# ಮೈಸೂರಲ್ಲಿ ಜಾವಾ ಬೈಕ್ ಖರೀದಿಸಿದವರು ಶಿವಮೊಗ್ಗಕ್ಕೆ ಇವರನ್ನ ಹುಡುಕಿಕೊಂಡು ಬರುತ್ತಿದ್ದರೆಂದರೆ !? #
1965ರ ಕಾಲದಲ್ಲಿ ಇವರದ್ದು ಅದ್ದೂರಿಯ ಜೀವನ, ಜಾವ ಬೈಕಿಗೆ ಲಗತ್ತಾದ ಸೀಟು ತಯಾರಿಸುವುದರಲ್ಲಿ ಇವರದ್ದು ಎತ್ತಿದ ಕೈ ರಾಜ್ಯದಲ್ಲೇ ಹೆಸರುವಾಸಿ, ಈಗಿನ Sports ಬೈಕ್ ಖರೀದಿಸುವ ಶೋಕಿ ಇರುವ ಯುವ ಜನಾ೦ಗದಂತೆ ಆಗಿನ ಯುವ ಜನಾ೦ಗ ಜಾವಾ ಬೈಕ್ ಗೆ ಫಿದಾ ಆಗಿದ್ದ ಕಾಲ, ಎಡಕಲ್ಲು ಗುಡ್ಡದ೦ತ ಪ್ರಖ್ಯಾತ ಸಿನಿಮಾದ ಹಾಡಿನಲ್ಲಿ ನಾಯಕ ಚಂದ್ರಶೇಖರ್, ನಾಯಕಿ ಜಯಂತಿ ಜಾವಾ ಬೈಕ್ ನಲ್ಲಿ ಪ್ರಣಯಗೀತೆ ಹಾಡುತ್ತಾ ಸಾಗುವುದು ಉದಾಹರಣೆ.
ಆ ಬೈಕಿನ ಸೀಟು ತಯಾರಿಸಿದವರು ಶಿವಮೊಗ್ಗದ ಪೂಸ್ವಾಮಿ ಪ್ರಕಾಶ್ & ಬ್ರದರ್ಸ್ ಮಾಲಿಕರು ಮೊದಲಿಗೆ ನೆಹರು ರೋಡಿನ ಚಂದ್ರು ಸ್ಟುಡಿಯೋ ಪಕ್ಕದಲ್ಲಿ ಇದ್ದರು ಈಗ ನೆಹರು ರಸ್ತೆಯ ಮೂರನೆ ತಿರುವಿನ ಸನ್ಮಾನ್ ಹೋಟೆಲ್ ಎದರು ಸ್ವಂತ ಕಟ್ಟಡದಲ್ಲಿ ಸುಪುತ್ರ ಗಿರಿ ಜೊತೆ ಬೆಡ್ ಕುಷ್ ನ್ ಗಳ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದಾರೆ.
1954ರಲ್ಲಿ ಹಾಡ್೯ವೇರ್ ವ್ಯವಹಾರದಿಂದ ಈಗಿನ ಬೆಡ್ ಕುಷ್ ನ್ , ಸೋಪಾ, ಕಿಟಕಿ ಕಟ೯ನ್ಗಳನ್ನ ಗ್ರಾಹಕರ ಆಯ್ಕೆಗೆ ತಕ್ಕ೦ತೆ ತಯಾರಿಸಿ ಕೊಡುತ್ತಾರೆ.
ಇವರ ಉದ್ದಿಮೆಯಲ್ಲಿ ನಿತ್ಯವೂ ಹೊಸ ಟ್ರೆಂಡ್ ಬರುತ್ತದೆ ಅದನ್ನ ಇವರ ಮಗ ಗಿರಿ ಮಾರುಕಟ್ಟೆ ಮಾಡುತ್ತಾರೆ.
ಇವರಲ್ಲಿ 2500 ರಿಂದ 2 ಲಕ್ಷದ 50 ಸಾವಿರದ ವರೆಗಿನ ಹಾಸಿಗೆ ಇದೆ, ದೊಡ್ಡ ದೊಡ್ಡ ಲಾಡ್ಜ್, ನಸಿ೯೦ಗ್ ಹೊಂ, ಶ್ರೀಮಂತರ ಬೆಡ್ ರೂಂ ಮತ್ತು ಡ್ರಾಯಿಂಗ್ ರೂಂಗಳಿಗೆ ಇವರೇ ಬೇಕು ಅಂತಿಮ ಸ್ಪಶ೯ನೀಡಲು.
ತಂದೆ, ಮಗರ ನೇರ ನಡೆ ನುಡಿ, ಸೌಜನ್ಯದ ನಡುವಳಿಕೆ, ಪ್ರಾಮಾಣಿಕ ವತ೯ನೆ ಇವರ ಜೊತೆ ವ್ಯವಹರಿಸಲು ಸುಲಭ ಅನ್ನಿಸುತ್ತೆ.
ನಾನು 2012ರಲ್ಲಿ ಹೊಸದಾಗಿ ಲಾಡ್ಜ್ ಉದ್ಯಮ ಪ್ರಾರಂಬಿಸಿದಾಗ ಶಿವಮೊಗ್ಗದ ಪ್ರಖ್ಯಾತ ಕುಷನ್ ಮಾರಾಟಗಾರರನ್ನ ಗೆಳೆಯರು ಪರಿಚಯಿಸಿದ್ದರು ಆತ ಹಣದಾಯಿ ಆತನಿಂದ ಮೋಸ ಹೋಗಿದ್ದೆ ನಂತರ ಇವರಿ೦ದ ನನ್ನ ಆಯ್ಕೆಯ ಸರಿಪಡಿಸಿದೆ ಅಲ್ಲಿ೦ದ ಇವತ್ತಿನ ವರೆಗೆ ನಮ್ಮ ವ್ಯವಹಾರಕ್ಕೆ, ಗೃಹ ಅಲOಕಾರಕ್ಕೆ ನಾನು ಇವರನ್ನೆ ಅವಲ೦ಬಿಸಿದ್ದೇನೆ.
ನನ್ನ ನೂತನ ಲಾಡ್ಜ್ ನ 40 ರೂಂನ ಬೆಡ್ ಗಳು, ಕಟ೯ನ್ಗಳು ರಿಸೆಪ್ಷನ್ ಆಪೀಸುಗಳಿಗೆ ಇವರದ್ದೇ ಕೌಶಲ್ಯದ ಟಚ್ ಇದೆ.
ಇವರು ನೆನಪಿಸುವುದು ಶಿವಮೊಗ್ಗದ ಕಾತಿ೯ಕ್ ಏಜೆನ್ಸಿ ಮಾಲಿಕರಾದ ಸುಂದರ್ ರಾಜ್ ರ ಸಹಾಯ ಸಹಕಾರ, ಇವರ ಎದುರಿನ ಇನ್ನೊವ೯ ಪ್ರಖ್ಯಾತ ಉದ್ದಿಮೆದಾರರಾದ ಮಹಾವೀರ ಗ್ಲಾಸ್ & ಪ್ಲೇ ವುಡ್ ಸಹೋದರರು ಪೂಸ್ವಾಮಿ ಎಂದರೆ ಗ್ರೇಟ್ ಎನ್ನುತ್ತಾರೆ.
ಇವರ ಸೆಲ್ ನಂಬರ್ ಮತ್ತು ವಿಳಾಸ
ಪ್ರಕಾಶ್ ಬೆಡ್ಸ್, ಸನ್ಮಾನ್ ಹೋಟೆಲ್ ಎದುರು, 3ನೇ ತಿರುವು ನೆಹರೂ ರಸ್ತೆ ಶಿವಮೊಗ್ಗ.
ಸೆಲ್ ನಂಬರ್ 7975632024
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment