Skip to main content

Posts

Showing posts from August, 2021

ಮಲೆನಾಡಿನ ಅಪ್ಪೆಮಿಡಿಗೆ ಜಿಯೋಗ್ರಾಪಿಕಲ್ ಟ್ಯಾಗ್ ಸಿಕ್ಕಿ ಹತ್ತು ವರ್ಷವಾಯಿತು, ನಿನ್ನೆ ಅಂಚೆ ಇಲಾಖೆ ಅಪ್ಪೆ ಮಾವಿನ ಮಿಡಿಯ ಚಿತ್ರದ ಅಂಚೆ ಲಕೋಟೆ ಬಿಡುಗಡೆ ಮಾಡಿದೆ, ಸ್ವಾದಿಷ್ಟ ವಿಶೇಷ ಪರಿಮಳದ ಮಲೆನಾಡ ಅಪ್ಪೆಮಿಡಿಗಳ ಕಥೆ.

#ಮಲೆನಾಡಿನ_ವಿವಿಧ_ಸ್ವಾದದ_ಅಪ್ಪೆಮಿಡಿ_ಉಪ್ಪಿನಕಾಯಿ_ಸವಿದವರೇ_ಬಲ್ಲರು. #ಹತ್ತು_ವರ್ಷದ_ಹಿಂದೆ_ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ಸಿಕ್ಕಿದೆ. #ನಿನ್ನೆ_ಅಂಚೆ_ಇಲಾಖೆ_ಅಪ್ಪೆಮಿಡಿ_ಅಂಚೆ_ಲಕೋಟೆ_ಬಿಡುಗಡೆ_ಮಾಡಿದೆ. #ಏನಿದು_ಜಿಐ_ಟ್ಯಾಗ್?   ಒಂದು ಪ್ರದೇಶದ ಕೃಷಿ ಉತ್ಪನ್ನ, ವಿಶೇಷ ತಿನಿಸು, ವಿಶೇಷ ಕುಸುರಿ ವಸ್ತುಗಳು ಆಯಾ ಬೌಗೋಳಿಕ ಹವಾಮಾನ, ಮಣ್ಣು ಮತ್ತು ಸ್ಥಳಿಯರ ಪಾರಂಪರಿಕ ಕಲೆಗಳಿಂದ ವಿಶೇಷ ಉತ್ಪನ್ನ ಅನ್ನಿಸುತ್ತದೆ.   ಇವುಗಳಿಗೆ ಒ0ದು ಸಿಗ್ನೇಚರ್ ಬ್ರಾಂಡ್ ನೀಡಿ ಅದಕ್ಕೆ ಗುಣಮಟ್ಟ ಮತ್ತು ರೆಪ್ಯೂಟೇಷನ್ ಮೂಲಕ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ನೀಡುವ ವ್ಯವಸ್ಥೆ ವಿಶ್ವದ ಮುಂದುವರಿದ ದೇಶಗಳಲ್ಲಿದೆ.   ಬಾಸುಮತಿ ಅಕ್ಕಿ ಜಿಐ ಟ್ಯಾಗ್ ಪಾಕಿಸ್ತಾನ ಪಡೆದಿದೆ ನಂತರ ಭಾರತ ಈ ಬಗ್ಗೆ ಯುರೋಪಿಯನ್ ಒಕ್ಕೂಟದ ಸಂಬಂದ ಪಟ್ಟ ಸಂಸ್ಥೆಯೊಂದಿಗೆ ನಡೆಸಿದ ಹೋರಾಟದಿಂದ 11 ಸೆಪ್ಟೆಂಬರ್ 2020 ರಲ್ಲಿ ನವೀಕೃತ ಆದೇಶದಲ್ಲಿ ಭಾಸುಮತಿ ಅಕ್ಕಿ ಎರೆಡೂ ದೇಶಕ್ಕೆ GI tag ಸಿಕ್ಕಿದೆ.   ಜರ್ಮನಿ ದೇಶ ಇಂತಹ ಅನೇಕ ಉತ್ಪನ್ನಗಳಿಗೆ ವಿಶ್ವದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್ (9499) ಪಡೆದಿದೆ, ನಂತರದ ಸ್ಥಾನ ಚೀನಾದ್ದು.    ನಮ್ಮ ದೇಶದಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಜಿಐ ಟ್ಯಾಗ್ ಪಡೆದು (42) ಅಗ್ರ ಸ್ಥಾನದಲ್ಲಿದೆ ಇದರಲ್ಲಿ ಉಡುಪಿ ಬದನೆಕಾಯಿ ಗುಳ್ಳಾ (ಕ್ರ.

ಭಾಗ-59, ಆನಂದಪುರಂ ಇತಿಹಾಸ, ರಾಯರ ಪ್ರತಿನಿದಿ ಆಗಿ ಅವರ ವಾಕಿಂಗ್ ಸ್ಟಿಕ್ ಜೊತೆ ಎತ್ತಿನಗಾಡಿಯಲ್ಲಿ ಕೊಳಗ ಮತ್ತು ಗೋಣಿ ಚೀಲದ ಜೊತೆ ಗೇಣಿ ಬತ್ತದ ವಸೂಲಿಗೆ ಹೋಗುತ್ತಿದ್ದ ಆನಂದಪುರಂನ ಪೈಲ್ವಾನರ ಪಡೆ

#ಭಾಗ_59. #ಆನಂದಪುರಂ_ಇತಿಹಾಸ. #ರಾಮಕೃಷ್ಣಯ್ಯ0ಗಾರರ_ಕಟ್ಟಾಳುಗಳು. #ಗೇಣಿ_ಬತ್ತ_ವಸೂಲಿ_ಪಡೆ #ಆ_ಕಾಲದ_ಬೌನ್ಸರ್ಗಳು. #ರಾಮಕೃಷ್ಣಾಯ್ಯ೦ಗಾರರ_ವಾಕಿಂಗ್_ಸ್ಪಿಕ್_ಅವರ_ಪ್ರತಿನಿದಿ, #ಕಾಗೋಡು_ಚಳವಳಿಯಲ್ಲಿ_ಸಾವ೯ಜನಿಕ_ಸಭೆಗಳಲ್ಲಿ_ಗಣಪತಿಯಪ್ಪ_ಶಾಂತವೇರಿಗೋಪಾಲಗೌಡರಿಂದ_ವಿರೋದ     ಆನಂದಪುರ0ನ ರಾಮಕೃಷ್ಣಾಯ್ಯಂಗಾರರು ಇನಾಂದಾರರು, ಜಮೀನ್ದಾರರು, ದೈವಭಕ್ತರು, ಕೊಡುಗೈ ದಾನಿಗಳು ಹೌದು ಅಷ್ಟೇ ಕುಟುಂಬದಲ್ಲಿ ಚಾಣಕ್ಷಮತಿಗಳು ಆಗಿದ್ದರು.    ಸಾವಿರಾರು ಎಕರೆ ಜಮೀನು ಪ್ರತಿ ವರ್ಷ ಗೇಣಿದಾರರಿಗೆ ನೀಡಿ ಗೇಣಿ ಬತ್ತ ವಸೂಲಿ ಮಾಡುವುದು ಆ ಕಾಲದಲ್ಲಿ ಸುಲಭದ ಕೆಲಸ ಆಗಿರಲಿಲ್ಲ, ಗೇಣಿದಾರರ ಕುಟುಂಬಗಳು ಗೇಣಿ ಜಮೀನುಗಳು ಒಂದೇ ಕಡೇ ಇರುತ್ತಿರಲಿಲ್ಲ.   ಸಂಬಾವಿತ ಗೇಣಿದಾರರು ಕಾಲ ಕಾಲಕ್ಕೆ ಸರಿಯಾಗಿ ಗೇಣಿ ಬತ್ತ ತಂದು ರಾಯರ ಅಕ್ಕಿ ಮಿಲ್ಲಿಗೆ ಜಮ ಮಾಡುತ್ತಿದ್ದರಾದರೂ ನೈಸಗಿ೯ಕ ವಿಕೋಪದಿಂದಲೋ, ಇನ್ನಾವುದೋ ಕಾರಣದಿಂದ ಗೇಣಿ ಪಾವತಿ ಮಾಡಲಾರದವರು ರಾಯರನ್ನು ಕಂಡು ವಿಶೇಷ ಅನುಮತಿ ಪಡೆಯುತ್ತಿದ್ದರು.   ಈ ರೀತಿ ಅನುಮತಿ ಪಡೆಯದ ಬಾಕಿದಾರರಿ೦ದ ಬತ್ತ ವಸೂಲಿ ಮಾಡಿಸಲು ಆ ಕಾಲದಲ್ಲಿ ಭೂ ಮಾಲಿಕರ ವಸೂಲಿ ಪಡೆ ಇರುತ್ತಿತ್ತು ಅವರ ಕೆಲಸ ಮಾಲಿಕರ ಗುಮಸ್ತರು ನೀಡುವ ಪಟ್ಟಿಯಂತೆ ಬಾಕಿದಾರನ ಮನೆಗೆ ಹೋಗಿ ಬೆದರಿಸುವ ಅಥವ ಮನೆಯಲ್ಲಿನ ದವಸ ಧಾನ್ಯ ಅಪಹರಿಸುವ ದಬ್ಬಾಳಿಕೆ ಮಾಡುವವರಾಗಿರುತ್ತಿದ್ದರು.   ಆದರೆ ಆನಂದಪುರಂನ ಭೂ ಮಾಲಿಕರು

ಭಾಗ - 58, ಆನಂದಪುರಂ ಇತಿಹಾಸ, ಸುಮಾರು ಐದು ನೂರು ವರ್ಷ ಪುರಾತನವಾದ ಆನಂದಪುರಂ ಕೋಟೆ ಆಂಜನೇಯ ಗುಡಿ, ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗಕ್ಕಾಗಿ ಐತಿಹಾಸಿಕ ಆನಂದಪುರಂ ಕೋಟೆ ಇಬ್ಬಾಗ ಮಾಡಿದ ಬ್ರಿಟೀಷ್ ಸರಕಾರ

#ಭಾಗ_58. #ಆನ೦ದಪುರಂ_ಇತಿಹಾಸ. #ಸುಮಾರು_500_ವರ್ಷ_ಪುರಾತನ_ಅನಂದಪುರಂ_ಕೋಟೆ_ಆಂಜನೇಯ. #ಶಿವಮೊಗ್ಗ_ತಾಳಗುಪ್ಪ_ರೈಲು_ಮಾಗ೯_ಆನಂದಪುರಂ_ಕೋಟೆ_ಸೀಳಿ_ನಿರ್ಮಿಸಿದ_ಬ್ರಿಟಿಷರು . #ಕೋಟೆಯಲ್ಲಿ_ನಿದಿ_ಸಿಕ್ಕಿದ_ಜನಪದ_ಕಥೆಯೂ_ಇದೆ. #ಅಯ್ಯಂಗಾರರ_ಕುಟುಂಬ_ಪೂಜೆ_ನೈವೇದ್ಯ_ಸಾಮೂಹಿಕ_ಬೋಜನ_ಏರ್ಪಡಿಸುತ್ತಿದ್ದರು. #ಯಡೇಹಳ್ಳಿ_ಕೋಟೆ_ಹೆಸರಿನ_ಈ_ಪ್ರದೇಶ_ಕಿರಾತಕರ_ಆಳ್ವಿಕೆಯಲ್ಲಿದ್ದದ್ದನ್ನು_ರಾಜವೆಂಕಟಪ್ಪ_ನಾಯಕ_ವಶ_ಪಡೆಯುತ್ತಾರೆ. #ರಾಮಕ್ಷತ್ರಿಯ_ಕೋಟೆಗಾರರಿಂದ_ಪುನರ್_ನಿರ್ಮಾಣವಾದ_ಆನಂದಪುರ೦_ಕೋಟೆ. #ಉಗಾಂಡದಲ್ಲಿ_ಸಕ್ಕರೆ_ಕಾರ್ಖಾನೆ_ಉದ್ಯೋಗಿ_1950ರ_ದಶಕದಲ್ಲಿ_ಕೋಟೆ_ಆಂಜನೇಯ_ಗುಡಿ_ಮತ್ತು_ಪಗಾರ_ನಿರ್ಮಿಸಿದ್ದರು     ಆನಂದಪುರಂನ ಐತಿಹಾಸಿಕ ಕೆಳದಿ ಅರಸರ ಕೋಟೆಯ ಕೋಟೆ ಆಂಜನೇಯ ದೇವಸ್ಥಾನ ಸುಮಾರು 500 ವಷ೯ದಷ್ಟು ಪುರಾತನ ಇರಬಹುದು.   1938 ರಲ್ಲಿ ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುವಾಗ ಈ ಐತಿಹಾಸಿಕ ಕೋಟೆ ಸಂರಕ್ಷಿಸದೆ ಕೋಟೆ ಮದ್ಯ ಸೀಳಿಕೊಂಡು ರೈಲು ಮಾರ್ಗ ನಿರ್ಮಿಸಿದ ಉದ್ದೇಶ ದುರಂತವೇ.    ಕೆಳದಿ ರಾಜ ವೆಂಕಟಪ್ಪ ನಾಯಕರು ಈ ಕೋಟೆ (ಆಗ ಯಡೇಹಳ್ಳಿ ಕೋಟೆ ಅಂತ ಈ ಪ್ರದೇಶದ ಮೂಲ ಹೆಸರು) ಮತ್ತು ಹರತಾಳು ಪ್ರದೇಶ ಕಿರಾತಕರಿಂದ (ಚಿತ್ರದುರ್ಗದ ನಾಯಕರು ಇರಬಹುದು) ವಶಪಡಿಸಿಕೊಂಡು ಅಭಿವೃದ್ದಿ ಮಾಡಿದ ಇತಿಹಾಸದ ದಾಖಲೆಗಳು ಲಭ್ಯವಿದೆ.     ಕೆಳದಿ ರಾಜ ವೆಂಕಟ

ಸದ್ಯದಲ್ಲೇ ಬಿಡುಗಡೆ ಆಗಲಿರುವ ನನ್ನ 29 ಸಣ್ಣ ಕಥಾ ಸಂಕಲನದಲ್ಲಿ ಶೃಂಗೇಶರ ಶುಭ ನುಡಿಗಳು ಮುದ್ರಣ ಆಗಿದೆ, ನನ್ನ ಅವರ ಗೆಳೆತನಕ್ಕೆ ಬೆಳ್ಳಿಹಬ್ಬವೂ ಹೌದು

 ಶೃಂಗೇಶರು ನನ್ನ ಒತ್ತಾಯಕ್ಕೆ ನನ್ನ ಕಥಾ ಸಂಕಲನಕ್ಕೆ ಶುಭ ನುಡಿ ಬರೆದಿದ್ದಾರೆ #ಮೊದಲ_ಕಾದಂಬರಿಯಂತೆ_ಮೊದಲ_ಕಥಾ_ಸಂಕಲನಕ್ಕೂ_ಅವರ_ಸಹಕಾರವಿದೆ. #ಗೆಳೆತನಕ್ಕೆ_ಬೆಳ್ಳಿ_ಹಬ್ಬ.     ನನ್ನ ಮತ್ತು ಶೃಂಗೇಶರ ಗೆಳೆತನಕ್ಕೆ 25 ವರ್ಷದ ಗಡಿ ದಾಟಿದೆ ಒಂದು ರೀತಿ ಗೆಳೆತನದ ಬೆಳ್ಳಿಹಬ್ಬದ ಆಚರಣೆ.   ಗೆಳೆತನ ಪರಿಚಯ ಪ್ರಾರಂಭ ಆಗಿದ್ದು ನನ್ನ ರಾಜಕೀಯ ಮತ್ತು ಅವರ ಪತ್ರಕರ್ತ ಜೀವನದಿಂದ,ಈಗ ರಾಜಕೀಯದಿಂದ ನಾನು ದೂರ ಆದಂತೆ ಶೃಂಗೇಶರು ಪತ್ರಿಕೋದ್ಯಮದಿಂದ ಒಂದು ಕಾಲು ತೆಗೆದಾಗಿದೆ.   ಜಿಲ್ಲಾ ಪಂಚಾಯತ್ ನಲ್ಲಿ ಸದಸ್ಯನಾಗಿ ಭ್ರಷ್ಟಾಚಾರ ವಿರೋದದ ನನ್ನ ಹೋರಾಟದ ದಿನಗಳವು..... ಜೆ.ಹೆಚ್.ಪಟೇಲರು ಮುಖ್ಯಮಂತ್ರಿ, ಯಡೂರಪ್ಪ ವಿರೋದ ಪಕ್ಷದ ನಾಯಕರು, ಈಶ್ವರಪ್ಪ, ಕಾಗೋಡು, ಆರಗ ಜ್ಞಾನೇಂದ್ರ, ಮಂತ್ರಿ ಬಸವಣ್ಯಪ್ಪ, ಸಂಸದ ಡಿ.ಬಿ.ಚಂದ್ರೇಗೌಡರೆಲ್ಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದ ಕಾಲ ಅದು.   ಬಡವರಿಗೆ ಖರೀದಿಸಿದ ಕೋಟ್ಯಾಂತರ ರೂಪಾಯಿ ಔಷದಿ ಕಳಪೆ ಅಂತ ಜಿಲ್ಲಾ ಸರ್ಜನರು ನೀಡಿದ ಗುಪ್ತ ಮಾಹಿತಿ ಹಿಡಿದು ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನ ಬಡವರ ಔಷದಿ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಭಸ್ಮ ಅಯಿತೆಂಬ ಅಧಿಕಾರಿಗಳ ಪತ್ರಿಕಾ ಹೇಳಿಕೆ ನೋಡಿ ಗೊತ್ತಾಯಿತು ಉದ್ದೇಶ ಪೂರ್ವಕವಾಗಿ ಕಳಪೆ ಔಷದಿ ಸುಟ್ಟಿದ್ದಾರಂತ.   ಈ ಬಗ್ಗೆ ಸಿಓಡಿ ತನಿಖೆಗಾಗಿ ಹಠ ಹಿಡಿದಾಗ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದ ಉಮಾಶಂಕರ್

ದೂರದ ಉತ್ತರ ಭಾರತಿಂದ ಬಂದು ದಾರವಾಡದಲ್ಲಿ ಪ್ರಾರಂಬಿಸಿದ ಎಮ್ಮೆ ಹಾಲಿನ ಬಾಬು ಸಿಂಗ್ ಠಾಕೂರ್ ಪೇಡಾ ಪ್ರಸಿದ್ಧ ನಗರಗಳಲ್ಲಿ ಬ್ರಾಂಚ್ ಹೊಂದಿದೆ, ಜಿಯೋಗ್ರಾಪಿಕಲ್ ಇಂಡಿಕೇಷನ್ ಕೂಡ ಪಡೆದಿದೆ, ಆಹಾರ ಉದ್ಯಮದಲ್ಲಿ ಇವರ ಯಶೋಗಾಥೆ ಅನೇಕರಿಗೆ ಪ್ರೇರಣೆ

