ಸಾಗರದ ಮೊದಲ ಶಾಸಕರು ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲಗೌಡರು.
ಸ್ವಾತಂತ್ರ್ಯ ನಂತರ ಸಾಗರ, ಸೊರಬ, ಹೊಸನಗರ ಮತ್ತು ತೀಥ೯ಳ್ಳಿ ತಾಲ್ಲೂಕ್ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಗೇಣಿ ರೈತರ ಶೋಷಣೆ ವಿರೋದಿಸಿ, ಗೇಣಿ ರೈತರ ಹಿತರಕ್ಷಣೆಗಾಗಿ ಪ್ರಾಂತ್ಯ ರೈತ ಸಂಘದ ಹೆಸರಲ್ಲಿ ಸಂಘಟನೆ ಪ್ರಾರ೦ಬಿಸಿದ್ದರು.
ಈ ಸಂಘಟನೆಗಳಲ್ಲಿ ಕಡಿದಾಳು ಮಂಜಪ್ಪನವರು, ಗಣಪತಿಯಪ್ಪನವರು ಪ್ರಮುಖ ಪಾತ್ರ ವಹಿಸಿದರು, ಈ ಹೋರಾಟ ಸಂಘಷ೯ಕ್ಕೆ ಕಾರಣವಾಯಿತು, ಗೇಣಿ ರೈತರ ಸಂಘಟನೆ ಭೂಮಾಲಿಕರ ಅಸಹನೆಗೆ ಕಾರಣವಾಗಿ ಗೇಣಿ ರೈತರಿಗೆ ಭೂಮಿ ನಿರಾಕರಿಸಿದ್ದು ಮುಂದೆ ಉಳುವವನೆ ಹೊಲದ ಒಡೆಯ ಎ೦ಬ ಘೋಷಣಾ ವಾಕ್ಯದಲ್ಲಿ ಇಡೀ ದೇಶದ ಗಮನ ಸೆಳೆದ ಕಾಗೋಡು ರೈತ ಹೋರಾಟ ಆಯಿತು.
ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಪಕ್ಷದ ರಾಮ ಮನೋಹರ ಲೋಹಿಯಾರನ್ನ ಕರೆ ತಂದದ್ದು, ಅವರು ಕಾಗೋಡಿನಲ್ಲಿನ ಅರಳಿ ಮರದ ಕೆಳಗೆ ಗೇಣಿ ರೈತ ಹೋರಾಟಗಾರರನ್ನ ಪ್ರೇರೇಪಿಸಿ ಬಾಷಣ ಮಾಡಿ ಸಾಗರ ರೈಲು ನಿಲ್ದಾಣದ ತಂಗುದಾಣದಲ್ಲಿ ತಂಗಿದಾಗ ಅವರನ್ನ ಬಂದಿಸಿದ್ದು ಇಡೀ ದೇಶದಲ್ಲಿ ದೊಡ್ಡ ಸುದ್ದಿ ಆಗಿತ್ತು.
ಕಾಗೋಡು ರೈತ ಹೋರಾಟದ ಪ್ರಭಾವದಿಂದ 1952 ರಲ್ಲಿ ನಡೆದ ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೊದಲ ಶಾಸಕರಾಗಿ ಆಯ್ಕೆ ಆಗಿ ರಾಜ್ಯ ವಿಧಾನಸಭೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದರು.
ಸಾಗರದ ಕ್ರೀಡಾ೦ಗಣಕ್ಕೆ ಗೋಪಾಲಗೌಡರ ಹೆಸರು ಇಡಲಾಗಿದೆ.
ಗೋಪಾಲಗೌಡರ ಸ್ಮರಣೆಗಾಗಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸಾಗರದಲ್ಲಿ ನಿಮಿ೯ಸುವ ಬೇಡಿಕೆ 60 ವಷ೯ದಿಂದಲೂ ಈಡೇರದಿರುವುದು ವಿಷಾದನೀಯ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment