ಕುವೆಂಪುರವರ ಓದು ಬರಹ ಮತ್ತು ಬದುಕಾದ ವಿಶ್ವಮಾನವ ತತ್ವ ಎಂತವರೂ ಒಪ್ಪುತ್ತಾರೆ ಅನ್ನಲು ಈ ಬಿಜೆಪಿಯ ಷಾ ಎಂಬ ದೊರೆ ಕುವೆಂಪು ಸಮಾದಿಗೆ ತಲೆತಾಗಿಸಿ ವಂದಿಸಿದ್ದೆ ಉದಾಹರಣೆ.
ನನ್ನ ಕುವೆಂಪುರವರ ಅಭಿಮಾನ ಮನೆ ಮತ್ತು ಕಚೇರಿಯಲ್ಲಿ ಅವರ ಭಾವಚಿತ್ರ ನೋಡಿದವರು ನೀವು ಏನೇ ಹೇಳಿ ನಾವು ಕುವೆಂಪು ಒಪ್ಪುವುದಿಲ್ಲ ಎನ್ನುತ್ತಿದ್ದರು ಈಗ ಅವರ ಪಕ್ಷದ ಅಧ್ಯಕ್ಷರ ಕುಪ್ಪಳ್ಳಿ ಬೇಟಿಯಿಂದ ಮನ ಪರಿವತ೯ನೆ ಆಗಿರಬಹುದು. ಈ ಮೊದಲು ಸಂಘ ಪರಿವಾರಕ್ಕೆ, ಬಿ ಜೆ ಪಿಗೆ ಅಂಬೆಡ್ ಕರ್ ಅಂದ್ರೆ ಆಗುತ್ತಿರಲಿಲ್ಲ ಆದರೆ ಈಗ ಬದಲಾಗಿದೆ.
ಪರಿವತ೯ನೆ ಜಗದ ನಿಯಮ, ಮತಬ್ಯಾಂಕ್ ವ್ಯಾಪ್ತಿ ವಿಸ್ತರಣೆಗಾಗಿ ಈ ಬದಲಾವಣೆ ಆಗಿದ್ದರು ಮುಂದಿನ ದಿನದಲ್ಲಿ ಬಿಜೆಪಿಯಲ್ಲಿ ಈ ಘಟನೆಗಳು ಬೇರೆ ರೀತಿಯ ಪರಿವತ೯ನೆಗೆ ಕಾರಣವಾಗುತ್ತದೆ ನೋಡಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment