Skip to main content

Posts

Showing posts from September, 2019

ಮೈಸೂರಲ್ಲಿ ಜಾವ ಬೈಕ್ ಡಿಲೆವರಿ, ಸೀಟ್ ಗೆ ಶಿವಮೊಗ್ಗ ಪೂಸ್ವಾಮಿ

# ಮೈಸೂರಲ್ಲಿ ಜಾವಾ ಬೈಕ್ ಖರೀದಿಸಿದವರು ಶಿವಮೊಗ್ಗಕ್ಕೆ ಇವರನ್ನ ಹುಡುಕಿಕೊಂಡು ಬರುತ್ತಿದ್ದರೆಂದರೆ !? #   1965ರ ಕಾಲದಲ್ಲಿ ಇವರದ್ದು ಅದ್ದೂರಿಯ ಜೀವನ, ಜಾವ ಬೈಕಿಗೆ ಲಗತ್ತಾದ ಸೀಟು ತಯಾರಿಸುವುದರಲ್ಲಿ ಇವರದ್ದು ಎತ್ತಿದ ಕೈ ರಾಜ್ಯದಲ್ಲೇ ಹೆಸರುವಾಸಿ, ಈಗಿನ Sports ಬೈಕ್ ಖರೀದಿಸುವ ಶೋಕಿ ಇರುವ ಯುವ ಜನಾ೦ಗದಂತೆ ಆಗಿನ ಯುವ ಜನಾ೦ಗ ಜಾವಾ ಬೈಕ್ ಗೆ ಫಿದಾ ಆಗಿದ್ದ ಕಾಲ, ಎಡಕಲ್ಲು ಗುಡ್ಡದ೦ತ ಪ್ರಖ್ಯಾತ ಸಿನಿಮಾದ ಹಾಡಿನಲ್ಲಿ ನಾಯಕ ಚಂದ್ರಶೇಖರ್, ನಾಯಕಿ ಜಯಂತಿ ಜಾವಾ ಬೈಕ್ ನಲ್ಲಿ ಪ್ರಣಯಗೀತೆ ಹಾಡುತ್ತಾ ಸಾಗುವುದು ಉದಾಹರಣೆ.   ಆ ಬೈಕಿನ ಸೀಟು ತಯಾರಿಸಿದವರು ಶಿವಮೊಗ್ಗದ ಪೂಸ್ವಾಮಿ ಪ್ರಕಾಶ್ & ಬ್ರದರ್ಸ್ ಮಾಲಿಕರು ಮೊದಲಿಗೆ ನೆಹರು ರೋಡಿನ ಚಂದ್ರು ಸ್ಟುಡಿಯೋ ಪಕ್ಕದಲ್ಲಿ ಇದ್ದರು ಈಗ ನೆಹರು ರಸ್ತೆಯ ಮೂರನೆ ತಿರುವಿನ ಸನ್ಮಾನ್‌ ಹೋಟೆಲ್ ಎದರು ಸ್ವಂತ ಕಟ್ಟಡದಲ್ಲಿ ಸುಪುತ್ರ ಗಿರಿ ಜೊತೆ ಬೆಡ್ ಕುಷ್ ನ್ ಗಳ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದಾರೆ.    1954ರಲ್ಲಿ ಹಾಡ್೯ವೇರ್ ವ್ಯವಹಾರದಿಂದ ಈಗಿನ ಬೆಡ್ ಕುಷ್ ನ್ , ಸೋಪಾ, ಕಿಟಕಿ ಕಟ೯ನ್ಗಳನ್ನ ಗ್ರಾಹಕರ ಆಯ್ಕೆಗೆ ತಕ್ಕ೦ತೆ ತಯಾರಿಸಿ ಕೊಡುತ್ತಾರೆ.   ಇವರ ಉದ್ದಿಮೆಯಲ್ಲಿ ನಿತ್ಯವೂ ಹೊಸ ಟ್ರೆಂಡ್ ಬರುತ್ತದೆ ಅದನ್ನ ಇವರ ಮಗ ಗಿರಿ ಮಾರುಕಟ್ಟೆ ಮಾಡುತ್ತಾರೆ.   ಇವರಲ್ಲಿ 2500 ರಿಂದ 2 ಲಕ್ಷದ 50 ಸಾವಿರದ ವರೆಗಿನ ಹಾಸಿಗೆ ಇದೆ, ದೊಡ್ಡ ದೊಡ್ಡ ಲಾಡ್ಜ್, ನಸ

MY NEW BAR TROLLEY

# ನನ್ನ ಸಂಗ್ರಹಕ್ಕೆ ಬಂದ ಹೊಸ ಬಾರ್ ಟ್ರಾಲಿ# ಬಹಳ ವಷ೯ಗಳಿ೦ದ ಬಾರ್ ಟ್ರಾಲಿ ಒಂದನ್ನ ಖರೀದಿಸಬೇಕು ಅಂತಿದ್ದೆ ಆದರೆ ಆಗಿರಲಿಲ್ಲ ಅಂತೂ ಇ೦ತೂ ತೀಮಾ೯ನ ಮಾಡಿ ಬಾರ್ ಟ್ರಾಲಿಯನ್ನ ಸ್ಥಳಿಯವಾಗಿಯೇ ಶಿವಮೊಗ್ಗದ  ಕಾಪೆ೯೦ಟರ್ ಹತ್ತಿರ ಮಾಡಿಸಿದೆ ಇವತ್ತು ನನ್ನ ಇಷ್ಟದಂತೆ ತಯಾರಾಗಿ ಬಂದಿದೆ. ಸುಮಾರು ಆರು ಸಾವಿರದಲ್ಲಿ ತಯಾರಿಗಿದೆ, ಆನ್ ಲೈನ್ ನಲ್ಲಿ ಇದು 20 ಸಾವಿರಕ್ಕಿಂತ ಹೆಚ್ಚು.   #Recieved Bar trolley today #   So many years back I wanted to buy but couldn't, local carpenter prepared this on my design, today reached home, total cost nearly Rs 6000,in online its cost more than Rs 20 thousand.

ನೇಕಾರರ ಕಷ್ಟದ ಜೀವನ

# ರಾಣಿ ಬೆನ್ನೂರಿನ ನೇಕಾರರ ನಾಯಕ ಮಾಜಿ ಪುರಸಭಾ ಸದಸ್ಯ ಮಿತ್ರ ದಿಗಡಊರು ಗುರು# ನಮ್ಮಲ್ಲಿಗೆ ಎರಡು ವಷ೯ದ ಹಿಂದೆ ಬಂದಾಗ ಅವರಲ್ಲಿ ನೇಕಾರ ವೃತ್ತಿಯ ಬಗ್ಗೆ ಅನೇಕ ವಿಚಾರದ ಬಗ್ಗೆ ವಿಚಾರಿಸಿದ್ದೆ, ಸಮಾದಾನವಾಗಿ ವಿವರಿಸಿದ ಅವರು ಒಮ್ಮೆ ರಾಣಿ ಬೆನ್ನೂರಿಗೆ ಬನ್ನಿ ಅಂತ ಹೇಳಿದ್ದರು. ಮೊನ್ನೆ ರಾಣಿಬೆನ್ನೂರಿಗೆ ಹೋಗಿದ್ದೆ   ಕಾಂಗ್ರೇಸ್ ನ ಕೋಳಿವಾಡರ ಆತ್ಮೀ ಯ ವಲಯದಿಂದ ಪಕ್ಷೇತರ ಶಾಸಕ ಶಂಕರ್ ರ ವಲಯ ಸೇರಿದ್ದ ಗುರು ಈ ಬಾರಿಯ ಪುರಸಭಾ ಚುನಾವಣೆಯಲ್ಲಿ 19 ಮತದಿಂದ ಸೋತಿದ್ದರು, ಇವರ ತಾಯಿ ಕೂಡ ಒಮ್ಮೆ ಪುರಸಭಾ ಸದಸ್ಯರಾಗಿದ್ದರು. ಇವರ ಸಂಘದಿಂದ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಗೆ ಕೈ ಮಗ್ಗದ ಸೀರೆ ಸಮಪಿ೯ಸಿದ್ದನ್ನ ವಿವರಿಸಿದರು.   ಅನೇಕ ಸಿನಿಮಾ ರಂಗದವರಿಗೆ, ರಾಜಕಾರಣಿಗಳಿಗೆ, ಪ್ರತಿಷ್ಟಿತರಿಗೆ ಅವಶ್ಯವಿರುವ ಹತ್ತಿ ಸೀರೆ ಸರಭರಾಜು ಮಾಡಿದವರು.   ಈಗ ನೇಕಾರರ ಭವಣೆ ಮತ್ತು ಮುಂದಿನ ತಲೆಮಾರು ಈ ಉದ್ಯೋಗದಿಂದ ದೂರವಾಗುವ ಸಾಧ್ಯತೆ ಬಗ್ಗೆ ಹೇಳಿದರು.   ನಿಜ ನೇಕಾರರು ದಿನಕ್ಕೆ 300 ಗಳಿಸುವುದು ಕಷ್ಟವಂತೆ, ಸಕಾ೯ರ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದು ತುಂಬಾ ಸಹಾಯವಾಗಿದೆ ಅಂತೆ.   ಕೈಮಗ್ಗದ ಹೆಸರಲ್ಲಿ ಕೊಟ್ಯಾ೦ತರ ರೂಪಾಯಿ ಹಣ ಲಪಟಾಯಿಸುವ ವ್ಯವಸ್ಥೆ ನಡೆದಿದೆ ಅಂತಾರೆ.   ಪ್ರಸಿದ್ದ ಮೂಡಲ ಮನೆ ದಾರಾವಾಹಿಗೆ ಸೀರೆ ಸರಭರಾಜು ಮಾಡಿದವರು ಇವರು.   ಅಂತಹ ಒಂದು ಸೀರೆ ನೆನಪಿಗಾಗಿ ಖರೀದಿಸಿದೆ. ಇವರ ಪೋನ್

#ಚಂದ್ರನ ಮೇಲೆ ಇಳಿದ ಆ ಕ್ಷಣದ ವೀಕ್ಷಕ ವಿವರಣೆ ಕೇಳಿದ ನೆನಪು 50 ವಷ೯ದ ನಂತರ#

# ಈ ಮೊದಲ ಚಂದ್ರ ಯಾನದ ರೇಡಿಯೋ ವೀಕ್ಷಕ ವಿವರಣೆ ಕೇಳಿದ ನೆನಪು # ನಾನು ಹುಟ್ಟಿದ ದಿನಾ೦ಕ 9 ಪೆಬ್ರವರಿ 1965. ಅವತ್ತು ಜುಲೈ 20 -1969 ಭಾರತೀಯ ಕಾಲಮಾನ ರಾತ್ರಿ 1.47 ಕ್ಕೆ ನೀಲ್ ಆಮ್೯ ಸ್ಟ್ರಾ೦ಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿದ ಮೊದಲ ಮಾನವ ಇವರನ್ನ ಚಂದ್ರಲೋಕಕ್ಕೆ ಕರೆದೊಯ್ದ ಅಂತರಿಕ್ಷ ನೌಕೆ ಅಪೋಲೋ 11. ಆದರೆ ಅವತ್ತು ನನ್ನ ವಯಸ್ಸು 4  ವಷ೯ 5 ತಿಂಗಳು 14 ದಿನ ನನಗೆ ಇದೆಲ್ಲ ಮಾಹಿತಿ ಅವತ್ತು ಇರಲಿಲ್ಲ.   ಬಿದನೂರು ನಗರದ ದೇವಗಂಗೆ ನನ್ನ ತಾಯಿ ತವರೂರೂ, ನನ್ನ ದೊಡ್ಡಮ್ಮನ ಮನೆ. ಅವತ್ತು ನಾವೆಲ್ಲ ನಮ್ಮ ತಾಯಿಯೊ೦ದಿಗೆ ಅಲ್ಲಿದ್ದೆವು, ಈ ಮಾನವ ಚಂದ್ರ ಯಾನದ ಬಗ್ಗೆ ತಿಳಿಯಲೆಂದೆ ನಮ್ಮಣ್ಣ ನಾಗರಾಜ್ ನಮ್ಮ ಮನೆ ಆನಂದಪುರದ ಯಡೇಹಳ್ಳಿಯ ಮನೆಯಿಂದ ರೇಡಿಯೋ ತಂದಿದ್ದ.   ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಕಟಾ೦ಜನದಲ್ಲಿ ( ವಿದ್ಯುತ್ ಸಂಪಕ೯ ಇಲ್ಲದ ಆ ದಿನಗಳಲ್ಲಿ) ನಡು ರಾತ್ರಿ ನಮಗೆ ಅಥ೯ ಆಗದ ಇಂಗ್ಲೀಷ್ ಭಾಷೆಯ BBC ವೀಕ್ಷಕ ವಿವರಣೆ ಕೇಳುತ್ತಾ ನಮ್ಮಣ್ಣ ವಿಜಯೋತ್ಸವದ ಕೇಕೆ ಹಾಕಿ ನಮಗೆಲ್ಲ ಚಂದ್ರನ ಮೇಲೆ ಮನುಷ್ಯ ಇಳಿದ ಅಂದಾಗ ನಂಬಲು ಸಾಧ್ಯವೇ ಆಗಲಿಲ್ಲ. ಸ್ವಲ್ಪ ಹೊತ್ತಲ್ಲಿ ಬಿದನೂರು ನಗರಕ್ಕೆ ಹೋಗಿದ್ದ ದೇವಗಂಗೆಯ ಯುವ ಪಡೆ ನಮ್ಮ ದೊಡ್ಡಣ್ಣ ಮಂಜುನಾಥರನ್ನ ಬಿಡಲು ಬಂದಿತ್ತು, ಅವರಲ್ಲಿ ಪಕೀರಣ್ಣ, ಜಗ್ಗಣ್ಣ ಮತ್ತು ಚಂದ್ರ ಶೆಟ್ಟರ ನೆನಪಿದೆ ಈಗಿನ ಜ್ಞಾನದಂತೆ ಅವರೆಲ್ಲ ಯುವಕರು ಮಧ್ಯಪಾನ ಮಾಡಿ ಬಂದವರು ಅವರಿಗೆ ನ