Skip to main content

# ಹಸೆ ಚಿತ್ತಾರ ಎಂಬ ಪಶ್ಚಿಮ ಘಟ್ಟದ ದೀವರೆಂಬ ಸಮುದಾಯದ ನಿತ್ಯ ಜೀವನದ ಕಲೆ ಜಗತ್ತಿಗೆ ಪಸರಿಸುತ್ತಿರುವ ಕಲಾವಿದ ಈಶ್ವರ್ ಹಸುವಂತೆ#

ಹಸೆ ಚಿತ್ತಾರ ಎ೦ಬ ತನ್ನ ಜನಾ೦ಗದ ಕಲೆಯನ್ನ ವಿಶ್ವಕ್ಕೆ ಪ್ರಸರಣ ಮಾಡಿದ ಅಪೂವ೯ ಕಲಾವಿದ ಈಶ್ವರ್ ಹಸುವಂತೆಯ ಒಂದು ವಿಸ್ಮಯ ಕಥೆ


    1982 ಅಥವ ನಂತರದ ಇಸವಿಯಲ್ಲಿ ಸಾಗರದಲ್ಲಿ ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ ಗೌಡ, ಸಿಗರೇಟ್ ನಾಗರಾಜ್, ರಿಕ್ಷಾ ಮೋಹನ್, ಪ್ರೇಡರಿಕ್, ಮಂಡಗಳಲೆ ನಾರಾಯಣಪ್ಪಾ, ತೀ.ನಾ.ಶ್ರೀನಿವಾಸ್ ಮತ್ತು ಅನೇಕ ಪ್ರಗತಿ ಪರರು ಸೇರಿ ಭದ್ರಾವತಿ ಬಿ.ಕೃಷ್ಣಪ್ರನವರು ಸ್ಥಾಪಿಸಿದ ದಲಿತ ಸಂಘಷ೯ ಸಮಿತಿ ಸಾಗರ ತಾಲ್ಲೂಕಿನಲ್ಲಿ ಪ್ರೊಫೆಸರ್ ರಾಚಪ್ಪನವರ ಪ್ರಯತ್ನ ದಿಂದ ಪ್ರಾರಂಭವಾಗಿತ್ತು.


  ಕೋಲಾರದ ಕಾಮರೇಡ್ ನಾರಾಯಣಸ್ವಾಮಿಯ ಸತತ ಪ್ರಯತ್ನದಿಂದ ನಾವೆಲ್ಲ ಈ ಸಂಘಟನೆಯಲ್ಲಿ ಸಂಪೂಣ೯ ಬಾಗಿಗಳಾದಾಗ ಈ ಈಶ್ವರ್ ಹಸುವಂತೆ ಕೂಡ ನಮ್ಮ ಸಹಪಾಟಿ.


  ಆನಂದಪುರಂ ನ ರೈತ ಬಂದು ಗ್ರಾಮೋದ್ಯೋಗ ಎಂಬ ಸಂಸ್ಥೆಯಲ್ಲಿ ಅಕ್ಕಿ ಮಾರಾಟದ ನಗದು ಅಕ್ರಮ ಸಾಗಾಣಿಕೆ ಸಂದಭ೯ದಲ್ಲಿ ನಾಲ್ಕು ಜನ ಕಾಮಿ೯ಕರನ್ನ ತೀಥ೯ಹಳ್ಳಿ ಸಮೀಪದ ಅರಳಸುರುಳಿ ಎಂಬ ಹಳ್ಳಿಯಲ್ಲಿ ಲಾರಿಯಲ್ಲಿ ಕೊಲೆ ಮಾಡಿ ಹಣ ದರೋಡೆ ಮಾಡಿದ ಪ್ರಕರಣ ನಾವೆಲ್ಲ ಗೆಳೆಯರು ತನಿಖೆಗಾಗಿ ಒತ್ತಾಯಿಸಿದ ಪ್ರಕರಣ ಉದ್ದಿಮೆ ಮಾಲಿಕರಾದ ಸುಬ್ಬಣ್ಣ ನಾಯಕರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಅವರಿಗೆ ಅಧಿಕಾರಿಗಳು ಬೆಂಬಲಿಸಿದ್ದು ಆಗ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆ ಕಾಮಿ೯ಕರ ಹಿತ ಕಾಪಾಡದೆ ಉದ್ದಿಮೆದಾರರ ಪರ ವಹಿಸಿದ್ದರಿಂದ ಪರಿಸ್ತಿತಿ ವಿಕೋಪಕ್ಕೆ ಹೋಗಿ ಲಾಠಿ ಚಾಜ೯, ಬಂದನ ಮತ್ತು ಸುಳ್ಳು ಕೇಸುಗಳಿಂದ ಪ್ರಕ್ಷುಬ್ದ ಪರಿಸ್ಥಿತಿ ಉ೦ಟಾಗಿತ್ತು. 


