# ಸಾಗರದ ವಿಶೇಷ ವ್ಯಕ್ತಿ, ಒಂದು ಕಾಲದ ಕಾ೦ಗ್ರೇಸ್ ಶಕ್ತಿ ಕುರುಬರ ಲಿಂಗಣ್ಣ#
ಜನ ಪ್ರೀತಿಯಿ೦ದ ಇವರನ್ನ ಕುರುಬರ ಲಿಂಗಣ್ಣ, ಕುರಿ ಲಿಂಗಣ್ಣ ಅಂತ ಕರಿತಾರೆ.
ಇವರು 7 ಸಾರಿ ಸಾಗರದ ಮುನ್ಸಿಪಲ್, ಪುರಸಭೆ ಮತ್ತು ನಗರ ಸಭೆಗಳಿಗೆ ನಿರಂತರವಾಗಿ ಆಯ್ಕೆ ಆದವರು, 3 ರಿಂದ 4 ಸಾರಿ ಅಧ್ಯಕ್ಷರಾಗಿದ್ದವರು, ವಿಶೇಷ ಅಂದರೆ ಈ ಸೋಲಿಲ್ಲದ ಸರದಾರರ ಒಂದೇ ಒಂದು ಸ್ವಜಾತಿ ಮನೆ, ಓಟು ಇಲ್ಲ!!
ಈಗ ವಯಸ್ಸಿನ ಕಾರಣದಿಂದ ರಾಜಕೀಯವಾಗಿ ನಿವೃತ್ತರಾಗಿದ್ದಾರೆ, ಇವರ ಮಗ ಮಂಜುನಾಥ್ ಕೂಡ ಸಾಗರದಲ್ಲಿ ಎರೆಡು ಬಾರಿ ನಗರ ಸಭೆಗೆ ಆಯ್ಕೆ ಆಗಿದ್ದಾರೆ, ಕಳೆದ ವಷ೯ ಇವರ ವಾಡ್೯ನಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯನ್ನ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ದೇವರ ಎದುರು ಯಾರಿಂದಲೂ ಒಂದೇ ರೂಪಾಯಿ ಹಣ ಪಡೆದಿಲ್ಲ ಅಂತ ಪ್ರಮಾಣ ಮಾಡಿ ವಿತರಿಸಿದ್ದರು, ಫಲಾನುಭವಿಗಳು ತಾವು ಕೂಡ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಸ್ವೀಕರಿಸಿದ್ದು ರಾಜ್ಯದಲ್ಲೇ ಸುದ್ದಿ ಆಗಿತ್ತು.
ಕಾಗೋಡು ತಿಮ್ಮಪ್ಪರ ಸಮಕಾಲಿನವರಾದ ಇವರು ಮತ್ತು ಆಹಮದ್ ಆಲೀ ಖಾನ್ ಸಾಹೇಬರು ಜಿಗಣಿ ದೊಸ್ತರು, ಇವರಿಬ್ಬರ ಶ್ರಮವೇ ಕಾಗೋಡು ಕಾಂಗ್ರೇಸ್ಗೆ ಸೇರಲು ಕಾರಣ.
ಕುರುಬ ಸಮಾಜದ, ಇವತ್ತೂ ಕುರಿ ವ್ಯಾಪಾರ ಮುಂದುವರಿಸಿರುವುದರಿಂದ ಇವರ ಹೆಸರ ಮುಂದೆ, ಕುರುಬರ ಲಿಂಗಣ್ಣ ಅಂತ ಕೆಲವರು, ಇನ್ನು ಕೆಲವರು ಕುರಿ ಲಿಂಗಣ್ಣ ಅಂತ ಕರೀತಾರೆ.
ಸಾಗರದ ಕೆಳದಿ ರಸ್ತೆ ತಿರುವಿನಲ್ಲಿ ವಾಸ ಇರುವ ಲಿಂಗಪ್ಪನವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಮೊನ್ನೆ ಅವರನ್ನ ಬೇಟಿ ಮಾಡಿದಾಗ ಅನೇಕ ರಾಜಕೀಯದ ಹಳೇಯ ನೆನಪು ಮಾಡಿಕೊಂಡರು.
ಈಗಿನ ಹೊಸ ತಲೆಮಾರಿನ ಸಾಗರದ ಜನತೆಗೆ ಹಣ, ಜಾತಿ ಇಲ್ಲದೆ ಗುಣ ಒಂದರಿಂದಲೇ ದೀಘ೯ ಕಾಲ ರಾಜಕಾರಣ ಮಾಡಿದ ಇವರ ಕಥೆ ಕೇಳಿ ಆಶ್ಚಯ೯ ಪಡುತ್ತಾರೆ.# ಸಾಗರದ ವಿಶೇಷ ವ್ಯಕ್ತಿ, ಒಂದು ಕಾಲದ ಕಾ೦ಗ್ರೇಸ್ ಶಕ್ತಿ ಕುರುಬರ ಲಿಂಗಣ್ಣ#
ಜನ ಪ್ರೀತಿಯಿ೦ದ ಇವರನ್ನ ಕುರುಬರ ಲಿಂಗಣ್ಣ, ಕುರಿ ಲಿಂಗಣ್ಣ ಅಂತ ಕರಿತಾರೆ.
ಇವರು 7 ಸಾರಿ ಸಾಗರದ ಮುನ್ಸಿಪಲ್, ಪುರಸಭೆ ಮತ್ತು ನಗರ ಸಭೆಗಳಿಗೆ ನಿರಂತರವಾಗಿ ಆಯ್ಕೆ ಆದವರು, 3 ರಿಂದ 4 ಸಾರಿ ಅಧ್ಯಕ್ಷರಾಗಿದ್ದವರು, ವಿಶೇಷ ಅಂದರೆ ಈ ಸೋಲಿಲ್ಲದ ಸರದಾರರ ಒಂದೇ ಒಂದು ಸ್ವಜಾತಿ ಮನೆ, ಓಟು ಇಲ್ಲ!!
ಈಗ ವಯಸ್ಸಿನ ಕಾರಣದಿಂದ ರಾಜಕೀಯವಾಗಿ ನಿವೃತ್ತರಾಗಿದ್ದಾರೆ, ಇವರ ಮಗ ಮಂಜುನಾಥ್ ಕೂಡ ಸಾಗರದಲ್ಲಿ ಎರೆಡು ಬಾರಿ ನಗರ ಸಭೆಗೆ ಆಯ್ಕೆ ಆಗಿದ್ದಾರೆ, ಕಳೆದ ವಷ೯ ಇವರ ವಾಡ್೯ನಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯನ್ನ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ದೇವರ ಎದುರು ಯಾರಿಂದಲೂ ಒಂದೇ ರೂಪಾಯಿ ಹಣ ಪಡೆದಿಲ್ಲ ಅಂತ ಪ್ರಮಾಣ ಮಾಡಿ ವಿತರಿಸಿದ್ದರು, ಫಲಾನುಭವಿಗಳು ತಾವು ಕೂಡ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಸ್ವೀಕರಿಸಿದ್ದು ರಾಜ್ಯದಲ್ಲೇ ಸುದ್ದಿ ಆಗಿತ್ತು.
ಕಾಗೋಡು ತಿಮ್ಮಪ್ಪರ ಸಮಕಾಲಿನವರಾದ ಇವರು ಮತ್ತು ಆಹಮದ್ ಆಲೀ ಖಾನ್ ಸಾಹೇಬರು ಜಿಗಣಿ ದೊಸ್ತರು, ಇವರಿಬ್ಬರ ಶ್ರಮವೇ ಕಾಗೋಡು ಕಾಂಗ್ರೇಸ್ಗೆ ಸೇರಲು ಕಾರಣ.
ಕುರುಬ ಸಮಾಜದ, ಇವತ್ತೂ ಕುರಿ ವ್ಯಾಪಾರ ಮುಂದುವರಿಸಿರುವುದರಿಂದ ಇವರ ಹೆಸರ ಮುಂದೆ, ಕುರುಬರ ಲಿಂಗಣ್ಣ ಅಂತ ಕೆಲವರು, ಇನ್ನು ಕೆಲವರು ಕುರಿ ಲಿಂಗಣ್ಣ ಅಂತ ಕರೀತಾರೆ.
ಸಾಗರದ ಕೆಳದಿ ರಸ್ತೆ ತಿರುವಿನಲ್ಲಿ ವಾಸ ಇರುವ ಲಿಂಗಪ್ಪನವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಮೊನ್ನೆ ಅವರನ್ನ ಬೇಟಿ ಮಾಡಿದಾಗ ಅನೇಕ ರಾಜಕೀಯದ ಹಳೇಯ ನೆನಪು ಮಾಡಿಕೊಂಡರು.
ಈಗಿನ ಹೊಸ ತಲೆಮಾರಿನ ಸಾಗರದ ಜನತೆಗೆ ಹಣ, ಜಾತಿ ಇಲ್ಲದೆ ಗುಣ ಒಂದರಿಂದಲೇ ದೀಘ೯ ಕಾಲ ರಾಜಕಾರಣ ಮಾಡಿದ ಇವರ ಕಥೆ ಕೇಳಿ ಆಶ್ಚಯ೯ ಪಡುತ್ತಾರೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment