Skip to main content

ಭಾಗ-53, ಆನಂದಪುರಂ ಇತಿಹಾಸ, ಆಚಾರ್ಯ ವಿನೋಬಾ ಭಾವೆಯವರಿಗೆ ತನ್ನ ಫಲವತ್ತಾದ 5 ಎಕರೆ ಜಮೀನು ಬದರೀ ನಾರಾಯಣ ಅಯ್ಯ0ಗಾರ್ ಸಹೋದರರ ಪ್ರೇರಣೆಯಿಂದ ಭೂದಾನ ಮಾಡಿದ ಇರುವಕ್ಕಿ ಕುಂಬಾರ ಚೌಡ ಶೆಟ್ಟರು ಮಹಾದಾನಿಗಳು.

#ಭಾಗ_53.
#ಆನಂದಪುರಂ_ಇತಿಹಾಸ

#ಇರುವಕ್ಕಿ_ಕುಂಬಾರ_ಚೌಡಶೆಟ್ಟರು_ಫಲಭರಿತ_ತರಿ_ಜಮೀನು_ಭೂದಾನ_ಮಾಡಿದ್ದು.

#ಮಂಡಲ್_ಪಂಚಾಯ್ತಿ_ಸದಸ್ಯರಾಗಿದ್ದ_ಕುಂಬಾರ್_ಬಸಪ್ಪರ_ತಂದೆ.

#ಸ್ವತಃ_ಭೂದಾನ_ಸ್ಪೀಕರಿಸಿದ_ವಿನೋಬಾ_ಭಾವೆ.

#ಎಣ್ಣೆಕೊಪ್ಪದ_ಮಲ್ಲಿಕಾಜು೯ನ_ಗೌಡರಿಂದ_ಜಿಲ್ಲೆಯಲ್ಲಿ_ಭೂದಾನ_ಚಳವಳಿ_ಯಶಸ್ವಿ

#ಭೂದಾನ_ಮಾಡಿದ_ಆಗಿನ_ಆನಂದಪುರಂ_ಮಹನೀಯರು_ಅಯ್ಯಂಗಾರ್_ಕುಟುಂಬ_ಮತ್ತು_ಸುಳಗೋಡು_ಮುತ್ರಿ_ಗೌಡರ_ಕುಟುಂಬ_ಸ್ಮರಣೀಯರು

   ದೇಶದಲ್ಲೇ ಅರಣ್ಯದ ಮಧ್ಯೆ ಇರುವ ಏಕೈಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಇರುವಕ್ಕಿಯದ್ದು, ಇತ್ತೀಚಿಗಷ್ಟೆ ಇದನ್ನು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ಉದ್ಘಾಟಿಸಿದರು 7 ಜಿಲ್ಲೆಯ ವ್ಯಾಪ್ತಿಯ ಈ ವಿಶ್ವವಿದ್ಯಾಲಯಕ್ಕೆ ಕೆಳದಿ ಅರಸರಾದ #ಶಿವಪ್ಪ_ನಾಯಕರ ಹೆಸರು ನಾಮಕರಣ ಮಾಡಿದರು.
  ಬಹಳಷ್ಟು ಜನ ಶಿಸ್ತಿನ ಶಿವಪ್ಪ ನಾಯಕರೆಂದರೆ ಅವರ ಕಲ್ಪನೆಯಲ್ಲಿ ಅವರ ಚಿತ್ರ ರಚನೆ ನೋಡಿ ವೇಷ ಭೂಷಣಕ್ಕಾಗಿ ಶಿಸ್ತು ಅಂತಲೇ ಬಾವಿಸಿದ್ದಾರೆ ಆದರೆ ಶಿಸ್ತು ಎಂದರೆ ಅದು ಆ ಕಾಲದ ಭೂಮಿ ಮಾಪಕ ಅಳತೆ ಪಟ್ಟಿ, ಇದರ ಮಾದರಿ ಕೆಳದಿ ರಾಮೇಶ್ವರ ದೇವಾಲಯದ ಹಿಂಭಾಗದ ಗೋಡೆಯಲ್ಲಿ ಶಿಲೆಯಲ್ಲಿ ಕೆತ್ತಿದ್ದಾರೆ, ಆ ಕಾಲದಲ್ಲಿ ಪಲವತ್ತಾದ ಜಮೀನು, ಅನುಪಯುಕ್ತ ಜಮೀನುಗಳನ್ನು ಶಿವಪ್ಪ ನಾಯಕರು ವಿಂಗಡಿಸಿ ತೆರಿಗೆ ನಿಗದಿ ಗೊಳಿಸಿದ್ದು ಮತ್ತು ಅಳತೆಯ ಕೋಲು ಶಿಸ್ತು ಜಾರಿಗೆ ತಂದಿದ್ದರಿಂದ ಶಿಸ್ತಿನ ಶಿವಪ್ಪ ನಾಯಕರೆಂದೇ ಪ್ರಸಿದ್ದಿ ಪಡೆದರು.
  ಇರುವಕ್ಕಿಯ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಯದ ಪಕ್ಕದಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲೇ ನೆಲೆಸಿದ್ದ ಕುಂಬಾರ ಚೌಡ ಶೆಟ್ಟರು ತಮ್ಮ ಮಡಿಕೆ ತಯಾರಿಸುವ ಕುಂಬಾರಿಕೆ ವೃತ್ತಿಗಾಗಿ ಮಡಿಕೆ ತಯಾರಿಕೆಗೆ ಬೇಕಾದ ಕುಂಬಾರ ಮಣ್ಣು ಇಲ್ಲಿ ಯಥೇಚ್ಚ ಸಿಗುವುದರಿಂದ ತಂಗಿದ್ದವರು,ಅವರಿಗೆ ಜೀವನಕ್ಕಾಗಿ ಕೃಷಿ ಜಮೀನು ಹೊಂದಿದ್ದರು.
  ಈ ಕಾಲದಲ್ಲಿ ಆನಂದಪುರಂನ ಜಮೀನ್ದಾರರಾದ ಕೊಡುಗೈ ದಾನಿ ರಾಮಕೃಷ್ಣ ಅಯ್ಯಂಗಾರರ ಸಹಾಯ ಸಹಕಾರದ ಜೊತೆ ಮಾರ್ಗದರ್ಶನ ಇವರಿಗೆ ಅಡಿಕೆ ತೋಟ ಮಾಡಲು ಪ್ರೇರಣೆ ಆಯಿತು, ಈ ಭಾಗದ ಕುಂಬಾರಲ್ಲಿ ಶ್ರೀಮಂತ ಜಮೀನುದಾರರು ಇವರು, ಇವರು ಇಲ್ಲಿ ಇದ್ದಿದ್ದರಿಂದಲೇ ಸೊರಬ, ಹಿರೆನೆಲ್ಲೂರು, ಸಾಗರ, ಆನಂದಪುರಂನ ಜೇಡಿಸರ,ತಾವರೇಹಳ್ಳಿ, ಹೆಬ್ಬೋಡಿ, ಕೆಂಜಿಗಾಪುರದ ಕುಂಬಾರ ಗುಂಡಿ, ಬಸವನಹೊಂಡ ಇಲ್ಲೆಲ್ಲ ವಲಸೆ ಬಂದು ತಮ್ಮ ವಂಶಪಾರ್ಯ೦ಪರ ಮಣ್ಣಿನ ತಯಾರಿಕೆಯಲ್ಲಿ ಜೀವನ ಮಾಡುತ್ತಿದ್ದ ಅನೇಕ ಕುಂಬಾರ ವೃತ್ತಿಯ ಕುಟುಂಬಗಳು ಇರುವಕ್ಕಿಯ ಚೌಡ ಶೆಟ್ಟರ ಸಹಕಾರದಿಂದ ಇರುವಕ್ಕಿಯಲ್ಲಿ ಖಾಯಂ ನೆಲುಸುವಂತಾಯಿತು.
   ಚೌಡ ಶೆಟ್ಟರು ನಡೆ ನುಡಿ ಶುದ್ಧರಾಗಿದ್ದರಿಂದ ಮತ್ತು ಸಾತ್ವಿಕರಾಗಿದ್ದರಿಂದಲೇ ರಾಮಕೃಷ್ಣ ಅಯ್ಯಂಗಾರರ ಆಪ್ತ ವಲಯದಲ್ಲಿ ಆಪ್ತರಾಗಲು ಕಾರಣ.
  1952 ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಅಯ್ಯಂಗಾರರ ಪುತ್ರ ಆಗಿನ ಪ್ರಖ್ಯಾತ ವಕೀಲರಾಗಿದ್ದ ಸ್ವಾತಂತ್ರ ಹೋರಾಟಗಾರರೂ ಆಗಿದ್ದ ಬದರೀನಾರಾಯಣ ಅಯ್ಯಂಗಾರರು ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಿ,ಎದುರಾಳಿ ಉಳುವವನೇ ಹೊಲದೊಡೆಯ ಉದ್ಘೋಷದ ಗಣಪತಿಯಪ್ಪರ ನೇತೃತ್ವದಲ್ಲಿ ಪ್ರಾರಂಭ ಆಗಿದ್ದ ಕಾಗೋಡು ರೈತ ಹೋರಾಟವನ್ನು ಮುನ್ನಡೆಸಿ ರಾಷ್ಟ್ರ ನಾಯಕರಾದ ರಾಮಮನೋಹರ ಲೋಹಿಯಾ, ಜೇಪಿ, ಮದುಲಿಮೆ, ಜಾರ್ಜ್ ಪರ್ನಾಂಡಿಸರು ಬರುವಂತೆ ಮಾಡಿ ಗೇಣಿ ರೈತರ ಕಣ್ಮಣಿ ಆಗಿದ್ದ ಸಮಾಜವಾದಿ ಪಾರ್ಟಿಯಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರು ಗೆದ್ದದ್ದು ಇತಿಹಾಸ. 
    ಬದರೀನಾರಾಯಣರ ಸೋಲಿನ ಅಘಾತದಿಂದ ನಾಲ್ಕು ಸಾವಿರ ಎಕರೆ ಇನಾಂದಾರರು, ಭೂಮಾಲಿಕರು, ಆನಂದಪುರಂ ನಲ್ಲಿ ಸಾರ್ವಜನಿಕರಿಗಾಗಿ ತಮ್ಮ ಪತ್ನಿ ಸ್ಮಾರಕ ಆಸ್ಪತ್ರೆ (ಕನಕಮ್ಮಾಳ್ ಆಸ್ಪತ್ರೆ) ಮಗನ ಸ್ಮರಣಾಥ೯ ಪಶುವೆದ್ಯ ಶಾಲೆ (ಜಗನ್ನಾಥ ಪಶು ವೈದ್ಯ ಶಾಲೆ) ನಿರ್ಮಿಸಿ ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮರಣಿಸಿದ್ದು ಅವರ ಅನುಯಾಯಿಗಳಿಗೂ ದೊಡ್ಡ ಅಘಾತ ಆಗಿತ್ತು.
  ಅವರ ಪುತ್ರ ವೆಂಕಟಾಚಲ ಆಯ್ಯಂಗಾರರು ಕುಟುಂಬದ ಯಜಮಾನಿಕೆ ಅನಿವಾಯ೯ವಾಗಿ ಹೊರುವಂತಾಗಿ ಮೊದಲ ಚುನಾವಣೆಯಲ್ಲಿ ಸೋತ ಸಹೋದರ ಬದರಿನಾರಾಯಣ ಅಯ್ಯಂಗಾರರನ್ನು 1957ರ ಚುನಾವಣೆಯಲ್ಲಿ ಗೆಲ್ಲಿಸುವ ಶಪಥ ಮಾಡುತ್ತಾರೆ, ಆಗ ಅವರ ತಂದೆಯ ಗೆಳೆಯರೆಲ್ಲ ಸಂಘಟಿತರಾಗುತ್ತಾರೆ.
  ಈ ಸಂದರ್ಭದಲ್ಲೇ ಮಹಾತ್ಮಾ ಗಾಂಧಿಜೀಯಿಂದ ಸವೋ೯ದಯ ಮತ್ತು ಗ್ರಾಮಸ್ವರಾಜ್ಯದ ಬಗ್ಗೆ ಪ್ರೇರಣೆ ಪಡೆದು ಆಚಾರ್ಯ ವಿನೋಬ ಬಾವೆ 18 ಏಪ್ರಿಲ್ 1951ರಲ್ಲಿ ಪ್ರಾರಂಭಿಸಿದ  ಭೂದಾನ ಚಳವಳಿ (ಶ್ರೀಮಂತ ಜಮೀನ್ದಾರರು ಅವರ ಜಮೀನಿನ ಕೆಲ ಅಂಶ ಭೂರಹಿತರಿಗೆ ದಾನ ಮಾಡುವುದು) ಉತ್ತು೦ಗಕ್ಕೆ ಸಾಗಿತ್ತು, ನಮ್ಮ ಜಿಲ್ಲೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ಇದರ ನೇತೃತ್ವವಹಿಸಿದ್ದರು ಅವರಿಗೆ ವೆಂಕಟಾಚಲ ಅಯ್ಯಂಗಾರ್ ಬದರೀನಾರಾಯಣ ಅಯ್ಯಂಗಾರರು ಸಾಥ್ ನೀಡಿ ಆಚಾರ್ಯ ವಿನೋಬಾ ಭಾವೆಯವರು ಆನಂದಪುರಂಗೆ ಭೂದಾನ ಸ್ವೀಕರಿಸಲು ಬರುವಂತೆ ಮಾಡಲು ಯಶಸ್ವಿ ಆಗಿ ವಿನೋಭಾ ಭಾವೆಯಂತ ಮಹಾನುಭಾವರ ಪಾದ ಸ್ಪರ್ಶ ಆನಂದಪುರಂಗೆ ಮಾಡುವಂತೆ ಮಾಡಿ ಆನಂದಪುರಂ ಪಾವನ ಮಾಡಿದ್ದು ಇತಿಹಾಸವಾಗಿದೆ.
    ಆ ದಿನ ಅಯ್ಯಂಗಾರರ ಕುಟುಂಬ, ಸುಳುಗೋಡಿನ  ಮುತ್ರಿ ಗೌಡರ ಕುಟುಂಬ  ಹಾಲಿ ಆನಂದಪುರಂ ವಿದ್ಯುತ್ ಇಲಾಖೆ ಸುತ್ತ ಮುತ್ತದ ಖುಷ್ಕಿ ಜಮೀನು ದಾನ ನೀಡಿದರು (ಆನಂದಪುರಂ ಸರ್ಕಾರಿ ಪದವಿ ಪೂವ೯ ಇಲಾಖೆಗೆ ಈ ಜಮೀನು ಸೇರಿದೆ), ಇದೇ ಸಂದಭ೯ದಲ್ಲಿ  ಇರುವಕ್ಕಿಯ ಚೌಡ ಶೆಟ್ಟರು ತಮ್ಮ ಫಲಭರಿತ ಬೆಲೆ ಬಾಳುವ 5 ಎಕರೆ ತರಿ ಜಮೀನು ಭೂದಾನ ಮಾಡಿದರು (ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯ ಸುಪರ್ದಿಯಲ್ಲಿ ಈ ಜಮೀನು ಇದೆ, ಈ ಕುಟುಂಬದ ಈಗಿನ ತಲೆಮಾರು ಪ್ರತಿ ವರ್ಷ ಗೇಣಿ ಭತ್ತ ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಗೆ ನೀಡುತ್ತಿತ್ತು).             

      ಇದು ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾಜು೯ನ ಗೌಡರಿಗೆ ಹೆಚ್ಚು ಸಂತೋಷ ನೀಡುತ್ತದೆ ಮತ್ತು ಈ ವಿಚಾರ ವಿನೋಬಾ ಭಾವೆಯವರಿಗೆ ಅವತ್ತಿನ ಸಭೆಯಲ್ಲೇ ವಿವರಿಸುತ್ತಾರೆ, ಆಚಾರ್ಯರೂ ಚೌಡ ಶೆಟ್ಟರನ್ನು ಅಭಿನಂದಿಸಿ ಆಶ್ರೀವದಿಸುತ್ತಾರೆ.
    ಹಿಂದುಳಿದ ಜನಾಂಗದ, ಕುಂಬಾರಿಕೆ ವೃತ್ತಿಯ ಚೌಡ ಶೆಟ್ಟರ ಈ ಭೂದಾನ  ಅವರನ್ನು ದಾನಿಗಳಲ್ಲಿ ಶ್ರೀಮಂತ ಗೊಳಿಸಿತು, ರಾಜ್ಯದ ಮೊದಲ ಮತ್ತು ಏಕೈಕ ಕುಂಬಾರ ಸಮಾಜದ ಭೂದಾನಿಗಳು ಇವರು.
   ಇರುವಕ್ಕಿ ಚೌಡ ಶೆಟ್ಟರು ಮತ್ತು ಶ್ರೀಮತಿ ಕನ್ನಮ್ಮ ದಂಪತಿಗೆ ಏಕೈಕ ಪುತ್ರ ಬಸಪ್ಪ ಆ ಕಾಲದಲ್ಲಿ ಎಸ್.ಎಸ್.ಎಲ್.ಸಿ .ಪಾಸು ಮಾಡಿದ ಪ್ರತಿಬಾವಂತ, ಇವರು ಕೂಡ ಶಿಸ್ತಿನ ಮನುಷ್ಯ ,ಅತ್ಯುತ್ತಮ ಕಬ್ಬಡಿ ಆಟಗಾರರು, ಅತ್ಯುತ್ತಮ ಬೇಟೆಗಾರರು, ಮಾದರಿ ಕೃಷಿಕರು ಆಗಿದ್ದರು, ಹಾವು ಕಚ್ಚಿದರೆ ಔಷದಿ ನೀಡುತ್ತಿದ್ದರು ಇವರೂ ಈಗ ಇಲ್ಲ.
      ಬಸಪ್ಪ ಮತ್ತು ಶ್ರೀಮತಿ  ಮಂಜಮ್ಮ ದಂಪತಿಗಳಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.
(ನಾಳೆ ಮುಂದಿನ ಭಾಗ - 54)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...