 ಕಾಮಿ೯ಕ ಮುಖಂಡರಾದ ಪೂವಪ್ಪ (ಇವತ್ತು ಆನಂದಪುರದ ಪ್ರತಿಷ್ಠಿತ ಮಾರುತಿ ಇಂಡಸ್ಟ್ರಿಸ್ ಮಾಲಿಕರು), ಸೈಮನ್ ಡಿಸೋಜರ ಮೇಲೆ ಪೋಲಿಸರಿ೦ದ ಬೀಕರ ಹಲ್ಲೆ ಮಾಡಿಸಿದ ಮಾಲಿಕ ಸುಬ್ಬಣ್ಣ ನಾಯಕರು ಕಾಮಿ೯ಕ ವಲಯದಲ್ಲಿ ಈ ಕಾರಣದಿಂದ ವಿಲನ್ ಆಗಿದ್ದರು ಆಗ ಈಶ್ವರ ಹಸುವಂತೆ ನಮ್ಮ ಜೊತೆ ಇದ್ದರು.


   ನಂತರ ಬೀದಿ ನಾಟಕಗಳಿಂದ, ಹೆಗ್ಗೋಡಿನ ನೀನಾಸಂ ವಿದ್ಯಾಥಿ೯ ಆಗಿ, ಚರಕ ಪ್ರಸನ್ನರ ಚರಕ ಎಂಬ ಖಾದಿ ದೇಶಿ ಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಸ್ಥಾನವಹಿಸಿ ನಂತರ ತಮ್ಮ ಕುಲದ ಹಸೆ ಚಿತ್ರದ ಬಗ್ಗೆ ದೀಘ೯ ಅಧ್ಯಯನ ಮಾಡಿ ಈ ಕಲೆಯಲ್ಲಿ ಪರಿಣಿತಿ ಪಡೆದು, ಇದನ್ನ ದೇಶ ಮತ್ತು ಅಂತರ್ ರಾಷ್ಟ್ರ ಮಟ್ಟಕ್ಕೆ ಒಯ್ದ ಕೀತಿ೯ ಇವರದ್ದು.


  ಇದಕ್ಕಾಗಿ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಇವರಿಗೆ ಸಿಕ್ಕಿದೆ ಆದರೆ ಪ್ರಶಸ್ತಿಯ ಗೀಳು ಇಲ್ಲದ ಇವರು ಸದಾ ಈ ಕಲೆಯ ಪ್ರಸರಣದ ಬಗ್ಗೆ ಜವಾಬ್ದಾರಿಯ ಕೆಲಸ ನಿರಂತರವಾಗಿ ನಡೆಸಿದ್ದಾರೆ.


  ಹಸೆ ಚಿತ್ರದಿಂದಾಗಿ ಇಡೀ ವಿಶ್ವ ಪಯ೯ಟನೆ ಮಾಡಿದ್ದಾರೆ ಇವರು ಬಿಡಿಸಿದ ಹಸೆ ಚಿತ್ರ ನಮ್ಮ ರಾಜ್ಯದ ರಾಜ ಭವನದಿಂದ ಪ್ರಾರಂಭವಾಗಿ ರಾಷ್ಟ್ರಪತಿ ಭವನ, ಅಮೇರಿಕಾ, ಇಂಗ್ಲೆಂಡ್ ಆಸ್ಟ್ರೇಲಿಯದ ಪ್ರಮುಖ ಸ್ಥಳ ತಲುಪಿದೆ.


   ಹಸೆ ಚಿತ್ರದ ಜೊತೆ ಇದನ್ನ ಬಿಡಿಸುವ ಕಾರಣ, ಚಿತ್ರದ ಅಥ೯ ಬಲ್ಲವರು ಇವರೊಬ್ಬರೆ. ಅನೇಕರು ಇದನ್ನ ಕಲಿತು ಬರೆಯುತ್ತಾರೆ ಆದರೆ ಮಲೆನಾಡಿನ ಪಶ್ಚಿಮ ಘಟ್ಟದ ದೀವರು ಎಂಬ ಗುಡ್ಡಗಾಡು ಪದ್ದತಿಗಳ ಆಚರಣೆಯ ವಿಶಿಷ್ಟ ಜನಾ೦ಗದ ಈ ಕಲೆ ರಕ್ತಗತವಾಗಿ ಬಂದಿರುವ ಅದರ ಪರಿಣಿತಿಯೊ೦ದಿಗೆ ಅದರ ಸಮಗ್ರ ಸಂಶೋದನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಸುವಂತೆ ಗ್ರಾಮದ ಹಸೆ ಚಿತ್ತಾರದ ಕಲಾವಿದ ಈಶ್ವರ್ ಹಸುವಂತೆಗೆ ಸಂಬಂದ ಪಟ್ಟ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಬಹುದಾದ ಯೋಗ್ಯತೆ ಇದೆ.


   ಮೊನ್ನೆ ನನ್ನ ಕಚೇರಿಗೆ ಸುಮಾರು 18 ವಷ೯ದ ನಂತರ ಬಂದಾಗ ಇದೆಲ್ಲ ನೆನಪಾಗಿ ಬರೆದೆ 2001ರಲ್ಲಿ ನಾನು ಚಿತ್ರಮಂದಿರ ಪ್ರಾರಂಬಿಸಿದಾಗ ಅಲ್ಲಿ ಇವರು ಹಸೆ ಚಿತ್ತಾರ ಬಿಡಿಸಿದ್ದರು, ಈಗ ನನ್ನ ಲಾಡ್ಜ, ಕಾಟೇಜು ಮತ್ತು ಕಲ್ಯಾಣ ಮಂಟಪದಲ್ಲಿ ಇವರ ಕೈ ಚಳಕದ ಹಸೆ ಚಿತ್ತಾರ ಮತ್ತೆ ಮೂಡಿ ಬರಲಿದೆ ಅನ್ನುವುದು ನನಗೆ ಅತ್ಯಂತ ಸಂತೋಷದ ವಿಚಾರವಾಗಿದೆ.


     ಅವರ ಹಸ್ತದ ಕಲೆಯಲ್ಲಿ ತಯಾರಾದ ಹಸೆ ಚಿತ್ತಾರದ ಚತ್ರಿ, ಗಡಿಯಾರ, ಆಕಷ೯ಕ ಸೀರೆ, ಚೂಡಿದಾರದ ಟಾಪ್ ಮತ್ತು ಚಿತ್ರಪಟಗಳು ಇಲ್ಲಿದೆ.


  ಹೆದ್ದಾರಿಯಲ್ಲಿ ಸುಲ್ತಾನ್ ಜ್ಯೂವೆಲರಿಯ ದೊಡ್ಡ ಹೊಡಿ೯೦ಗ್ಗಳಲ್ಲಿ ಇವರ ಹಸೆ ಚಿತ್ತಾರದ ಚಿತ್ರಗಳಿವೆ ಎಂದರೆ ಇವರ ಪ್ರಖ್ಯಾತಿ ಅಥ೯ವಾದೀತು.


  FAMOUS WESTERN GHAT FOLK ART HASE CHITTARA OF LOCAL TRIBES DIVARU COMMUNITY IS SPREADING WORLDWIDE BY REAL ARTIST BELONGS TO THIS COMMUNITY MR ESHWAR HASUVANTHE CELL PHONE NUMBER 9481935579.

