Skip to main content

Posts

Showing posts with the label Part 1

4149.ಗಾಯತ್ರಿ_ಮಂತ್ರಭಾಗ_1.

ಗಾಯತ್ರಿ_ಮಂತ್ರ ಭಾಗ_1.   ಮಹರ್ಷಿ ವಿಶ್ವಾಮಿತ್ರರಿಂದ ಬಂದ ಗಾಯಿತ್ರಿ ಮಂತ್ರದ ಅರ್ಥ ಮತ್ತು ಮೂಲ ಗೊತ್ತಾ? ... ಇದನ್ನು ಗಂಡು- ಹೆಣ್ಣು-ತೃತೀಯ ಲಿಂಗಿ- ಶೂದ್ರ ಮತ್ತು ದಲಿತರೂ ಪಠಿಸಬಹುದು, ಉಪನಯನವಾದವರು,ಜನಿವಾರ ಧರಿಸುವವರು ಮಾತ್ರ ನಿತ್ಯ ತಪ್ಪದೆ ಪಠಣ ಮಾಡಲೇ ಬೇಕು.  ಅನೇಕರು ಗಾಯಿತ್ರಿ ಮಂತ್ರ ನಿತ್ಯ ಪಠಿಸುತ್ತಾರೆ ಆದರೆ ಅದರ ಅರ್ಥ,ಅದನ್ನು ರಚಿಸಿದ ಕಾಲ ಮತ್ತು ರಚನೆಕಾರರ ಬಗ್ಗೆ ಸೂಕ್ತ ಮಾಹಿತಿ ಪಡೆದಿರುವವರು ಕಡಿಮೆ ಅಂತವರಿಗಾಗಿ ಈ ಗಾಯಿತ್ರಿ ಮಂತ್ರದ ಸರಣಿ ಲೇಖನದ ಮೊದಲ ಭಾಗ ಇದು.   ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ. ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ. #ಗಾಯಿತ್ರಿ_ಮಂತ್ರ. ​ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ॥ #ಪ್ರತಿಯೊಂದು_ಪದದ_ಅರ್ಥ: ​ಓಂ: ಪರಬ್ರಹ್ಮ ಪರಮಾತ್ಮನ ಪ್ರಣವ ನಾದ ​ಭೂಃ: ಭೂಲೋಕ (ಭೌತಿಕ ಜಗತ್ತು) ​ಭುವಃ: ಭುವರ್ಲೋಕ (ಅಂತರಿಕ್ಷ) ​ಸುವಃ (ಸ್ವಃ): ಸ್ವರ್ಗಲೋಕ (ಆಧ್ಯಾತ್ಮಿಕ ಲೋಕ) ​ತತ್: ಆ ಪರಮಾತ್ಮನ ​ಸವಿತುಃ: ಸೂರ್ಯದೇವನ / ಸೃಷ್ಟಿಕರ್ತನ ​ವರೇಣ್ಯಂ: ಶ್ರೇಷ್ಠವಾದ / ಪೂಜ್ಯವಾದ ​ಭರ್ಗಃ: ದಿವ್ಯ ತೇಜಸ್ಸು / ಜ್ಞಾನದ ಪ್ರಕಾಶ ​ದೇವಸ್ಯ: ದೈವಿಕ ಶ...

Blog number 2116. ಭಾಗ -1 ಸ್ವಾಮಿ ರಾವ್ ಜೊತೆ ಮಾತುಕಥೆ.ತಮ್ಮ ಕ್ಷೇತ್ರದಲ್ಲಿ ನೆಲೆಸಿರುವ ಕರಾವಳಿಯ ಕೃಷಿ ಕಾರ್ಮಿಕ ಕುಟುಂಬಗಳ ಹಿತ ಕಾಪಾಡಲು ಪೋಲಿಸ್ ಠಾಣೆ ಎದರು ಕೋಳಿ ಪಡೆ ನಡೆಸಿದ ಸ್ವಾಮಿ ರಾವ್

#ಭಾಗ_1 #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ವಿಧಾನ_ಸಭಾ_ಕ್ಷೇತ್ರದ_ಮಾಜಿ_ಶಾಸಕರಾದ #ಬಿ_ಸ್ವಾಮಿರಾವ್_ಸಂದರ್ಶನ. #ಅವರ_ವಿಧಾನಸಭಾ_ಕ್ಷೇತ್ರದ_ಪೋಲಿಸ್_ರಾಣೆ_ಎದರು #ಶಾಸಕರಾದ_ಸ್ವಾಮಿರಾವ್_ಕೋಳಿ_ಪಡೆ_ನಡೆಸಿದ್ದು_ಯಾಕೆ? https://youtu.be/LkxFd67EIP8?feature=shared ಕೊಡಗು -ಚಿಕ್ಕಮಗಳೂರು- ಶಿವಮೊಗ್ಗ - ಉತ್ತರ ಕನ್ನಡ ಜಿಲ್ಲೆಗಳಿಗೆ ಕರಾವಳಿ ತೀರದಿಂದ ವಲಸೆ ಬಂದ ಕೃಷಿ ಕಾರ್ಮಿಕರ ಕುಟುಂಬಗಳ ಕಥೆ ದೊಡ್ಡದು.   ಅವರ ಧಾರ್ಮಿಕ ಆಚರಣೆ, ಆಹಾರ ಪದ್ಧತಿ, ಅವರು ಮನೋರಂಜನೆಗಾಗಿ ನಡೆಸುವ ಕೋಳಿ ಪಡೆಗಳು ಅವರು ವಲಸೆ ಹೋಗಿ ನೆಲೆಸಿದ ಜಾಗದಲ್ಲೂ ಬದಲಾಗದೆ ಮುಂದುವರಿದಿದೆ.  ಶಿವರಾಮ ಕಾರಂತರ ಚೋಮನ ದುಡಿಯಂತೆ ಅವರ ಹಕ್ಕು ಆಚರಣೆ ಗೌರವಿಸಿ ಬೆಂಬಲಿಸಿದವರು ಹೊಸನಗರದ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸ್ಟಾಮಿರಾವ್,

Blog number 1928. ಭಾಗ 1 ಕೆ. ವಿ. ಸುರೇಶ್ ಕುಮಾರ್ ಸಂದರ್ಶನ

#ಭಾಗ_1. https://youtu.be/Y4YDhPlbEC0?feature=shared #ಇವರು_ಕೆ_ವಿ_ಸುರೇಶ್, #ಕೋಳಿವಾಡ_ವೇದನಾರಾಯಣ_ಭಟ್ಟರ_ಪುತ್ರ_ಸುರೇಶ್ #ಇವರ_ಮನೆಯಲ್ಲೇ_ದ್ವಾರಕಾ_ಸಂಶೋಧಿಸಿದ_S_R_ರಾವ್_ಜನಿಸಿದ್ದು #ಇವರ_ತಂದೆಯ_ಪುಸ್ತಕ_ಸಂಗ್ರಹದಿಂದ_ರಾಮಾಯಣ_ಮಹಾಭಾರತ_ಮಲೆಗಳಲ್ಲಿ_ಮದುಮಗಳು #ನಾನು_5_6ನೇ_ತರಗತಿ_ಓದುವಾಗ_ನಮ್ಮ_ತಂದೆ_ನನ್ನ_ಓದಿನ_ಹಸಿವು_ಇಂಗಿಸಿದ್ದರು #ಆನಂದಪುರಂ_ಇತಿಹಾಸ_ಎಂಬ_ನನ್ನ_ಪುಸ್ತಕದ_ಪ್ರಕಟನೆಗೆ_ಇವರ_ಸಹಕಾರವಿದೆ.       ನನ್ನ ಅಣ್ಣನ ಶಾಲಾ ಸಹಪಾಟಿ ನನ್ನ ತಂದೆಯ ಕಿರಿಯ ಗೆಳೆಯರಾಗಿದ್ದ ಕೆ.ವಿ.ಸುರೇಶ್ ಆನಂದಪುರಂ ಇತಿಹಾಸದ ಮಾಹಿತಿಗಳ ಕಣಜ.   ನಾನು ಬರೆದಿರುವ #ಆನಂದಪುರಂ_ಇತಿಹಾಸ ಪ್ರಸ್ತಕಕ್ಕೆ ಇವರ ಸಹಕಾರ ಹೆಚ್ಚು ಇವರಿಂದ ಪಡೆದಿದ್ದೇನೆ.    ಇವರ ತಂದೆ ವೇದ ನಾರಾಯಣ ಭಟ್ಟರು ಅಸಮಾನ್ಯರು,  ಮುಳುಗಿದ ದ್ವಾರಕೆ ಸಂಶೋಧಿಸಿದ ಪ್ರಖ್ಯಾತ ಸಂಶೋದಕ S.R. ರಾವ್ ಜನಿಸಿದ್ದು ಇವರ ಮನೆಯಲ್ಲೇ.   ಇವರ ಸರಣಿ ಸಂದರ್ಶನ ನೋಡಿ. ಆನಂದಪುರಂನ ಮೊದಲ ವಿಲೇಜ್ ಪಂಚಾಯಿತಿ ಚೇರ್ಮನ್ ಅದವರು ಎ.ಆರ್. ವೆಂಕಟಾಚಲಯ ಅಯ್ಯಂಗಾರ್ ಇವರು ವಿದ್ಯಾ ಮಂತ್ರಿಗಳಾಗಿದ್ದ ಎ.ಆರ್. ಬದರಿನಾರಾಯಣ ಅಯ್ಯಂಗಾರ್ ಅಣ್ಣ ಅವರ ಒಡನಾಟದ ಬಗ್ಗೆ ಈ ಸಂದರ್ಶನವಿದೆ.

ಭಾಗ-1 ಲೋಕಸಭಾ ಚುನಾವಣೆ

#ಪ್ರಸಕ್ತ ರಾಜಕಾರಣದ ಒಳಗುಟ್ಟು # ( ಕೆ.ಅರುಣ್ ಪ್ರಸಾದ್ ಇವರಿಂದ ಲೋಕಸಭಾ ಚುನಾವಣಾ ಅಂಕಣ) ಭಾಗ 1. ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಚುನಾವಣಾ ತಯಾರಿ.    ನಿನ್ನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬ...