Skip to main content

Blog number 3407. ನ್ಯಾಮತಿ ತರಕಾರಿ ಉಮೇಶಣ್ಣರ ನೆನಪುಗಳು

#ಶಿವಮೊಗ್ಗದ_ತರಕಾರಿ_ಉಮೇಶಣ್ಣ_ಇನ್ನು_ನೆನಪು_ಮಾತ್ರ

#ನ್ಯಾಮತಿ_ಉಮೇಶ್_ಆಚಾರ್_ಅವರ_ನಿಜನಾಮ

#ಅವರಿಂದ_22_ಅಕ್ಟೋಬರ್_2016_ರಂದು_ನಮ್ಮ_ಚಂಪಕಪ್ಯಾರಡೈಸ್_ಉದ್ಘಾಟನೆ_ಮಾಡಿಸಿದ್ದೆ.


#vegetables #nyamathi #ಶಿವಮೊಗ್ಗ #apmcmarket #umeshanna 

  
   ಶಿವಮೊಗದ APMC ತರಕಾರಿ ಉಮೇಶಣ್ಣ ವಿಶೇಷ ವ್ಯಕ್ತಿಗಳು ಅವರ ಊರು ನ್ಯಾಮತಿ,
ಅಸಾಧಾರಣ ನೆನಪಿನ ಶಕ್ತಿ, ವ್ಯವಹಾರದಲ್ಲಿ ಚತುರತೆ, ಎದುರಿನಲ್ಲಿರುವವರ ಮನಸ್ಸನ್ನು ರೀಡಿಂಗ್ ಮಾಡುವ ಚಾಕ ಚಕ್ಯತೆ ಅವರಲ್ಲಿತ್ತು.

  ಅವರಿಗೆ ಪರಿಚಯ ಇಲ್ಲದವರೇ ಇಲ್ಲ ಅಷ್ಟು ಪಾದರಸದಂತ ಚಟುವಟಿಕೆಯ ವ್ಯಕ್ತಿ ಉಮೇಶಣ್ಣ.

   ತರಕಾರಿ ಮಾರುಕಟ್ಟೆಯ ವಿಚಾರದಲ್ಲಿ ಇಡೀ ದೇಶದ ಮಾರುಕಟ್ಟೆಗಳನ್ನು ನೋಡಿ ಬಂದವರು ಅವರು,ವಿಶ್ವಕರ್ಮ ಸಮಾಜಕ್ಕೆ ಸೇರಿದ  ಅವರಿಗೆ  ಗೆಳೆಯರು ಮಾತ್ರ ಇಡೀ ರಾಜ್ಯಾದ್ಯಂತ ಇದ್ದರು.

 ಅವರಿಗೆ ಪ್ರತಿ ವರ್ಷ ಅವರ ಕಾರು ಬದಲಿಸಲೇಬೇಕು ಅವರ ಕಾರು ಚಾಲನೆ ವೇಗ 120 ಕಿಲೋಮೀಟರ್ ಗಿಂತ ಹೆಚ್ಚಿನ ವೇಗ.
  ಮಾಜಿ ಮಂತ್ರಿ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ  ರಾಮುಲು ಅವರನ್ನು ನಮ್ಮಲ್ಲಿಗೆ ಕರೆ ತಂದು ಪರಿಚಯಿಸಿದ್ದು ಇದೇ ಉಮೇಶಣ್ಣ, ರಾಮುಲು ಅವರಿಗೆ ಉಮೇಶಣ್ಣರ ಮೇಲೆ ವಿಶೇಷ ಗೌರವ ಇತ್ತು, ಇವರಿಬ್ಬರೂ ಬಳ್ಳಾರಿಯಲ್ಲಿ ಸರಾಯಿ ಕಂಪೆನಿಯಲ್ಲಿ ಒಟ್ಟಾಗಿ ನೌಕರಿ ಮಾಡಿದ್ದರಂತೆ.

  ತರ್ಕ ಬದ್ಧವಾದ ಮಾತು, ತೂಕದ ಮಾತುಗಳು ಉಮೇಶಣ್ಣ ಅಂದರೆ ಒಳ್ಳೆಯ ಪಂಚಾಯಿತಿದಾರರು ಎಂಬ ಹೆಸರು ಇತ್ತು.

  ನ್ಯಾಮತಿಯ ಜನ ವ್ಯವಹಾರದಲ್ಲಿ ಬಳಸುವ ಮಾತಾಡುವ ರಹಸ್ಯ ಸಂಕೇತದ ಭಾಷೆ ಅವರಿಗೆ ಗೊತ್ತಿತ್ತು

 ತಮ್ಮ ಜೇಬಿನಲ್ಲಿರುತ್ತಿದ್ದ ನೋಟಿನ ಕಂತೆ ಹೊರತೆಗೆಯದೇ ಇಂಥದ್ದೇ ಡಿನೋಮಿನೇಷನ್ ನೋಟನ್ನು ಮಾತ್ರ ತಮ್ಮ ಬೆರಳುಗಳಿಂದಲೇ ಗುರುತಿಸಿ ಹೊರ ತೆಗೆಯುವ ವಿಶೇಷ ಜಾಣ್ಮೆಯ ಕೌಶಲ್ಯವು ಅವರಿಗೆ ಇತ್ತು.

   ನಮ್ಮ ಸಂಸ್ಥೆಗೆ 2016ರಲ್ಲಿ ಜನರೇಟರ್ ಖರೀದಿ ಮಾಡುವಲ್ಲಿ ಮತ್ತು ನಮ್ಮ ದೊಡ್ಡದಾದ ಹೊಸ ಲಾಡ್ಜ್ 2018 ರಿಂದ ಕಾಮಗಾರಿ ಪ್ರಾರಂಬಿಸಲು ಹೆಚ್ಚು ಒತ್ತಾಯಿಸಿದವರು ಈ ಉಮೇಶಣ್ಣನವರು.

  ಕೆಲವು ವರ್ಷ ವಾರಕ್ಕೆ ಎರಡು ದಿನ ಸಾಗರ ಮಾರ್ಗದಲ್ಲಿ ತರಕಾರಿ ಸರಬರಾಜು ಮಾಡುತ್ತಿದ್ದಾಗ ನಮ್ಮ ಸಂಸ್ಥೆಗೆ ತರಕಾರಿ ಇವರಿಂದಲೇ ಖರೀದಿಸುತ್ತಿದ್ದೆ ಆಗ ವಾರದಲ್ಲಿ ಎರೆಡು ಬಾರಿ ಇವರ ಬೇಟಿ ಆಗುತ್ತಿತ್ತು.

  ಎಂತದೇ ವಸ್ತುವನ್ನು ಮಾರಾಟ ಮಾಡುವ ಮತ್ತು ಎಂಥವರನ್ನೂ ಪರಿಚಯ ಮಾಡಿಕೊಂಡು ಅವರ ಆತ್ಮೀಯ ಬಳಗದಲ್ಲಿ ಸೇರುವಂತ ವ್ಯಕ್ತಿತ್ವ ಅವರದ್ದು.

  ಒಂದು  ಸಂಗತಿ ಅವರು ಹೇಳಿದ್ದು ಇನ್ನೂ ನೆನಪಿದೆ... ಅವರು 90ರ ದಶಕದಲ್ಲಿ ಬೆಂಗಳೂರಿಂದ ಹೆಲಿಕ್ಯಾಪ್ಟರ್ ನಲ್ಲಿ ಪ್ರಯಾಣಿಸಿ ತಮ್ಮ ಊರು ನ್ಯಾಮತಿಯಲ್ಲಿ ಇಳಿಯಲೇ ಬೇಕೆಂಬ ಆಸೆಗೆ ಬಿದ್ದು ಬಾಡಿಗೆ ಹೆಲಿಕಾಪ್ಟರ್ ನಲ್ಲಿ ನ್ಯಾಮತಿಗೆ ಬಂದಿಳಿದರಂತೆ, ಇವರ ಗೆಳೆಯರು ಇವರನ್ನ ಹೆಲಿಪ್ಯಾಡನಿಂದ ಅವರು ತಂದ ಬುಲೆಟ್ ಬೈಕನಲ್ಲಿ ಇವರನ್ನ ಮನೆಗೆ ಸೇರಿಸಿದ್ದರಂತೆ ಅಂದರೆ ಹೆಲಿಕ್ಯಾಪ್ಟರ್ ಪ್ರಯಾಣ ಮಾಡಬೇಕೆನ್ನುವ ಅದನ್ನು ತಿಳಿಯಬೇಕೆನ್ನುವ ಅವರ ಅದಮ್ಯಆಸಕ್ತಿ ಹೇಗಾದರೂ ಸಾದಿಸಲೇ ಬೇಕೆಂಬ ಛಲ ಅವರದ್ದು.

  ಬಾಲ್ಯದಿಂದ ಅತ್ಯಂತ ಕಷ್ಟದಿಂದ ಜೀವನ ಸಾಗಿಸಿದ ಕಥೆಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದರು,ಅದೆಲ್ಲವನ್ನು ದಾಟಿ ಶಿವಮೊಗ್ಗದಲ್ಲಿ ಆಸ್ತಿ ಅಂತಸ್ತುಗಳನ್ನು ಪಡೆಯುವ ತನಕ ಅವರು ಸಾಗಿ ಬಂದ ಜೀವನದ ಕಥೆ - ವ್ಯಥೆಗಳನ್ನು ನನ್ನ ಹತ್ತಿರ ಹೇಳಿಕೊಂಡಿದ್ದರು.

 ಒಂದೆರಡು ಬಾರಿ ಅವರ ಮನೆಗೆ ಹೋಗಿ ಚಹಾ ಕುಡಿದಿದ್ದೆ, ನಾಲ್ಕು ವರ್ಷ ಹಿಂದೆ ಅವರಿಗೆ ಪೆರಾಲಿಸಸ್ ಆದಾಗ ಅವರಿಗೆ ಕೇರಳದ ಕೋಟೆಕಲ್ ಆಯುರ್ವೇದ ಔಷಧಿ ತಲುಪಿಸಲು ಅವರ ಮನೆಗೆ ಹೋಗಿದ್ದೆ.

   ನಂತರ ಅವರ ಆರೋಗ್ಯ ಸುಧಾರಿಸಿ ಪುನಃ ವಾಹನ ಚಲಾಯಿಸುವಂತ ಆರೋಗ್ಯ ಪಡೆದಿದ್ದರು ಆದರೆ ದುರಾದೃಷ್ಟ ಪುನಃ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದವರು ನಿನ್ನೆ ಸಂಜೆ 4-ಏಪ್ರಿಲ್- 2025ರ ಶುಕ್ರವಾರ ಆರು ಗಂಟೆಗೆ ಇಹಲೋಕ ಯಾತ್ರೆ ಮುಗಿಸಿದರೆಂದು ಅವರ ಹಿರಿಯ ಪುತ್ರ ವಿನೋದ್ ಫೋನಾಯಿಸಿದಾಗ ತಿಳಿಯಿತು, ಈ ಮಧ್ಯದಲ್ಲಿ ಅವರ ಬೇಟಿ ಮಾಡ ಬೇಕೆಂದಿದ್ದೆ ಅದು ಸಾಧ್ಯವಾಗಲಿಲ್ಲ.

   ನ್ಯಾಮತಿ ತರಕಾರಿ ಉಮೇಶಣ್ಣ ವಿಶೇಷ ಬುದ್ಧಿ ಶಕ್ತಿಯ ವ್ಯಕ್ತಿ ಅವರಿಗೇನಾದರು ಬಾಲ್ಯದಲ್ಲಿ ವಿದ್ಯಾಬ್ಯಾಸ ದೊರೆತಿದ್ದರೆ ಇನ್ನೂ ದೊಡ್ಡ ಸಾಧನೆ ಮಾಡುತ್ತಿದ್ದರೇನೊ ಇಂತಹ ವಿಶೇಷ ವ್ಯಕ್ತಿಗಳೆಂದರೆ ನನಗೆ ಆಸಕ್ತಿ ಆದ್ದರಿಂದಲೇ ಅವರ ನನ್ನ ಗೆಳೆತನದ ನೆನಪು ಶಾಶ್ವತವಾಗಿರಲಿ ಎಂದು ನಮ್ಮ ಚಂಪಕಾ ಪ್ಯಾರಾಡೈಸ್ 2016 ರಲ್ಲಿ ಇವರಿಂದ ಉದ್ಘಾಟನೆ ಮಾಡಿಸಿದ್ದೆ.

  ಅವರ ಚಡನಾಟದ ನೆನಪು ಮಾಡಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ಸ್ವರ್ಗ ಪ್ರಾಪ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...