# ರಾಣಿ ಬೆನ್ನೂರಿನ ನೇಕಾರರ ನಾಯಕ ಮಾಜಿ ಪುರಸಭಾ ಸದಸ್ಯ ಮಿತ್ರ ದಿಗಡಊರು ಗುರು#
ನಮ್ಮಲ್ಲಿಗೆ ಎರಡು ವಷ೯ದ ಹಿಂದೆ ಬಂದಾಗ ಅವರಲ್ಲಿ ನೇಕಾರ ವೃತ್ತಿಯ ಬಗ್ಗೆ ಅನೇಕ ವಿಚಾರದ ಬಗ್ಗೆ ವಿಚಾರಿಸಿದ್ದೆ, ಸಮಾದಾನವಾಗಿ ವಿವರಿಸಿದ ಅವರು ಒಮ್ಮೆ ರಾಣಿ ಬೆನ್ನೂರಿಗೆ ಬನ್ನಿ ಅಂತ ಹೇಳಿದ್ದರು.
ಮೊನ್ನೆ ರಾಣಿಬೆನ್ನೂರಿಗೆ ಹೋಗಿದ್ದೆ
ಕಾಂಗ್ರೇಸ್ ನ ಕೋಳಿವಾಡರ ಆತ್ಮೀ ಯ ವಲಯದಿಂದ ಪಕ್ಷೇತರ ಶಾಸಕ ಶಂಕರ್ ರ ವಲಯ ಸೇರಿದ್ದ ಗುರು ಈ ಬಾರಿಯ ಪುರಸಭಾ ಚುನಾವಣೆಯಲ್ಲಿ 19 ಮತದಿಂದ ಸೋತಿದ್ದರು, ಇವರ ತಾಯಿ ಕೂಡ ಒಮ್ಮೆ ಪುರಸಭಾ ಸದಸ್ಯರಾಗಿದ್ದರು.
ಇವರ ಸಂಘದಿಂದ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಗೆ ಕೈ ಮಗ್ಗದ ಸೀರೆ ಸಮಪಿ೯ಸಿದ್ದನ್ನ ವಿವರಿಸಿದರು.
ಅನೇಕ ಸಿನಿಮಾ ರಂಗದವರಿಗೆ, ರಾಜಕಾರಣಿಗಳಿಗೆ, ಪ್ರತಿಷ್ಟಿತರಿಗೆ ಅವಶ್ಯವಿರುವ ಹತ್ತಿ ಸೀರೆ ಸರಭರಾಜು ಮಾಡಿದವರು.
ಈಗ ನೇಕಾರರ ಭವಣೆ ಮತ್ತು ಮುಂದಿನ ತಲೆಮಾರು ಈ ಉದ್ಯೋಗದಿಂದ ದೂರವಾಗುವ ಸಾಧ್ಯತೆ ಬಗ್ಗೆ ಹೇಳಿದರು.
ನಿಜ ನೇಕಾರರು ದಿನಕ್ಕೆ 300 ಗಳಿಸುವುದು ಕಷ್ಟವಂತೆ, ಸಕಾ೯ರ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದು ತುಂಬಾ ಸಹಾಯವಾಗಿದೆ ಅಂತೆ.
ಕೈಮಗ್ಗದ ಹೆಸರಲ್ಲಿ ಕೊಟ್ಯಾ೦ತರ ರೂಪಾಯಿ ಹಣ ಲಪಟಾಯಿಸುವ ವ್ಯವಸ್ಥೆ ನಡೆದಿದೆ ಅಂತಾರೆ.
ಪ್ರಸಿದ್ದ ಮೂಡಲ ಮನೆ ದಾರಾವಾಹಿಗೆ ಸೀರೆ ಸರಭರಾಜು ಮಾಡಿದವರು ಇವರು.
ಅಂತಹ ಒಂದು ಸೀರೆ ನೆನಪಿಗಾಗಿ ಖರೀದಿಸಿದೆ.
ಇವರ ಪೋನ್ ನಂಬರ್- 98442 34036
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment