Skip to main content

ಸದ್ಯದಲ್ಲೇ ಬಿಡುಗಡೆ ಆಗಲಿರುವ ನನ್ನ 29 ಸಣ್ಣ ಕಥಾ ಸಂಕಲನದಲ್ಲಿ ಶೃಂಗೇಶರ ಶುಭ ನುಡಿಗಳು ಮುದ್ರಣ ಆಗಿದೆ, ನನ್ನ ಅವರ ಗೆಳೆತನಕ್ಕೆ ಬೆಳ್ಳಿಹಬ್ಬವೂ ಹೌದು

 ಶೃಂಗೇಶರು ನನ್ನ ಒತ್ತಾಯಕ್ಕೆ ನನ್ನ ಕಥಾ ಸಂಕಲನಕ್ಕೆ ಶುಭ ನುಡಿ ಬರೆದಿದ್ದಾರೆ

#ಮೊದಲ_ಕಾದಂಬರಿಯಂತೆ_ಮೊದಲ_ಕಥಾ_ಸಂಕಲನಕ್ಕೂ_ಅವರ_ಸಹಕಾರವಿದೆ.

#ಗೆಳೆತನಕ್ಕೆ_ಬೆಳ್ಳಿ_ಹಬ್ಬ.

   ನನ್ನ ಮತ್ತು ಶೃಂಗೇಶರ ಗೆಳೆತನಕ್ಕೆ 25 ವರ್ಷದ ಗಡಿ ದಾಟಿದೆ ಒಂದು ರೀತಿ ಗೆಳೆತನದ ಬೆಳ್ಳಿಹಬ್ಬದ ಆಚರಣೆ.
  ಗೆಳೆತನ ಪರಿಚಯ ಪ್ರಾರಂಭ ಆಗಿದ್ದು ನನ್ನ ರಾಜಕೀಯ ಮತ್ತು ಅವರ ಪತ್ರಕರ್ತ ಜೀವನದಿಂದ,ಈಗ ರಾಜಕೀಯದಿಂದ ನಾನು ದೂರ ಆದಂತೆ ಶೃಂಗೇಶರು ಪತ್ರಿಕೋದ್ಯಮದಿಂದ ಒಂದು ಕಾಲು ತೆಗೆದಾಗಿದೆ.
  ಜಿಲ್ಲಾ ಪಂಚಾಯತ್ ನಲ್ಲಿ ಸದಸ್ಯನಾಗಿ ಭ್ರಷ್ಟಾಚಾರ ವಿರೋದದ ನನ್ನ ಹೋರಾಟದ ದಿನಗಳವು..... ಜೆ.ಹೆಚ್.ಪಟೇಲರು ಮುಖ್ಯಮಂತ್ರಿ, ಯಡೂರಪ್ಪ ವಿರೋದ ಪಕ್ಷದ ನಾಯಕರು, ಈಶ್ವರಪ್ಪ, ಕಾಗೋಡು, ಆರಗ ಜ್ಞಾನೇಂದ್ರ, ಮಂತ್ರಿ ಬಸವಣ್ಯಪ್ಪ, ಸಂಸದ ಡಿ.ಬಿ.ಚಂದ್ರೇಗೌಡರೆಲ್ಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದ ಕಾಲ ಅದು.
  ಬಡವರಿಗೆ ಖರೀದಿಸಿದ ಕೋಟ್ಯಾಂತರ ರೂಪಾಯಿ ಔಷದಿ ಕಳಪೆ ಅಂತ ಜಿಲ್ಲಾ ಸರ್ಜನರು ನೀಡಿದ ಗುಪ್ತ ಮಾಹಿತಿ ಹಿಡಿದು ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನ ಬಡವರ ಔಷದಿ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಭಸ್ಮ ಅಯಿತೆಂಬ ಅಧಿಕಾರಿಗಳ ಪತ್ರಿಕಾ ಹೇಳಿಕೆ ನೋಡಿ ಗೊತ್ತಾಯಿತು ಉದ್ದೇಶ ಪೂರ್ವಕವಾಗಿ ಕಳಪೆ ಔಷದಿ ಸುಟ್ಟಿದ್ದಾರಂತ.
  ಈ ಬಗ್ಗೆ ಸಿಓಡಿ ತನಿಖೆಗಾಗಿ ಹಠ ಹಿಡಿದಾಗ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದ ಉಮಾಶಂಕರ್ (ಈಗ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ) ನೀಡಿದ ಸುಳ್ಳು ದೂರಿನಲ್ಲಿ ನನ್ನ ಜೈಲಿಗೆ ಹಾಕಿದ್ದರು (ಅವತ್ತಿನ ಸಭೆಯಲ್ಲಿ ಹಾಲಿ ಜಿಲ್ಲಾ ಮಂತ್ರಿ ಈಶ್ವರಪ್ಪ, ಹಾಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಕೂಡ ಇದ್ದರು) ಒಂದು ಕೇಸಿನಲ್ಲಿ ಜಾಮೀನಾದರೂ ಇನ್ನೊಂದು ಕೇಸು ಸೃಷ್ಟಿಸಿ ಮತ್ತೆ ಜೈಲು.
  ಈ ಸಂದರ್ಭದಲ್ಲಿ ಆ ಕಾಲದ ಪ್ರಭಲ ಪತ್ರಿಕೆ ಆಗಿದ್ದ ಹಾಯ್ ಬೆಂಗಳೂರಲ್ಲಿ ಶೃಂಗೇಶರು ವೈಯಕ್ತಿಕ ಪರಿಚಯ ಇಲ್ಲದಿದ್ದರೂ ನನ್ನ ಹೋರಾಟ ಬೆಂಬಲಿಸಿ ಬರೆದ ಲೇಖನ ನನಗೆ ಆತ್ಮವಿಶ್ವಾಸ ಉಂಟು ಮಾಡಿತ್ತು ಹೀಗೆ ಶೃಂಗೇಶರ ಗೆಳೆತನ ಬೆಳ್ಳಿಹಬ್ಬ ದಾಟಿ ಮುಂದುವರಿಯುತ್ತಿರುವುದು ನನಗೂ ಸೋಜಿಗವೇ.
  ಕಳೆದ ವರ್ಷ ಇವರ ಮುದ್ರಣ ಸಂಸ್ಥೆಯಿಂದ ನನ್ನ ಮೊದಲ ಕಾದಂಬರಿ "ಬೆಸ್ತರ ರಾಣಿ ಚಂಪಕಾ" ಮುದ್ರಣ ಆಗಿ ಶೃಂಗೇಶ್ ರಿಂದ ಬಿಡುಗಡೆ ಆಗಿ ಅನೇಕ ದಾಖಲೆಗೆ ಕಾರಣ ಆಯಿತು, ಈಗ 29 ಕಥೆಗಳ ಕಥಾ ಸಂಕಲನ ಕೂಡ ಇವರ ಸಂಸ್ಥೆಯಿಂದಲೇ ಮುದ್ರಣ ಆಗುತ್ತಿದೆ ಈ ಪುಸ್ತಕಕ್ಕೆ ನಮ್ಮಿಬ್ಬರ ಗೆಳೆತನ ಮತ್ತು ಮುದ್ರಣ ಶ್ರಮಕ್ಕಾಗಿ ತಾವು ಶುಭ ಹಾರೈಕೆಯನ್ನು ಬರೆಯಲೇ ಬೇಕೆಂದು ಒತ್ತಾಯಿಸಿದ್ದಕ್ಕೆ ಶುಭ ಹಾರೈಕೆ ಬರೆದಿದ್ದಾರೆ.

#ಶೃಂಗೇಶ್_ಬರೆದಿದ್ದು_ಕಥಾ_ಸಂಕಲದಲ್ಲಿ

ಇವು ಕಥಾಪಾತ್ರಗಳಷ್ಟೇ ಅಲ್ಲ...

ಆತ್ಮೀಯರಾದ ಅರುಣ್ ಪ್ರಸಾದ್ ರವರ ಮತ್ತೊಂದು ಪುಸ್ತಕ ಮುದ್ರಣಗೊಂಡು ಓದುಗರ ಕೈಸೇರುತ್ತಿದೆ. ನನ್ನ ನೂರೆಂಟು ಉಪದ್ವ್ಯಾಪಗಳ ನಡುವೆ ವಹಿಸಬೇಕಾದಷ್ಟು ಆಸಕ್ತಿ ವಹಿಸಲಾರದ್ದಕ್ಕೆ ಪುಸ್ತಕದ ಮುದ್ರಣ ತಡವಾಯಿತಾದರು ಒಂದು ಉತ್ತಮ ಕಥಾಸಂಕಲನ ಓದುಗಾಸಕ್ತರ ಕೈಸೇರುತ್ತಿರುವುದರ ಖುಷಿ ಇದೆ.

    ಸಿದ್ಧಮಾದರಿಯ ಅನುಭವಲೋಕವನ್ನು ಮೀರಿ ಓದುಗರನ್ನು ಲವಲವಿಕೆಯ ವಿಸ್ತಾರ ಜಗತ್ತಿಗೆ ಕರೆದೊಯ್ಯುವ ಕತೆಗಳು ಇಲ್ಲಿವೆ.ಓದುತ್ತ ಹೋದರೆ ಇವು ಕತೆಯೋ, ಪ್ರಬಂಧಗಳೊ,ಅನುಭವ ಕಥನವೋ  ಗೊತ್ತಾಗದಂತೆ ಒಂದಕ್ಕೊಂದು ಬೆಸೆದುಕೊಂಡ ಜನಜೀವನವನ್ನು ಅನಾವರಣಗೊಳಿಸುವ ಇಲ್ಲಿನ ಬರವಣಿಗೆ ಆಪ್ತ ಭಾವ ಮೂಡಿಸುತ್ತದೆ.

    ಅರುಣ್ ಪ್ರಸಾದ್ ಜೊತೆ ಗಂಟೆಗಟ್ಟಲೆ ಹರಟೆ ಹೊಡೆಯುವಾಗ  ಇಲ್ಲಿನ ಪಾತ್ರಗಳು ಪ್ರತ್ಯಕ್ಷವಾದದ್ದು ಇದೆ.ಸ್ವಾರಸ್ಯಕರವಾಗಿ ಅವರ ಬಾಯಲ್ಲಿ ಕೇಳಿದ ಘಟನಾವಳಿಗಳು ಇಲ್ಲಿ ಕಥೆಯ ಸ್ವರೂಪ ಪಡೆದುಕೊಂಡಿವೆ.ಅಂದರೆ ಅರುಣ್ ಪ್ರಸಾದ್ ತಮ್ಮದೇ ಅನುಭವಗಳನ್ನು,ತಾವು ಕೇಳಿದ ಕತೆಗಳನ್ನು ಇಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದಾರೆ.ಅವು ಯಾವುವೂ ಹೋರಾಗಿನದಲ್ಲ.

ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಬರವಣಿಗೆ ತುಂಬಾ ಜನರನ್ನು ತಲುಪುತ್ತಿವೆ.ಆದರೆ ಅವರ ಪ್ರಕಟಿತ ಕಾದಂಬರಿ ಮತ್ತು ಇಲ್ಲಿನ ಕತೆಗಳೆಲ್ಲವು ಅವರು ಈ ಮೊದಲೇ ಬರೆದಂತಹವುಗಳೇ ಆಗಿವೆ ಎಂಬುದನ್ನು ಮನದಲ್ಲಿ ಇಟ್ಟುಕೊಂಡು ಓದಿದರೆ ಇಲ್ಲಿನ ಕತೆಗಳನ್ನು ಗ್ರಹಿಸಲು ಅನುಕೂಲವಾಗಲಿದೆ.

ಅರುಣ್ ಪ್ರಸಾದ್ ರ ಜೀವನಾನುಭವವು ತುಂಬಾ ವೈವಿಧ್ಯ ಮಯವಾದುದು.ಜನಪರ ಹೋರಾಟ,ರಾಜಕೀಯ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಾಗಿನ ಅನುಭವಗಳು ಮಲೆನಾಡಿನ ರಾಜಕೀಯ,ಸಾಮಾಜಿಕ ದಾಖಲೆಯಾಗಿಯೂ ಮಹತ್ವದವು ಎಂಬುದನ್ನು ಗ್ರಹಿಸಿ ಹೇಳುವುದಾದರೆ ಅವರಿಂದ ಒಂದು  ಅನುಭವ ಕಥನ ಅಥವಾ ಆತ್ಮ ಚರಿತ್ರೆ ಪುಸ್ತಕ ಬರಲಿ ಎಂಬುದು ನನ್ನಂತಹ ಗೆಳೆಯರ ಅಪೇಕ್ಷೆ.

ಅರುಣ್ ಪ್ರಸಾದ್ ತಮ್ಮ ಬರವಣಿಗೆಯನ್ನು ಹೀಗೆಯೇ ಮುಂದುವರಿಸಲಿ....

ಶೃಂಗೇಶ್
ಪತ್ರಕರ್ತ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...