# ಚಂದ್ರೂ ಸ್ಟುಡಿಯೋ ನಿರಂಜನ ಅಂದರೆ ಶಿವಮೊಗ್ಗದ ಕಾಂಗ್ರೇಸ್ ವಕ್೯ ಶಾಪ್ ಆಗಿತ್ತು#
ಇವರ ದೊಡ್ಡಪ್ಪ ಶ್ರೀ ರವಳಪ್ಪಾ ನವರು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಪಕ್ಷದ ಒಡನಾಡಿಗಳು ಆಗಿನ ಶಿವಮೊಗ್ಗದ ಪುರಸಭೆಯಲ್ಲಿ ಜನ ಪ್ರತಿನಿಧಿ ಆಗಿ, ಪದಾದಿಕಾರಿಗಳಾಗಿ ಜನಪ್ರಿಯತೆಗಳಿಸಿದವರು ಅವರ ಸಹೋದರ ಚಂದ್ರಪ್ಪ ಪ್ರಗತಿ ಪರ ರೈತರು ಎಲ್ಲಾ ರಾಜಕೀಯ ದುರೀಣರ ಒಡನಾಟ ಹೊಂದಿದ್ದವರು ಅವರ ಹೆಸರಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಚಂದ್ರು ಸ್ಟುಡಿಯೋ ಕೆಲವು ದಶಮಾನ ಮಿಂಚಿದ ಉದ್ಯಮ ಈಗ ಶಿವಮೊಗ್ಗದ ಕಾಂಗ್ರೆಸ್ ಕಚೇರಿ ಪಕ್ಕದ ಮಹಲಿನ ಮಾಳಿಗೆ ಮೇಲೆ ಇದೆ.
ರವಳಪ್ಪಾರ ತಮ್ಮನ ಮಗ ನಿರOಜನ ವಿದ್ಯಾವಂತ, ದಾನಿ ಮತ್ತು ಕಾಂಗ್ರೇಸ್ನ ಕಟ್ಟಾಳು ಇವರ ಪೋಟೋ ಸ್ಟುಡಿಯೋ ಈಗಿನ ರಾಜಕೀಯ ಮುಂದಾಳುಗಳಾದ ರಮೇಶ್, ದಿನೇಶ್, ರವಿ ಮುಂತಾದವರ ಕಾಯ೯ ಸ್ಥಾನ ಆಗಿತ್ತು.
ವಿದ್ಯಾಭ್ಯಾಸ ಮಾಡಲು ತೊಂದರೆ ಆದ ಸಾವಿರಾರು ವಿದ್ಯಾಥಿ೯ಗಳಿಗೆ ನಿರಂಜನ ಆತ್ಮವಿಶ್ವಾಸ ತುಂಬಿ ಅವರ ಕನಸು ನನಸು ಮಾಡಿದ್ದನ್ನ ನಾವೆಲ್ಲ ನೋಡಿದ್ದೇವೆ.
ಆದರೆ ಕಾಂಗ್ರೇಸ್ ಪಕ್ಷ ಇಂತವರನ್ನ ಬಳಸಿ ಕೊಳ್ಳುವುದಿಲ್ಲ, ಯಾರಾರಿಗೊ ಸ್ಥಾನ ಮಾನ ನೀಡಿ ಅಹ೯ತೆ ಇರುವ ಇವರನ್ನ ಕಡೆಗಾಣಿಸಿದೆ.
ನನ್ನ ಜಿಲ್ಲಾ ಪಂಚಾಯತ ಸದಸ್ಯ ಅವದಿಯಲ್ಲಿ ನಾನು ಇವರಿಂದ ಅನೇಕ ಸಲಹೆ ಸಹಕಾರ ಪಡೆದಿದ್ದೆ, ಆಗೆಲ್ಲ ರಾಜಕಾರಣಿಗಳ ದಂಡು ಅಲ್ಲಿ ಸೇರುತ್ತಿತ್ತು, ಸಹಾಯ ಕೇಳಿ ಬರುವವರೂ ಕೂಡ ಎಲ್ಲರಿಗೂ ಅಲ್ಲಿ ಗೌರವದ ಸ್ಥಾನ ಮತ್ತು ಸಮಸ್ಯೆಗೆ ಪರಿಹಾರ ಅಲ್ಲಿತ್ತು.
ನಿನ್ನೆ ಮಾತಾಡಿದಾಗ ಅವರು ದೀಘ೯ಕಾಲದ ತಮ್ಮ ಪಕ್ಷ ಕಾಂಗ್ರೇಸ್ ತೊರೆಯುವ ಮಾತಾಡಿದರು, ಏನೇ ಆಗಲಿ ನಿರಂಜನರ ರಾಜಕೀಯ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment