Skip to main content

ನನ್ನ ಚೊಚ್ಚಲ ಸಣ್ಣ ಕಥಾ ಸಂಕಲನ 29 ಸಣ್ಣ ಕಥೆಗಳ ಗೊಂಚಲು, ಮುದ್ರಣದಲ್ಲಿದೆ, ಸದ್ಯದಲ್ಲೇ ಓದುಗರಿಗೆ ಲಭ್ಯ.

*#ನನ್ನ_ಚೊಚ್ಚಲ_ಕಥಾಸಂಕಲನ_ಅಚ್ಚಿನಲ್ಲಿ.*

*#ನನ್ನ_ಕಾದಂಬರಿ_ಚಂಪಕಾರಾಣಿ_ಮುದ್ರಿಸಿದ_ಪತ್ರಕರ್ತ_ಶೃಂಗೇಶರದ್ದೇ_ಈ_ಮುದ್ರಣ*

*#ಮುನ್ನುಡಿ_ಬರೆದವರು_ಪ್ರಖ್ಯಾತ_ಲೇಖಕ_ಅಂಕಣಕಾರ_ಅರವಿಂದ_ಜೊಕ್ಕಾಡಿಯವರು.*

*#ಎಲ್ಲಾ_ಕಥೆ_ಓದಿಯೇ_ಮುನ್ನುಡಿ_ಬರೆದಿದ್ದಾರೆ.*

*#ಬೆನ್ನುಡಿ_ಬರೆದವರು_ರಾಜ್ಯದ_ಪ್ರಖ್ಯಾತ_ರಾಜಕೀಯ_ಅಂಕಣಕಾರ_ಪತ್ರಕರ್ತ_ನಮ್ಮ_ತಾಲ್ಲೂಕಿನ_ಆರ್_ಟಿ_ವಿಠಲ_ಮೂರ್ತಿ.*

*#ಶುಭ_ಹಾರೈಕೆ_ಶೃಂಗೇಶರದ್ದು*

    *ಈ ವರೆಗೆ ನಾನು ಬರೆದ ಸಣ್ಣ ಕಥೆಗಳು ನೂರಕ್ಕೂ ಹೆಚ್ಚು ಆದರೆ ಮೂಡು ಬಂದಾಗ ಸಿಕ್ಕ ಹಾಳೆಯಲ್ಲಿ ವೇಗವಾಗಿ ಬರೆದು ಯಾವುದೋ ಪುಸ್ತಕದ ಮಧ್ಯ ಇಡುವುದು ನಂತರ ಮರೆಯುವುದು ಹಾಗಾಗಿ ಅದನ್ನೆಲ್ಲ ಹುಡುಕಿ ಪುಸ್ತಕ ಮಾಡುವ ಯೋಚನೆ ಇದ್ದರೂ ಕಾರ್ಯಗತ ಆಗಿರಲಿಲ್ಲ.*
  *ಪತ್ರಕರ್ತ ಗೆಳೆಯರಾದ ಶೃಂಗೇಶ್ ಹಾಯ್ ಬೆಂಗಳೂರು ವರದಿಗಾರರಾಗಿ ಜೊತೆಗೆ ಶಿವಮೊಗ್ಗ ಜಿಲ್ಲಾ ಪತ್ರಿಕೆ ಆಗಿ ಜನ ಹೋರಾಟ ದಿನಪತ್ರಿಕೆ ಪ್ರಾರಂಬಿಸಿ ಅದಕ್ಕೆ ಜೀವ ತುಂಬಲು ಪ್ರಿಂಟಿಂಗ್ ಉದ್ಯಮ ಕೂಡ ಪ್ರಾರಂಬಿಸಿದ್ದರು ಹಾಗಾಗಿ ಅವರ ಹತ್ತಿರ ಒಂದೆರೆಡು ಸಣ್ಣ ಕಥಾ ಸಂಕಲನ ಮತ್ತು ಚಂಪಕಾರಾಣಿ ಕಾದಂಬರಿ ಮುದ್ರಣದ ಬಗ್ಗೆ ಚರ್ಚಿಸಿದ್ದೆ ಆದರೆ ಅದನ್ನೆಲ್ಲ ಹುಡುಕಿ ಅವರಿಗೆ ಕಳಿಸುವುದರಲ್ಲಿ ವಿಳಂಬ ಮಾಡಿದ್ದೆ.*
  *ಶೃಂಗೇಶರೇ ಒತ್ತಾಯ ಮಾಡಿ ಪದೇ ಪದೇ ನೆನಪು ಮಾಡಿದ್ದರಿಂದ 29 ಸಣ್ಣ ಕಥೆ ಮತ್ತು ಕಾದಂಬರಿ ಕಳಿಸಿದ್ದೆ, ನಾನು ಸುಮಾರು 1995 ರಿಂದ ಬರೆದ ಸಣ್ಣ ಕಥೆಗಳು ನನಗೆ ಪುನಃ ಓದಲು ಇಷ್ಟ ಆಗುವುದಿಲ್ಲ ಆದರೆ ಡಿಟಿಪಿ ಮಾಡುವವರಿಗೆ ನನ್ನ ಅಕ್ಷರ ಗೊತ್ತಾಗದಂತ ಬ್ರಹ್ಮಲಿಪಿ ( ವೇಗದ ಅವಸರ ಬರವಣಿಗೆ) ಇದು ಶೃಂಗೇಶರೇ ಒಂದು ರೀತಿ ಡಿಕೋಡ್ ಮಾಡಿದರೆಂದರೆ ತಪ್ಪಲ್ಲ.*
  *ಹೀಗೆ ನನ್ನ ಬರವಣಿಗೆ ಪುಸ್ತಕ ರೂಪಕ್ಕೆ ಬರುವ ಹಂತದಲ್ಲಿ ಮೊದಲಿಗೆ ಸಣ್ಣ ಕಥೆಗಳ ಸಂಕಲನ ನಂತರ ಸಾಧ್ಯವಾದರೆ ಮಾತ್ರ ಬೆಸ್ತರ ರಾಣಿ ಚಂಪಕಾ ಅಂತ ನಿರ್ದರಿಸಿದ್ದೆ ಆದರೆ ಶೃಂಗೇಶ್ ಜೇಷ್ಟತಾ ಪಟ್ಟಿಯಲ್ಲಿ ಕಾದಂಬರಿಯೇ ಮೊದಲಾಯಿತು.*
  *ಕೆಳದಿ ಸಾಮ್ರಾಜ್ಯದಲ್ಲಿ ಕಳೆದು ಹೋದ (ಉದ್ದೇಶ ಪೂರ್ವ ಕ) ರಾಜರ ದುರಂತ ಪ್ರೇಮ ಕಥೆ ಅದರ ಸ್ಮಾರಕ, ಇಟಲಿ ಪ್ರವಾಸಿ ಪತ್ರಗಳಲ್ಲಿ ಇದ್ದದ್ದು ನನ್ನ ಕಾಲ್ಪನಿಕ ಕಾದಂಬರಿ (ಸಂಶೋದಕರಿಗೆ ಹೆದರಿ) ಅಂತ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ನನ್ನ ಮನಸ್ಸಿಗೆ ಸಂತೃಪ್ತಿ ತರುವಂತೆ ಅರ್ಹ ಓದುಗರಿಂದ ಮೆಚ್ಚುಗೆ ಪಡೆಯಿತು ಮತ್ತು ನನ್ನ ಅತ್ಯಾಸೆ ಆಗಿದ್ದ ಈ ಸ್ಮಾರಕದ ಸಂಶೋದನೆಗಳು ಮಾಡಲು ಅನೇಕರು ಮುಂದೆ ಬಂದಿದ್ದಾರೆ.*
  *ಮುದ್ರಣ ಆಗಿ ಕೆಲ ದಿನದಲ್ಲಿ ಓದಲು ಸಿಗಲಿರುವ 29 ಸಣ್ಣ ಕಥೆಗಳಲ್ಲಿ ಬರುವ ನನ್ನ ಮಗನ ಪ್ರೀತಿಯ ಪ್ರಚಂಡ ಬೆಕ್ಕು ಪಾಣಿ "ಬಿಲಾಲಿ ಬಿಲ್ಲಿ" ಅಂತ ಹೆಸರು ಪಡೆದಿತ್ತು ಅದರದ್ದೇ ಒಂದು ಕಥೆ ಈ ಕಥಾ ಸಂಕಲನದಲ್ಲಿದೆ ಈ ಕಥೆ ಅರವಿಂದ್ ಚೊಕ್ಕಾಡಿಯವರಿಗೂ ಹಿಡಿಸಿದೆ, ಪುಸ್ತಕದ ಮುಖಪುಟದಲ್ಲಿ ನಮ್ಮ ಮುದ್ದಿನ ಬೆಕ್ಕಿನ ಪೋಟೋಗು ಜಾಗದ ಅವಕಾಶ ಆಗಿದೆ (ಬೆಕ್ಕು ಈಗ ಇಲ್ಲ).*
  *ಬಿಲಾಲಿ ಬಿಲ್ಲಿ ಕಥೆಯ ಕಥಾನಾಯಕಿ ಚಿತ್ರ ಕಥಾ ಸಂಕಲನಕ್ಕೆ ಮುನ್ನುಡಿ ಬೆನ್ನುಡಿ ಶುಭ ಹಾರೈಸಿದವರ ಜೊತೆ ಪೋಸ್ಟ್ ಮಾಡಿದ್ದೇನೆ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...