#ನಾನು_ಎಂದರೆ....
#ಮಮತಾಸಾಗರ್_ವಾಚಿಸಿದ_ಕವನ
#ಬೆಂಕಿ_ಬಿರುಗಾಳಿ_ಆಗಿದೆ
#ಕವನ_ವಾಚನ_ಪೂರ್ಣವಾಗಿ_ನೋಡಿ
#ಮಮತಾಸಾಗರ್_ಬಗ್ಗೆ_ನಾನು_ಬರೆದ_ಲೇಖನ ಇನ್ನೊಮ್ಮೆ
#mamathasagar #Nanu #viral #poem #akhilakarnatakawriters
8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ವಾಚಿಸಿದ #ನಾನು ಎಂಬ ಶಿರ್ಷಿಕೆಯ ಕವನದ ಬಗ್ಗೆ ಪರ- ವಿರೋದದ ಚರ್ಚೆ ನಡೆಯುತ್ತಿದೆ.
World Organisation of Writer ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಮಮತಾ ಜಿ. ಸಾಗರ್ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರತಿಷ್ಟಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಸಾಗರ ಪೇಟೆಯ ಮೊದಲ ಖಾಸಾಗಿ ಮಹಿಳಾ ವೈದ್ಯರು.
ಖ್ಯಾತ ಸಾಹಿತಿ ಅಂಕಣಕಾರ #ಅರವಿಂದಚೊಕ್ಕಾಡಿ ಅವರು ಈ ಕವನ ವಾಚನದ ಬಗ್ಗೆ ಅವರ ಪೇಸ್ ಬುಕ್ ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ...
ಕವಿತೆ ನಿಗೂಢವಾಗಿರಬೇಕು ನಿಜ. ಕವಿತೆಯ ಕುರಿತ ವಿಮರ್ಶೆಯೂ ನಿಗೂಢವೇ ಆಗಿದ್ದರೆ ವಿಮರ್ಶೆಯನ್ನೂ ಕವಿತೆಯೆಂದೇ ಪರಿಗಣಿಸಬೇಕಾದೀತು.
ಕಡೆಗೂ ಚರ್ಚೆಯಾಗುತ್ತಿರುವ ಕವಿತೆಯನ್ನು ನೋಡಿದೆ. ಅದು ನವ್ಯ ಸ್ಕೂಲ್ ಆಫ್ ಥಾಟ್ನ ಕವಿತೆ. ಸಮಾಜದ ಮಡಿವಂತ ಮನಸ್ಥಿತಿಯನ್ನು ಒಡೆಯುವ ಹಾಗೆಯೇ ಬರೆದು ಹಾಕುವ ಹಾಗೆ ಬರೆಯಬೇಕೆಂಬುದು ನವ್ಯದ ಸಿದ್ಧಾಂತ. ಬಹುಶಃ ನವ್ಯರಲ್ಲಿ ಅಡಿಗರೊಬ್ಬರೇ ಸೋಷಿಯಲ್ ಡೀಸೆನ್ಸಿಯನ್ನು ಸಾಹಿತ್ಯದಲ್ಲೂ ಉಳಿಸಿದವರು ಎನಿಸುತ್ತದೆ.
ಸಾಹಿತ್ಯದಲ್ಲಿ ಶೀಲ ಅಶ್ಲೀಲದ ಹಂಗು ಇರಬಾರದು ಎನ್ನುವುದು ನವ್ಯ ಸಿದ್ಧಾಂತದ ಒಂದು ಅಂಶ. ಸಾಹಿತ್ಯದಲ್ಲಿ ಶೀಲ-ಆಶ್ಲೀಲ ಇರಬಾರದು ಎಂದರೆ ಸಮಾಜದಲ್ಲಿ ಶೀಲ ಅಶ್ಲೀಲ ಇರಬಾರದು ಎಂದಲ್ಲ. ಆದರೆ ಕೆಲವು ಕವಿಗಳ ವಿಚಾರದಲ್ಲಿ ಅದು ವೈಯಕ್ತಿಕ ಬದುಕಿನಲ್ಲೂ ಶೀಲ ಇರಬೇಕಾಗಿಲ್ಲ ಎನ್ನುವ ತನಕವೂ ಹೋಗಿ ಅದರ ಸೈದ್ಧಾಂತಿಕ ಸ್ವರೂಪಕ್ಕೆ ಬಹಳ ಡ್ಯಾಮೇಜ್ ಆಗಿದೆ. ಈಗ ಪ್ರತಿಯೊಬ್ಬ ಮೊಬೈಲ್ ಫೋನ್ ಎಲ್ಲ ಮಡಿವಂತಿಕೆಯನ್ನೂ ಮೀರಿರುವುದರಿಂದ ಮಡಿವಂತಿಕೆಯನ್ನು ಸಾಹಿತ್ಯದಲ್ಲಿ ಒಡೆಯುವ ಪರಿಕಲ್ಪನೆಗೆ ದೊಡ್ಡ ಮಹತ್ವವೇನಿಲ್ಲ.
ಮಡಿವಂತಿಕೆಯನ್ನು ಒಡೆಯುವ ಪದಗಳು ಇತರೇ ಸಾಹಿತ್ಯಕ ಪರಿಕರಗಳ ಮೂಲಕ ವಿಸ್ತರಿಸಿಕೊಂಡಾಗ ಮಾತ್ರ ಅದಕ್ಕೆ ಮಹತ್ವ ಇರುವುದು. ಕವಿತೆಯ ಪೂರ್ಣ ಸ್ವರೂಪ ಸಿಕ್ಕಾಗಲಷ್ಟೆ ಕವಿತೆ ಯಾವ ರೀತಿ ಬೆಳೆಯುತ್ತಿದೆ ಎಂದು ಹೇಳಲು ಸಾಧ್ಯ. ಎಡಿಟ್ ಮಾಡಿದ ಅಷ್ಟೇ ಭಾಗವನ್ನು ನೋಡಿದರೆ ಅದು ನವ್ಯರ ಹಳೆಯ ತೆವಲಿಗಿಂತ ಹೆಚ್ಚಿನದೇನನ್ನೂ ಹೇಳುವುದಿಲ್ಲ.
ಪೂರ್ಣ ಕವನದ ವಾಚನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/V4cKiFxX8qI?si=Gq9J9XduP8KjwXtn
ಕವಿಯಿತ್ರಿ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದವರು World organisation of writer ಜಾಗತಿಕ ಸಾಹಿತ್ಯ ಪಡೆದಾಗ ನಾನು ಅವರ ಬಗ್ಗೆ ಬರೆದ ಲೇಖನ ಇಲ್ಲಿ ಇನ್ನೊಮ್ಮೆ ನೋಡಿ...
April 07, 2024
#WOW_ಜಾಗತಿಕ_ಸಾಹಿತ್ಯ_ಪ್ರಶಸ್ತಿ
#ಸ್ವೀಕರಿಸಿದ_ಮಮತಾ_ಜಿ_ಸಾಗರ್
#ಇವರ_ತಾಯಿ_ಡಾಕ್ಟರ್_ಶೇಖರಿಬಾಯಿ_ಸಾಗರದ_ಮೊದಲ_ಖಾಸಾಗಿ_ಮಹಿಳಾವೈದ್ಯರು
#ಕವಿಯಿತ್ರಿ_ಮಮತಾ_ಜಿ_ಸಾಗರ್_ಸಾಗರದ_ನಿರ್ಮಲಾ_ಹೈಸ್ಕೂಲ್_ವಿದ್ಯಾರ್ಥಿನಿ_ಆಗಿದ್ದವರು.
ಜಗತ್ತಿನ ಬರಹಗಾರರ ಕ್ರಿಯಾಶೀಲ ಪ್ರಯತ್ನಗಳನ್ನು ಕಲೆ ಹಾಕುವ ಉದ್ದೇಶದಿಂದ ಸಾಹಿತಿಗಳ ಜಾಗತಿಕ ಸಂಘಟನೆ (WOW) ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಈ ಜಾಗತಿಕ ಸಾಹಿತ್ಯ ಪ್ರಶಸ್ತಿ ಭಾರತೀಯ ಕವಿಯಿತ್ರಿ ಕನಾ೯ಟಕದ ಮಮತಾ ಜಿ.ಸಾಗರ್ ಅವರಿಗೆ ದಿನಾಂಕ 6-ಏಪ್ರಿಲ್- 2024ರಂದು ನೈಜಿರಿಯಾದ ಅಬುಜದಲ್ಲಿ ಪ್ರದಾನ ಮಾಡಲಾಗಿದೆ.
ಕಾವ್ಯ ಸಂಜೆ ಎಂಬ ಸಂಘಟನೆ ಮೂಲಕ ನಿರಂತರ ಕನ್ನಡದ ಕವಿ-ಕಾವ್ಯ- ಸಂವಾದ ಕಳೆದ 10 ವರ್ಷದಿಂದ ನಡೆಸುತ್ತಿರುವ ಮಮತಾ ಜಿ.ಸಾಗರ್ ಅವರು ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ ಪಡೆದಿದ್ದಾರೆ.
ಸಾಹಿತ್ಯಕ್ಕಾಗಿ ಕೇಂದ್ರ ಸರ್ಕಾರದ ಜ್ಯೂನಿಯರ್ ಪೆಲೋಶಿಪ್ ಇವರಿಗೆ ದೊರೆತಿದೆ.
ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಪೇಟೆಯ ಚಾಮರಾಜಪೇಟೆಯಲ್ಲಿ ಖಾಸಾಗಿ ವೈದ್ಯಕೀಯ ಕ್ಲೀನೀಕ್ ನಡೆಸುತ್ತಿದ್ದರು.
ಆ ಕಾಲದಲ್ಲಿ ಸಾಗರ ಪೇಟೆಯಲ್ಲಿ ಐತಾಳ್ ಡಾಕ್ಟರ್, ಕೊಳ್ಕೆಬೈಲ್ ಡಾಕ್ಟರ್, ಶ್ರೀಪಾದ ರಾವ್ ಡಾಕ್ಟರ್, ಕೋಳಿವಾಡ ಡಾಕ್ಟರ್, ಮೋಹನದಾಸ್ ಡಾಕ್ಟರ್, ಪೈ ಡಾಕ್ಟರ್ ಗಳ ಮಧ್ಯದಲ್ಲಿ ಶೇಖರಿ ಬಾಯಿ ಡಾಕ್ಟರ್ ಏಕೈಕ ಮಹಿಳಾ ವೈದ್ಯರಾಗಿದ್ದರು ಮತ್ತು ಪ್ರಸಿದ್ದರಾಗಿದ್ದರು ಇವರೇ ಈಗಿನ ಜಾಗತಿಕ ಪ್ರಶಸ್ತಿಗೆ ಬಾಜನರಾದ ಮಮತಾ ಜಿ.ಸಾಗರ್ ತಾಯಿ, ತಂದೆ ಎನ್. ಗಿರಿರಾಜ್.
ಮಮತಾ ಜಿ.ಸಾಗರ್ ಸಾಗರದ ಪ್ರತಿಷ್ಠಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು.
ಇವರಿಗೆ ನೀಡಲಾದ ಜಾಗತಿಕ ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡಿದ ಕಾರ್ಯಕ್ರಮ ಫ್ಯಾನ್ ಆಫ್ರಿಕನ್ ಕಂಟ್ರೀಸ್, ಅಸೋಸಿಯೇಷನ್ ಆಫ್ ರೈಟರ್ಸ್ ಅಸೆಂಬ್ಲಿ ಆಪ್ ಯುರೋಪಿಯನ್ ಪೀಪಲ್ಸ್ ಮತ್ತು ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಆಯೋಜಿಸಿತ್ತು.
Comments
Post a Comment