Skip to main content

# ಆರಗ ಜ್ಞಾನೇ೦ದ್ರ ಮಾಜಿ ಶಾಸಕರು ತೀಥ೯ಹಳ್ಳಿ ಇವರ ಬಗ್ಗೆ ನಿಮಗೆ ಗೊತ್ತಾ?#

ಆರಗ ಜ್ಞಾನೇಂದ್ರ ಮಾಜಿ ಶಾಸಕರು ತೀಥ ಹಳ್ಳಿ ಇವರ ಗ್ಗೆ ಮಾಹಿತಿ .
 
  ನಾನು ಆಗ ಶಿವಮೊಗ್ಗ ಜಿ.ಪಂ.ಸದಸ್ಯ ನಮ್ಮ ಊರಿನ ವಾಹನ ಒಂದು ಆರಗದಲ್ಲಿನ ಶಾಲಾ ವಿದ್ಯಾಥಿ೯ನಿಗೆ ಡಿಕ್ಕಿ ಹೊಡೆದು ಆಕೆ ತೀಥ೯ಳ್ಳಿ ಆಸ್ಪತ್ರೆ ಸೇರಿಸಲಾಗಿತ್ತು, ಆಗ ಆರಗ ಜ್ಞಾನೇ೦ದ್ರ ಶಾಸಕರು ಬಿ.ಜೆ.ಪಿ. ಪಕ್ಷದಿಂದ.
  ನಮ್ಮ ಊರಿನ ವಾಹನ ಮಾಲಿಕರು ಮುಸ್ಲಿಂ, ಚಾಲಕರು ಮುಸ್ಲಿಂ ಅವರಿಗೆಲ್ಲ ಅವತ್ತು ಜೀವ ಭಯ.
   ಬೆಳಿಗ್ಗೆ ನನ್ನ ಕರೆದುಕೊಂಡು ಆರಗದ ಶಾಸಕರ ಮನೆಗೆ ಕರೆದೊಯ್ದರು, ಅಲ್ಲಿ ಶಾಸಕರಾದ ಜ್ಞಾನೇಂದ್ರ ಬೆಳಿಗ್ಗಿನ ಉಪಹಾರಕ್ಕೆ ನಮ್ಮನ್ನ ಕರೆದರು.       
     ಮುಸ್ಲಿಂ ವಾಹನ ಮಾಲಿಕರಿಗೆ ತೊಂದರೆ ಆಗದಂತೆ ತಮ್ಮ ಊರಿನ ಬಡ ವಿದ್ಯಾಥಿ೯ನಿಗೆ ಅನುಕೂಲವನ್ನೂ ಮಾಡಿದರು, ಇವತ್ತಿಗೂ ಆ ವಾಹನ ಮಾಲಿಕರು ಮತ್ತು ಚಾಲಕರು ಇವರನ್ನ ನೆನಪಿಸಿ ಕೊಳ್ಳುತ್ತಾರೆ.
    ಇದೇ ಸಂದಭ೯ದಲ್ಲಿ ಸಂದಶ೯ನವಲ್ಲದ ಆದರೆ ಸಂದಶ೯ನದಂತೆ ನಮ್ಮಿಬ್ಬರ ನಡುವೆ ನಡೆದ ಸಂಬಾಷಣೆ ಬಹಳ ವಷ೯ದ ಹಿಂದೆ, ಶಿವಮೊಗ್ಗದ ಜನ ಹೋರಾಟ ಪತ್ರಿಕೆಯ ಕಾಲಂನಲ್ಲಿ ಬರೆದದ್ದು ಇಲ್ಲಿ ಪ್ರನ: ಉಲ್ಲೇಖಿಸಿದ್ದೇನೆ.
   ಇವರ ಬಾಲ್ಯದಲ್ಲಿ ಇವರ ಜೀವನ ಅತ್ಯಂತ ಬಡತನದ್ದು, 7ನೇ ತರಗತಿಯಲ್ಲಿ ಅತ್ಯುತ್ತಮ ದಜೆ೯ಯಲ್ಲಿ ಉತ್ತೀಣ೯ ರಾಗುತ್ತಾರೆ ಆದರೆ ಬಡತನ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ನೀಡುವುದಿಲ್ಲ, ಇವರ ತಂದೆ ಊರವರ ಗೋವುಗಳ ಕಾವಲಿಗೆ ಇವರನ್ನ ನೇಮಿಸುತ್ತಾರೆ.
     ಬಾಲಕ ಜ್ಞಾನೇಂದ್ರನಿಗೆ ಒಂದು ಖಾಕಿ ಚೆಡ್ಡಿ ಮಾತ್ರ ಉಡುಗೆ. ಬರೀ ಮೈಯಲ್ಲಿ ಯ ಬಾಲಕನಿಗೆ ಗೋಣಿ ಚೀಲವೇ ಕಂಬಳಿ, ಬೆಳಿಗ್ಗೆ ಗೋವುಗಳೂಂದಿಗೆ ಹೋದರೆ ಸೂಯಾ೯ಸ್ತ ಸಮಯಕ್ಕೆ ಹಳ್ಳಿಗೆ ವಾಪಾಸು ಬರುವಾಗ ಮುಂದಿನ ಜೀವನದ ಬಗ್ಗೆ ಯೋಚಿಸಲು ಸಮಯವಾದರೂ ಎಲ್ಲಿ.
