Skip to main content

Posts

Showing posts with the label Nyamathi Umesh veg merchant

Blog number 3407. ನ್ಯಾಮತಿ ತರಕಾರಿ ಉಮೇಶಣ್ಣರ ನೆನಪುಗಳು

#ಶಿವಮೊಗ್ಗದ_ತರಕಾರಿ_ಉಮೇಶಣ್ಣ_ಇನ್ನು_ನೆನಪು_ಮಾತ್ರ #ನ್ಯಾಮತಿ_ಉಮೇಶ್_ಆಚಾರ್_ಅವರ_ನಿಜನಾಮ #ಅವರಿಂದ_22_ಅಕ್ಟೋಬರ್_2016_ರಂದು_ನಮ್ಮ_ಚಂಪಕಪ್ಯಾರಡೈಸ್_ಉದ್ಘಾಟನೆ_ಮಾಡಿಸಿದ್ದೆ. #vegetables #nyamathi #ಶಿವಮೊಗ್ಗ #apmcmarket #umeshanna        ಶಿವಮೊಗದ APMC ತರಕಾರಿ ಉಮೇಶಣ್ಣ ವಿಶೇಷ ವ್ಯಕ್ತಿಗಳು ಅವರ ಊರು ನ್ಯಾಮತಿ, ಅಸಾಧಾರಣ ನೆನಪಿನ ಶಕ್ತಿ, ವ್ಯವಹಾರದಲ್ಲಿ ಚತುರತೆ, ಎದುರಿನಲ್ಲಿರುವವರ ಮನಸ್ಸನ್ನು ರೀಡಿಂಗ್ ಮಾಡುವ ಚಾಕ ಚಕ್ಯತೆ ಅವರಲ್ಲಿತ್ತು.   ಅವರಿಗೆ ಪರಿಚಯ ಇಲ್ಲದವರೇ ಇಲ್ಲ ಅಷ್ಟು ಪಾದರಸದಂತ ಚಟುವಟಿಕೆಯ ವ್ಯಕ್ತಿ ಉಮೇಶಣ್ಣ.    ತರಕಾರಿ ಮಾರುಕಟ್ಟೆಯ ವಿಚಾರದಲ್ಲಿ ಇಡೀ ದೇಶದ ಮಾರುಕಟ್ಟೆಗಳನ್ನು ನೋಡಿ ಬಂದವರು ಅವರು,ವಿಶ್ವಕರ್ಮ ಸಮಾಜಕ್ಕೆ ಸೇರಿದ  ಅವರಿಗೆ  ಗೆಳೆಯರು ಮಾತ್ರ ಇಡೀ ರಾಜ್ಯಾದ್ಯಂತ ಇದ್ದರು.  ಅವರಿಗೆ ಪ್ರತಿ ವರ್ಷ ಅವರ ಕಾರು ಬದಲಿಸಲೇಬೇಕು ಅವರ ಕಾರು ಚಾಲನೆ ವೇಗ 120 ಕಿಲೋಮೀಟರ್ ಗಿಂತ ಹೆಚ್ಚಿನ ವೇಗ.   ಮಾಜಿ ಮಂತ್ರಿ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ  ರಾಮುಲು ಅವರನ್ನು ನಮ್ಮಲ್ಲಿಗೆ ಕರೆ ತಂದು ಪರಿಚಯಿಸಿದ್ದು ಇದೇ ಉಮೇಶಣ್ಣ, ರಾಮುಲು ಅವರಿಗೆ ಉಮೇಶಣ್ಣರ ಮೇಲೆ ವಿಶೇಷ ಗೌರವ ಇತ್ತು, ಇವರಿಬ್ಬರೂ ಬಳ್ಳಾರಿಯಲ್ಲಿ ಸರಾಯಿ ಕಂಪೆನಿಯಲ್ಲಿ ಒಟ್ಟಾಗಿ ನೌಕರಿ ಮಾಡಿದ್ದರಂತೆ.   ತ...