# ಈ ಮೊದಲ ಚಂದ್ರ ಯಾನದ ರೇಡಿಯೋ ವೀಕ್ಷಕ ವಿವರಣೆ ಕೇಳಿದ ನೆನಪು #
ನಾನು ಹುಟ್ಟಿದ ದಿನಾ೦ಕ 9 ಪೆಬ್ರವರಿ 1965.
ಅವತ್ತು ಜುಲೈ 20 -1969 ಭಾರತೀಯ ಕಾಲಮಾನ ರಾತ್ರಿ 1.47 ಕ್ಕೆ ನೀಲ್ ಆಮ್೯ ಸ್ಟ್ರಾ೦ಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿದ ಮೊದಲ ಮಾನವ ಇವರನ್ನ ಚಂದ್ರಲೋಕಕ್ಕೆ ಕರೆದೊಯ್ದ ಅಂತರಿಕ್ಷ ನೌಕೆ ಅಪೋಲೋ 11. ಆದರೆ ಅವತ್ತು ನನ್ನ ವಯಸ್ಸು 4 ವಷ೯ 5 ತಿಂಗಳು 14 ದಿನ ನನಗೆ ಇದೆಲ್ಲ ಮಾಹಿತಿ ಅವತ್ತು ಇರಲಿಲ್ಲ.
ಬಿದನೂರು ನಗರದ ದೇವಗಂಗೆ ನನ್ನ ತಾಯಿ ತವರೂರೂ, ನನ್ನ ದೊಡ್ಡಮ್ಮನ ಮನೆ. ಅವತ್ತು ನಾವೆಲ್ಲ ನಮ್ಮ ತಾಯಿಯೊ೦ದಿಗೆ ಅಲ್ಲಿದ್ದೆವು, ಈ ಮಾನವ ಚಂದ್ರ ಯಾನದ ಬಗ್ಗೆ ತಿಳಿಯಲೆಂದೆ ನಮ್ಮಣ್ಣ ನಾಗರಾಜ್ ನಮ್ಮ ಮನೆ ಆನಂದಪುರದ ಯಡೇಹಳ್ಳಿಯ ಮನೆಯಿಂದ ರೇಡಿಯೋ ತಂದಿದ್ದ.
ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಕಟಾ೦ಜನದಲ್ಲಿ ( ವಿದ್ಯುತ್ ಸಂಪಕ೯ ಇಲ್ಲದ ಆ ದಿನಗಳಲ್ಲಿ) ನಡು ರಾತ್ರಿ ನಮಗೆ ಅಥ೯ ಆಗದ ಇಂಗ್ಲೀಷ್ ಭಾಷೆಯ BBC ವೀಕ್ಷಕ ವಿವರಣೆ ಕೇಳುತ್ತಾ ನಮ್ಮಣ್ಣ ವಿಜಯೋತ್ಸವದ ಕೇಕೆ ಹಾಕಿ ನಮಗೆಲ್ಲ ಚಂದ್ರನ ಮೇಲೆ ಮನುಷ್ಯ ಇಳಿದ ಅಂದಾಗ ನಂಬಲು ಸಾಧ್ಯವೇ ಆಗಲಿಲ್ಲ.
ಸ್ವಲ್ಪ ಹೊತ್ತಲ್ಲಿ ಬಿದನೂರು ನಗರಕ್ಕೆ ಹೋಗಿದ್ದ ದೇವಗಂಗೆಯ ಯುವ ಪಡೆ ನಮ್ಮ ದೊಡ್ಡಣ್ಣ ಮಂಜುನಾಥರನ್ನ ಬಿಡಲು ಬಂದಿತ್ತು, ಅವರಲ್ಲಿ ಪಕೀರಣ್ಣ, ಜಗ್ಗಣ್ಣ ಮತ್ತು ಚಂದ್ರ ಶೆಟ್ಟರ ನೆನಪಿದೆ ಈಗಿನ ಜ್ಞಾನದಂತೆ ಅವರೆಲ್ಲ ಯುವಕರು ಮಧ್ಯಪಾನ ಮಾಡಿ ಬಂದವರು ಅವರಿಗೆ ನಾವೆಲ್ಲ ಸರಿ ರಾತ್ರಿಯಲ್ಲಿ ಮಲಗದೆ ರೇಡಿಯೋ ಆಲಿಸುವುದು ಅಚ್ಚರಿ ಆಯಿತು.
ನಮ್ಮಣ್ಣ ಚಂದ್ರನ ಮೇಲೆ ನೀಲ್ ಆಮ್೯ ಸ್ಟ್ರಾ೦ಗ್ ಇಳಿದ ಸುದ್ದಿ ಹೇಳಿದ, ಇವತ್ತು ನನಗೆ ನೆನಪಿದೆ ಆ ಯುವ ಪಡೆ ಇದನ್ನ ನಂಬಲೇ ಇಲ್ಲ ಇದಲ್ಲ ಸುಳ್ಳು, ಚಂದ್ರಲೋಕ ಅಂದರೆ ದೇವರ ಲೋಕ ಅಲ್ಲಿ ಮನುಷ್ಯ ಹೋಗಲು ಸಾಧ್ಯವೇ ಇಲ್ಲ ಅಂತ ವಾದಿಸಿದ್ದು!?.
ಅವರೆಲ್ಲ ಅವರ ಮನೆಗೆ ಹೋದ ನಂತರ ಬೆಳಗಾದಾಗ 2ನೇ ವ್ಯಕ್ತಿ ಆಲ್ಡ್ರೀನ್ ಚ೦ದ್ರನ ಮೇಲೆ ಇಳಿದರೆಂದು ನಮಗೆ ಬುದ್ಧಿ ಬಂದ ವಯಸಲ್ಲಿ ಗೊತ್ತಾಯಿತು.
ಸುಮಾರು 50 ವಷ೯ದ ನಂತರ ಭಾರತದ ಚಂದ್ರಯಾನ 2ರ ದಿನ ಇದೆಲ್ಲ ನೆನಪಾಯಿತು.
ಇವತ್ತು ಚಂದ್ರನ ಮೇಲೆ ಗಾಳಿ ಇಲ್ಲ ಅಮೇರಿಕಾ ಧ್ವಜ ಹೇಗೆ ಹಾರುತ್ತಿದೆ ಎಂದು ಚಂದ್ರಯಾನ ಪ್ರಶ್ನೆ ಮಾಡುವವರೂ ಇದ್ದಾರೆ!
(ಧ್ವಜ ಹಾರುವುದಿಲ್ಲ ಅಲ್ಲಿ ನಿವಾ೯ತ ಪ್ರದೇಶ ಎಂದು ಪ್ರಾಥಮಿಕ ಜ್ಞಾನ ಇರುವ ವಿಜ್ನಾನಿಗಳು ಧ್ವಜ ಸ್ಪಷ್ಟವಾಗಿ ಕಾಣಲು ಬೇರೆ ವ್ಯವಸ್ಥೆ ಮಾಡಿದ್ದಾರೆಂದು ಹೇಳುತ್ತಾರೆ)
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment