Skip to main content

ಭಾಗ - 57, ಆನಂದಪುರಂ ಇತಿಹಾಸ, ದೇಶದ ಮೊದಲ ಪ್ರದಾನಿ ಜವಾಹರಲಾಲ್ ರ ಆನಂದಪುರಂ ಬೇಟಿ, ಜೊತೆಗೆ ಪುತ್ರಿ ಇಂದಿರಾಗಾಂಧಿ, ಅಯ್ಯಂಗಾರ್ ಕುಟು೦ಬದ ಸಾರಥ್ಯ ಮತ್ತು ರಾಜ ಪ್ರತಿನಿದಿಗಳಾಗಿದ್ದ ಕಾಗೋಡಿನ ಕೆ.ಜಿ.ಒಡೆಯರ್ ನೇತೃತ್ವ.

#ಭಾಗ_57.
 #ಆನಂದಪುರಂ_ಇತಿಹಾಸ

#ಆನಂದಪುರಂಗೆ_ಪ್ರದಾನಿ_ನೆಹರೂ.

#ಮಗಳು_ಇಂದಿರಾ_ಜೊತೆ_ಜೋಗ್_ಜಲಪಾತ_ಪ್ರವಾಸ.

#ಆನಂದಪುರಂ_ಪ್ರೌಡಶಾಲೆ_ಎದರು_ಗಿಡ_ನೆಡುತ್ತಾರೆ.

   ಸ್ವಾತಂತ್ರ್ಯ ನಂತರ ದೇಶದ ಪ್ರದಾನ ಮಂತ್ರಿ ಜವಾಹರಲಾಲ್ ನೆಹರೂರವರು ಜೋಗ ಜಲಪಾತ ವೀಕ್ಷಿಸಲು ಬರುವ ಕಾರ್ಯಕ್ರಮ ನಿಗದಿ ಅಗುತ್ತದೆ.
   ಶಿವಮೊಗ್ಗ ಮಾರ್ಗವಾಗಿ ಆನಂದಪುರಂ ಮೇಲೆ ಜೋಗ್ ಫಾಲ್ಸ್ ಗೆ ಹೋಗುವುದರಿಂದ ಆನಂದಪುರಂ ನಲ್ಲಿ ಪ್ರದಾನ ಮಂತ್ರಿಗಳು ಒಂದು ಬೇಟಿ ಮಾಡುವ ಕಾರ್ಯಕ್ರಮ ನಿಗದಿ ಮಾಡಿಸಲು ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಮತ್ತು ಅವರ ಪುತ್ರರಾದ ವೆಂಕಟಾಚಲ ಅಯ್ಯಂಗಾರ್ ಮತ್ತು ಬದರಿನಾರಾಯಣಯ್ಯಂಗಾರ್ ಯಶಸ್ವಿ ಆದ ಮತ್ತು ಐತಿಹಾಸಿಕ ಘಟನೆಗೆ ಕಾರಣರಾದ ಘಟನೆ ನಿಜಕ್ಕೂ ರೋಚಕ ಮತ್ತು ರೋಮಾಂಚನದ ವಿಷಯವಾಗಿತ್ತು ಆ ಕಾಲದಲ್ಲಿ.
   ಆಗಿನ್ನು ದೇಶದ ಮೊದಲ ಚುನಾವಣೆ ಆಗಿರುವುದಿಲ್ಲ ರಾಜ ಪ್ರತಿನಿದಿಗಳಾಗಿ ಕಾಗೋಡಿನ ಕೆ.ಜೆ. ಒಡೆಯರ್ ನೇಮಕ ಆಗಿರುತ್ತಾರೆ.
   ಅಯ್ಯಂಗಾರ್ ಕುಟುಂಬದ ಆತ್ಮೀಯರಾದ ಕೆ.ಜಿ. ಒಡೆಯರ್ (ಶಿವಮೊಗ್ಗ ಲೋಕಸಭಾ ಪ್ರಥಮ ಸದಸ್ಯರಾಗಿ ನಂತರ ಚುನಾವಣೆಯಲ್ಲಿ ಗೆಲ್ಲುತ್ತಾರೆ) ಪ್ರದಾನಿ ನೆಹರೂರವರ ಆನಂದಪುರಂ ಬೇಟಿ ನಿಗದಿಗೊಳಿಸುತ್ತಾರೆ.
  ಆನಂದಪುರಂ ಪ್ರೌಡ ಶಾಲೆ ಎದುರಿಗೆ ಇಕ್ಕೆಲದಲ್ಲಿ ಮೈಸೂರು ಮಹಾರಾಜರ ಆ ಕಾಲದಲ್ಲಿ ಮೈಸೂರು ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಸಾಲು ಮರಗಳಾಗಿ (ಆಯಾ ಪ್ರದೇಶದ ಹವಾಮಾನಕ್ಕೆ ತಕ್ಕ ಹಾಗೆ) ದೂಪ, ಹಲಸು, ಮಾವು,ಆಲ, ಅರಳಿ ಮರಗಳನ್ನು ಬೆಳೆಸಿದ್ದು ಅದು ಸಮೃದ್ದವಾಗಿ ಪ್ರಯಾಣಿಕರಿಗೆ ಜನ ಮತ್ತು ಜಾನುವಾರಿಗೆ ನೆರಳು ನೀಡುತ್ತಿದ್ದದ್ದನ್ನು ಪ್ರದಾನಿಯವರಿಗೆ ವಿವರಿಸುವ ಮತ್ತು ಪ್ರದಾನಿಯವರು ವೀಕ್ಷಿಸುವ ಕಾರ್ಯಕ್ರಮವದು.
   ಪ್ರೌಡ ಶಾಲೆ (ಈಗಿನ ಪದವಿ ಪೂವ೯ ಕಾಲೇಜ್) ಎದರು ಪ್ರದಾನಿಯವರನ್ನು ಸ್ಥಳಿಯರು ಸ್ವಾಗತಿಸುವುದು, ಪ್ರಧಾನಿಯವರ ಬೇಟಿ ಸ್ಮರಣಾರ್ಥ ಗೊಳಿಸಲು ಒಂದು ಗಿಡ ನೆಡಿಸುವುದು ನಂತರ ರಸ್ತೆಯ ಇಕ್ಕೆಲದಲ್ಲಿ ಶಿಸ್ತಾಗಿ ನಿಂತ ಶಾಲಾ ಮಕ್ಕಳು ಮತ್ತು ಆನಂದಪುರಂ ನಿವಾಸಿಗಳಿಗೆ ಪ್ರದಾನ ಮಂತ್ರಿಗಳಿಗೆ ಶುಭ ಹಾರೈಸಲು ಮತ್ತು ಶುಭ ಹಾರೈಕೆ ಸ್ಪೀಕರಿಸಲು ಪ್ರದಾನಿಗಳು ಸ್ವಲ್ಪ ದೂರ ನಡೆದು ಹೋಗುವುದು ಕಾರ್ಯಕ್ರಮ ಮತ್ತು ಈ ಕಾರ್ಯಕ್ರಮ ಹೆಚ್ಚು ಸಮಯ ತೆಗೆದುಕೊಳ್ಳದಂತೆ ನಿಗದಿ ಆಗುತ್ತದೆ.
   ರಾಜ ಪ್ರಮುಖರಿಂದ ಗಣ್ಯರಿಗೆಲ್ಲ ರಾಜ ಪರಿವಾರದ ರಾಜ ಪೋಷಾಕನ್ನು ಧರಿಸಿ ನಿಗದಿತ ಸಮಯದಲ್ಲಿ ನಿಗದಿತ ಜಾಗದಲ್ಲಿ ನೆರೆಯುವ ವಿನಂತಿ ತಲುಪಿಸಿರುತ್ತಾರೆ.
  ಆನಂದಪುರಂನ ಭೂ ಮಾಲಿಕರು, ಕೊಡುಗೈ ದಾನಿಗಳು ಮತ್ತು ಇನಾಂದಾರರಾದ ರಾಮಕೃಷ್ಣ ಅಯ್ಯಂಗಾರವರು ಅವರ ಪುತ್ರರಾದ ವೆಂಕಟಾಚಲಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರ್ ಜೊತೆ ಆನಂದಪುರಂನ ಗಣ್ಯರೆಲ್ಲ ನೆರೆದಿರುತ್ತಾರೆ ಸಮಯಕ್ಕೆ ಸರಿಯಾಗಿ ಪ್ರದಾನ ಮಂತ್ರಿ ಜವಾಹರಲಾಲ್ ರು ಪುತ್ರಿ ಇಂದಿರಾಗಾಂಧಿ ಮತ್ತು ರಾಜ ಪ್ರಮುಖರಾದ ಕಾಗೋಡು ಕೆ.ಜಿ. ಒಡೆಯರ್ ಜೊತೆ ಆನಂದಪುರಂ ಪ್ರೌಡ ಶಾಲೆಯ ಗೇಟಿನ ಎದರು ಕಾರಿಂದ ಇಳಿಯುತ್ತಾರೆ.
   ಅಯ್ಯಂಗಾರ್ ಕುಟುಂಬ ಮತ್ತು ಸ್ಥಳಿಯರಿಂದ ಸ್ವಾಗತ ಸ್ವೀಕರಿಸಿ ನಂತರ ರಾಜ ಪ್ರಮುಖರಾದ ಕಾಗೋಡಿನ ಕೆ.ಜಿ. ಒಡೆಯರ್ ರಿಂದ ಮೈಸೂರು ರಾಜರಿಂದ ರಾಜ್ಯದಾದ್ಯಂತ ಬೆಳೆಸಿದ ಸಾಲು ಮರದ ಬಗ್ಗೆ ವಿವರಣೆ ತಿಳಿದುಕೊಳ್ಳುತ್ತಾರೆ.
  ಆನಂದಪುರಂಗೆ ದೇಶದ ಪ್ರಧಾನಿಗಳ ಆಪೂವ೯ ಬೇಟಿ ಸದಾ ಸ್ಮರಣೆಯಲ್ಲಿರಲಿ ಎಂದು ಸಸಿ ಒಂದು ನೆಡುತ್ತಾರೆ, ನಂತರ ಶಾಲಾ ಗಡಿಯವರೆಗೆ (ಈಗಿನ ವಿದ್ಯುತ್ ಇಲಾಖೆ ಕಛೇರಿ ವರೆಗೆ) ಹಸನ್ಮುಖರಾಗಿ ಎರೆಡೂ ಕೈ ಮುಗಿದು ನಡೆಯುತ್ತಾರೆ.
   ರಸ್ತೆಯ ಇಕ್ಕೆಲದಲ್ಲಿ ಶಿಸ್ತಾಗಿ ಸಾಲಾಗಿ ನಿಂತ ವಿದ್ಯಾರ್ಥಿ ವೃಂದ ಮತ್ತು ಆನಂದಪುರಂ ಜನತೆ ಈ ಐತಿಹಾಸಿಕ ಘಟನೆಯಿಂದ ಪುಳಕಿತರಾಗಿ ಸಾಕ್ಷಿಗಳಾಗುತ್ತಾರೆ.
  ಪ್ರದಾನಿ ಜವಾಹರಲಾಲ್ ನೆಹರು ಆನಂದಪುರಂ ಬೇಟಿ ನೆನಪು ಮಸುಕಾಗಿದೆ ಹಾಗೇ ನೆಹರೂರವರು ನೆಟ್ಟಿದ ಸಸಿ ಮರವಾಯಿತಾ? ಅದು ಯಾವ ಮರ? ಎಂಬುದು ಯಾರಿಗೂ ನೆನಪಿಲ್ಲದಿರುವುದು ವಿಪರ್ಯಾಸವಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