    ಹಸೆ ಚಿತ್ತಾರ ಎ೦ಬ ತನ್ನ ಜನಾ೦ಗದ ಕಲೆಯನ್ನ ವಿಶ್ವಕ್ಕೆ ಪ್ರಸರಣ ಮಾಡಿದ ಅಪೂವ೯ ಕಲಾವಿದ ಈಶ್ವರ್ ಹಸುವಂತೆಯ ಒಂದು ವಿಸ್ಮಯ ಕಥೆ

    1982 ಅಥವ ನಂತರದ ಇಸವಿಯಲ್ಲಿ ಸಾಗರದಲ್ಲಿ ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ ಗೌಡ, ಸಿಗರೇಟ್ ನಾಗರಾಜ್, ರಿಕ್ಷಾ ಮೋಹನ್, ಪ್ರೇಡರಿಕ್, ಮಂಡಗಳಲೆ ನಾರಾಯಣಪ್ಪಾ, ತೀ.ನಾ.ಶ್ರೀನಿವಾಸ್ ಮತ್ತು ಅನೇಕ ಪ್ರಗತಿ ಪರರು ಸೇರಿ ಭದ್ರಾವತಿ ಬಿ.ಕೃಷ್ಣಪ್ರನವರು ಸ್ಥಾಪಿಸಿದ ದಲಿತ ಸಂಘಷ೯ ಸಮಿತಿ ಸಾಗರ ತಾಲ್ಲೂಕಿನಲ್ಲಿ ಪ್ರೊಫೆಸರ್ ರಾಚಪ್ಪನವರ ಪ್ರಯತ್ನ ದಿಂದ ಪ್ರಾರಂಭವಾಗಿತ್ತು.

  ಕೋಲಾರದ ಕಾಮರೇಡ್ ನಾರಾಯಣಸ್ವಾಮಿಯ ಸತತ ಪ್ರಯತ್ನದಿಂದ ನಾವೆಲ್ಲ ಈ ಸಂಘಟನೆಯಲ್ಲಿ ಸಂಪೂಣ೯ ಬಾಗಿಗಳಾದಾಗ ಈ ಈಶ್ವರ್ ಹಸುವಂತೆ ಕೂಡ ನಮ್ಮ ಸಹಪಾಟಿ.

  ಆನಂದಪುರಂ ನ ರೈತ ಬಂದು ಗ್ರಾಮೋದ್ಯೋಗ ಎಂಬ ಸಂಸ್ಥೆಯಲ್ಲಿ ಅಕ್ಕಿ ಮಾರಾಟದ ನಗದು ಅಕ್ರಮ ಸಾಗಾಣಿಕೆ ಸಂದಭ೯ದಲ್ಲಿ ನಾಲ್ಕು ಜನ ಕಾಮಿ೯ಕರನ್ನ ತೀಥ೯ಹಳ್ಳಿ ಸಮೀಪದ ಅರಳಸುರುಳಿ ಎಂಬ ಹಳ್ಳಿಯಲ್ಲಿ ಲಾರಿಯಲ್ಲಿ ಕೊಲೆ ಮಾಡಿ ಹಣ ದರೋಡೆ ಮಾಡಿದ ಪ್ರಕರಣ ನಾವೆಲ್ಲ ಗೆಳೆಯರು ತನಿಖೆಗಾಗಿ ಒತ್ತಾಯಿಸಿದ ಪ್ರಕರಣ ಉದ್ದಿಮೆ ಮಾಲಿಕರಾದ ಸುಬ್ಬಣ್ಣ ನಾಯಕರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಅವರಿಗೆ ಅಧಿಕಾರಿಗಳು ಬೆಂಬಲಿಸಿದ್ದು ಆಗ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆ ಕಾಮಿ೯ಕರ ಹಿತ ಕಾಪಾಡದೆ ಉದ್ದಿಮೆದಾರರ ಪರ ವಹಿಸಿದ್ದರಿಂದ ಪರಿಸ್ತಿತಿ ವಿಕೋಪಕ್ಕೆ ಹೋಗಿ ಲಾಠಿ ಚಾಜ೯, ಬಂದನ ಮತ್ತು ಸುಳ್ಳು ಕೇಸುಗಳಿಂದ ಪ್ರಕ್ಷುಬ್ದ ಪರಿಸ್ಥಿತಿ ಉ೦ಟಾಗಿತ್ತು. 