   ಹೀಗಿದ್ದಾಗ ಒಂದು ದಿನ ಗೋವುಗಳ ಮೇವಿನ ನಲಿದಾಟದ ಮಧ್ಯ ಬಾಲಕ ಜ್ಞಾನೇಂದ್ರ ತನ್ನದೇ ಗೋಪಾಲಕ ವೃತ್ತಿಯ ಬಾಲ್ಯದಾಟದಲ್ಲಿ ಮೈಮರೆತಿದ್ದಾಗ, ಅವರ ಶಾಲಾ ಶಿಕ್ಷಕರು ದಿಡೀರ್ ಪ್ರತ್ಯಕ್ಷರಾದಗ ಜ್ಞಾನೇಂದ್ರ ಬೆದರುತ್ತಾರೆ. ಆದರೆ ಎಲ್ಲಾ ಸನ್ನಿವೇಶ ಅರಿತೇ ಬಂದ ಆ ದೈವ ಸ್ವರೂಪದ ಶಿಕ್ಷಕ ತಕ್ಷಣ ತನ್ನ ಜೊತೆ ಬರಲು ಆಜ್ಞಾಪಿಸುತ್ತಾರೆ.
     ಉಭಯ ಸಂಕಟದಲ್ಲಿ ಬಾಲಕ ಸಿಕ್ಕಿ ಬೀಳುತ್ತಾನೆ. ತಾನು ಜವಾಬ್ದಾರಿ ವಹಿಸಿದ ಕೆಲಸ ಬಿಟ್ಟು ಹೋದರೆ? ಗೋವುಗಳ ಪಾಡೇನು? ಇದರ ಜವಾಬ್ದಾರಿ ನೀಡಿದ ತಂದೆಗೆ ಉತ್ತರ? ಈ ಎಲ್ಲಾ ಪ್ರಶ್ನೆಗೆ ಪರಿಹಾರವಾಗಿ ಶಿಕ್ಷಕರು ನಿನ್ನ ತಂದೆಗೆ ಹೇಳಿಯೇ ಬಂದಿದ್ದೇನೆ ಬಾ ಅಂತ ಸೀದಾ ಆರಗದ ಅಕ್ಕಿ ಗಿರಣಿ ಮಾಲಿಕರಾದ ದಾನಿ ಶ್ರೀ ನಾಗರಾಜ ರಾಯರ ಹತ್ತಿರ (ನನ್ನ ನೆನಪು ಸರಿ ಇದ್ದರೆ ಈ ಹೆಸರು ಸರಿ) ಕರೆದೊಯ್ಯತ್ತಾರೆ.
  ಅಲ್ಲಿ ಶಿಕ್ಷಕರು ವಿನಂತಿಸುತ್ತಾರೆ ಈ ಬಾಲಕ ಪ್ರತಿಭಾವಂತ ಬಡತನದಿಂದ ಈತನ ತಂದೆ ದನ ಕಾಯಲು ಬಿಟ್ಟಿದ್ದಾರೆ ಆದರೆ ನೀವು ಈತನನ್ನ ಓದಿಸಿದರೆ ಮುಂದೆ ಈತ ಉತ್ತಮ ವ್ಯಕ್ತಿ ಆಗಿ ಸಮಾಜದ ಒಳಿತಿಗೆ ಕಾರಣನಾಗುತ್ತಾನೆ ಅಂದಾಗ, ಅವರು ಜ್ಞಾನೇಂದ್ರರನ್ನ ದತ್ತು ಪಡೆದಂತೆ ಅವರ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿಸುತ್ತಾರೆ.
  ಮುಂದೆ ವಿದ್ಯಾವಂತರಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಶಾಸಕರಾದ ಆರಗ ಜ್ಞಾನೇ೦ದ್ರರ ಮನೆಯಲ್ಲಿ ದೊಡ್ಡ ಪೋಟೋ ಒಂದು ನಿತ್ಯ ಅವರಿಂದ ಪೂಜಿಸುತ್ತಿರುವುದು, ಅವರನ್ನ ಸಾಕಿ ಸಲುಹಿದ ಆರಗದ ಅಕ್ಕಿ ಗಿರಣಿ ಮಾಲಿಕರಾದ ಬ್ರಾಹಮಣ ನಾಗರಾಜ ರಾಯರದ್ದು.
  ಜೀವನದಲ್ಲಿ ಉಪಕಾರ ಮಾಡಿದವರನ್ನ ಮರೆಯದೆ ಸದಾ ಸ್ಮರಿಸುವ, ಆರಗ ಎಂಬ ಹಳ್ಳಿಯಲ್ಲಿ ವಾಸ ಆಗಿರುವ ಮಾಜಿ ಶಾಸಕ ಜ್ಞಾನೇ೦ದ್ರ ಈ ಬಾರಿ ತೀಥ೯ ಹಳ್ಳಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪದಿ೯ಸುತ್ತಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