Skip to main content

ಭಾಗ-53, ಆನಂದಪುರಂ ಇತಿಹಾಸ, ಆಚಾರ್ಯ ವಿನೋಬಾ ಭಾವೆಯವರಿಗೆ ತನ್ನ ಫಲವತ್ತಾದ 5 ಎಕರೆ ಜಮೀನು ಬದರೀ ನಾರಾಯಣ ಅಯ್ಯ0ಗಾರ್ ಸಹೋದರರ ಪ್ರೇರಣೆಯಿಂದ ಭೂದಾನ ಮಾಡಿದ ಇರುವಕ್ಕಿ ಕುಂಬಾರ ಚೌಡ ಶೆಟ್ಟರು ಮಹಾದಾನಿಗಳು.

#ಭಾಗ_53.
#ಆನಂದಪುರಂ_ಇತಿಹಾಸ

#ಇರುವಕ್ಕಿ_ಕುಂಬಾರ_ಚೌಡಶೆಟ್ಟರು_ಫಲಭರಿತ_ತರಿ_ಜಮೀನು_ಭೂದಾನ_ಮಾಡಿದ್ದು.

#ಮಂಡಲ್_ಪಂಚಾಯ್ತಿ_ಸದಸ್ಯರಾಗಿದ್ದ_ಕುಂಬಾರ್_ಬಸಪ್ಪರ_ತಂದೆ.

#ಸ್ವತಃ_ಭೂದಾನ_ಸ್ಪೀಕರಿಸಿದ_ವಿನೋಬಾ_ಭಾವೆ.

#ಎಣ್ಣೆಕೊಪ್ಪದ_ಮಲ್ಲಿಕಾಜು೯ನ_ಗೌಡರಿಂದ_ಜಿಲ್ಲೆಯಲ್ಲಿ_ಭೂದಾನ_ಚಳವಳಿ_ಯಶಸ್ವಿ

#ಭೂದಾನ_ಮಾಡಿದ_ಆಗಿನ_ಆನಂದಪುರಂ_ಮಹನೀಯರು_ಅಯ್ಯಂಗಾರ್_ಕುಟುಂಬ_ಮತ್ತು_ಸುಳಗೋಡು_ಮುತ್ರಿ_ಗೌಡರ_ಕುಟುಂಬ_ಸ್ಮರಣೀಯರು

   ದೇಶದಲ್ಲೇ ಅರಣ್ಯದ ಮಧ್ಯೆ ಇರುವ ಏಕೈಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಇರುವಕ್ಕಿಯದ್ದು, ಇತ್ತೀಚಿಗಷ್ಟೆ ಇದನ್ನು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ಉದ್ಘಾಟಿಸಿದರು 7 ಜಿಲ್ಲೆಯ ವ್ಯಾಪ್ತಿಯ ಈ ವಿಶ್ವವಿದ್ಯಾಲಯಕ್ಕೆ ಕೆಳದಿ ಅರಸರಾದ #ಶಿವಪ್ಪ_ನಾಯಕರ ಹೆಸರು ನಾಮಕರಣ ಮಾಡಿದರು.
  ಬಹಳಷ್ಟು ಜನ ಶಿಸ್ತಿನ ಶಿವಪ್ಪ ನಾಯಕರೆಂದರೆ ಅವರ ಕಲ್ಪನೆಯಲ್ಲಿ ಅವರ ಚಿತ್ರ ರಚನೆ ನೋಡಿ ವೇಷ ಭೂಷಣಕ್ಕಾಗಿ ಶಿಸ್ತು ಅಂತಲೇ ಬಾವಿಸಿದ್ದಾರೆ ಆದರೆ ಶಿಸ್ತು ಎಂದರೆ ಅದು ಆ ಕಾಲದ ಭೂಮಿ ಮಾಪಕ ಅಳತೆ ಪಟ್ಟಿ, ಇದರ ಮಾದರಿ ಕೆಳದಿ ರಾಮೇಶ್ವರ ದೇವಾಲಯದ ಹಿಂಭಾಗದ ಗೋಡೆಯಲ್ಲಿ ಶಿಲೆಯಲ್ಲಿ ಕೆತ್ತಿದ್ದಾರೆ, ಆ ಕಾಲದಲ್ಲಿ ಪಲವತ್ತಾದ ಜಮೀನು, ಅನುಪಯುಕ್ತ ಜಮೀನುಗಳನ್ನು ಶಿವಪ್ಪ ನಾಯಕರು ವಿಂಗಡಿಸಿ ತೆರಿಗೆ ನಿಗದಿ ಗೊಳಿಸಿದ್ದು ಮತ್ತು ಅಳತೆಯ ಕೋಲು ಶಿಸ್ತು ಜಾರಿಗೆ ತಂದಿದ್ದರಿಂದ ಶಿಸ್ತಿನ ಶಿವಪ್ಪ ನಾಯಕರೆಂದೇ ಪ್ರಸಿದ್ದಿ ಪಡೆದರು.
  ಇರುವಕ್ಕಿಯ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಯದ ಪಕ್ಕದಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲೇ ನೆಲೆಸಿದ್ದ ಕುಂಬಾರ ಚೌಡ ಶೆಟ್ಟರು ತಮ್ಮ ಮಡಿಕೆ ತಯಾರಿಸುವ ಕುಂಬಾರಿಕೆ ವೃತ್ತಿಗಾಗಿ ಮಡಿಕೆ ತಯಾರಿಕೆಗೆ ಬೇಕಾದ ಕುಂಬಾರ ಮಣ್ಣು ಇಲ್ಲಿ ಯಥೇಚ್ಚ ಸಿಗುವುದರಿಂದ ತಂಗಿದ್ದವರು,ಅವರಿಗೆ ಜೀವನಕ್ಕಾಗಿ ಕೃಷಿ ಜಮೀನು ಹೊಂದಿದ್ದರು.
  ಈ ಕಾಲದಲ್ಲಿ ಆನಂದಪುರಂನ ಜಮೀನ್ದಾರರಾದ ಕೊಡುಗೈ ದಾನಿ ರಾಮಕೃಷ್ಣ ಅಯ್ಯಂಗಾರರ ಸಹಾಯ ಸಹಕಾರದ ಜೊತೆ ಮಾರ್ಗದರ್ಶನ ಇವರಿಗೆ ಅಡಿಕೆ ತೋಟ ಮಾಡಲು ಪ್ರೇರಣೆ ಆಯಿತು, ಈ ಭಾಗದ ಕುಂಬಾರಲ್ಲಿ ಶ್ರೀಮಂತ ಜಮೀನುದಾರರು ಇವರು, ಇವರು ಇಲ್ಲಿ ಇದ್ದಿದ್ದರಿಂದಲೇ ಸೊರಬ, ಹಿರೆನೆಲ್ಲೂರು, ಸಾಗರ, ಆನಂದಪುರಂನ ಜೇಡಿಸರ,ತಾವರೇಹಳ್ಳಿ, ಹೆಬ್ಬೋಡಿ, ಕೆಂಜಿಗಾಪುರದ ಕುಂಬಾರ ಗುಂಡಿ, ಬಸವನಹೊಂಡ ಇಲ್ಲೆಲ್ಲ ವಲಸೆ ಬಂದು ತಮ್ಮ ವಂಶಪಾರ್ಯ೦ಪರ ಮಣ್ಣಿನ ತಯಾರಿಕೆಯಲ್ಲಿ ಜೀವನ ಮಾಡುತ್ತಿದ್ದ ಅನೇಕ ಕುಂಬಾರ ವೃತ್ತಿಯ ಕುಟುಂಬಗಳು ಇರುವಕ್ಕಿಯ ಚೌಡ ಶೆಟ್ಟರ ಸಹಕಾರದಿಂದ ಇರುವಕ್ಕಿಯಲ್ಲಿ ಖಾಯಂ ನೆಲುಸುವಂತಾಯಿತು.
   ಚೌಡ ಶೆಟ್ಟರು ನಡೆ ನುಡಿ ಶುದ್ಧರಾಗಿದ್ದರಿಂದ ಮತ್ತು ಸಾತ್ವಿಕರಾಗಿದ್ದರಿಂದಲೇ ರಾಮಕೃಷ್ಣ ಅಯ್ಯಂಗಾರರ ಆಪ್ತ ವಲಯದಲ್ಲಿ ಆಪ್ತರಾಗಲು ಕಾರಣ.
  1952 ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಅಯ್ಯಂಗಾರರ ಪುತ್ರ ಆಗಿನ ಪ್ರಖ್ಯಾತ ವಕೀಲರಾಗಿದ್ದ ಸ್ವಾತಂತ್ರ ಹೋರಾಟಗಾರರೂ ಆಗಿದ್ದ ಬದರೀನಾರಾಯಣ ಅಯ್ಯಂಗಾರರು ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಿ,ಎದುರಾಳಿ ಉಳುವವನೇ ಹೊಲದೊಡೆಯ ಉದ್ಘೋಷದ ಗಣಪತಿಯಪ್ಪರ ನೇತೃತ್ವದಲ್ಲಿ ಪ್ರಾರಂಭ ಆಗಿದ್ದ ಕಾಗೋಡು ರೈತ ಹೋರಾಟವನ್ನು ಮುನ್ನಡೆಸಿ ರಾಷ್ಟ್ರ ನಾಯಕರಾದ ರಾಮಮನೋಹರ ಲೋಹಿಯಾ, ಜೇಪಿ, ಮದುಲಿಮೆ, ಜಾರ್ಜ್ ಪರ್ನಾಂಡಿಸರು ಬರುವಂತೆ ಮಾಡಿ ಗೇಣಿ ರೈತರ ಕಣ್ಮಣಿ ಆಗಿದ್ದ ಸಮಾಜವಾದಿ ಪಾರ್ಟಿಯಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರು ಗೆದ್ದದ್ದು ಇತಿಹಾಸ. 
    ಬದರೀನಾರಾಯಣರ ಸೋಲಿನ ಅಘಾತದಿಂದ ನಾಲ್ಕು ಸಾವಿರ ಎಕರೆ ಇನಾಂದಾರರು, ಭೂಮಾಲಿಕರು, ಆನಂದಪುರಂ ನಲ್ಲಿ ಸಾರ್ವಜನಿಕರಿಗಾಗಿ ತಮ್ಮ ಪತ್ನಿ ಸ್ಮಾರಕ ಆಸ್ಪತ್ರೆ (ಕನಕಮ್ಮಾಳ್ ಆಸ್ಪತ್ರೆ) ಮಗನ ಸ್ಮರಣಾಥ೯ ಪಶುವೆದ್ಯ ಶಾಲೆ (ಜಗನ್ನಾಥ ಪಶು ವೈದ್ಯ ಶಾಲೆ) ನಿರ್ಮಿಸಿ ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮರಣಿಸಿದ್ದು ಅವರ ಅನುಯಾಯಿಗಳಿಗೂ ದೊಡ್ಡ ಅಘಾತ ಆಗಿತ್ತು.
  ಅವರ ಪುತ್ರ ವೆಂಕಟಾಚಲ ಆಯ್ಯಂಗಾರರು ಕುಟುಂಬದ ಯಜಮಾನಿಕೆ ಅನಿವಾಯ೯ವಾಗಿ ಹೊರುವಂತಾಗಿ ಮೊದಲ ಚುನಾವಣೆಯಲ್ಲಿ ಸೋತ ಸಹೋದರ ಬದರಿನಾರಾಯಣ ಅಯ್ಯಂಗಾರರನ್ನು 1957ರ ಚುನಾವಣೆಯಲ್ಲಿ ಗೆಲ್ಲಿಸುವ ಶಪಥ ಮಾಡುತ್ತಾರೆ, ಆಗ ಅವರ ತಂದೆಯ ಗೆಳೆಯರೆಲ್ಲ ಸಂಘಟಿತರಾಗುತ್ತಾರೆ.
  ಈ ಸಂದರ್ಭದಲ್ಲೇ ಮಹಾತ್ಮಾ ಗಾಂಧಿಜೀಯಿಂದ ಸವೋ೯ದಯ ಮತ್ತು ಗ್ರಾಮಸ್ವರಾಜ್ಯದ ಬಗ್ಗೆ ಪ್ರೇರಣೆ ಪಡೆದು ಆಚಾರ್ಯ ವಿನೋಬ ಬಾವೆ 18 ಏಪ್ರಿಲ್ 1951ರಲ್ಲಿ ಪ್ರಾರಂಭಿಸಿದ  ಭೂದಾನ ಚಳವಳಿ (ಶ್ರೀಮಂತ ಜಮೀನ್ದಾರರು ಅವರ ಜಮೀನಿನ ಕೆಲ ಅಂಶ ಭೂರಹಿತರಿಗೆ ದಾನ ಮಾಡುವುದು) ಉತ್ತು೦ಗಕ್ಕೆ ಸಾಗಿತ್ತು, ನಮ್ಮ ಜಿಲ್ಲೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ಇದರ ನೇತೃತ್ವವಹಿಸಿದ್ದರು ಅವರಿಗೆ ವೆಂಕಟಾಚಲ ಅಯ್ಯಂಗಾರ್ ಬದರೀನಾರಾಯಣ ಅಯ್ಯಂಗಾರರು ಸಾಥ್ ನೀಡಿ ಆಚಾರ್ಯ ವಿನೋಬಾ ಭಾವೆಯವರು ಆನಂದಪುರಂಗೆ ಭೂದಾನ ಸ್ವೀಕರಿಸಲು ಬರುವಂತೆ ಮಾಡಲು ಯಶಸ್ವಿ ಆಗಿ ವಿನೋಭಾ ಭಾವೆಯಂತ ಮಹಾನುಭಾವರ ಪಾದ ಸ್ಪರ್ಶ ಆನಂದಪುರಂಗೆ ಮಾಡುವಂತೆ ಮಾಡಿ ಆನಂದಪುರಂ ಪಾವನ ಮಾಡಿದ್ದು ಇತಿಹಾಸವಾಗಿದೆ.
    ಆ ದಿನ ಅಯ್ಯಂಗಾರರ ಕುಟುಂಬ, ಸುಳುಗೋಡಿನ  ಮುತ್ರಿ ಗೌಡರ ಕುಟುಂಬ  ಹಾಲಿ ಆನಂದಪುರಂ ವಿದ್ಯುತ್ ಇಲಾಖೆ ಸುತ್ತ ಮುತ್ತದ ಖುಷ್ಕಿ ಜಮೀನು ದಾನ ನೀಡಿದರು (ಆನಂದಪುರಂ ಸರ್ಕಾರಿ ಪದವಿ ಪೂವ೯ ಇಲಾಖೆಗೆ ಈ ಜಮೀನು ಸೇರಿದೆ), ಇದೇ ಸಂದಭ೯ದಲ್ಲಿ  ಇರುವಕ್ಕಿಯ ಚೌಡ ಶೆಟ್ಟರು ತಮ್ಮ ಫಲಭರಿತ ಬೆಲೆ ಬಾಳುವ 5 ಎಕರೆ ತರಿ ಜಮೀನು ಭೂದಾನ ಮಾಡಿದರು (ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯ ಸುಪರ್ದಿಯಲ್ಲಿ ಈ ಜಮೀನು ಇದೆ, ಈ ಕುಟುಂಬದ ಈಗಿನ ತಲೆಮಾರು ಪ್ರತಿ ವರ್ಷ ಗೇಣಿ ಭತ್ತ ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಗೆ ನೀಡುತ್ತಿತ್ತು).             

      ಇದು ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾಜು೯ನ ಗೌಡರಿಗೆ ಹೆಚ್ಚು ಸಂತೋಷ ನೀಡುತ್ತದೆ ಮತ್ತು ಈ ವಿಚಾರ ವಿನೋಬಾ ಭಾವೆಯವರಿಗೆ ಅವತ್ತಿನ ಸಭೆಯಲ್ಲೇ ವಿವರಿಸುತ್ತಾರೆ, ಆಚಾರ್ಯರೂ ಚೌಡ ಶೆಟ್ಟರನ್ನು ಅಭಿನಂದಿಸಿ ಆಶ್ರೀವದಿಸುತ್ತಾರೆ.
    ಹಿಂದುಳಿದ ಜನಾಂಗದ, ಕುಂಬಾರಿಕೆ ವೃತ್ತಿಯ ಚೌಡ ಶೆಟ್ಟರ ಈ ಭೂದಾನ  ಅವರನ್ನು ದಾನಿಗಳಲ್ಲಿ ಶ್ರೀಮಂತ ಗೊಳಿಸಿತು, ರಾಜ್ಯದ ಮೊದಲ ಮತ್ತು ಏಕೈಕ ಕುಂಬಾರ ಸಮಾಜದ ಭೂದಾನಿಗಳು ಇವರು.
   ಇರುವಕ್ಕಿ ಚೌಡ ಶೆಟ್ಟರು ಮತ್ತು ಶ್ರೀಮತಿ ಕನ್ನಮ್ಮ ದಂಪತಿಗೆ ಏಕೈಕ ಪುತ್ರ ಬಸಪ್ಪ ಆ ಕಾಲದಲ್ಲಿ ಎಸ್.ಎಸ್.ಎಲ್.ಸಿ .ಪಾಸು ಮಾಡಿದ ಪ್ರತಿಬಾವಂತ, ಇವರು ಕೂಡ ಶಿಸ್ತಿನ ಮನುಷ್ಯ ,ಅತ್ಯುತ್ತಮ ಕಬ್ಬಡಿ ಆಟಗಾರರು, ಅತ್ಯುತ್ತಮ ಬೇಟೆಗಾರರು, ಮಾದರಿ ಕೃಷಿಕರು ಆಗಿದ್ದರು, ಹಾವು ಕಚ್ಚಿದರೆ ಔಷದಿ ನೀಡುತ್ತಿದ್ದರು ಇವರೂ ಈಗ ಇಲ್ಲ.
      ಬಸಪ್ಪ ಮತ್ತು ಶ್ರೀಮತಿ  ಮಂಜಮ್ಮ ದಂಪತಿಗಳಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.
(ನಾಳೆ ಮುಂದಿನ ಭಾಗ - 54)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