 ಕಾಮಿ೯ಕ ಮುಖಂಡರಾದ ಪೂವಪ್ಪ (ಇವತ್ತು ಆನಂದಪುರದ ಪ್ರತಿಷ್ಠಿತ ಮಾರುತಿ ಇಂಡಸ್ಟ್ರಿಸ್ ಮಾಲಿಕರು), ಸೈಮನ್ ಡಿಸೋಜರ ಮೇಲೆ ಪೋಲಿಸರಿ೦ದ ಬೀಕರ ಹಲ್ಲೆ ಮಾಡಿಸಿದ ಮಾಲಿಕ ಸುಬ್ಬಣ್ಣ ನಾಯಕರು ಕಾಮಿ೯ಕ ವಲಯದಲ್ಲಿ ಈ ಕಾರಣದಿಂದ ವಿಲನ್ ಆಗಿದ್ದರು ಆಗ ಈಶ್ವರ ಹಸುವಂತೆ ನಮ್ಮ ಜೊತೆ ಇದ್ದರು.

   ನಂತರ ಬೀದಿ ನಾಟಕಗಳಿಂದ, ಹೆಗ್ಗೋಡಿನ ನೀನಾಸಂ ವಿದ್ಯಾಥಿ೯ ಆಗಿ, ಚರಕ ಪ್ರಸನ್ನರ ಚರಕ ಎಂಬ ಖಾದಿ ದೇಶಿ ಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಸ್ಥಾನವಹಿಸಿ ನಂತರ ತಮ್ಮ ಕುಲದ ಹಸೆ ಚಿತ್ರದ ಬಗ್ಗೆ ದೀಘ೯ ಅಧ್ಯಯನ ಮಾಡಿ ಈ ಕಲೆಯಲ್ಲಿ ಪರಿಣಿತಿ ಪಡೆದು, ಇದನ್ನ ದೇಶ ಮತ್ತು ಅಂತರ್ ರಾಷ್ಟ್ರ ಮಟ್ಟಕ್ಕೆ ಒಯ್ದ ಕೀತಿ೯ ಇವರದ್ದು.

  ಇದಕ್ಕಾಗಿ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಇವರಿಗೆ ಸಿಕ್ಕಿದೆ ಆದರೆ ಪ್ರಶಸ್ತಿಯ ಗೀಳು ಇಲ್ಲದ ಇವರು ಸದಾ ಈ ಕಲೆಯ ಪ್ರಸರಣದ ಬಗ್ಗೆ ಜವಾಬ್ದಾರಿಯ ಕೆಲಸ ನಿರಂತರವಾಗಿ ನಡೆಸಿದ್ದಾರೆ.

  ಹಸೆ ಚಿತ್ರದಿಂದಾಗಿ ಇಡೀ ವಿಶ್ವ ಪಯ೯ಟನೆ ಮಾಡಿದ್ದಾರೆ ಇವರು ಬಿಡಿಸಿದ ಹಸೆ ಚಿತ್ರ ನಮ್ಮ ರಾಜ್ಯದ ರಾಜ ಭವನದಿಂದ ಪ್ರಾರಂಭವಾಗಿ ರಾಷ್ಟ್ರಪತಿ ಭವನ, ಅಮೇರಿಕಾ, ಇಂಗ್ಲೆಂಡ್ ಆಸ್ಟ್ರೇಲಿಯದ ಪ್ರಮುಖ ಸ್ಥಳ ತಲುಪಿದೆ.

