Skip to main content

Posts

Showing posts from March, 2018

# ಉಡುಪಿಯ ಮಟ್ಟು ಗುಳ್ಳ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಹೊಂದಿದೆ.#

# ಉಡುಪಿಯ ಮಟ್ಟು ಗುಳ್ಳದ ಮೂಲ ಬಲ್ಲಿರಾ#    ಉಡುಪಿ ಗುಳ್ಳ ಎಂದರೆ ದಂಡನೆಯ ಬದನೆಕಾಯಿ ಅಂತ ಎಲ್ಲರಿಗೂ ಗೊತ್ತು ಆದರೆ ಇಲ್ಲಿನ ಮಟ್ಟು ಗುಳ್ಳಕ್ಕೆ ಬೇರೆಯದೇ ಇತಿಹಾಸ, ಆಧ್ಯಾತ್ಮದ ನಂಟು, ರುಚಿ ಇದೆ.   ಹಾಗಾಗಿಯೆ ಇದಕ್ಕೆ ಜಿಯೋಗ್ರಾಫಿಕಲ್ ಇಂಡಿ ಕೇಶನ್ ಟ್ಯಾಗ್ ಇದೆ.   ಉಡುಪಿಯಲ್ಲಿ ಉಡುಪಿ ಗುಳ್ಳ ಅಂತ ಬಕೂ೯ರ್, ಕುಂದಾಪುರದಲ್ಲಿ ಬೆಳೆದ ಗುಳ್ಳಗಳ ಮಾರಾಟ ಜಾಸ್ತಿ ಆದರೆ ಮಟ್ಟು ಗುಳ್ಳ ಮಾತ್ರ ಎಲ್ಲಾ ಕಡೆ ಸಿಗುವುದಿಲ್ಲ.    ಉಡುಪಿಯಿ೦ದ ಮ೦ಗಳೂರು ರಾಷ್ಟ ಹೆದ್ದಾರಿಯಲ್ಲಿ ಕಟಪಾಡಿಯಿ೦ದ ಬಲಕ್ಕೆ ತಿರುಗಿದರೆ ಮಟ್ಟು ಎಂಬ ಹಳ್ಳಿ ಇದೆ ಇಲ್ಲಿ ಉದ್ಯಾವರ ನದಿ ಮತ್ತು ಸ್ವಣ೯ ನದಿ ಹರಿಯುವ ಪ್ರದೇಶದ ಮದ್ಯದ ಸುಮಾರು 500 ಎಕರೆ ಮರಳು ಮಿಶ್ರ ಮಣ್ಣಿನ ಭೂಮಿ ಈ ಗುಳ್ಳ ಬೆಳೆಯುವ ಪ್ರದೇಶ.    ಪ್ರತಿ ಹೆಕ್ಟರ್ ಗೆ ಅಂದಾಜು 40 ಟನ್ ಇಳುವರಿ ಬರುವ ಈ ಬೆಳೆ ಸೆಪ್ಟೆಂಬರ್/ಅಕ್ಟೋಬರ್ ನಲ್ಲಿ ಕೊಯ್ಲಗಿ ಬರುತ್ತೆ, ರಾಸಾಯನಿಕ ಬಳಸದೆ ಹೆಚ್ಚು ಮೀನು ಗೊಬ್ಬರದಲ್ಲಿ ಇದನ್ನ ಬೆಳೆಸುತ್ತಾರೆ, ಯಾವುದೇ ವಿಷದ ಕ್ರಿಮಿನಾಶಕ ಬಳಸುವುದಿಲ್ಲ ಹಾಗಾಗಿ ಈ ಮಟ್ಟು ಗುಳ್ಳ ಸಾವಯವ ತರಕಾರಿ ಮತ್ತು ಇದರ ರುಚಿ ಅತ್ಯಂತ ವಿಭಿನ್ನ .    ಈಗ ಇದನ್ನ ಬೆಳೆಸುವವರ ಸಂಖ್ಯೆ ಕಡಿಮೆ ಆಗಿದೆ, 2011ರಲ್ಲಿ ಇದರ ಪ್ರಾದೇಶಿಕ ವಿಭಿನ್ನತೆ, ಹಿನ್ನೆಲೆಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಹೊಂದಿದ್ದು ಕನಾ೯ಟಕದ ಈ ತರಕಾರಿಗೆ ಹೆಮ್ಮೆಯ ಕಿರೀಟವಾಗಿದೆ.   ಇದಕ್ಕೆ 400 ವಷ೯ದ ಇತ

# ಎಂತವರನ್ನು ಬದಲಿಸುವ ಕುವೆಂಪು ವಿಶ್ವಮಾನವ ತತ್ವ#

ಕುವೆಂಪುರವರ ಓದು ಬರಹ ಮತ್ತು ಬದುಕಾದ ವಿಶ್ವಮಾನವ ತತ್ವ ಎಂತವರೂ ಒಪ್ಪುತ್ತಾರೆ ಅನ್ನಲು ಈ ಬಿಜೆಪಿಯ ಷಾ ಎಂಬ ದೊರೆ ಕುವೆಂಪು ಸಮಾದಿಗೆ ತಲೆತಾಗಿಸಿ ವಂದಿಸಿದ್ದೆ ಉದಾಹರಣೆ.   ನನ್ನ ಕುವೆಂಪುರವರ ಅಭಿಮಾನ ಮನೆ ಮತ್ತು ಕಚೇರಿಯಲ್ಲಿ ಅವರ ಭಾವಚಿತ್ರ ನೋಡಿದವರು ನೀವು ಏನೇ ಹೇಳಿ ನಾವು ಕುವೆಂಪು ಒಪ್ಪುವುದಿಲ್ಲ ಎನ್ನುತ್ತಿದ್ದರು ಈಗ ಅವರ ಪಕ್ಷದ ಅಧ್ಯಕ್ಷರ ಕುಪ್ಪಳ್ಳಿ ಬೇಟಿಯಿಂದ ಮನ ಪರಿವತ೯ನೆ ಆಗಿರಬಹುದು. ಈ ಮೊದಲು ಸಂಘ ಪರಿವಾರಕ್ಕೆ, ಬಿ ಜೆ ಪಿಗೆ ಅಂಬೆಡ್ ಕರ್ ಅಂದ್ರೆ ಆಗುತ್ತಿರಲಿಲ್ಲ ಆದರೆ ಈಗ ಬದಲಾಗಿದೆ.   ಪರಿವತ೯ನೆ ಜಗದ ನಿಯಮ, ಮತಬ್ಯಾಂಕ್ ವ್ಯಾಪ್ತಿ ವಿಸ್ತರಣೆಗಾಗಿ ಈ ಬದಲಾವಣೆ ಆಗಿದ್ದರು ಮುಂದಿನ ದಿನದಲ್ಲಿ ಬಿಜೆಪಿಯಲ್ಲಿ ಈ ಘಟನೆಗಳು ಬೇರೆ ರೀತಿಯ ಪರಿವತ೯ನೆಗೆ ಕಾರಣವಾಗುತ್ತದೆ ನೋಡಿ.

# ಚಂದ್ರೂ ಸ್ಟುಡಿಯೋ ನಿರಂಜನ್ ಯುವಕರ ಐಕಾನ್#

# ಚಂದ್ರೂ ಸ್ಟುಡಿಯೋ ನಿರಂಜನ ಅಂದರೆ ಶಿವಮೊಗ್ಗದ ಕಾಂಗ್ರೇಸ್ ವಕ್೯ ಶಾಪ್ ಆಗಿತ್ತು#   ಇವರ ದೊಡ್ಡಪ್ಪ ಶ್ರೀ ರವಳಪ್ಪಾ ನವರು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಪಕ್ಷದ ಒಡನಾಡಿಗಳು ಆಗಿನ ಶಿವಮೊಗ್ಗದ ಪುರಸಭೆಯಲ್ಲಿ ಜನ ಪ್ರತಿನಿಧಿ ಆಗಿ, ಪದಾದಿಕಾರಿಗಳಾಗಿ ಜನಪ್ರಿಯತೆಗಳಿಸಿದವರು ಅವರ  ಸಹೋದರ ಚಂದ್ರಪ್ಪ ಪ್ರಗತಿ ಪರ ರೈತರು ಎಲ್ಲಾ ರಾಜಕೀಯ ದುರೀಣರ ಒಡನಾಟ ಹೊಂದಿದ್ದವರು ಅವರ ಹೆಸರಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಚಂದ್ರು ಸ್ಟುಡಿಯೋ ಕೆಲವು ದಶಮಾನ ಮಿಂಚಿದ ಉದ್ಯಮ ಈಗ ಶಿವಮೊಗ್ಗದ ಕಾಂಗ್ರೆಸ್ ಕಚೇರಿ ಪಕ್ಕದ ಮಹಲಿನ ಮಾಳಿಗೆ ಮೇಲೆ ಇದೆ. ರವಳಪ್ಪಾರ ತಮ್ಮನ ಮಗ ನಿರOಜನ ವಿದ್ಯಾವಂತ, ದಾನಿ ಮತ್ತು ಕಾಂಗ್ರೇಸ್ನ ಕಟ್ಟಾಳು ಇವರ ಪೋಟೋ ಸ್ಟುಡಿಯೋ ಈಗಿನ ರಾಜಕೀಯ ಮುಂದಾಳುಗಳಾದ ರಮೇಶ್, ದಿನೇಶ್, ರವಿ ಮುಂತಾದವರ ಕಾಯ೯ ಸ್ಥಾನ ಆಗಿತ್ತು.   ವಿದ್ಯಾಭ್ಯಾಸ ಮಾಡಲು ತೊಂದರೆ ಆದ ಸಾವಿರಾರು ವಿದ್ಯಾಥಿ೯ಗಳಿಗೆ ನಿರಂಜನ ಆತ್ಮವಿಶ್ವಾಸ ತುಂಬಿ ಅವರ ಕನಸು ನನಸು ಮಾಡಿದ್ದನ್ನ ನಾವೆಲ್ಲ ನೋಡಿದ್ದೇವೆ.   ಆದರೆ ಕಾಂಗ್ರೇಸ್ ಪಕ್ಷ ಇಂತವರನ್ನ ಬಳಸಿ ಕೊಳ್ಳುವುದಿಲ್ಲ, ಯಾರಾರಿಗೊ ಸ್ಥಾನ ಮಾನ ನೀಡಿ ಅಹ೯ತೆ ಇರುವ ಇವರನ್ನ ಕಡೆಗಾಣಿಸಿದೆ.   ನನ್ನ ಜಿಲ್ಲಾ ಪಂಚಾಯತ ಸದಸ್ಯ ಅವದಿಯಲ್ಲಿ ನಾನು ಇವರಿಂದ ಅನೇಕ ಸಲಹೆ ಸಹಕಾರ ಪಡೆದಿದ್ದೆ, ಆಗೆಲ್ಲ ರಾಜಕಾರಣಿಗಳ ದಂಡು ಅಲ್ಲಿ ಸೇರುತ್ತಿತ್ತು, ಸಹಾಯ ಕೇಳಿ ಬರುವವರೂ ಕೂಡ ಎಲ್ಲರಿಗೂ ಅಲ್ಲಿ ಗೌರವದ ಸ್ಥಾನ ಮತ್ತು

# ಕರಾವಳಿಯ ಯಕ್ಷಗಾನ ಜನರ ಆಚರಣೆ ಬದಲಿಸುವ ಶಕ್ತಿ ಇದೆ#

ಕರಾವಳಿ ಮೀನುಗಾರರು ತಮ್ಮ ಜಾತಿ ಮತ್ತು ಹೆಸರಿನ ನಂತರ ಮೊಗೇರ ಅಂತ ಬರೆಯುತ್ತಿದ್ದರು ಮತ್ತು ಹೆಚ್ಚು ದಂಡಿಗೆ ಹೊರುತ್ತಿದ್ದರು (ಪಲ್ಲಕ್ಕಿ ಜನ ಸಾಗಾಣಿಕೆಗಾಗಿ) ಇದನ್ನ ಬದಲಿಸಲು 1940ರಲ್ಲಿ ಮುಂಬೈಯ ಮೊಗವೀರ ಮಹಜನ ಸಂಘ ಕರ ಪತ್ರ ಮತ್ತು ಸಭೆಗಳ ಮುಖಾಂತರ ಜನ ಜಾಗೃತಿ ಮಾಡಿದರೂ ಜನ ಬದಲಾಗಲಿಲ್ಲವಂತೆ ಆಗ ಮುಂಬೈನಿ೦ದ ಲಾರಿ ತಂದು ದಂಡಿಗೆಗಳನ್ನ ವಶ ಪಡಿಸಿ ದೂರ ಪ್ರದೇಶಕ್ಕೆ ಒಯ್ದು ಸುಟ್ಟರಂತೆ ಇದರಿಂದ ದಂಡಿಗೆ ಹೊರುವ ಕಾಯಕ ಬದಲಾದರು (ವಾಹನಗಳು ಬಂದಿದ್ದು ಒಂದು ಕಾರಣ) ಮೊಗೇರ ಎಂಬ ಹೆಸರು ಬಿಡಲಿಲ್ಲ ಜನ ಆಗ ಪ್ರತಿ ವಷ೯ ಮಳೆಗಾಲದಲ್ಲಿ ಮುಂಬೈ ಪ್ರವಾಸಕ್ಕೆ ಹೋಗುವ ಯಕ್ಷಗಾನದವರಲ್ಲಿ ವಿನಂತಿಸಿದ ಕಾರಣ ಮುಂದಿನ ವಷ೯ದ ಎಲ್ಲಾ ಯಕ್ಷಗಾನ ಪ್ರದಶ೯ನದಲ್ಲಿ ಒಂದು ಪ್ರಸಂಗ ಸೇರಿದಂತೆ ಒಂದು ಪಾತ್ರ ಇನ್ನೊಂದು ಪಾತ್ರಕ್ಕೆ ''ನಿನ್ನ ಹೆಸರೇನು?" ಅಂದಾಗ ಆ ಪಾತ್ರ " ನಾನು ಪಂಜು ಮೊಗೇರ " ಅ೦ದಾಗ ಹೆಸರು ಕೇಳಿದ ಪಾತ್ರ "ಚೀ ನಾಚಿಗೆ ಆಗುವುದಿಲ್ಲವಾ ನಿನಗೆ? ನಾವು ಮೊಗ ವೀರರು, ಸಮುದ್ರದ ಅಲೆ ಏರಿ ಹೋರಾಡುವ ದೀರರು, ಮೊಗೇರ ಅನ್ನಲು ನಾಚಿಕೆ ಆಗಬೇಕು " ಅನ್ನುವುದರಿಂದ ಬದಲಾಯಿತು ಅಂತ 1994ರಲ್ಲಿ ಮುಂಬೈನ ದಾದರನಲ್ಲಿ ತುಳಸಿ ಪೈಪ್ ರೋಡಿನ ಸುಲ್ತಾನ್ ಬಿಲ್ಡಿOಗ್ನಲ್ಲಿ ಬೇಟಿ ಆದ ದತ್ತು ಮೊಗವೀರ ಎಂಬುವವರು ಹೇಳಿದ ವಿಚಾರ ಇದು.   ಕಲೆ ಮತ್ತು ಸಾಹಿತ್ಯದಿಂದ ಸಮಾಜದ ಮೂಡನಂಬಿಕೆ ಬದಲಿಸಬಹುದು ಅಥವ ಮೂಡರನ್ನಾಗಿಸ

# ಆರಗ ಜ್ಞಾನೇ೦ದ್ರ ಮಾಜಿ ಶಾಸಕರು ತೀಥ೯ಹಳ್ಳಿ ಇವರ ಬಗ್ಗೆ ನಿಮಗೆ ಗೊತ್ತಾ?#

ಆರಗ ಜ್ಞಾನೇಂ ದ್ರ ಮಾಜಿ ಶಾಸ ಕರು ತೀಥ ೯ ಹಳ್ಳಿ ಇವರ ಬ ಗ್ಗೆ ಮಾಹಿತಿ .     ನಾನು ಆಗ ಶಿವ ಮೊ ಗ್ಗ ಜಿ.ಪಂ. ಸದಸ್ಯ ನಮ್ಮ ಊರಿನ ವಾಹನ ಒಂದು ಆರಗದಲ್ಲಿನ ಶಾಲಾ ವಿದ್ಯಾಥಿ೯ನಿಗೆ ಡಿಕ್ಕಿ ಹೊಡೆದು ಆಕೆ ತೀಥ೯ಳ್ಳಿ ಆಸ್ಪತ್ರೆ ಸೇರಿಸಲಾಗಿತ್ತು, ಆಗ ಆರಗ ಜ್ಞಾನೇ೦ದ್ರ ಶಾಸಕರು ಬಿ.ಜೆ.ಪಿ. ಪಕ್ಷದಿಂದ.   ನಮ್ಮ ಊರಿನ ವಾಹನ ಮಾಲಿಕರು ಮುಸ್ಲಿಂ, ಚಾಲಕರು ಮುಸ್ಲಿಂ ಅವರಿಗೆಲ್ಲ ಅವತ್ತು ಜೀವ ಭಯ.    ಬೆಳಿಗ್ಗೆ ನನ್ನ ಕರೆದುಕೊಂಡು ಆರಗದ ಶಾಸಕರ ಮನೆಗೆ ಕರೆದೊಯ್ದರು, ಅಲ್ಲಿ ಶಾಸಕರಾದ ಜ್ಞಾನೇಂದ್ರ ಬೆಳಿಗ್ಗಿನ ಉಪಹಾರಕ್ಕೆ ನಮ್ಮನ್ನ ಕರೆದರು.             ಮುಸ್ಲಿಂ ವಾಹನ ಮಾಲಿಕರಿಗೆ ತೊಂದರೆ ಆಗದಂತೆ ತಮ್ಮ ಊರಿನ ಬಡ ವಿದ್ಯಾಥಿ೯ನಿಗೆ ಅನುಕೂಲವನ್ನೂ ಮಾಡಿದರು, ಇವತ್ತಿಗೂ ಆ ವಾಹನ ಮಾಲಿಕರು ಮತ್ತು ಚಾಲಕರು ಇವರನ್ನ ನೆನಪಿಸಿ ಕೊಳ್ಳುತ್ತಾರೆ.     ಇದೇ ಸಂದಭ೯ದಲ್ಲಿ ಸಂದಶ೯ನವಲ್ಲದ ಆದರೆ ಸಂದಶ೯ನದಂತೆ ನಮ್ಮಿಬ್ಬರ ನಡುವೆ ನಡೆದ ಸಂಬಾಷಣೆ ಬಹಳ ವಷ೯ದ ಹಿಂದೆ, ಶಿವಮೊಗ್ಗದ ಜನ ಹೋರಾಟ ಪತ್ರಿಕೆಯ ಕಾಲಂನಲ್ಲಿ ಬರೆದದ್ದು ಇಲ್ಲಿ ಪ್ರನ: ಉಲ್ಲೇಖಿಸಿದ್ದೇನೆ.    ಇವರ ಬಾಲ್ಯದಲ್ಲಿ ಇವರ ಜೀವನ ಅತ್ಯಂತ ಬಡತನದ್ದು, 7ನೇ ತರಗತಿಯಲ್ಲಿ ಅತ್ಯುತ್ತಮ ದಜೆ೯ಯಲ್ಲಿ ಉತ್ತೀಣ೯ ರಾಗುತ್ತಾರೆ ಆದರೆ ಬಡತನ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ನೀಡುವುದಿಲ್ಲ, ಇವರ ತಂದೆ ಊರವರ ಗೋವುಗಳ ಕಾವಲಿಗೆ ಇವರನ್ನ ನೇಮಿಸುತ್ತಾರೆ.      ಬಾಲಕ ಜ್ಞಾನೇಂದ್ರನಿಗೆ

# ನಿಜ ತಾಯ್ತನಕ್ಕೆ ಸವಾಲಾಗಿರುವ ಹೆರಿಗೆ ಮಾಡಿಸಲು ಮಹೂತ೯ ಇಡಿಸುವ ಪದ್ದತಿ#

# ಹೆರಿಗೆ ಮಾಡಿಸಲು ಮಹೂತ೯ ಇಡಿಸುವ ಕೆಟ್ಟ ಪದ್ದತಿ# # ಶಿವಮೊಗ್ಗ ಮಹಿಳಾ ಸಮಾವೇಶ 2008ರಲ್ಲಿ ಈ ವಿಷಯ ಚಚೆ೯ ಆಗಲಿ#       "ಜಾಗತಿಕ ತಾಯ್ತನದತ್ತ ನಮ್ಮೆಲ್ಲರ ಪಯಣ"ಎ0ಬ ನುಡಿ ಸೂಕ್ತಿಯೋoದಿಗೆ ದಿನಾ0ಕ 8 ಮಾಚ್೯ರಂದು ಶಿವಮೊಗ್ಗದಲ್ಲಿ ಮಹಿಳಾ ದಿನಾಚಾರಣೆಯನ್ನ ವಿಶಿಷ್ಟವಾಗಿ ಮಹಿಳಾ ಸಮಾವೇಶವಾಗಿ ಆಚರಿಸಲಾಗುತ್ತಿದ್ದು ಇದಕ್ಕೆ ಅನೇಕ ಜಾಗೃತ ಮಹಿಳೆಯರು ಮುಂದಾಗಿದ್ದಾರೆ.      ಅಲ್ಲಿ ಅನೇಕ ಮಹಿಳಾ ಸಮಸ್ಯೆಗಳು, ನಂಬಿಕೆ ಮತ್ತು ಮೂಡನಂಬಿಕೆಯ ಚೌಕಟ್ಟಿನಲ್ಲಿ ಆಚರಣೆಯ ಅನಾಗರೀಕ ಪದ್ದತಿ, ಸರಳ ವಿವಾಹ, ವರದಕ್ಷಿಣೆ, ಮಹಿಳಾ ಮೀಸಲಾತಿ ಬಗ್ಗೆ ಚಚೆ೯ ತೀಮಾ೯ನ ನಡೆಯಲಿದೆ ಎಂದು ಅವರ ಪ್ರಕಟನೆಯಲ್ಲಿ ಓದಿದೆ.   ಇಲ್ಲಿ ನನ್ನದೊಂದು ನಿವೇದನೆ ಇದೆ ಇದು ಇತ್ತೀಚಿನ ದಿನದಲ್ಲಿ ಪ್ರಾರಂಭವಾಗಿದ್ದು ಮುಂದೆ ಇದೊಂದು ಗೀಳಾಗಿ ಸವ೯ ಸಾದಾರಣ ಎಂಬಂತೆ ಒಂದು ಪದ್ದತಿ ಆಗುವ ಸಾಧ್ಯತೆ ಇದೆ.     ಇದು ಹೆರಿಗೆ ಮಾಡಿಸಲು ಮಹೂತ೯ ಇಡುವ ಕೆಟ್ಟ ಪದ್ದತಿ  ಬಗ್ಗೆ.   ಪುರೋಹಿತರೊಬ್ಬರು ನನ್ನ ಹತ್ತಿರ ಎನೋ ಚಚಿ೯ಸಲು ಬಂದಿದ್ದರು ಅವರಿಗೆ ನಿರಂತರವಾಗಿ ಒಂದು ಕುಟುಂಬದಿಂದ ಕಾಲ್ ಗಳು ಬರುತ್ತಿತ್ತು, ಅವರಿಬ್ಬರ ಸಂಬಾಷಣೆಯಿ೦ದ ತಿಳಿದಿದ್ದು ಆ ಕುಟುಂಬದ ಮಹಿಳೆ ಶಿವಮೊಗ್ಗದ ಪ್ರತಿಷ್ಟಿತ ನಸಿ೯೦ಗ್ ಹೊಂ ಒಂದರಲ್ಲಿ ಹೆರಿಗೆಗಾಗಿ ಸೇರಿಸಿದ್ದಾರೆ ಅವರ ಕುಟುoಬದವರಿಗೆ ಹುಟ್ಟುವ ಮಗು ಒಳ್ಳೆ ಜಾತಕವ೦ತನಾ (ಳ)ಗಬೇಕು ಹಾಗಾಗಿ ಯಾವ ಸಮಯದಲ್ಲಿ ಹೆರಿಗೆ ಮಾಡಿಸ

# ನನ್ನ ಬಾಲ್ಯದಿಂದ ಪ್ರಾರಂಭವಾಗಿ ಇವತ್ತು ಮುಂದುವರಿದ ದಿನಪತ್ರಿಕೆ ಪ್ರಜಾವಾಣಿ#

    #ಜನಮನದ ಜನಪ್ರಿಯ ಕನ್ನಡ ದಿನಪತ್ರಿಕೆ ಪ್ರಜಾವಾಣಿ ಮೊದಲಿನ ಜನಪ್ರಿಯತೆ ಮತ್ತು ತನ್ನ ಪತ್ರಿಕೆಯ ಹಿಂದಿನ ಪತ್ರಿಕಾ ನೀತಿಯ ನಿಷ್ಟುರತೆ ಉಳಿಸಿಕೊಳ್ಳುವ ಕಷ್ಟ ಕಾಲದ ಕ್ಷಣಗಣನೆಯಲ್ಲಿ.#        ನಮ್ಮ ಊರಿಗೆ 1961ರಿಂದ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಅದರ ವಿತರಕರಾಗಿದ್ದವರು ಹುಚ್ಚಾಚಾರ್ ಎಂಬ ನಿವೃತ್ತ ಸೈನಿಕರು ಅವರು ಯುದ್ಧದಲ್ಲಿ ಭಾಗವಹಿಸಿದವರು ಒಂದು ಕಾಲು ಗುಂಡೇಟಿನಿಂದ  ಕುಂಟುತ್ತಾ ನಡೆಯುತ್ತಾ ಪತ್ರಿಕೆ ವಿತರಣೆ ಬರಿಗಾಲಿನಲ್ಲಿ ಮಾಡುತ್ತಿದ್ದರು ಅಯ್oಗಾರ್ ಬ್ರಾಹಮಣರಾದ ಅವರಿಗೆ ಸಿಟ್ಟು ಜಾಸ್ತಿ ಆನಂದಪುರಕ್ಕೆ 25 ಪತ್ರಿಕೆ ಬರುತ್ತಿತ್ತು, ನಮ್ಮ ಮನೆ ಇರುವ ಯಡೇಹಳ್ಳಿಗೆ ಆನಂದಪುರದಿಂದ ಒಂದು ಕಿ.ಮೀ. ನಡೆದು ಬರುತ್ತಿದ್ದರು ಅದು ಕೇವಲ 2 ಪತ್ರಿಕೆ ವಿತರಿಸಲು ಒಂದು ನಮ್ಮ ಮನೆಗೆ ಇನ್ನೊಂದು SRS ಎಂಬ ಅಕ್ಕಿ ಗಿರಣಿಗೆ, ನಮಗೆ ಒಂದನೆ ತರಗತಿಯಿಂದಲೇ ಬೆಳಿಗ್ಗೆ ಪ್ರಜಾವಾಣಿ ಓದುವ ಅಭ್ಯಾಸ ಮಾಡಿದ್ದರು ನಮ್ಮ ತಂದೆ, ಅದರಲ್ಲಿ ಪ್ಯಾಂಟಮ್ ಮೊದ್ದು ಮಾಣಿ ನಮಗೆ ಅಪ್ಯಾಯವಾಗಿತ್ತು.      ಇನ್ನು  ವಾರಪತ್ರಿಕೆ ಆಗ ಪ್ರಜಾಮತ ಬರುತ್ತಿತ್ತು ಆದರೆ ಅದರಲ್ಲಿ ಗುಪ್ತ ಸಮಾಲೋಚನೆ ಅಂತ ಒಂದು ಪುಟಇದ್ದಿದ್ದರಿ೦ದ ಮಕ್ಕಳಿಗೆ ಓದಲು ಕೊಡುತ್ತಿರಲಿಲ್ಲ .       ಪ್ರಖ್ಯಾತ ಕಾಟೂ೯ನಿಸ್ಟ ಪಂಜು ಗಂಗೂಲಿಯ ವಯವರ ಪೋಸ್ಟನಿಂದ ಇದೆಲ್ಲ ನೆನಪಾಗಿ ಬರೆದೆ, ಬಂಗಾರಪ್ಪ ಸಂಬಂದಿ ಆದರೂ ಪ್ರಜಾವಾಣಿ ಅವರನ್ನ ವೈಭವಿಕರಿಸಲಿಲ್ಲ ಇದು ಈ ಪತ್ರಿಕೆಯ ನ

