿಮ್ಮಲ್ಲಿ ಉಪಹಾರ ಮಾಡಿ ಸಾಗರಕ್ಕೆ ಹೋಗುತ್ತಾರೆ ಇನ್ನೊಂದು 20 ನಿಮಿಷದಲ್ಲಿ ನಿಮ್ಮಲ್ಲಿ ಇರುತ್ತೇವೆ ಅಂದಾಗ ನನಗೆ ತುಂಬಾ ಸಂತೋಷ ಗಡಿಬಿಡಿ ಆಯಿತು.   ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ 1997-98ರಲ್ಲಿ ಶಿವಮೊಗ್ಗದಲ್ಲಿ ಸಕಾ೯ರಿ ಆಸ್ಪತ್ರೆಗೆ ಖರೀದಿಸಿದ ಕೋಟ್ಯಾ0ತರ ಮೌಲ್ಯದ ಔಷದಗಳು ಕಳಪೆ ಜನರ ಆರೋಗ್ಯಕ್ಕೆ ಮಾರಕ ಅಂತ ಅಂದಿನ ಜಿಲ್ಲಾ ಸಜ೯ನ್ ರು ಮಾಹಿತಿ ಕಳಿಸಿದ್ದರು ಇದನ್ನ ಜಿಲ್ಲಾ ಪಂಚಾಯತ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನವೆ ಜಿಲ್ಲಾ ಪಂಚಾಯತನ ಜಾಷದಿ ಗೋದಾಮಿಗೆ ಬೆಂಕಿ ಹಾಕಿ ಕಳಪೆ ಔಷದಿಗಳನ್ನ ಸುಟ್ಟು ವಿದ್ಯುತ್ ಅವಗಡದಲ್ಲಿ ಔಷದ ಭಸ್ಮ ಅಂತ ಸುದ್ದಿ ಮಾಡಿದರು ಇದನ್ನ ಮುಂದಿನ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕಾಗಿ ನನ್ನನ್ನ ಎರೆಡೆರಡು ಸುಳ್ಳು ದೂರು ನೀಡಿ ಜೈಲಿಗೆ ಕಳಿಸಿದ್ದರು.    ಆಗ ಪಟೇಲರು ಮುಖ್ಯಮಂತ್ರಿ, ಜಿ

# ಹಸೆ ಚಿತ್ತಾರ ಎಂಬ ಪಶ್ಚಿಮ ಘಟ್ಟದ ದೀವರೆಂಬ ಸಮುದಾಯದ ನಿತ್ಯ ಜೀವನದ ಕಲೆ ಜಗತ್ತಿಗೆ ಪಸರಿಸುತ್ತಿರುವ ಕಲಾವಿದ ಈಶ್ವರ್ ಹಸುವಂತೆ#

ಹಸೆ ಚಿತ್ತಾರ ಎ೦ಬ ತನ್ನ ಜನಾ೦ಗದ ಕಲೆಯನ್ನ ವಿಶ್ವಕ್ಕೆ ಪ್ರಸರಣ ಮಾಡಿದ ಅಪೂವ೯ ಕಲಾವಿದ ಈಶ್ವರ್ ಹಸುವಂತೆಯ ಒಂದು ವಿಸ್ಮಯ  ಕಥೆ     1982 ಅಥವ ನಂತರದ ಇಸವಿಯಲ್ಲಿ ಸಾಗರದಲ್ಲಿ ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ ಗೌಡ, ಸಿಗರೇಟ್ ನಾಗರಾಜ್, ರಿಕ್ಷಾ ಮೋಹನ್, ಪ್ರೇಡರಿಕ್, ಮಂಡಗಳಲೆ ನಾರಾಯಣಪ್ಪಾ, ತೀ.ನಾ.ಶ್ರೀನಿವಾಸ್ ಮತ್ತು ಅನೇಕ ಪ್ರಗತಿ ಪರರು ಸೇರಿ ಭದ್ರಾವತಿ ಬಿ.ಕೃಷ್ಣಪ್ರನವರು ಸ್ಥಾಪಿಸಿದ ದಲಿತ ಸಂಘಷ೯ ಸಮಿತಿ ಸಾಗರ ತಾಲ್ಲೂಕಿನಲ್ಲಿ ಪ್ರೊಫೆಸರ್ ರಾಚಪ್ಪನವರ ಪ್ರಯತ್ನ ದಿಂದ ಪ್ರಾರಂಭವಾಗಿತ್ತು.   ಕೋಲಾರದ ಕಾಮರೇಡ್ ನಾರಾಯಣಸ್ವಾಮಿಯ ಸತತ ಪ್ರಯತ್ನದಿಂದ ನಾವೆಲ್ಲ ಈ ಸಂಘಟನೆಯಲ್ಲಿ ಸಂಪೂಣ೯ ಬಾಗಿಗಳಾದಾಗ ಈ ಈಶ್ವರ್ ಹಸುವಂತೆ ಕೂಡ ನಮ್ಮ ಸಹಪಾಟಿ.   ಆನಂದಪುರಂ ನ ರೈತ ಬಂದು ಗ್ರಾಮೋದ್ಯೋಗ ಎಂಬ ಸಂಸ್ಥೆಯಲ್ಲಿ ಅಕ್ಕಿ ಮಾರಾಟದ ನಗದು ಅಕ್ರಮ ಸಾಗಾಣಿಕೆ ಸಂದಭ೯ದಲ್ಲಿ ನಾಲ್ಕು ಜನ ಕಾಮಿ೯ಕರನ್ನ ತೀಥ೯ಹಳ್ಳಿ ಸಮೀಪದ ಅರಳಸುರುಳಿ ಎಂಬ ಹಳ್ಳಿಯಲ್ಲಿ ಲಾರಿಯಲ್ಲಿ ಕೊಲೆ ಮಾಡಿ ಹಣ ದರೋಡೆ ಮಾಡಿದ ಪ್ರಕರಣ ನಾವೆಲ್ಲ ಗೆಳೆಯರು ತನಿಖೆಗಾಗಿ ಒತ್ತಾಯಿಸಿದ ಪ್ರಕರಣ ಉದ್ದಿಮೆ ಮಾಲಿಕರಾದ ಸುಬ್ಬಣ್ಣ ನಾಯಕರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಅವರಿಗೆ ಅಧಿಕಾರಿಗಳು ಬೆಂಬಲಿಸಿದ್ದು ಆಗ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆ ಕಾಮಿ೯ಕರ ಹಿತ ಕಾಪಾಡದೆ ಉದ್ದಿಮೆದಾರರ ಪರ ವಹಿಸಿದ್ದರಿಂದ ಪರಿಸ್ತಿತಿ ವಿಕೋಪಕ್ಕೆ ಹೋಗಿ ಲಾಠಿ ಚಾಜ೯, ಬಂದನ ಮತ್