# ಪ್ರಖ್ಯಾತ ವ್ಯಂಗ್ಯ ಚಿತ್ರಕಾರ ಮತ್ತು ಹೋರಾಟಗಾರ ನಿರ೦ಜನ ಕುಗ್ವೆ.#
ನಾನು ಇವರ ಚಿತ್ರ ಮತ್ತು ಹೋರಾಟಗಳನ್ನ ನೋಡಿ ಇವರ ಅಭಿಮಾನಿ ಆಗಿದ್ದೆ ಆದರೆ ಇವರ ನನ್ನ ಬೇಟಿ ಇವತ್ತಿನವರೆಗೆ ಆಗಿರಲಿಲ್ಲ, ಇವತ್ತು ಸಂಜೆ ಒಂದು ಕೈಯಲ್ಲಿ ಕೆಂಪು ಹೆಲ್ಮೆಟ್ ಹಿಡಿದು ಕೊಂಡು, ಬಗಲಲ್ಲಿ ಚೀಲ ಏರಿಸಿಕೊಂಡು ದಿಡೀರ್ ಆಗಿ ನನ್ನ ಆಪೀಸಿಗೆ ಬಂದು ನನ್ನ ಗುರುತು ಸಿಕ್ಕಿತಾ? ಎಂಬ ಪ್ರಶ್ನೆ ಮಾಡಿದಾಗ ತಕ್ಷಣ ನಿರಂಜನ ಕುಗ್ವೆ ಅಂದೆ.
ಇವರು ಸಾಗರ ತಾಲ್ಲೂಕಿನ ಕುಗ್ವೆಯವರು, ಚಿತ್ರಕಲಾ ಶಿಕ್ಷಕರಾಗಿ ಭದ್ರಾವತಿ ತಾಲ್ಲೂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇತ್ತೀಚಿಗೆ ಇವರ ವ್ಯಂಗ್ಯಚಿತ್ರ ಹವ್ಯಕ ಸಮಾಜದಲ್ಲಿ ಭಾರೀ ಹವಾ ಸೃಷ್ಟಿ ಮಾಡಿತ್ತು, ಇವರ ಸಮಾಜದ ಮಠದಲ್ಲಿನ ಕನ್ಯಾ ಸಂಸ್ಕಾರ ಎಂಬ ಅಪ್ರಾಪ್ತ ಹೆಣ್ಣು ಮಕ್ಕಳ ಲೈಂಗಿಕ ಶೋಷಣೆಯನ್ನ ವಿರೋದಿಸಿ ಇವರು ಬರೆದ ವ್ಯಂಗ್ಯಚಿತ್ರಗಳು ಮಠದವರನ್ನ ಕೆರಳಿಸಿತ್ತು ಹಾಗಾಗಿ ಇವರನ್ನ ಸುಳ್ಳು ದೂರಿನಿಂದ ಪೋಲಿಸ್ ಕೇಸ್, ಜೈಲಿಗೆ ಕಳಿಸಿ ಇವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆಸಿದ್ದರು.
ಈ ಸಂದಭ೯ದಲ್ಲಿ ಈ ಹೋರಾಟಗಾರರನ್ನ ಸುಳ್ಳು ದೂರಿನಿಂದ ಜೈಲಿಗೆ ಕಳಿಸುವುದನ್ನ ವಿರೋದಿಸಿದ್ದೆ, ನಂತರ ಇವರು ಇನ್ನೂ ಹೆಚ್ಚು ಚಿತ್ರ ಬರೆದು ಜನಜಾಗೃತಿ ಮಾಡಲು ಪ್ರಾರಂಬಿಸಿದ್ದರಿಂದ ವಿರೋದಿಗಳಿಗೆ ಸಿಂಹ ಸ್ವಪ್ನ ಆಗಿದ್ದಾರೆ.