   ಹಸೆ ಚಿತ್ರದ ಜೊತೆ ಇದನ್ನ ಬಿಡಿಸುವ ಕಾರಣ, ಚಿತ್ರದ ಅಥ೯ ಬಲ್ಲವರು ಇವರೊಬ್ಬರೆ. ಅನೇಕರು ಇದನ್ನ ಕಲಿತು ಬರೆಯುತ್ತಾರೆ ಆದರೆ ಮಲೆನಾಡಿನ ಪಶ್ಚಿಮ ಘಟ್ಟದ ದೀವರು ಎಂಬ ಗುಡ್ಡಗಾಡು ಪದ್ದತಿಗಳ ಆಚರಣೆಯ ವಿಶಿಷ್ಟ ಜನಾ೦ಗದ ಈ ಕಲೆ ರಕ್ತಗತವಾಗಿ ಬಂದಿರುವ ಅದರ ಪರಿಣಿತಿಯೊ೦ದಿಗೆ ಅದರ ಸಮಗ್ರ ಸಂಶೋದನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಸುವಂತೆ ಗ್ರಾಮದ ಹಸೆ ಚಿತ್ತಾರದ ಕಲಾವಿದ ಈಶ್ವರ್ ಹಸುವಂತೆಗೆ ಸಂಬಂದ ಪಟ್ಟ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಬಹುದಾದ ಯೋಗ್ಯತೆ ಇದೆ.

   ಮೊನ್ನೆ ನನ್ನ ಕಚೇರಿಗೆ ಸುಮಾರು 18 ವಷ೯ದ ನಂತರ ಬಂದಾಗ ಇದೆಲ್ಲ ನೆನಪಾಗಿ ಬರೆದೆ 2001ರಲ್ಲಿ ನಾನು ಚಿತ್ರಮಂದಿರ ಪ್ರಾರಂಬಿಸಿದಾಗ ಅಲ್ಲಿ ಇವರು ಹಸೆ ಚಿತ್ತಾರ ಬಿಡಿಸಿದ್ದರು, ಈಗ ನನ್ನ ಲಾಡ್ಜ, ಕಾಟೇಜು ಮತ್ತು ಕಲ್ಯಾಣ ಮಂಟಪದಲ್ಲಿ ಇವರ ಕೈ ಚಳಕದ ಹಸೆ ಚಿತ್ತಾರ ಮತ್ತೆ ಮೂಡಿ ಬರಲಿದೆ ಅನ್ನುವುದು ನನಗೆ ಅತ್ಯಂತ ಸಂತೋಷದ ವಿಚಾರವಾಗಿದೆ.

     ಅವರ ಹಸ್ತದ ಕಲೆಯಲ್ಲಿ ತಯಾರಾದ ಹಸೆ ಚಿತ್ತಾರದ ಚತ್ರಿ, ಗಡಿಯಾರ, ಆಕಷ೯ಕ ಸೀರೆ, ಚೂಡಿದಾರದ ಟಾಪ್ ಮತ್ತು ಚಿತ್ರಪಟಗಳು ಇಲ್ಲಿದೆ.

  ಹೆದ್ದಾರಿಯಲ್ಲಿ ಸುಲ್ತಾನ್ ಜ್ಯೂವೆಲರಿಯ ದೊಡ್ಡ ಹೊಡಿ೯೦ಗ್ಗಳಲ್ಲಿ ಇವರ ಹಸೆ ಚಿತ್ತಾರದ ಚಿತ್ರಗಳಿವೆ ಎಂದರೆ ಇವರ ಪ್ರಖ್ಯಾತಿ ಅಥ೯ವಾದೀತು.

  FAMOUS WESTERN GHAT FOLK ART HASE CHITTARA OF LOCAL TRIBES DIVARU COMMUNITY IS SPREADING WORLDWIDE BY REAL ARTIST BELONGS TO THIS COMMUNITY MR ESHWAR HASUVANTHE CELL PHONE NUMBER 9481935579.

  

 ಹೊಂಬುಜ ರೆಸಿಡೆನ್ಸಿ ಆನಂದಪುರಂನ ವಿಕ್ಟೋರಿಯಾ ಕಾಟೇಜ್ ನಲ್ಲಿ ಹಸೆ ಚಿತ್ತಾರ.

Comments

  1. good article sir,,.thanks .its usefull information us

    ReplyDelete
  2. It's not the art form of devru. Its originally of HASLAR tribe. Residing in the region.
    All communities of that part of malenad practice it. Write it on their walls use it in festivals..
    It's been practiced by okkaligaru..madivalaru.. shetru.. devaru.. gondaru..etc farming communities.

    ReplyDelete

Post a Comment

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