# ಶೃ೦ಗೇರಿ ಮಠ V/S ರಾಮಚಂದ್ರಪುರಮಠ ತಾಮರ ಶಾಸನದ ಅಸಲಿಯತ್ತು#

ಇದು ಅತ್ಯ೦ತ ಬುದ್ದಿವಂತರು ಸೃಷ್ಟಿ ಮಾಡಿದ ತಾಮರ ಶಾಸನದ ನಕಲಿ ನಗೆಪಾಟಲಾದ ಪ್ರಸಂಗ.   ರಾಮಚಂದ್ರಪುರದ ಮಠ ಶ್ರOಗೇರಿ ಮಠಕ್ಕಿ೦ತ ಪುರಾತನವಾದದ್ದು ಎಂದು ಬಿಂಬಿಸಲು ಈ ತಾಮರದ ತಗಡನ್ನ ಎಲ್ಲಾ ರೀತಿ ನಕಲು ಮಾಡಿದ್ದಾರೆ ಆದರೆ ಇಲ್ಲಿ ನಕಲು ಮಾಡಲು ಹೋದವರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ.   ಹೇಗೆಂದರೆ ತಾಮರ ಶಾಸನ ದಯಪಾಲಿಸಿದವರು ಮೃತರಾಗಿ ಮೂರು ವಷ೯ದ ನಂತರ ದ ದಿನಾ೦ಕ ಇವರ ಕೈ ತಪ್ಪಿನಿಂದ ಬರೆದು ಬಿಟ್ಟಿದ್ದಾರೆ.    ಇದನ್ನ ಕಾಬ೯ನ್ ಡೇಟಿಂಗ್ ಮಾಡಿಸಬೇಕೆಂದು ಪರಿಣಿತರು ಒತ್ತಾಯಿಸಿದ್ದರಿಂದ ಈ ತಾಮರದ ತಗಡು ಅಡಗಿದೆ.    ಇದನ್ನ ತಯಾರು ಮಾಡಿಸಲು ಕಾರಣ, ತಯಾರು ಮಾಡಿದ ಇತಿಹಾಸ ಸಂಶೊದಕರು, ತಯಾರು ಮಾಡಿಸಿದ ಮಠ ಒಂದರ ಸ್ವಾಮಿಗಳು ಈ ನಕಲಿಯನ್ನ ಸಮಾಜಕ್ಕೆ ಅಸಲಿ ಎಂದು ಪುಂಖಾನುಪುಂಖಾ ಮಾಡಿದ ಭಾಷಣ ಇದನ್ನ ಸಮಥಿ೯ಸುತ್ತಿರುವ ಅವರ ಪಟಾಲಂಗಳು ಇತಿಹಾಸ ತಿರುಚುವ ಈ ಶತಮಾನದ ದೊಡ್ಡ ಅಪರಾದ ಮಾಡಿದ್ದಾರೆ. ಈ ಬಗ್ಗೆ ಅನೇಕರು ಪೇಸ್ ಬುಕ್ನಲ್ಲಿ ಬರೆದ ಬರೆಹ ಇಲ್ಲಿ ಓದುಗರಿಗಾಗಿ ಲಗತ್ತಿಸಿದೆ. [3/3, 7:40 AM] ARUN PRASAD: ಶೃಂಗೇರೀನೇ ಜೇಷ್ಟ ಅಂತ ನೀವು ಹೇಳ್ತೀರಿ .ಆದರೆ ನಿನ್ನೆ ಅದ್ಯಾರೋ ತಾಮ್ರಶಾಸನದ ಬಗ್ಗೆ ಬರೆದು ಅದರ ಫೋಟೋಹಾಕಿ ನಮ್ಮದೇ ಪುರಾತನ ಅಂತಿದ್ರು ? [3/3, 7:41 AM] ARUN PRASAD: ತಾಮ್ರ ಶಾಸನವನ್ನು carbon dating ಗೆ ಒಳಪಡಿಸಿದರೆ ಷಡ್ಯಂತ್ರದ ಗುಟ್ಟು ರಟ್ಟಾಗುತ್ತದೆ. [3/3, 7:41 AM] ARUN PRASAD: M