ಇವರ ಹೋರಾಟಕ್ಕೆ ಈಗ ಹವ್ಯಕ ಸಮಾಜದಲ್ಲೇ ಹೆಚ್ಚು ಬೆಂಬಲ ವ್ಯಕ್ತವಾಗಿದೆ, ಹವ್ಯಕರ ಸ್ವಣ೯ವಲ್ಲಿ ಸ್ವಾಮೀಜಿ ಕೂಡ ವಿಶ್ವ ಹವ್ಯಕ ಸಮ್ಮೇಳನದಿಂದ ದೂರ ಉಳಿದಿದ್ದು ಇವರೆಲ್ಲರ ಹೊರಾಟಕ್ಕೆ ತಿರುವು ಬಂದಿದೆ.
ಇವರ ನನ್ನ ಬೇಟಿಯ ನೆನಪಿಗಾಗಿ ರೈತ ಸಂಘದ ಪ್ರೊ.ನಂಜುOಡ ಸ್ವಾಮಿಯವರ ಬಗ್ಗೆ ಬಂದಿರುವ "ರೈತ ಹೋರಾಟ ಮತ್ತು ಬಾರು ಕೋಲು " ಪುಸ್ತಕ ನೀಡಿದೆ.
ಹಣ, ಅದಿಕಾರ, ಅಂದ ಭಕ್ತರಿಂದ ವಿಷವತು೯ಲದಿಂದ ಸುತ್ತುವರಿದ ಮಠ ಒಂದು ತನ್ನ ಜಾತಿಯ ಹೆಣ್ಣು ಮಕ್ಕಳನ್ನೆ ಅತ್ಯಚಾರ ಮಾಡಿದ್ದನ್ನ, ಲೈಂಗಿಕ ದುರುಪಯೋಗ ಮಾಡಿದ್ದನ್ನ ವಿರೋದಿಸುವುದು ಅಷ್ಟು ಸುಲಭವಲ್ಲ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
ತಮ್ಮಂತ ಮೇರು ವ್ಯಕ್ತಿತ್ವದ ಆದರ್ಶ ವ್ಯಕ್ತಿಗಳು ಈ ಪುಟ್ಟ ಕಲಾವಿದನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದಲ್ಲದೇ ಸಾಮಾಜಿಕ ಕಳಕಳಿಯ ಆಶಯದಲ್ಲಿ ನಾವು ನಡೆಸುತ್ತಿರುವ ಹೋರಾಟಕ್ಕೂ ಬೆಂಬಲ ನೀಡುತ್ತಾ ಬಂದಿರುವಿರಿ...
ReplyDeleteಒಬ್ಬ ಕಲಾವಿದನಿಗಾಗಲೀ ಹೋರಾಟಗಾರರಿಗಾಗಲೀ ಪ್ರೇರಣೆ, ಆತ್ಮ ಬಲ ತುಂಬುವ ತಮ್ಮಂತ ಆತ್ಮ ಬಂಧುಗಳು ಬೆನ್ನಹಿಂದಿರುವಾಗ ಸಾಧನೆಯಲ್ಲಿ ಸಾಪಲ್ಯ ಕಾಣುತ್ತೇವೆಂಬ ವಿಶ್ವಾಸ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ..
ತಮ್ಮಂತವರ ಒಡನಾಟ ನನಗೆ ಸಿಕ್ಕಿರುವುದು ನನ್ನ ಭಾಗ್ಯ...
ತಮ್ಮ ಆದರ , ಪ್ರೀತಿಗೆ ಬದಲಾಗಿ ಕೃತಜ್ಞತೆಯನ್ನಷ್ಟೇ ಈ ಪುಟ್ಟ ಕಲಾವಿದ ನೀಡಲು ಸಾಧ್ಯ...
ಅನಂತ ಧನ್ಯವಾದಗಳು ಸರ್..
ಶಹಬ್ಬಾಸ್ ಮಾಸ್ಟರ್ ಜೀ
ReplyDelete