#ಮೊನ್ನೆ_ಸ್ವಾತಂತ್ರ್ಯೋತ್ಸವದ_75_ನೇ_ವಷಾ೯ಚಾರಣೆಗೆ_ನಮ್ಮ_ಸಿಬ್ಬಂದಿ_ವರ್ಗಕ್ಕೆ  #ದಾರವಾಡದ_ಪೇಡಾ  #ಬಾಬುಸಿಂಗ್_ಥಾಕೂರ್_ಪೇಡಾ  #ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ನಂಬರ್_80 #ಉತ್ತರಪ್ರದೇಶದ_ಈ_ಕುಟುಂಬದ_ಯಶೋಗಾಥೆ.  75 ನೇ ಸ್ವಾತಂತ್ರ್ಯೋತ್ಸವಕ್ಕೆ ನಮ್ಮ ಸಂಸ್ಥೆಯ ಎಲ್ಲರಿಗೂ ದಾರವಾಡದ ಪ್ರಖ್ಯಾತ ಬಾಬು ಸಿಂಗ್ ಥಾಕೂರ್ ಪೇಡಾ ನೀಡುವ ವ್ಯವಸ್ಥೆ ಮಾಡಿದ್ದೆ.   ದಾರವಾಡದ ಗೌಳಿಗರು ಸಾಕುವ ಎಮ್ಮೆ ಹಾಲು ಸಕ್ಕರೆ ಜೊತೆಗೆ ಅವರದ್ದೇ ಆದ ಕುಟುಂಬದ ವಿದಾನದಲ್ಲಿ ತಯಾರಿಸುವ ದಾರವಾಡದ ಪೇಡಾಕ್ಕೆ ಜೀಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ದೊರೆತಿದೆ ಅಂದರೆ ಅರ್ಥವಾದೀತು ದಾರವಾಡ ಪೇಡದ ಪ್ರಖ್ಯಾತಿ.   19 ನೇ ಶತಮಾನದ ಶುರುವಿನಲ್ಲಿ ದೂರದ ಉತ್ತರ ಪ್ರದೇಶದ ಉನ್ನೋ ಪ್ರಾಂತ್ರ್ಯದಿಂದ  ವಲಸೆ ಬಂದ ರಾಮ ರತನ್ ಸಿಂಗ್ ಠಾಕೂರ್ ಪ್ರಾರಂಬಿಸಿದ ಈ ಪೇಡಾ ಪ್ರಾರಂಭದಲ್ಲಿ ಸ್ಥಳಿಯ ಜನರಿಗಾಗಿ ಮಾತ್ರ ತಯಾರಿಸುತ್ತಿದ್ದರಂತೆ ಇವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅಜ್ಜನ ಉದ್ದಿಮೆಯನ್ನು ವಿಸ್ತರಿಸುತ್ತಾರೆ ಇವರ ಲೈನ್ ಬಜಾರ್ ಸ್ಟೋರ್ ನಲ್ಲಿ ಮಾರಾಟ ಮಾಡುತ್ತಿದ್ದರಿಂದ ಸ್ಥಳಿಯರು ಲೈನ್ ಬಜಾರ್ ಪೇಡಾ ಅಂತಲೇ ಬಾಬು ಸಿಂಗ್ ಠಾಕೂರ್ ಪೇಡಾಕ್ಕೆ ಕರೆಯುತ್ತಾರೆ (ಮಿಶ್ರಾ ಎಂಬ ಕಂಪನಿ ಪೇಡಾ ಕೂಡ ಮಾರುಕಟ್ಟೆಯಲ್ಲಿದೆ).   ದಾರವಾಡದಲ್ಲಿ ಇವರ ಪೇಡಾ ತಯಾರಿಗಾಗಿ ದೊಡ್ಡ ಪ್ರಮಾಣದ ಎಮ್ಮೆ ಹಾಲು ಪೂರೈಸಲಿಕ್ಕಾಗಿ ಗೌಳಿಗರ