ಆರಗ ಜ್ಞಾನೇಂದ್ರ ಮಾಜಿ ಶಾಸಕರು ತೀಥ೯ ಹಳ್ಳಿ ಇವರ ಬಗ್ಗೆ ಮಾಹಿತಿ .
ನಾನು ಆಗ ಶಿವಮೊಗ್ಗ ಜಿ.ಪಂ.ಸದಸ್ಯ ನಮ್ಮ ಊರಿನ ವಾಹನ ಒಂದು ಆರಗದಲ್ಲಿನ ಶಾಲಾ ವಿದ್ಯಾಥಿ೯ನಿಗೆ ಡಿಕ್ಕಿ ಹೊಡೆದು ಆಕೆ ತೀಥ೯ಳ್ಳಿ ಆಸ್ಪತ್ರೆ ಸೇರಿಸಲಾಗಿತ್ತು, ಆಗ ಆರಗ ಜ್ಞಾನೇ೦ದ್ರ ಶಾಸಕರು ಬಿ.ಜೆ.ಪಿ. ಪಕ್ಷದಿಂದ.
ನಮ್ಮ ಊರಿನ ವಾಹನ ಮಾಲಿಕರು ಮುಸ್ಲಿಂ, ಚಾಲಕರು ಮುಸ್ಲಿಂ ಅವರಿಗೆಲ್ಲ ಅವತ್ತು ಜೀವ ಭಯ.
ಬೆಳಿಗ್ಗೆ ನನ್ನ ಕರೆದುಕೊಂಡು ಆರಗದ ಶಾಸಕರ ಮನೆಗೆ ಕರೆದೊಯ್ದರು, ಅಲ್ಲಿ ಶಾಸಕರಾದ ಜ್ಞಾನೇಂದ್ರ ಬೆಳಿಗ್ಗಿನ ಉಪಹಾರಕ್ಕೆ ನಮ್ಮನ್ನ ಕರೆದರು.
ಮುಸ್ಲಿಂ ವಾಹನ ಮಾಲಿಕರಿಗೆ ತೊಂದರೆ ಆಗದಂತೆ ತಮ್ಮ ಊರಿನ ಬಡ ವಿದ್ಯಾಥಿ೯ನಿಗೆ ಅನುಕೂಲವನ್ನೂ ಮಾಡಿದರು, ಇವತ್ತಿಗೂ ಆ ವಾಹನ ಮಾಲಿಕರು ಮತ್ತು ಚಾಲಕರು ಇವರನ್ನ ನೆನಪಿಸಿ ಕೊಳ್ಳುತ್ತಾರೆ.
ಇದೇ ಸಂದಭ೯ದಲ್ಲಿ ಸಂದಶ೯ನವಲ್ಲದ ಆದರೆ ಸಂದಶ೯ನದಂತೆ ನಮ್ಮಿಬ್ಬರ ನಡುವೆ ನಡೆದ ಸಂಬಾಷಣೆ ಬಹಳ ವಷ೯ದ ಹಿಂದೆ, ಶಿವಮೊಗ್ಗದ ಜನ ಹೋರಾಟ ಪತ್ರಿಕೆಯ ಕಾಲಂನಲ್ಲಿ ಬರೆದದ್ದು ಇಲ್ಲಿ ಪ್ರನ: ಉಲ್ಲೇಖಿಸಿದ್ದೇನೆ.
ಇವರ ಬಾಲ್ಯದಲ್ಲಿ ಇವರ ಜೀವನ ಅತ್ಯಂತ ಬಡತನದ್ದು, 7ನೇ ತರಗತಿಯಲ್ಲಿ ಅತ್ಯುತ್ತಮ ದಜೆ೯ಯಲ್ಲಿ ಉತ್ತೀಣ೯ ರಾಗುತ್ತಾರೆ ಆದರೆ ಬಡತನ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ನೀಡುವುದಿಲ್ಲ, ಇವರ ತಂದೆ ಊರವರ ಗೋವುಗಳ ಕಾವಲಿಗೆ ಇವರನ್ನ ನೇಮಿಸುತ್ತಾರೆ.
ಬಾಲಕ ಜ್ಞಾನೇಂದ್ರನಿಗೆ ಒಂದು ಖಾಕಿ ಚೆಡ್ಡಿ ಮಾತ್ರ ಉಡುಗೆ. ಬರೀ ಮೈಯಲ್ಲಿ ಯ ಬಾಲಕನಿಗೆ ಗೋಣಿ ಚೀಲವೇ ಕಂಬಳಿ, ಬೆಳಿಗ್ಗೆ ಗೋವುಗಳೂಂದಿಗೆ ಹೋದರೆ ಸೂಯಾ೯ಸ್ತ ಸಮಯಕ್ಕೆ ಹಳ್ಳಿಗೆ ವಾಪಾಸು ಬರುವಾಗ ಮುಂದಿನ ಜೀವನದ ಬಗ್ಗೆ ಯೋಚಿಸಲು ಸಮಯವಾದರೂ ಎಲ್ಲಿ.
ಹೀಗಿದ್ದಾಗ ಒಂದು ದಿನ ಗೋವುಗಳ ಮೇವಿನ ನಲಿದಾಟದ ಮಧ್ಯ ಬಾಲಕ ಜ್ಞಾನೇಂದ್ರ ತನ್ನದೇ ಗೋಪಾಲಕ ವೃತ್ತಿಯ ಬಾಲ್ಯದಾಟದಲ್ಲಿ ಮೈಮರೆತಿದ್ದಾಗ, ಅವರ ಶಾಲಾ ಶಿಕ್ಷಕರು ದಿಡೀರ್ ಪ್ರತ್ಯಕ್ಷರಾದಗ ಜ್ಞಾನೇಂದ್ರ ಬೆದರುತ್ತಾರೆ. ಆದರೆ ಎಲ್ಲಾ ಸನ್ನಿವೇಶ ಅರಿತೇ ಬಂದ ಆ ದೈವ ಸ್ವರೂಪದ ಶಿಕ್ಷಕ ತಕ್ಷಣ ತನ್ನ ಜೊತೆ ಬರಲು ಆಜ್ಞಾಪಿಸುತ್ತಾರೆ.
ಉಭಯ ಸಂಕಟದಲ್ಲಿ ಬಾಲಕ ಸಿಕ್ಕಿ ಬೀಳುತ್ತಾನೆ. ತಾನು ಜವಾಬ್ದಾರಿ ವಹಿಸಿದ ಕೆಲಸ ಬಿಟ್ಟು ಹೋದರೆ? ಗೋವುಗಳ ಪಾಡೇನು? ಇದರ ಜವಾಬ್ದಾರಿ ನೀಡಿದ ತಂದೆಗೆ ಉತ್ತರ? ಈ ಎಲ್ಲಾ ಪ್ರಶ್ನೆಗೆ ಪರಿಹಾರವಾಗಿ ಶಿಕ್ಷಕರು ನಿನ್ನ ತಂದೆಗೆ ಹೇಳಿಯೇ ಬಂದಿದ್ದೇನೆ ಬಾ ಅಂತ ಸೀದಾ ಆರಗದ ಅಕ್ಕಿ ಗಿರಣಿ ಮಾಲಿಕರಾದ ದಾನಿ ಶ್ರೀ ನಾಗರಾಜ ರಾಯರ ಹತ್ತಿರ (ನನ್ನ ನೆನಪು ಸರಿ ಇದ್ದರೆ ಈ ಹೆಸರು ಸರಿ) ಕರೆದೊಯ್ಯತ್ತಾರೆ.
ಅಲ್ಲಿ ಶಿಕ್ಷಕರು ವಿನಂತಿಸುತ್ತಾರೆ ಈ ಬಾಲಕ ಪ್ರತಿಭಾವಂತ ಬಡತನದಿಂದ ಈತನ ತಂದೆ ದನ ಕಾಯಲು ಬಿಟ್ಟಿದ್ದಾರೆ ಆದರೆ ನೀವು ಈತನನ್ನ ಓದಿಸಿದರೆ ಮುಂದೆ ಈತ ಉತ್ತಮ ವ್ಯಕ್ತಿ ಆಗಿ ಸಮಾಜದ ಒಳಿತಿಗೆ ಕಾರಣನಾಗುತ್ತಾನೆ ಅಂದಾಗ, ಅವರು ಜ್ಞಾನೇಂದ್ರರನ್ನ ದತ್ತು ಪಡೆದಂತೆ ಅವರ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿಸುತ್ತಾರೆ.
ಮುಂದೆ ವಿದ್ಯಾವಂತರಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಶಾಸಕರಾದ ಆರಗ ಜ್ಞಾನೇ೦ದ್ರರ ಮನೆಯಲ್ಲಿ ದೊಡ್ಡ ಪೋಟೋ ಒಂದು ನಿತ್ಯ ಅವರಿಂದ ಪೂಜಿಸುತ್ತಿರುವುದು, ಅವರನ್ನ ಸಾಕಿ ಸಲುಹಿದ ಆರಗದ ಅಕ್ಕಿ ಗಿರಣಿ ಮಾಲಿಕರಾದ ಬ್ರಾಹಮಣ ನಾಗರಾಜ ರಾಯರದ್ದು.
ಜೀವನದಲ್ಲಿ ಉಪಕಾರ ಮಾಡಿದವರನ್ನ ಮರೆಯದೆ ಸದಾ ಸ್ಮರಿಸುವ, ಆರಗ ಎಂಬ ಹಳ್ಳಿಯಲ್ಲಿ ವಾಸ ಆಗಿರುವ ಮಾಜಿ ಶಾಸಕ ಜ್ಞಾನೇ೦ದ್ರ ಈ ಬಾರಿ ತೀಥ೯ ಹಳ್ಳಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪದಿ೯ಸುತ್ತಿದ್ದಾರೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment